spot_img
spot_img

ಜೇನು ಸಾಕಾಣಿಕೆಯಲ್ಲಿ ಯಶಸ್ವಿಯಾದ ಬಿಬಿಎಂ ಪದವೀಧರ

spot_img
spot_img

Share post:

ದಾವಣಗೆರೆ: ಮೂರು ಜೇನುಪೆಟ್ಟಿಗೆಗಳಿಂದ ಜೇನು ಸಾಕಾಣಿಕೆ ಆರಂಭಿಸಿದ್ದ ಯುವ ರೈತ ಶಶಿಕುಮಾರ್​ ಅವರು ಇಂದು 40ಕ್ಕೂ ಹೆಚ್ಚು ಜೇನು ಕುಟುಂಬಗಳ ಮಾಲೀಕರಾಗಿದ್ದಾರೆ.

ಬಿಬಿಎಂ ಪದವೀಧರ ಯುವಕನೊಬ್ಬ, ಕೈ ತುಂಬಾ ಸಂಬಳ ತರುತ್ತಿದ್ದ ಖಾಸಗಿ ಗೋಲ್ಡ್​​ ಕಂಪನಿ ಕೆಲಸಕ್ಕೆ ಗುಡ್​ ಬೈ​ ಹೇಳಿ, ಜೇನುಕೃಷಿ ಮಾಡಿ ಯಶಸ್ವಿಯಾದ ಯುವಕನ ಯಶೋಗಾಥೆ ಇದು. ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡ ಅಬ್ಬಿಗೆರೆ ಗ್ರಾಮದ ನಿವಾಸಿ ಶಶಿಕುಮಾರ್​ ಬರಗಾಲದಲ್ಲೂ ಜೇನುಕೃಷಿಯಿಂದ ಸಿಹಿ ತೆಗೆದಿದ್ದಾರೆ.

ಶಶಿಕುಮಾರ್​ ಅವರು ಖಾಸಗಿ ಕಂಪೆನಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ತಮ್ಮ ಅಡಿಕೆ ತೋಟದಲ್ಲಿ ಜೇನುಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂತೇಬೆನ್ನೂರು ಸಮೀಪದ ಕೊಂಡದಹಳ್ಳಿ ಗ್ರಾಮದಲ್ಲಿ ತಮ್ಮ ಎಕರೆ ಅಡಿಕೆ ತೋಟದಲ್ಲಿರುವ ಒಟ್ಟು 1,200 ಅಡಿಕೆ ಗಿಡಗಳ ಮಧ್ಯೆ ಜೇನುಪೆಟ್ಟಿಗೆಗಳನ್ನು ಇಟ್ಟು, ಜೇನುತುಪ್ಪದಿಂದ ಲಾಭ ಗಳಿಸುತ್ತಿದ್ದಾರೆ.

ಜೇನುತುಪ್ಪ ಮಾತ್ರವಲ್ಲದೆ, ಜೇನು ಕುಟುಂಬಗಳನ್ನೂ ಮಾರಾಟ ಮಾಡುತ್ತ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ ಈ ಯುವರೈತ.

ಬರಗಾಲದಲ್ಲಿ ತೋಟದಲ್ಲಿ ಬೇರೆ ಬೆಳೆಗಳನ್ನು ಹಾಕಿ, ಕೈಸುಟ್ಟುಕೊಳ್ಳುವ ಬದಲು, ಜೇನುಕೃಷಿ ಮಾಡಿ ಲಾಭ ಗಳಿಸುತ್ತಿರುವ ಶಶಿಕುಮಾರ್​, ಇತರ ಯುವ ರೈತರಿಗೆ ಮಾದರಿಯಾಗಿದ್ದಾರೆ.

ಐದು ವರ್ಷಗಳಿಂದ ಜೇನುಕೃಷಿ ಮಾಡಿಕೊಂಡು ಬರುತ್ತಿರುವ ಯುವ ರೈತ ಶಶಿಕುಮಾರ್ ಆರಂಭದಲ್ಲಿ ಮನೆಗಾಗಿ ಜೇನುತುಪ್ಪ ಬೇಕೆಂದು ಒಂದು ಜೇನು ಪೆಟ್ಟಿಗೆಯಲ್ಲಿ ಜೇನು ಸಾಕಾಣಿಕೆ ಆರಂಭಿಸಿದ್ದರು. ಹಾಗೆಯೇ ಜೇನುಕೃಷಿ ಮಾಡಲು ಪ್ರೇರಣೆ ಹೆಚ್ಚಾಗಿ ಮೇಟಿಕುರ್ಕಿ ಗ್ರಾಮದ ಶಾಂತವೀರಯ್ಯ ಎಂಬುವವರನ್ನು ಶಶಿಕುಮಾರ್ ಭೇಟಿಯಾಗಿದ್ದಾರೆ.

ಆಗ ಜೇನು ಸಾಕಾಣಿಕೆ ಬಗ್ಗೆ ತರಬೇತಿ ಪಡೆಯಲು ಶಾಂತವೀರಯ್ಯ ಅವರು ಮೈರಾಳ ಗ್ರೀನ್ ಕಾಲೇಜಿಗೆ ಶಿಫಾರಸ್ಸು ಮಾಡಿದ್ದರು.

ಬಳಿಕ ಶಶಿಕುಮಾರ್ ಮೈರಾಳ ಗ್ರೀನ್ ತರಬೇರಿ ಕಾಲೇಜಿನಲ್ಲಿ ತರಬೇತಿ ಪಡೆದು ಜೇನುಕೃಷಿ ಆರಂಭಿಸಿದ್ದರು. ಅಂದು ತರಬೇತಿ ಪಡೆದು ಮೂರು ಜೇನು ಪೆಟ್ಟಿಗೆಗಳನ್ನು ಪಡೆದು ಆರಂಭಿಸಿದ ಜೇನುಕೃಷಿ ಇದೀಗ 40 ಪೆಟ್ಟಿಗೆಗಳಿಗೆ ಬಂದು ನಿಂತಿದೆ.

2019ರಿಂದ ಈ ಜೇನುಕೃಷಿ ಮಾಡಿಕೊಂಡು ಬರುತ್ತಿರುವ ಶಶಿಕುಮಾರ್ ಆರಂಭದ ದಿನಗಳಲ್ಲಿ ನಷ್ಟ ಅನುಭವಿಸಿದ ಉದಾಹರಣೆಗಳೂ ಇವೆ. “ಒಂದು ಜೇನು ಪೆಟ್ಟಿಗೆಯಲ್ಲಿ ಎರಡು ಕೆಜಿ ಜೇನುತುಪ್ಪ ಸಿಗುತ್ತದೆ.

ನಾವು ಒಂದು ಕೆಜಿ ಜೇನುತುಪ್ಪವನ್ನು ಒಂದು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತೇವೆ. 250 ಗ್ರಾಂಗೆ 250 ರೂಪಾಯಿ ಬೆಲೆ ಇದೆ. ಇದು ದೇಶಿ ಜೇನುತುಪ್ಪ.

ಕಳೆದ ವರ್ಷ 20 ಕೇಜಿ ಜೇನುತುಪ್ಪವನ್ನು ಮಾರಾಟ ಮಾಡಿದ್ದೆ. ಈ ಬಾರಿಯೂ 20 ಕೆಜಿ ಜೇನುತುಪ್ಪ ಬರಲಿದೆ” ಶಶಿಕುಮಾರ್​ ಹೇಳಿದ್ದಾರೆ.

ಐದು ವರ್ಷಗಳಿಂದ ಜೇನುಕೃಷಿ ಮಾಡುತ್ತಿದ್ದೇನೆ. ಆರಂಭದಲ್ಲಿ ಮೂರು ಜೇನು ಬಾಕ್ಸ್ ಪಡೆದು ಆರಂಭಿಸಿದ್ದು, ಇದೀಗ 40 ಬಾಕ್ಸ್​ಗಳಿಗೆ ಬಂದು ನಿಂತಿದೆ. ಇನ್ನು ಹದಿನೈದು ದಿನ ಕಳೆದರೆ 70 ರಿಂದ 75 ಬಾಕ್ಸ್ ಆಗಲಿವೆ.

ಇದೀಗ ಬರಗಾಲ, ಈ ಸಮಯದಲ್ಲಿ ತೋಟದಲ್ಲಿ ಬೇರೆ ಬೆಳೆ ಬೆಳೆಯುವ ಬದಲಿಗೆ, ಜೇನು ಕೃಷಿಯನ್ನೇ ಮಾಡಿದರೆ, ಇದರಿಂದ ಜೇನುತುಪ್ಪ ಹಾಗು ಜೇನುಕುಟುಂಬಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು.

ಒಂದು ಜೇನು ಕುಟುಂಬವನ್ನು ಒಂದು ಸಾವಿರ ರೂಪಾಯಿಗೆ ಮಾರಾಟ ಮಾಡುತ್ತೇನೆ. 20 ಕೆಜಿ ಜೇನುತುಪ್ಪ, ಇಪ್ಪತ್ತು ಜೇನು ಕುಟುಂಬಗಳಿಂದ ಹಣ ಗಳಿಸಬಹುದು.

ಜೇನುಕೃಷಿ ಮಾಡಲು ಬಯಸುವ ರೈತರು ಈ ಜೇನುಕುಟುಂಬಗಳನ್ನು ಖರೀದಿ ಮಾಡುತ್ತಿದ್ದಾರೆ. ಇನ್ನು ಜೇನುಕುಟುಂಬ, ಬಾಕ್ಸ್, ಅದರ ಸ್ಟ್ಯಾಂಡ್, ಎಲ್ಲಾ ಸೇರಿ ನಾಲ್ಕು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...