spot_img
spot_img

Heavy rain in Kerala : ಶಬರಿಮಲೆಯಲ್ಲಿ ಭಾರಿ ಮಳೆ ನಡುವೆ ಭಕ್ತರ ದಂಡು

spot_img
spot_img

Share post:

Kerala Weather:

ವೃಶ್ಚಿಕ ರಾಶಿಯ ಕಾರ್ತಿಕ ದಿನವಾದ ಶುಕ್ರವಾರ(ಡಿ.13) 78,483 ಯಾತ್ರಿಕರು ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಪೈಕಿ 12,851 ಮಂದಿ ಸ್ಪಾಟ್‌ ಬುಕ್ಕಿಂಗ್‌ ಮೂಲಕ ದರ್ಶನ ಪಡೆದಿದ್ದಾರೆ. ಹೌದು ಸನ್ನಿಧಾನದಲ್ಲಿ ಮಧ್ಯಾಹ್ನದ ವರೆಗೂ ಜನ ಸಂದಣಿ ಇರಲಿಲ್ಲ. ಮಲೆ ಏರಿದವರು ಕಾಯದೆ ನೇರವಾಗಿ 18ನೇ ಮೆಟ್ಟಿಲು ಹತ್ತಿ ದರ್ಶನ ಪಡೆದಿದ್ದಾರೆ. ಆದರೆ ಮಧ್ಯಾಹ್ನದ ಬಳಿಕ ದಟ್ಟಣೆ ಉಂಟಾಗಿದೆ.ಶಬರಿಮಲೆಯಲ್ಲಿ ಸತತ ಮೂರನೇ ದಿನವೂ ಯಾತ್ರಾರ್ಥಿಗಳ ಸಂಖ್ಯೆ 75,000 ದಾಟಿದೆ. ಭಾರಿ ಮಳೆ ನಡುವೆಯೂ ಸಾವಿರಾರು ಭಕ್ತರು ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ

Kerala news :

ರಾತ್ರಿ 10 ಗಂಟೆ ವೇಳೆ ಮುಖ್ಯ ಪಾದಚಾರಿ ಮಾರ್ಗದಲ್ಲಿ ಸರತಿ ಸಾಲು ಕಡಿಮೆಯಾಗಿದೆ. ನಡೆ ಮುಚ್ಚುವ ವೇಳೆ ಸರದಿ ಸಾಲು ಒಂದು ಸಾಲಿಗೆ ಇಳಿದಿದೆ. ಮಳೆ ಮತ್ತು ಮಂಜು ಮುಸುಕಿದ ವಾತಾವರಣದಲ್ಲೂ ಭಾರಿ ಸಂಖ್ಯೆಯ ಭಕ್ತರು ಪಂಪಾದಿಂದ ಸನ್ನಿಧಾನದ ವರೆಗೆ ಮಲೆ ಏರುತ್ತಿದ್ದಾರೆ.ಶಬರಿಮಲೆಯಲ್ಲಿ ಸತತ ಮೂರನೇ ದಿನವೂ ಯಾತ್ರಾರ್ಥಿಗಳ ಸಂಖ್ಯೆ 75,000 ದಾಟಿದೆ. ಭಾರಿ ಮಳೆ ನಡುವೆಯೂ ಸಾವಿರಾರು ಭಕ್ತರು ಸನ್ನಿಧಾನಕ್ಕೆ ಆಗಮಿಸುತ್ತಿದ್ದಾರೆ. ವೃಶ್ಚಿಕ ರಾಶಿಯ ಕಾರ್ತಿಕ ದಿನವಾದ ಶುಕ್ರವಾರ(ಡಿ.13) 78,483 ಯಾತ್ರಿಕರು ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಯಾತ್ರಾರ್ಥಿಗಳು ದರ್ಶನ ಪಡೆಯಲು 3 ಗಂಟೆಗಳ ವರೆಗೆ ಕಾಯಬೇಕಾಗಿ ಬಂದಿದೆ.ಈ ಪೈಕಿ 12,851 ಮಂದಿ ಸ್ಪಾಟ್‌ ಬುಕ್ಕಿಂಗ್‌ ಮೂಲಕ ದರ್ಶನ ಪಡೆದಿದ್ದಾರೆ.ಸನ್ನಿಧಾನದಲ್ಲಿ ಮಧ್ಯಾಹ್ನದ ವರೆಗೂ ಜನ ಸಂದಣಿ ಇರಲಿಲ್ಲ. ಮಲೆ ಏರಿದವರು ಕಾಯದೆ ನೇರವಾಗಿ 18ನೇ ಮೆಟ್ಟಿಲು ಹತ್ತಿ ದರ್ಶನ ಪಡೆದಿದ್ದಾರೆ. ಆದರೆ ಮಧ್ಯಾಹ್ನದ ಬಳಿಕ ದಟ್ಟಣೆ ಉಂಟಾಗಿದೆ. ಪ್ರಸ್ತುತ, ಯಾತ್ರಾರ್ಥಿಗಳಿಗೆ ಯಾವುದೇ ನಿರ್ಬಂಧ ಹೇರದಿದ್ದರೂ, ಅರಣ್ಯ ಪ್ರದೇಶ ಜಾರುತ್ತಿರುವುದರಿಂದ ಕಾನನ ಮಾರ್ಗದ ಮೂಲಕ ಬರುವ ಭಕ್ತರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಹೌದು ಸನ್ನಿಧಾನದಲ್ಲಿ ತುಂತುರು ಮಳೆ ತಡರಾತ್ರಿವರೆಗೂ ಮುಂದುವರಿದಿದೆ. ಯಾತ್ರಾರ್ಥಿಗಳ ಸುರಕ್ಷತೆ ಸಮನ್ವಯಗೊಳಿಸಲು ಜಂಟಿ ಮಟ್ಟದ ಸಭೆ ನಡೆಸಲಾಗಿದೆ.

Notice from the police to the devotees walking on the forest path:

ಸತ್ರಂ ಪುಲ್ಲುಮೇಡು ಮೂಲಕ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ರ ವರೆಗೆ ಹಾಗೂ ಮುಕ್ಕುಜಿ ಮೂಲಕ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರ ವರೆಗೆ ಪ್ರವೇಶವನ್ನು ಅನುಮತಿಸಲಾಗಿದೆ. ಶಬರಿಮಲೆ ಸನ್ನಿಧಾನಕ್ಕೆ ಅರಣ್ಯ ದಾರಿ ಮೂಲಕ ದರ್ಶನಕ್ಕೆ ಬರುವ ಯಾತ್ರಾರ್ಥಿಗಳು ವೇಳಾಪಟ್ಟಿಯನ್ನು ಅನುಸರಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬೆಳಗ್ಗೆ 8 ರಿಂದ 11ರ ವರೆಗೆ ಪುಲ್ಲುಮೇಡು ಶಬರಿಮಲೆಗೆ ಮೂಲಕ ಪ್ರವೇಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.ಪ್ಲಾಸ್ಟಿಕ್‌ ಹಾಗೂ ಬಟ್ಟೆಗಳನ್ನು ಕಾಡಿನಲ್ಲಿ ಎಸೆಯಬಾರದು. ಬಯೋ ಟಾಯ್ಲೆಟ್‌ ಬಳಸಬೇಕು. ಉಳಿದ ಆಹಾರಗಳನ್ನು ವನ್ಯಜೀವಿಗಳಿಗೆ ನೀಡಬಾರದು ಎಂದು ಸೂಚಿಸಲಾಗಿದೆ.ನಿಗದಿತ ಮಾರ್ಗಗಳ ಮೂಲಕ ಯಾತ್ರಾರ್ಥಿಗಳು ಶಬರಿಮಲೆಗೆ ತೆರಳಬೇಕು. ಬೇಗ ತಲುಪಬೇಕೆಂದು ಅರಣ್ಯದ ಮೂಲಕ ಶಾರ್ಟ್‌ಕಟ್‌ ದಾರಿಗಳಲ್ಲಿ ಹೋಗಬಾರದು.

Special bus facility 

ಬೆಂಗಳೂರಿನಿಂದ ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವಿಶೇಷ ವೋಲ್ವೋ ಬಸ್ ಆರಂಭವಿಸಿದೆ. ಬೆಂಗಳೂರು-ನೀಲಕ್ಕಲ್ (ಪಂಪಾ, ಶಬರಿಮಲೆ) ಮಾರ್ಗದ ಬಸ್‌ಗೆ ಕಳೆದ ನ.29 ರಂದು ಚಾಲನೆ ಸಿಕ್ಕಿದೆ. ಬೆಂಗಳೂರು-ಪಂಪಾ ಬಸ್‌ ಮಧ್ಯಾಹ್ನ 1.50 ಕ್ಕೆ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು, ಮರುದಿನ ಬೆಳಗ್ಗೆ 6.45ಕ್ಕೆ ಪಂಪಾ ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ ಸಂಜೆ 6 ಗಂಟೆಗೆ ಪಂಪಾದಿಂದ ಹೊರಟು, ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪುತ್ತದೆ. ಬೆಂಗಳೂರಿನಿಂದ ಶಬರಿಮಲೆಗೆ 1,750 ರೂ. ಟಿಕೆಟ್‌ ದರ ನಿಗದಿಪಡಿಸಲಾಗಿದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...