Kolkata (West Bengal) News:
ಪಶ್ಚಿಮ ಬಂಗಾಳದ ಬಿರ್ಭೂಮ್ನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, MANMOHAN ಸಿಂಗ್ ಮತ್ತು ನಾನು ಕೇಂಬ್ರಿಡ್ಜ್ನಲ್ಲಿ ಓದುತ್ತಿರುವ ವೇಳೆ ಉತ್ತಮ ಸ್ನೇಹಿತರಾಗಿದ್ದೆವು. ಅವರು ಸಿಖ್ ಸಮುದಾಯದವರಾಗಿದ್ದರೂ ‘ವಜ್ರಚ್ಛೇದಿಕ ಪ್ರಜ್ಞಾಪರಮಿತಾ’ದಲ್ಲಿ ಗೌತಮ ಬುದ್ಧರ ಸಂದೇಶಗಳನ್ನು ಅಳವಡಿಸಿಕೊಂಡಿದ್ದರು” ಎಂದು ತಿಳಿಸಿದರು.
“ಮಾಜಿ ಪ್ರಧಾನಿ ದಿವಂಗತ MANMOHAN ಸಿಂಗ್ ಅವರು ಒಬ್ಬ ಮಹಾನ್ ವ್ಯಕ್ತಿ, ಉತ್ತಮ ರಾಜಕೀಯ ನಾಯಕ, ಜಗತ್ತಿನ ಅವಶ್ಯಕತೆಗಳನ್ನು ಅರಿತುಕೊಂಡಿದ್ದ ಅದ್ಭುತ ಅರ್ಥಶಾಸ್ತ್ರಜ್ಞ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಬಣ್ಣಿಸಿದ್ದಾರೆ.
“ಹೀಗಾಗಿ, ಭಾರತದಲ್ಲಿ ಪಾಕಿಸ್ತಾನವು ಭಯೋತ್ಪಾದನೆ ನಡೆಸಿದ ಪುರಾವೆಗಳು ಸಿಕ್ಕರೂ, ಬುದ್ಧನ ಸಂದೇಶದ ಅನುಸಾರ ಪ್ರತಿಕ್ರಿಯಿಸುತ್ತಿದ್ದರು. ನೆರೆಯ ರಾಷ್ಟ್ರದ ವಿರುದ್ಧ ತೀಕ್ಷ್ಣವಾಗಿ ನಡೆದುಕೊಳ್ಳಬಾರದು ಎಂಬುದನ್ನು ಅವರು ಅರಿತಿದ್ದರು” ಎಂದು ಅಮರ್ತ್ಯ ಸೇನ್ ತಿಳಿಸಿದರು.”ವಜ್ರಚ್ಛೇದಿಕಾ ಪ್ರಜ್ಞಾಪರಮಿತಾ ಸೂತ್ರ’ ಅಥವಾ ‘ಮಹಾಯಾನ’ದಲ್ಲಿರುವ ಗೌತಮ ಬುದ್ಧನ ಸಂದೇಶವಾದ ಮಾನವರ ವಿಭಿನ್ನ ನಂಬಿಕೆಗಳನ್ನು ಗೌರವಿಸುವುದು ಮತ್ತು ಒಂದು ನಿರ್ದಿಷ್ಟ ನಂಬಿಕೆಯನ್ನು ಬೆಂಬಲಿಸುವುದು, ಇತರರನ್ನು ಅವಹೇಳನ ಮಾಡದಿರುವುದನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದರು” ಎಂದು ಸೇನ್ ಹೇಳಿದರು.
A friend is a wonderful person though:“ವಜ್ರ ಸೂತ್ರದಲ್ಲಿನ ಬುದ್ಧನ ಸಂದೇಶಗಳನ್ನು ಸಿಂಗ್ ಚೆನ್ನಾಗಿ ಅರಿತುಕೊಂಡಿದ್ದರು ಎಂದು ನಾನು ಭಾವಿಸುತ್ತೇನೆ. ಅವರು ಸಿಖ್ ಧರ್ಮದವರಾಗಿದ್ದರೂ, ಇತರ ಧರ್ಮಗಳು ಮತ್ತು ಸಮುದಾಯಗಳ ಜನರಿಗೆ ಸಂಬಂಧಿಸಿದಂತೆ ಗೌತಮ ಬುದ್ಧನ ಸಂದೇಶದ ಆಧಾರದ ಮೇಲೆ ನಡೆದುಕೊಳ್ಳುತ್ತಿದ್ದರು. ಅವರೊಬ್ಬ ಮಹಾನ್ ವ್ಯಕ್ತಿ. ಅವರು ನನ್ನ ಸ್ನೇಹಿತರಾಗಿದ್ದ ಕಾರಣಕ್ಕೆ ಹೇಳುತ್ತಿಲ್ಲ” ಎಂದರು.
“ಸಿಂಗ್ ಅವರ ಜೊತೆಗಿನ ವಿದ್ಯಾಭ್ಯಾಸದ ದಿನಗಳನ್ನು ಮೆಲುಕು ಹಾಕಿರುವ ಅರ್ಥಶಾಸ್ತ್ರಜ್ಞ, ನಾವು ವಿದ್ಯಾರ್ಥಿಗಳಾಗಿದ್ದಾಗ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸಹೋದ್ಯೋಗಿಯಾಗಿದ್ದಾಗ ಈ ಬಗ್ಗೆ ನಾವಿಬ್ಬರೂ ಸುದೀರ್ಘ ಮಾತುಕತೆ ನಡೆಸಿದ್ದೆವು. ಇತರ ಧರ್ಮಗಳು ಮತ್ತು ಸಮುದಾಯಗಳ ಬಗ್ಗೆ ಬುದ್ಧನ ಸಂದೇಶ ಪಾಲನೆ ಅಗತ್ಯ ಎಂಬುದನ್ನು ಅವರು ಹೇಳುತ್ತಿದ್ದರು” ಎಂದು ಮಾಹಿತಿ ನೀಡಿದರು.
ಇದನ್ನು ಓದಿರಿ :Farmers will sit in mass protest against the government in Patna from March 24 to 26