spot_img
spot_img

ವಾರದ ಕಥೆಯಲ್ಲಿ ಚೈತ್ರಾಗೆ ಸರಿಯಾಗಿ ಪಾಠ ಕಲಿಸಿದ ಕಿಚ್ಛಾ ಸುದೀಪ್

spot_img
spot_img

Share post:

Bigg Boss Kannada 11 Week 7: ‘ಬಿಗ್ ಬಾಸ್’ ಕಾರ್ಯಕ್ರಮದ ನಿಯಮ ಮೀರಿ ಚೈತ್ರಾ ಕುಂದಾಪುರ ತಪ್ಪು ಮಾಡಿದ್ದರೂ ಅದನ್ನ ಒಪ್ಪಿಕೊಳ್ಳದೇ ಪದೇ ಪದೇ ವಾದಕ್ಕಿಳಿದರು. ಇದು ಕಿಚ್ಚ ಸುದೀಪ್‌ ಕೋಪಕ್ಕೆ ಕಾರಣವಾಯಿತು. ‘ಬಿಗ್ ಬಾಸ್’ ಒಪ್ಪಂದವನ್ನ ಆಸ್ಪತ್ರೆಯವರು ಮುರಿಯಲು ಸಾಧ್ಯವಿಲ್ಲ ಅಂತ ಸುದೀಪ್‌ ಸ್ಪಷ್ಟಪಡಿಸಿದರು. ಹಾಗಾದ್ರೆ, ಚೈತ್ರಾ ಕುಂದಾಪುರ ‘ಸುಳ್ಳು ಕಥೆ’ ಕಟ್ಟಿದ್ರಾ?

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ 7ನೇ ವಾರ ಜೋಡಿ ಟಾಸ್ಕ್ ಮುಗಿದ್ಮೇಲೆ ಏಕಾಏಕಿ ಬಾತ್‌ರೂಮ್‌ ಏರಿಯಾದಲ್ಲಿ ಚೈತ್ರಾ ಕುಂದಾಪುರ ಕುಸಿದುಬಿದ್ದರು. ಕೂಡಲೆ ಚೈತ್ರಾ ಕುಂದಾಪುರ ಅವರನ್ನ ಆಸ್ಪತ್ರೆಗೆ ಅಡ್ಮಿಟ್‌ ಮಾಡಲಾಯಿತು. ಆಸ್ಪತ್ರೆಯಲ್ಲಿ ಚೈತ್ರಾ ಕುಂದಾಪುರ ಅವರನ್ನ ನೋಡಿಕೊಳ್ಳೋಕೆ ‘ಬಿಗ್ ಬಾಸ್’ ತಂಡದಿಂದ ವರ್ಷಿಣಿ ಎಂಬುವರು ಇದ್ದರು. ತಮಗೆ ಪ್ರಜ್ಞೆ ಬಂದ್ಮೇಲೆ ವರ್ಷಿಣಿ ಅನುಪಸ್ಥಿತಿಯಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ಬಗ್ಗೆ ಡಾಕ್ಟರ್‌, ನರ್ಸ್‌ ಹಾಗೂ ಮತ್ತೋರ್ವ ವ್ಯಕ್ತಿ ಬಳಿ ಚೈತ್ರಾ ಕುಂದಾಪುರ ಅಭಿಪ್ರಾಯ ಕೇಳಿದರಂತೆ.

ತದನಂತರ ಆಸ್ಪತ್ರೆಯಿಂದ ವಾಪಸ್ ‘ಬಿಗ್ ಬಾಸ್’ ಮನೆಗೆ ಬಂದ್ಮೇಲೆ ‘’ಹೊರಗಡೆ ಈ ತರಹದ ಅಭಿಪ್ರಾಯ ಇದೆ’’ ಅಂತ ಸನ್ನೆಗಳ ಮೂಲಕ, ಕಥೆಗಳ ಮುಖಾಂತರ ‘ಕೆಲವರಿಗೆ’ ಚೈತ್ರಾ ಕುಂದಾಪುರ ಹಿಂಟ್‌ ಕೊಟ್ಟರು. ‘ಹೊರಗಿನ ಅಭಿಪ್ರಾಯದ ಬಗ್ಗೆ ಮನೆಯೊಳಗೆ ಚರ್ಚಿಸುವಂತಿಲ್ಲ’ ಎಂಬುದು ‘ಬಿಗ್ ಬಾಸ್’ ಮನೆಯ ಮೂಲ ನಿಯಮ. ಆ ನಿಯಮವನ್ನ ಚೈತ್ರಾ ಕುಂದಾಪುರ ಮೀರಿದರು. ಸಾಲದಕ್ಕೆ ‘ಬಿಗ್ ಬಾಸ್’ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬರುವ ಸ್ಪರ್ಧಿಗಳ ಜೊತೆ ವೈದ್ಯರಾಗಲಿ, ನರ್ಸ್‌ ಆಗಲಿ..

ಶೋ ಬಗ್ಗೆ ಚರ್ಚೆ ಮಾಡುವಂತಿಲ್ಲ, ಮಾಡುವುದಿಲ್ಲ! ಹೀಗಾಗಿ, ‘‘ಡಾಕ್ಟರ್ ಆಗಲಿ, ನರ್ಸ್‌ ಆಗಲಿ ಹೇಳಿರೋಕೆ ಸಾಧ್ಯವೇ ಇಲ್ಲ’’ ಅಂತ ಕಿಚ್ಚ ಸುದೀಪ್‌ ಕಡ್ಡಿತುಂಡು ಮಾಡಿದ ಹಾಗೆ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಹೇಳಿದರು. ಹಾಗಾದ್ರೆ, ಡಾಕ್ಟರ್‌ ಮತ್ತು ನರ್ಸ್ ಹೇಳಿದರು ಅಂತ ಇತರೆ ಸ್ಪರ್ಧಿಗಳೆದುರು ಚೈತ್ರಾ ಕುಂದಾಪುರ ಸುಳ್ಳು ಕಥೆ ಕಟ್ಟಿದ್ರಾ? ಬೇಕು ಅಂತ ಇನ್ನೊಬ್ಬರ ತಲೆಗೆ ಹುಳ ಬಿಟ್ರಾ?
ಕೆಲವೊಂದನ್ನ ‘ಡಾಕ್ಟರ್ ಹೇಳಿದ್ದು, ನರ್ಸ್‌ ಹೇಳಿದ್ದು’ ಎಂದ ಚೈತ್ರಾ, ಇನ್ನೂ ಕೆಲವೊಂದನ್ನ ‘ನನ್ನ ಮನಸ್ಸಿನಲ್ಲಿತ್ತು. ಅದನ್ನ ಹೇಳಿದೆ’ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.

ಪಂಚಾಯತಿ ಸಂಚಿಕೆಯಲ್ಲಿ ಮುಕ್ಕಾಲು ಭಾಗ ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್‌ ಸ್ಪೆಷಲ್ ಕ್ಲಾಸ್‌ ತೆಗೆದುಕೊಂಡರು. ಪದೇ ಪದೇ ಮಧ್ಯೆ ಬಾಯಿ ಹಾಕುತ್ತಿದ್ದ ಚೈತ್ರಾ ಕುಂದಾಪುರ ವಿರುದ್ಧ ಕಿಚ್ಚ ಸುದೀಪ್‌ ಗರಂ ಆದರು. ಆನಂತರ ತಾವು ಗರಂ ಆಗಿದ್ದಕ್ಕೆ ಕಿಚ್ಚ ಸುದೀಪ್‌ ಕ್ಷಮೆಯನ್ನೂ ಕೇಳಿದರು.

ಸುದೀಪ್‌ ಅವರ ಕ್ಷಮೆಗೆ ಸ್ಪಂದಿಸದೆ ತಮ್ಮ ಪಾಯಿಂಟ್‌ ಪ್ರೂವ್ ಮಾಡೋದ್ರಲ್ಲೇ ಚೈತ್ರಾ ಕುಂದಾಪುರ ಬಿಜಿಯಾಗಿದ್ದು ಮಾತ್ರ ದುರಂತ! ತಮ್ಮ ಖಡಕ್‌ ಮಾತಲ್ಲೇ ಸುದೀಪ್‌ ಚಡಿಯೇಟು ಕೊಟ್ಟರು. ರುಬ್ಬಿಂಗ್ ಸೆಷನ್‌ ಬಳಿಕ ‘ಮನೆಗೆ ಹೋಗಬೇಕು’ ಅಂತ ಕ್ಯಾಮರಾ ಬಳಿ ಚೈತ್ರಾ ಕುಂದಾಪುರ ಮನವಿ ಮಾಡಿದರು.

ಕಿಚ್ಚ ಸುದೀಪ್ ಬೆಂಡೆತ್ತಿದ ಬಳಿಕ ‘’ಈ ವಾರ ನಾನೇ ಮನೆಗೆ ಹೋಗಬೇಕು ಅಂತ ನಿರ್ಧಾರ ಮಾಡಿದ್ದೇನೆ. ನಂಗೊತ್ತು ಈ ಮನೆಯ ಒಳಗೆ ಕರ್ಕೊಂಡ್ ಬರೋದು ನಿಮ್ಮ ನಿರ್ಧಾರ. ಹೊರಗೆ ಹೋಗೋದು ನಮ್ಮ ನಿರ್ಧಾರ ಆಗಿರೋದಿಲ್ಲ. ಆದರೆ ಬಹುಶಃ ಇಲ್ಲಿನ ನನ್ನ ಋಣ ಮುಗೀತು ಅಂತ ಅನಿಸುತ್ತದೆ. ಬೇರೆ ಯಾರೋ ಎಲಿಮಿನೇಟ್ ಆಗಿ ಹೋಗುವ ಬದಲು ನಾನೇ ಹೋಗಬೇಕು ಅಂದುಕೊಂಡಿದ್ದೇನೆ’’
‘’ಬಹುಶಃ ಇನ್ನು ಈ ಮನೆಯ ವಾತಾವರಣ ನನಗೆ ಸೆಟ್ ಆಗಲ್ಲ ಅನಿಸುತ್ತದೆ. ಉಸಿರುಗಟ್ಟಿಸುವ ವಾತಾವರಣದಲ್ಲಿ ನಾನು ಇರುವ ಬದಲು ಮನೆಗೆ ಹೋಗೋದು ತುಂಬಾ ಒಳ್ಳೆಯದ್ದು ಅನಿಸುತ್ತಿದೆ. ದಯವಿಟ್ಟು ನನ್ನ ಈ ಮನವಿಯನ್ನ ಕನ್ಸಿಡರ್‌ ಮಾಡಿ. ಪ್ಲೀಸ್‌ ‘ಬಿಗ್ ಬಾಸ್’’ ಎಂದು ಕ್ಯಾಮರಾ ಬಳಿ ಚೈತ್ರಾ ಕುಂದಾಪುರ ಮನವಿ ಮಾಡಿದರು.

ಬ್ರೇಕ್ ವೇಳೆ ಕ್ಯಾಮರಾ ಮುಂದೆ ಚೈತ್ರಾ ಕುಂದಾಪುರ ಮನವಿ ಮಾಡಿದ್ದನ್ನ ಗಮನಿಸಿದ ಸುದೀಪ್‌, ‘’ಚೈತ್ರಾ ಅವರೇ.. ನೀವು ಹೋಗಿ ಕ್ಯಾಮರಾಗೆ ಏನೋ ಹೇಳಿದ್ರಿ.. ಉಸಿರುಗಟ್ಟುತ್ತಿದೆ, ಇನ್ನು ಈ ವಾತಾವರಣದಲ್ಲಿ ಇರೋದು ತಪ್ಪಾಗುತ್ತೆ ಅಂತ ಹೇಳಿದ್ರಿ. ಇದು ಬಹಳ ದೊಡ್ಡ ಮಾತು.

ವಾತಾವರಣ ನೀವೇ ಕ್ರಿಯೇಟ್ ಮಾಡಿದ್ದು.! ಉಸಿರಾಡೋದು ಕಲಿಯಿರಿ.! ಕ್ಯಾಮರಾ ಮುಂದೆ ಹೇಳಿದ ತಕ್ಷಣ ಬಾಗಿಲು ಓಪನ್ ಆಗೋದಿಲ್ಲ. ಮನೆ ಒಳಗೆ ಹೋಗೋದು ಮಾತ್ರ ನಿಮ್ಮೆಲ್ಲರ ಚಾಯ್ಸ್. ಆಚೆ ಬರೋದು ತುಂಬಾ ಬೇರೆ ಬೇರೆಯವರ ಚಾಯ್ಸ್, ಜನರ ಚಾಯ್ಸ್, ವೋಟ್ಸ್.. ಎಲ್ಲಾ ಬರುತ್ತೆ’’

‘’ನಾವು ಸಿನಿಮಾ ಮಾಡ್ತೀವಿ. ಕಥೆ ಕ್ರಿಯೇಟ್ ಮಾಡ್ತೀವಿ. ಅದ್ಭುತವಾಗಿ ಆಗುತ್ತೆ ಅಂತ ಹೋಗ್ತೀವಿ. ಕೆಲವೊಮ್ಮೆ ಸಕ್ಸಸ್ ಆಗುತ್ತೆ. ಕೆಲವೊಮ್ಮೆ ಕಥೆ ನಮಗೇ ರಿವರ್ಸ್ ಹೊಡೆಯುತ್ತೆ. ಆಗ ಸಿನಿಮಾ ಬಿಟ್ಟು ಹೋಗಿಲ್ಲ. ಇನ್ನೊಂದು ಕಥೆ ಕ್ರಿಯೇಟ್ ಮಾಡ್ತೀವಿ. ಮತ್ತೆ ಹೀರೋ ಆಗಿ ನಿಲ್ಲಲು ಆಸೆ ಪಡ್ತೀವಿ. ಹೀರೋ ಹೀರೋನೇ ಯಾವಾಗಲೂ. ನೀವು ಎದ್ದೇಳೋದನ್ನ ನೋಡಿ’’

‘’ನಿಮ್ಮ ಅಭಿಪ್ರಾಯ ನಿಮಗೆ ಬಿಟ್ಟಿದ್ದು.. ಸರಿಪಡಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿ, ನಿಮ್ಮನ್ನ ನಾವು ಹೊರಗೆ ಕಳುಹಿಸಿದ್ದರ ಅರ್ಥ ನೀವು ನಮಗೆ ಮುಖ್ಯ ಅಂತ. ಮಾನವೀಯತೆ ಎಲ್ಲರ ಮೇಲೂ ತೋರಿಸ್ತೀವಿ’’ ಅಂತ ಚೈತ್ರಾ ಕುಂದಾಪುರಗೆ ಕಿಚ್ಚ ಸುದೀಪ್‌ ಮತ್ತೆ ಕ್ಲಾಸ್‌ ತೆಗೆದುಕೊಂಡರು.

‘’ನನ್ನ ಗುರುಗಳು ಒಂದು ಮಾತು ಹೇಳಿದ್ದರು – ಎಲ್ಲಿಯವರೆಗೂ ನಿನ್ನ ನಾಲಿಗೆಯಲ್ಲಿ ಸತ್ಯ ಇರುತ್ತದೋ, ನೀನು ಹೇಳುವ ಮಾತು ಎದುರುಗಡೆ ಇರುವವರಿಗೆ ಯಾವಾಗ ಸುಳ್ಳು ಅನಿಸುತ್ತೋ.. ಅವತ್ತು ನೀನು ವೇದಿಕೆಯಿಂದ ಕೆಳಗೆ ಇಳಿಯಬೇಕು. ಯಾವತ್ತು ನಿನ್ನ ಬಾಯಲ್ಲಿ ಸುಳ್ಳು ಬರುತ್ತೋ.. ಅವತ್ತಿಂದ ಜನರ ಮುಂದೆ ಮಾತಾಡಬಾರದು ಅಂತ.

ಬಹುಶಃ ನಾನು ಪ್ರೋಟೋಕಾಲ್‌ ಬಿಟ್ಟು, ಸಲುಗೆಯಿಂದ ಮಾತಾಡಿದ್ದು ತಪ್ಪು. ಇಲ್ಲಿ ಬಂದು ನಾನು ಹೇಳಿದ್ದು ತಪ್ಪು, ಹೇಳಿದ ರೀತಿ ತಪ್ಪು. ಅದಕ್ಕೆ ನಾನು ಕ್ಷಮೆ ಕೇಳ್ತೀನಿ. ವರ್ಷಿಣಿ, ಡಾಕ್ಟರ್‌ ಹಾಗೂ ನರ್ಸ್‌ಗೆ ನಾನು ಕ್ಷಮೆ ಕೇಳುತ್ತೇನೆ. ಅವರ ನಂಬಿಕೆಯನ್ನ ನಾನು ಮುರಿದಿದ್ದೇನೆ. ಅದಕ್ಕೆ ಕ್ಷಮೆ ಕೇಳ್ತೇನೆ. ನಾನು ಆಂಬ್ಯುಲೆನ್ಸ್‌ನಿಂದ ಇಳಿದು ಬರುವಾಗ ಆ ವ್ಯಕ್ತಿಯೂ ‘ಏನೂ ಮಾತಾಡಬಾರದು’ ಅಂತ ಹೇಳಿದರು. ಅದಕ್ಕೂ ನಾನು ಕ್ಷಮೆ ಕೇಳ್ತೇನೆ. ಇಲ್ಲಿ ಇರೋರಿಗೂ ನಾನು ಕ್ಷಮೆ ಕೇಳ್ತೇನೆ’’ ಎಂದರು ಚೈತ್ರಾ ಕುಂದಾಪುರ.

‘’ಈ ಟಾಪಿಕ್ ಇಲ್ಲೇ ಬಿಡಬೇಕು’’ ಅಂತ ಎಲ್ಲರಿಗೂ ಸುದೀಪ್ ಸೂಚಿಸಿದರು. ಆನಂತರ, ‘’ಚೈತ್ರಾ ಅವರು ಹೇಳಿರೋದ್ರಲ್ಲಿ ಏನು ಸತ್ಯ ಇದೆ? ನಮ್ಮದೊಂದು ಪ್ರೋಟೋಕಾಲ್ ಇದೆ. ಪ್ರೋಟೋಕಾಲ್ ಪ್ರಕಾರ ಡಾಕ್ಟರ್ ಹೇಳೋದಕ್ಕೆ ಸಾಧ್ಯವೇ ಇಲ್ಲ. ಇದಂತೂ ಸತ್ಯ.

ಯಾಕಂದ್ರೆ, ನಮ್ಮ ಪ್ರೋಟೋಕಾಲ್ ಪ್ರಕಾರ, ಯಾವ್ಯಾವುದೋ ಆಸ್ಪತ್ರೆಗೆ.. ಯಾವ್ಯಾವುದೋ ಡಾಕ್ಟರ್‌ಗಳಿಗೆ.. ಯಾವ್ಯಾವುದೋ ನರ್ಸ್‌ ಹತ್ತಿರ ಕಳಿಸೋದಿಲ್ಲ. ಎಷ್ಟೋ ವರ್ಷಗಳಿಂದ ಬಂದಿರೋರು.. ಅವರ ಬಾಯಿ ಬದ್ಧವಾಗಿರುತ್ತದೆ. ಕೋವಿಡ್‌ನಲ್ಲಿ ನಾವು ಮಾಸ್ಕ್ ಹಾಕಿಕೊಂಡು ಹೇಗಿರುತ್ತೇವೋ ಹಾಗಿರ್ತಾರೆ ಹೊರತು ಯಾವ ಡಾಕ್ಟರ್ ಸಹ ಮಾತಾಡೋದಿಲ್ಲ’’ ಅಂತ ಸುದೀಪ್ ಸ್ಪಷ್ಟಪಡಿಸಿದರು.

ಅಲ್ಲಿಗೆ ಚೈತ್ರಾ ಹೇಳಿದ್ದೆಲ್ಲಾ ಸುಳ್ಳು ಅಂತಲೇ ಲೆಕ್ಕ ಅಲ್ವಾ?!
‘’ಚೂರಿ ಹಾಕೋರು ಮಾತ್ರ ಅಲ್ಲ.. ಅಕ್ಕ ಪಕ್ಕ ನಿಂತುಕೊಂಡು ಹಾಕು, ಹಾಕು ಅಂತಾರಲ್ಲ.. ಅವರದ್ದೂ ತಪ್ಪಿದೆ. ಏನೇನು ತಿದ್ದುಕೊಳ್ಳಲು ಆಗುತ್ತೋ.. ತಿದ್ದಿಕೊಳ್ಳಿ.. ಇಲ್ಲಾಂದ್ರೆ ಇಲ್ಲ’’ ಅಂತ ಕೊನೆಯದಾಗಿ ಸುದೀಪ್‌ ಹೇಳಿದರು. ಕೊನೆಗೆ, ‘’ಆಡ್ತೀರಾ? ಹೋಗ್ತೀರಾ?’’ ಅಂತ ಚೈತ್ರಾಗೆ ಸುದೀಪ್ ಕೇಳಿದರು. ಅದಕ್ಕೆ, ‘’ಆಡ್ತೀನಿ ಸರ್’’ ಎಂದರು ಚೈತ್ರಾ ಕುಂದಾಪುರ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...