spot_img
spot_img

ಜೊಮ್ಯಾಟೊಗೆ 803 ಕೋಟಿ ರೂಪಾಯಿಯ ತೆರಿಗೆ ನೋಟಿಸ್​

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಜೊಮ್ಯಾಟೊ ಸದ್ಯ ಭಾರತದ ಬೃಹತ್​ ನಗರಗಳಲ್ಲಿ ತನ್ನ ಗ್ರಾಹಕರು ಬೇಡಿದ ಆಹಾರವನ್ನು ಮನೆ ಮನೆಗೆ ತಲುಪಿಸುವ ಒಂದು ಆ್ಯಪ್​. ನಿತ್ಯ ಲಕ್ಷಾಂತರ ಮಂದಿಗೆ ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಆಹಾರ ಪೂರೈಸಿ ತನ್ನದೇ ಆದ ದೈತ್ಯ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ಕಂಪನಿಗಳಲ್ಲಿ ಒಂದು.

ಈ ಜೊಮ್ಯಾಟೊ ಕಂಪನಿಗೆ ಈಗ ಸರಿಯಾಗಿ ಜಿಎಸ್​ಟಿ ಕಟ್ಟದ ಕಾರಣದಿಂದಾಗಿ 803 ಕೋಟಿ ರೂಪಾಯಿ ಪಾವತಿ ಮಾಡುವಂತೆ ನೋಟಿಸ್ ಹೋಗಿದೆ.

ಜೊಮ್ಯಾಟೊ ಕಂಪನಿಗೆ ಡಿಸೆಂಬರ್ 12,2024ರಂದು ನೋಟೀಸ್ ತಲುಪಿದೆ. 29 ಅಕ್ಟೋಬರ್ 2019 ರಿಂದ 31 ಮಾರ್ಚ್​ 2022ರವರೆಗೆ ನಡೆದ ವ್ಯವಹಾರದ ಕುರಿತು ನೋಟಿಸ್ ಹೋಗಿದೆ. ಸಿಜಿಎಸ್​ಟಿ ಮತ್ತು ಸೆಂಟ್ರಲ್ ಎಕ್ಸೈಸ್​, ಥಾಣೆ ಕಮಿಷನರೇಟ್ ಮಹಾರಾಷ್ಟ್ರ ಒಟ್ಟು 401 ಕೋಟಿ70 ಲಕ್ಷ 14 ಸಾವಿರ 706 ರೂಪಾಯಿ ಜಿಎಸ್​ಟಿ ಹಾಗೂ ದಂಡ ಹಾಗೂ ಬಡ್ಡಿ ಸೇರಿ ಒಟ್ಟು 803.4 ಕೋಟಿ ರೂಪಾಯಿ ಜೊಮ್ಯಾಟೊ ಪಾವತಿಸಬೇಕಿದೆ ಎಂದು ಸ್ಪಷ್ಟಿಕರಣ ನೀಡಿದೆ.

ಡಿಲವೆರಿ ಚಾರ್ಜಸ್​ ಮೇಲೆ ಇರುವ ಜಿಎಸ್​ಟಿಯನ್ನು ಕಟ್ಟದ ಕಾರಣ ಈ ಒಂದು ನೋಟಿಸ್​ ಜೊಮ್ಯಾಟೊಗೆ ಹೋಗಿದೆ.ಈ ಬಗ್ಗೆ ಮಾತನಾಡಿರುವ ಸಂಸ್ಥೆ ನಾವು ಈ ಬಗ್ಗೆ ನಾವು ಸಂಬಂಧಪಟ್ಟ ಮಂಡಳಿಗೆ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಜೊಮ್ಯಾಟೊ ವಕ್ತಾರರು ನಾವು ನಮ್ಮ ಕಾನೂನು ಸಲಹೆಗಾರರು ಹಾಗೂ ತೆರಿಗೆ ಸಲಹೆಗಾರೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸಲಿದ್ದೆವೆ. ಈಗಾಗಲೇ ಈ ವಿಚಾರ ಕುರಿತು ಸಂಬಂಧಪಟ್ಟ ಮಂಡಳಿಗೆ ಮೇಲ್ಮನವಿಯನ್ನು ಸಲ್ಲಿಸಿಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...