spot_img
spot_img

ಎಸ್​ಡಿಎಆರ್​ಎಫ್​ಗೆ ಮತ್ತಷ್ಟು ಬಲ: ಸಿಬ್ಬಂದಿಗಳು ಕಾರ್ಯಾಚರಣೆ

spot_img
spot_img

Share post:

ಹೈದರಾಬಾದ್​: ವಿಪತ್ತು ನಿರ್ವಹಣೆಗೆ ಉನ್ನತಮಟ್ಟದ ಕಾರ್ಯಾಚರಣೆಗೆ ಸಜ್ಜಾಗುವ ಹಾಗೂ ಯಾವುದೇ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಸಮರ್ಥ ಪಡೆ ಕಟ್ಟಲು ತೆಲಂಗಾಣ ಸರ್ಕಾರ ಮುಂದಾಗಿದೆ. ಇದೇ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರೀತಿಯಲ್ಲಿಯೇ ರಾಜ್ಯ ವಿಪತ್ತು ನಿರ್ವಹಣೆ ಪಡೆಯ ತರಬೇತಿ ರೀತಿಯ ವಿಶೇಷ ಪಡೆಯನ್ನು ತೆಲಂಗಾಣ ಸರ್ಕಾರ ರಚಿಸಿದೆ.
ಈ ಎಸ್​ಡಿಆರ್​ಎಫ್​ ಪಡೆಗೆ ಇಂದು ಸಿಎಂ ರೇವಂತ್​ ರೆಡ್ಡಿ ಔಪಚಾರಿಕವಾಗಿ ಚಾಲನೆ ನೀಡಿದ್ದು, ಇದು ರಾಜ್ಯ ವಿಪತ್ತು ಸನ್ನದ್ಧತೆಯಲ್ಲಿ ಗಮನಾರ್ಹ ಹೆಜ್ಜೆಯಾಗಿದೆ ಎಂದರು.
ಎಸ್​ಡಿಆರ್​ಎಫ್​ ತೆಲಂಗಾಣ ಅಗ್ನಿ ವಿಭಾಗದಲ್ಲಿ 1,000 ಸಿಬ್ಬಂದಿಗಳಿದ್ದು, ತಮಿಳುನಾಡಿನ ಅರಕೊನಂ, ಮಹಾರಾಷ್ಟ್ರದ ಪುಣೆ, ಗುಜರಾತ್​ನ ವಡೋದರ, ಒಡಿಶಾದ ಮುಂಡಲಿ, ಆಂಧ್ರ ಪ್ರದೇಶದ ಎನ್​ಡಿಆರ್​ಎಫ್​ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ.
ಈ ಹೊಸ ಘಟಕದಲ್ಲಿ 2,000 ಮಂದಿ ಹೆಚ್ಚಿನ ತರಬೇತಿ ಸಿಬ್ಬಂದಿಗಳಾಗಿದ್ದು, ಅವರು ಪ್ರವಾಹ, ಭೂಕಂಪ ಅದರಲ್ಲೂ ಅಗ್ನಿ ವಿಪತ್ತಿನ ತುರ್ತು ಸಂದರ್ಭದಲ್ಲಿ ಸಮರ್ಥವಾಗಿ, ಪರಿಣಾಮಕಾರಿಯಾಗಿ ಈ ಪಡೆ ಕಾರ್ಯ ನಿರ್ವಹಿಸಲಿದೆ. ಈ ಎಸ್​ಡಿಆರ್​ಎಫ್​ ಪಡೆಗೆ ಇಂದು ಸಿಎಂ ರೇವಂತ್​ ರೆಡ್ಡಿ ಔಪಚಾರಿಕವಾಗಿ ಚಾಲನೆ ನೀಡಿದ್ದು, ಇದು ರಾಜ್ಯ ವಿಪತ್ತು ಸನ್ನದ್ಧತೆಯಲ್ಲಿ ಗಮನಾರ್ಹ ಹೆಜ್ಜೆಯಾಗಿದೆ ಎಂದರು.
ವಾಹನ ಪಲ್ಟಿ ಅಥವಾ ಕಟ್ಟಡ ಕುಸಿತದಂತಹ ಬಿಕಟ್ಟಿನ ಸಂದರ್ಭದಲ್ಲಿ ತಕ್ಷಣಕ್ಕೆ ಜೀವನ ರಕ್ಷಣೆ ನಿರ್ಣಾಯಕವಾಗಿದೆ. ಇದನ್ನು ಅರ್ಥೈಸಿಕೊಂಡು ತೆಲಂಗಾಣ ಸರ್ಕಾರ 35.03 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಅಗ್ನಿ ಇಲಾಖೆ ನಿರ್ಮಾಣ ಮಾಡಿದ್ದು, ಇದಕ್ಕಾಗಿ ಅತ್ಯಾಧುನಿಕ ಸಾಧನಗಳ ಮತ್ತು ನುರಿತ ಸಿಬ್ಬಂದಿ ಹಾಗೂ ಸಮರ್ಪಕವಾಗಿ ವಿಪತ್ತು ನಿರ್ವಹಿಸುವ ಸಮರ್ಥ ತಂಡವೊಂದನ್ನು ಕಟ್ಟಿದೆ.
ಬಸ್​, ಟ್ರಕ್​ ಮತ್ತು ಬೊಲೆರೊದ 20 ವಾಹನ ಮತ್ತು 40 ರಕ್ಷಣಾ ಬೋಟ್​ ಕೊಳ್ಳಲಾಗಿದೆ. ವಾಟರ್​ಪ್ರೂಫ್​ ಜಾಕೆಟ್​, ಎಲ್​ಇಡಿ ಲೈಟ್​ ಜೊತೆಗೆ ಹೆಲ್ಮೆಟ್​, ಪ್ರವಾಹ ನೀರಿನ ಕಾರ್ಯಾಚರಣೆಯಲ್ಲಿ ಫೇಸ್​ ಶೀಲ್ಡ್​ ಸೇರಿದಂತೆ 67 ಬಗೆಯ ಸುಧಾರಿತ ಸಾಧನಗಳನ್ನ ನೀಡಲಾಗಿದೆ.
100 ಟನ್​ಗಳವರೆಗಿನ ಭಾರ ಎತ್ತುವ ಸಾಮರ್ಥ್ಯದ ಬ್ಯಾಗ್​, ನಿಮಿಷಕ್ಕೆ 2,000 ಲೀಟರ್​ ನೀರು ಪಂಪ್​ ಮಾಡುವ ಫ್ಲೋಟಿಂಗ್​ ಪಂಪ್​ ಕೂಡಾ ಇರಲಿದೆ.
ಈ ಹೊಸ ವ್ಯವಸ್ಥೆಯು ಪ್ರವಾಹ ಮತ್ತು ಅಗ್ನಿ ಅಪಘಾತದಂತಹ ವಿಪತ್ತನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಿದೆ ಎಂದು ತೆಲಂಗಾಣ ಅಗ್ನಿ ಸುರಕ್ಷಾ ಪ್ರಧಾನ ನಿರ್ದೇಶಕ ನಾಗಿ ರೆಡ್ಡಿ ತಿಳಿಸಿದ್ದಾರೆ.
ಟಿಜಿಎಸ್​ಪಿ ಸಿಬ್ಬಂದಿ ಅಗ್ನಿಶಾಮಕ ದಳದ ಬಲ ಹೆಚ್ಚಿಸುವ ಜೊತೆಗೆ ತ್ವರಿತ ಮತ್ತು ಸಮರ್ಥ ವಿಪತ್ತು ನಿರ್ವಹಣೆ ಸೇವೆ ನೀಡಲಿದ್ದಾರೆ. ಎಸ್​ಡಿಆರ್​ಎಫ್​ ಉತ್ತಮ ಸುರಕ್ಷಾ ಕ್ರಮದ ಮೂಲಕ ತೆಲಂಗಾಣದ ವಿಪತ್ತ ನಿರ್ವಹಣೆ ಪ್ರಯತ್ನದಲ್ಲಿ ಹೊಸ ಪ್ರಯತ್ನ ಆರಂಭಿಸಿದೆ ಎಂದರು.
ತೆಲಂಗಾಣದಾದ್ಯಂತ ಎಲ್ಲ 137 ಅಗ್ನಿ ಕೇಂದ್ರದಲ್ಲಿ ಟಿಜಿಎಸ್​ಡಿಆರ್​ಫ್​ ಸ್ಟೇಷನ್​ ಕಾರ್ಯ ನಿರ್ವಹಿಸಲಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...