spot_img
spot_img

TENANT FARMERS PROBLEMS : ಸಣ್ಣ ಮತ್ತು ಗೇಣಿದಾರ ರೈತರಿಗೆ ಸಿಗ್ತಿಲ್ಲ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆವಿಮೆ ಲಾಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

TENANT FARMERS PROBLEMS  ಹಾಗೂ ಸಣ್ಣ ರೈತರು ಸರ್ಕಾರದ ಪ್ರಯೋಜನಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ಇಂತಹವರಿಗಾಗಿ ಸರ್ಕಾರ ಸ್ಪಷ್ಟವಾದ ನೀತಿಯೊಂದನ್ನು ರೂಪಿಸಬೇಕಾಗಿದೆ ಎಂಬುದು ತಜ್ಞರ ಆಗ್ರಹವಾಗಿದೆ.

ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ತಜ್ಞರು, ಭೂ ಗುತ್ತಿಗೆ ಕಾಯ್ದೆಯ ಅನುಪಸ್ಥಿತಿಯಲ್ಲಿ, ಸಣ್ಣ ಹಿಡುವಳಿದಾರರು ಮತ್ತು ಸಣ್ಣ ರೈತರು ಬೆಳೆ ವಿಮೆ, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಇತರ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದಿಲ್ಲ.

ಬಹುತೇಕ ಭೂಮಾಲೀಕರು ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆಯುತ್ತಾರೆ ಮತ್ತು ಹಿಡುವಳಿದಾರರು ಫಸಲ್ ಬಿಮಾ ಯೋಜನೆ, ಕೆಸಿಸಿ ಮತ್ತು ಸಬ್ಸಿಡಿಯಂತಹ ಪ್ರಯೋಜನಗಳಿಂದ ದೂರವೇ ಉಳಿಯುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಭೂ ಮಾಲೀಕರು ಮತ್ತು TENANT FARMERS PROBLEMS  ನಡುವೆ ಭೂ ಗುತ್ತಿಗೆ ಒಪ್ಪಂದ ಇರುವುದಿಲ್ಲ ಎಂದು ಮಲೀಕ್​ ಹೇಳಿದ್ದಾರೆ.

ಮಾತನಾಡಿರುವ ಕೃಷಿ ತಜ್ಞ ಧರ್ಮೇಂದ್ರ ಮಲಿಕ್, ” ಸಣ್ಣ ಹಿಡುವಳಿದಾರರು ಅಥವಾ ಸಣ್ಣ ರೈತರು ಸರ್ಕಾರದ ಯೋಜನೆಗಳನ್ನು ಪಡೆಯುವಲ್ಲಿ ಯಾವಾಗಲೂ ವಿಫಲರಾಗುತ್ತಾರೆ. ಆಂಧ್ರ ಪ್ರದೇಶ ಸರ್ಕಾರವು ಕೆಲವು ವರ್ಷಗಳ ಹಿಂದೆ ಅಂತಹ ರೈತರನ್ನು ಗುರುತಿಸಲು ಮತ್ತು ವಿಶಿಷ್ಟ ಗುರುತಿನ ಚೀಟಿಗಳನ್ನು ನೀಡಲು ಉಪಕ್ರಮವನ್ನು ತೆಗೆದುಕೊಂಡಿತುTENANT FARMERS PROBLEMS .

ಆದರೆ ಭಾರತದ ಉಳಿದ ಭಾಗದಲ್ಲಿ ಇಂತಹ ಯಾವುದೇ ನೀತಿಗಳು ಜಾರಿಗೆ ಬಂದಿಲ್ಲ. ಹೀಗಾಗಿ ಗೇಣಿದಾರ ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

Without a clear policy in place, the problem is:

ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಮತ್ತೊಬ್ಬ ತಜ್ಞ ನರೇಶ್ ಸಿರೋಹಿ ಮಾತನಾಡಿ, ನಾವು ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಭೂ ಗುತ್ತಿಗೆ ಒಪ್ಪಂದವನ್ನು ಕಾನೂನು ವ್ಯಾಪ್ತಿಗೆ ತರದೇ ಈ ಸಮಸ್ಯೆಯ ಪರಿಹಾರ ಸಾಧ್ಯವಿಲ್ಲ ಎಂದಿದ್ದಾರೆ.

ಈ ಬಗ್ಗೆ ಯಾವುದೇ ಸೂಕ್ತ ಕಾನೂನು ಇರದೇ ಇರುವುದರಿಂದ ಗೇಣಿದಾರ ರೈತರು ಮತ್ತು ಭೂಮಾಲೀಕರು ಹಲವಾರು ಸಮಸ್ಯೆಗಳನ್ನು ಮತ್ತು ವಿವಾದಗಳನ್ನು ಎದುರಿಸಬೇಕಾಗುತ್ತದೆ. 2023-24ರಲ್ಲಿ ಈ ಯೋಜನೆಯಡಿ ಬೆಳೆ ವಿಮೆಗಾಗಿ ದಾಖಲಾದ ರೈತರ ಅರ್ಜಿಗಳ ಸಂಖ್ಯೆ 14,29,45,872 ಆಗಿದ್ದರೆ, ಕ್ಲೈಮ್‌ಗಳು 15,504.87 ಕೋಟಿ ರೂ. ಆಗಿದೆ ಎಂದು ಅಂಕಿ- ಸಂಖ್ಯೆಗಳಿಂದ ಗೊತ್ತಾಗುತ್ತಿದೆ.

2021-22 ರಿಂದ 2025-26 ರ ಅವಧಿಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಾಗಿ ಒಟ್ಟು 69515.71 ಕೋಟಿ ರೂ.ಗಳ ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಈ ಯೋಜನೆಯಡಿ ತಾಂತ್ರಿಕ ಉಪಕ್ರಮಗಳಿಗೆ ಧನಸಹಾಯ ಮಾಡಲು ಒಟ್ಟು 824.77 ಕೋಟಿ ರೂಪಾಯಿಗಳ ಒಟ್ಟು ಕಾರ್ಪಸ್‌ನೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನಕ್ಕಾಗಿ ನಿಧಿ ರಚಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ.

ಇದನ್ನು ಓದಿರಿ : Govt Inaugurates New CoE To Address Skill Demand In Chip Design

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GOLD PRICE TODAY: ಲಕ್ಷದ ಹತ್ತಿರಕ್ಕೆ ಬಂದು ನಿಂತ ಬೆಳ್ಳಿ ಬೆಲೆ; ಷೇರುಪೇಟೆಯಲ್ಲಿ ಹೊಯ್ದಾಟ

Gold Rate Today News : GOLDದ ಬೆಲೆಯಲ್ಲಿ ಭಾರೀ ಏರಿಕೆ - GOLDಭರಣ ಖರೀದಿಸುವುದೇ ಬೇಡವೇ? - ಕರ್ನಾಟಕದ ವಿವಿಧೆಡೆ ಇಂದಿನ ದರ ಎಷ್ಟು?...

MAHABHARATA KURUKSHETRA WAR:ಘನಘೋರ ಕುರುಕ್ಷೇತ್ರ ಯುದ್ಧದ ಬಳಿಕ ಬದುಕುಳಿದವರು ಯಾರು?

Kurukshetra War News: ಕುರುಕ್ಷೇತ್ರ ಯುದ್ಧವು MAHABHARATAದ ಪ್ರಮುಖ ಘಟ್ಟ. ಈ ಯುದ್ಧದಲ್ಲಿ ಭೀಷ್ಮನಿಂದ ಕರ್ಣನವರೆಗೆ ಅನೇಕ ಪ್ರಮುಖ ಸಾವನ್ನಪ್ಪಿದ್ದಾರೆ. ಕೆಲವರು ಮಾತ್ರ ಬದುಕುಳಿದಿದ್ದು, ಅವರು...

WEEKLY INSULIN FOR TYPE 2 DIABETES:ಶುಗರ್ ಪೇಷೆಂಟ್ಗಳಿಗೆ ಗುಡ್ನ್ಯೂಸ್

Weekly Insulin for Type 2 Diabetes News: ಟೈಪ್-2 ಡಯಾಬಿಟಿಸ್​ನಿಂದ ಬಳಲುತ್ತಿರುವವರು ವಾರಕ್ಕೊಮ್ಮೆ ಇನ್ಸುಲಿನ್ ಇಂಜೆಕ್ಷನ್​ ಸಾಕಾಗುತ್ತದೆ. ಹೌದು, 'ಎಫ್ಸಿಟೋರಾ'ದಿಂದ ಇದನ್ನು ಹೋಗಲಾಡಿಸಬಹುದು ಎಂದು...

TIPS TO PREVENT MOSQUITO BITES:ಸಂಜೆ ವೇಳೆ ಸೊಳ್ಳೆಗಳು ಮನೆಗೆ ಬರುತ್ತಿವೆಯೇ?

Hyderabad News: ಈ ಎಲ್ಲಾ ತಡೆಯ ನಡುವೆಯೂ ಸೊಳ್ಳೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತದೆ. ಅಷ್ಟೇ ಅಲ್ಲ ಹೀಗೆ ದಾಂಗುಡಿ ಇಡುವ ಈ ಸೊಳ್ಳೆಗಳಿಂದ ಆರೋಗ್ಯದ ಮೇಲೆ...