spot_img
spot_img

“ನಾನು ಮರಳಿನ ಮೇಲೆ ಅಕ್ಷರ ಕಲಿಯುವಾಗ ಕೃಷ್ಣರವರು ವಿದೇಶದಲ್ಲಿ ಓದುತ್ತಿದ್ದರು….’’ – ಸಿದ್ದರಾಮಯ್ಯ ಸ್ಮರಣೆ

spot_img
spot_img

Share post:

ಬೆಂಗಳೂರು: ಡಿ. 11ರಂದು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಂತ್ಯಸಂಸ್ಕಾರ ನಡೆಯುತ್ತಿರುವ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್.ಎಂ. ಕೃಷ್ಣ ಅವರ ಬಗ್ಗೆ ಒಂದು ಟ್ವೀಟ್ ಮಾಡಿದ್ದಾರೆ.

ಕನ್ನಡದ ಪತ್ರಿಕೆಯೊಂದಕ್ಕೆ ಅವರು ಬರೆದಿರುವ ಶ್ರದ್ಧಾಂಜಲಿ ಲೇಖನದ ಪೋಸ್ಟ್ ಹಾಕಿ, ಅದರ ಜೊತೆಗೆ ಕೃಷ್ಣ ಅವರು ತಮಗಿಂತ ಎಷ್ಟು ಹಿರಿಯರು ಹಾಗೂ ಎಷ್ಟು ಅನುಭವವುಳ್ಳವು ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ನಲ್ಲಿ ಕೃಷ್ಣ ಅವರು, ವಯಸ್ಸಿನಲ್ಲಿ, ಅನುಭವದಲ್ಲಿ ತಮಗಿಂತ ಎಷ್ಟು ದೊಡ್ಡವರು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.ಡಿ. 11ರಂದು ಮಧ್ಯಾಹ್ನ ಮಾಡಲಾಗಿರುವ ಈ ಟ್ವೀಟ್ ನಲ್ಲಿ ಅವರು, “ಬಹುಶಃ ನಾನು ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತ, ವೀರ ಮಕ್ಕಳ ಕುಣಿತ ಕಲಿಯುವ ಹೊತ್ತಲ್ಲಿ ಎಸ್.ಎಂ. ಕೃಷ್ಣರವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಕೃಷ್ಣರವರ ವೈಶಿಷ್ಟ್ಯವೆಂದರೆ ವಿದೇಶದಲ್ಲಿ ಶಿಕ್ಷಣ ಪಡೆದರೂ ಊರಿಗೆ ಮರಳಿ ಮಣ್ಣಿನ ಮಗನಾದರು’’ ಎಂದು ಅವರು ಬಣ್ಣಿಸಿದ್ದಾರೆ.

“ದ್ವೇಷದ ರಾಜಕಾರಣದಿಂದ ಬಹುದೂರವೇ ಇದ್ದ ಎಸ್.ಎಂ. ಕೃಷ್ಣ ಅವರೊಬ್ಬ ಸಜ್ಜನಿಕೆಯ ಜಂಟಲ್‌ಮೆನ್ ರಾಜಕಾರಣಿ. ಈ ಕಾರಣಕ್ಕಾಗಿಯೇ ಅಜಾತಶತ್ರುವಾಗಿ ನಮ್ಮ ನೆನಪುಗಳಲ್ಲಿ‌ ಶಾಶ್ವತವಾಗಿರಲಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಕನ್ನಡದ ಪತ್ರಿಕೆಯೊಂದಲ್ಲಿ ತಾವು ಬರೆದಿರುವ ಎಸ್ಎಂ ಕೃಷ್ಣ ಕುರಿತಾದ ಶ್ರದ್ಧಾಂಜಲಿ ಲೇಖನವೊಂದರ ಫೋಟೋವನ್ನು ಅವರು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.

ರಾಜಕೀಯ ಪ್ರವೇಶಿಸಿದರು. ಈ ರಾಜ್ಯದ ಮುಖ್ಯಮಂತ್ರಿಯೂ ಆದರು. ಅದರಿಂದ ಶಿಕ್ಷಣ ಕ್ಷೇತ್ರಕ್ಕೆ ನಷ್ಟವಾಯಿತಾದರೂ, ರಾಜ್ಯಕ್ಕೆ ಲಾಭವಾಗಿದೆ. ಅವರ ದೂರದೃಷ್ಟಿತ್ವದಿಂದಲೇ ಕರ್ನಾಟಕ ಇಂದು ಭಾರತದ ಐಟಿ ರಾಜಧಾನಿ ಎಂದೆನಿಸಿದೆ” ಎಂದು ಅವರು ಹೇಳಿದ್ದಾರೆ. ಅಲ್ಲದೆ, ಅದು ಕೃಷ್ಣ ಅವರ ಜೀವನದ ಅತ್ಯಂತ ಪ್ರಮುಖವಾದ ನಿರ್ಧಾರ ಎಂದು ಹೇಳಿದ್ದಾರೆ.

ಲೇಖನದಲ್ಲಿ ಅವರು ಅಂದಿನ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳನ್ನು ಮೆಲುಕು ಹಾಕಿದ್ದಾರೆ. “ಅಂದು ನಮ್ಮಂಥವರು ವಿದೇಶದಲ್ಲಿ ಬಿಡಿ, ಶಾಲೆಗಳಲ್ಲಿಯೂ ಓದುವಂಥ ಪರಿಸ್ಥಿತಿಯಲ್ಲಿರಲಿಲ್ಲ. ಆದರೆ, ಅಷ್ಟರಲ್ಲಾಗಲೇ ಕೃಷ್ಣ ಅವರು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮನಸ್ಸು ಮಾಡಿದ್ದರೆ ಅವರು ಅಲ್ಲೇ ಯಾವುದಾದರೂ ವಿವಿಯಲ್ಲಿ ಪ್ರಾಧ್ಯಾಪಕರಾಗಿ ನೆಮ್ಮದಿಯ ಜೀವನ ಸಾಗಿಸಬಹುದಿತ್ತು. ಆದರೆ, ಅವರು ರಾಜ್ಯಕ್ಕೆ ಬಂದರು.

“ಇಷ್ಟೇ ಮುಖ್ಯವಾದ ಇನ್ನೊಂದು ನಿರ್ಧಾರವೆಂದರೆ, ಅವರು ಸಮಾಜವಾದ ಸಿದ್ಧಾಂತದತ್ತ ಮುಖ ಮಾಡಿದ್ದು’’ ಎಂದು ಸಿಎಂ ಸ್ಮರಿಸಿದ್ದಾರೆ. 1962ರಲ್ಲಿ ಅವರು ಪ್ರಜಾ ಸೋಷಲಿಸ್ಟ್ ಪಾರ್ಟಿಯ ಮೂಲಕ ಶಾಸಕರಾಗಿದ್ದರು. ಆನಂತರ, 1971ರಲ್ಲಿ ಅವರು ಕಾಂಗ್ರೆಸ್ ಸೇರಿದರು. ಅಲ್ಲಿಂದ, ಕಾಂಗ್ರೆಸ್ ಪಕ್ಷವು ಅವರಿಗೆ ರಾಜಕೀಯವಾಗಿ ಏನೇನು ಸ್ಥಾನಮಾನಗಳನ್ನು ನೀಡಬೇಕೋ ಅದೆಲ್ಲವನ್ನೂ ನೀಡಿದೆ.

ಶಾಸಕರಾಗಿ, ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ, ವಿಧಾನಸಭೆ ಸ್ಪೀಕರ್ ಆಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಆನಂತರ ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ… ಹೀಗೆ ಒಂದು ಪಕ್ಷದಿಂದ ಅಷ್ಟು ನಾನಾ ರೀತಿಯ ಸ್ಥಾನಮಾನಗಳನ್ನು ಪಡೆದ ಬೇರೊಬ್ಬ ರಾಜಕಾರಣಿ ಬಹುಶಃ ಈ ಭಾರತದಲ್ಲಿ ಯಾವುದೇ ಪಕ್ಷದಲ್ಲಿಲ್ಲ’’ ಎಂದು ಅವರು ಸ್ಮರಿಸಿದ್ದಾರೆ.

“ಲೇಖನದ ಕಡೆಯ ಪ್ಯಾರಾದಲ್ಲಿ, ಅವರ ದೂರದೃಷ್ಟಿತ್ವ, ಅಭಿವೃದ್ಧಿಯ ಮುನ್ನೋಟ ಇಂದಿನ ತಲೆಮಾರಿನ ರಾಜಕಾರಣಿಗಳಿಗೆ ಮಾದರಿ” ಎಂದು ತಿಳಿಸಿದ್ದಾರೆ.

ಇದೇ ಲೇಖನದ ಕೊನೆಯ ಭಾಗದಲ್ಲಿ, “ತಮ್ಮ ಜೀವಿತಾವಧಿಯ ಕಡೆಯ ದಿನಗಳಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಆಗ ನನ್ನಂಥವರಿಗೆ ಸ್ವಲ್ಪ ಬೇಸರವೂ ಆಗಿತ್ತು. ಆದರೆ, ಅದ್ಯಾವ ಒತ್ತಡಗಳಿಂದ ಅವರು ಬಿಜೆಪಿ ಸೇರಿದರೋ ಗೊತ್ತಿಲ್ಲ.

ಕೆಲವು ಕಾರಣಗಳನ್ನು ಅವರು ಬಹಿರಂಗವಾಗಿ ಹೇಳಿಕೊಂಡದ್ದಿದೆ. ಆದರೆ, ಇನ್ನುಳಿದ ಕಾರಣಗಳನ್ನು ಅವರು ಹೇಳಿಕೊಂಡಿಲ್ಲ. ಬಹುಶಃ ಅವರು ಅವರ ಜೊತೆಯಲ್ಲೇ ಮಣ್ಣಾಗಲಿವೆ” ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...