spot_img
spot_img

GUDDALESHWAR FAIR : ಭಕ್ತರಿದ್ದಲ್ಲಿಗೆ ಹೋಗಿ ಪ್ರಸಾದ ವಿತರಿಸಿದ ಸ್ವಾಮೀಜಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Haveri News:

ಸಾಮಾನ್ಯವಾಗಿ ಭಕ್ತರು ಸ್ವಾಮೀಜಿಗಳಿದ್ದಲ್ಲಿಗೆ ಹೋಗಿ ಪ್ರಸಾದ ಪಡೆಯುವುದು ವಾಡಿಕೆ. ಆದರೆ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ನಡೆಯೋ GUDDALESHWAR FAIRಯಲ್ಲಿ ಸ್ವಾಮೀಜಿಯೇ ಭಕ್ತರಿದ್ದಲ್ಲಿಗೆ ಹೋಗಿ ಪ್ರಸಾದ ನೀಡುತ್ತಾರೆ. ಹೊಸರಿತ್ತಿಯ GUDDALESHWAR FAIR ಮಹೋತ್ಸವದಲ್ಲಿ ಸ್ವಾಮೀಜಿಗಳು ಭಕ್ತರಿದ್ದಲ್ಲಿಗೆ ಹೋಗಿ ಪ್ರಸಾದ ವಿತರಿಸಿದರು.

ಹೌದು, ಹೊಸರಿತ್ತಿ ಗ್ರಾಮದ ಗುದ್ದಲೀಶ್ವರ ಮಠದಲ್ಲಿ 125 ವರ್ಷಗಳಿಂದ GUDDALESHWAR FAIRಆಚರಿಸಲಾಗುತ್ತಿದೆ. ಐದು ದಿನಗಳ ಕಾಲ ಸಂಭ್ರಮದಿಂದ ಜಾತ್ರೆ ನಡೆಯುತ್ತದೆ. GUDDALESHWAR FAIR ಪ್ರಯುಕ್ತ ಮಠದ ಸ್ವಾಮೀಜಿ ಕುದುರೆ ಮೇಲೆ ಕುಳಿತು ಭಕ್ತರು ಇರುವಲ್ಲಿಗೆ ಹೋಗಿ ಪ್ರಸಾದ ವಿತರಣೆ ಮಾಡುತ್ತಾರೆ. ಮಠ ಆರಂಭವಾದಾಗಿನಿಂದ GUDDALESHWAR FAIRಯಲ್ಲಿ ಈ ಪದ್ದತಿ ರೂಢಿಯಲ್ಲಿದೆ.

Sankranti Day Prasad Distribution:

ಭಕ್ತರಿಗೆ ಪ್ರಸಾದ ವಿತರಣೆಗೆಂದು ಒಂದು ಟ್ರ್ಯಾಕ್ಟರ್​ನಷ್ಟು ಕಬ್ಬು ತಂದು ಕಟ್ ಮಾಡಲಾಗುತ್ತೆ. ಕಬ್ಬಿನ ಜೊತೆಗೆ ಕ್ವಿಂಟಲ್​ಗಟ್ಟಲೇ ಬೆಲ್ಲ, ಕೊಬ್ಬರಿ, ಉತ್ತತ್ತಿ ಹಣ್ಣುಗಳನ್ನ ಸೇರಿಸಿ ಭಕ್ತರಿಗೆ ವಿತರಣೆ ಮಾಡಲಾಗುತ್ತೆ. ಕೇವಲ ಗ್ರಾಮದ ಜನ ಮಾತ್ರವಲ್ಲದೇ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು ಜಾತ್ರೆಗೆ ಬರುತ್ತಾರೆ.

GUDDALESHWAR FAIR ಪ್ರಯುಕ್ತ ಐದು ದಿನಗಳ ಕಾಲ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ರಥೋತ್ಸವದ ಮರು ದಿನ ಭಕ್ತರು ಇದ್ದಲ್ಲಿಗೆ ಹೋಗಿ ಸ್ವಾಮೀಜಿ ಪ್ರಸಾದ ವಿತರಣೆ ಮಾಡುತ್ತಾರೆ. ಇದಕ್ಕೆ ಕಡುಬಿನ ಕಾಳಗ ಎಂತಲೂ ಕರೆಯುತ್ತಾರೆ. ಸಂಕ್ರಾಂತಿ ಹಬ್ಬದ ದಿನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಠದ ಸ್ವಾಮೀಜಿ ಕುದುರೆ ಮೇಲೆ ಕುಳಿತು ಸವಾರಿ ಮಾಡುತ್ತಾ ಭಕ್ತರಿಗೆ ಕಬ್ಬು, ಬೆಲ್ಲ, ಕೊಬ್ಬರಿ ಪ್ರಸಾದವನ್ನು ನೀಡುತ್ತಾರೆ.

ಹಾಗೆಯೆ ಮಂಗಳವಾರ ಸ್ವಾಮೀಜಿ ಪ್ರಸಾದ ವಿತರಿಸಿದರು. ಜಾತ್ರೆ ಸಂದರ್ಭದಲ್ಲಿ ಮಠದ ಅಂಗಳ ಭಕ್ತರಿಂದ ತುಂಬಿ ತುಳುಕುತ್ತದೆ. ಜಾತಿ ಭೇದ ಮರೆತು ಸರ್ವಜನಾಂಗದ ಜನರು ಜಾತ್ರೆಗೆ ಆಗಮಿಸಿ ಸ್ವಾಮೀಜಿಗಳ ಪ್ರಸಾದ ಸ್ವೀಕರಿಸುತ್ತಾರೆ. ಸ್ವಾಮೀಜಿ ಕುದುರೆ ಮೇಲೆ ಕುಳಿತು ಪ್ರಸಾದ ವಿತರಣೆಗೆ ಸವಾರಿ ಹೊರಡೋ ವೇಳೆ ವಿವಿಧ ಜಾನಪದ ಕಲಾತಂಡಗಳ ಸದ್ದು ಮೊಳಗುತ್ತದೆ.

ಸ್ವಾಮೀಜಿ ಕುಳಿತು ಸವಾರಿ ಹೊರಡಲು ಕುದುರೆಯನ್ನ ವಿಶೇಷವಾಗಿ ಅಲಂಕಾರ ಮಾಡಲಾಗುತ್ತೆ. ಗುದ್ದಲೀಶ್ವರ ಮಠದ ಗುದ್ದಲಿ ಶಿವಯೋಗೀಶ್ವರ ಶ್ರೀಗಳು ಮಾತನಾಡಿ, “ಸ್ವಾಮೀಜಿಗಳ ಹತ್ತಿರ ಹೋಗಿ ಆಶೀರ್ವಾದ, ಪ್ರಸಾದ ಸ್ವೀಕರಿಸುವುದು ಸಾಮಾನ್ಯ.

ಇದೊಂದು ದಿನ ಸ್ವಾಮೀಜಿಗಳೇ ಭಕ್ತರಿದ್ದಲ್ಲಿಗೆ ಹೋಗಿ ಪ್ರಸಾದವನ್ನು ನೀಡುತ್ತಾರೆ. ಬೆಲ್ಲವನ್ನು ಎಸೆದಾಗ ಕೆಳಗೆ ಬಿದ್ದರೆ ಮಣ್ಣಾಗುತ್ತದೆ, ಕಬ್ಬನ್ನು ತೂರಿದಾಗ ಅದು ಕೆಳಗೆ ಬಿದ್ದರೂ ತೊಳೆದುಕೊಂಡು ತಿನ್ನಬಹುದು. ಕಬ್ಬಿನ ಚೂರಿನ ಕಾಳಗಕ್ಕೆ ಕಡುಬಿನ ಕಾಳಗ ಎಂದು ಹೆಸರು ಬಂತು. ಈಗ ಕಬ್ಬ ಬೇಕು ಅಂತಿಲ್ಲ ಚಾಕೊಲೇಟ್​ಗಳನ್ನು ವಿತರಿಸಲಾಗುತ್ತದೆ.

ಗುರುಗಳ ಹಸ್ತ ಮುಟ್ಟಿ ಬಂದಿರುವ ಆ ಪ್ರಸಾದವನ್ನು ಸಂಕಲ್ಪದಿಂದ ಯಾರು ಹಿಡಿಕೊಳ್ಳುತ್ತಾರೋ ಅವರು ನನ್ನ ಸಂಕಲ್ಪ ಸಿದ್ಧಿಸಿದೆ ಎಂದು ಮರು ವರ್ಷ ಬಂದು ಹೇಳುತ್ತಾರೆ” ಎಂದು ತಿಳಿಸಿದರು. ಇದ್ದಲ್ಲಿಗೆ ಬಂದು ಭಕ್ತರಿಗೆ ಪ್ರಸಾದ ವಿತರಿಸಿ ಅವರ ಬಾಳು ಸಿಹಿಯಾಗಿರ್ಲಿ ಅಂತಾ ಹಾರೈಸೋ ಮಠದ ಸ್ವಾಮೀಜಿ, ಈ ಬಾರಿ ಟ್ರ್ಯಾಕ್ಟರ್​ನಲ್ಲಿ ಕುಳಿತು ಭಕ್ತರಿಗೆ ಚಾಕೊಲೇಟ್​ ಅನ್ನು ಸಹ ಎಸೆದು ಗಮನ ಸೆಳೆದರು.

ಇದನ್ನು ಓದಿರಿ : MASS MARRIAGE : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24ರಂದು ಸರಳ ಸಾಮೂಹಿಕ ವಿವಾಹ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...