spot_img
spot_img

MAHAMASTAKABHISHEKA : ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ರಾಜ್ಯಪಾಲರಿಂದ ಚಾಲನೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hubli News:

ವರೂರು ಕ್ಷೇತ್ರದಲ್ಲಿ ಬುಧವಾರ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ MAHAMASTAKABHISHEKAಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ವಿಶ್ವಶಾಂತಿಗಾಗಿ ಇಂದಿನಿಂದ MAHAMASTAKABHISHEKA, ಸುಮೇರು ಪರ್ವತ ಲೋಕಾರ್ಪಣೆ ಒಂದು ಐತಿಹಾಸಿಕ ಕಾರ್ಯಕ್ರಮ. ರಾಷ್ಟ್ರಸಂತ ಆಚಾರ್ಯ ಶ್ರೀಗುಣಧರ ನಂದಿ ಮಹಾರಾಜರ ನೇತೃತ್ವದಲ್ಲಿ ಒಳ್ಳೆಯ ಕಾರ್ಯಕ್ರಮ ಇದಾಗಿದೆ. ವರೂರು ಗ್ರಾಮದಲ್ಲಿ ಅತ್ಯಂತ ವಿಶಾಲವಾದ ಪ್ರದೇಶದಲ್ಲಿ ಸುಮೇರು ಪರ್ವತ ನಿರ್ಮಾಣ ಮಾಡಲಾಗಿದೆ.

ಇದೊಂದು ಅತ್ಯಂತ ಪುಣ್ಯ ಕ್ಷೇತ್ರ ಎಂದು ಹೇಳಿದರು. ಸತ್ಯ, ಅಹಿಂಸಾ ಮಾರ್ಗದಲ್ಲಿ ನಡೆಯುವ ಧರ್ಮ ಜೈನ ಧರ್ಮ. ಸತ್ಯ ಮಾರ್ಗದಲ್ಲಿ ಮೋಕ್ಷ ಕಾಣಬಹುದು ಎಂಬ ಸಾರ ಸಾರುತ್ತದೆ. ಜೈನ ತೀರ್ಥಂಕರರು ಮಾನವೀಯ ಮೌಲ್ಯಗಳ ಎತ್ತಿ ಹಿಡಿದಿದ್ದಾರೆ ಎಂದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ನಾಡಿನ ಅನೇಕ ಸಾಧು ಸಂತರು ಇಲ್ಲಿ ನೆರೆದಿದ್ದಾರೆ. ಧರ್ಮ ಹಾಗೂ ಮೋಕ್ಷಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಧರ್ಮ ಜಾಗೃತಿಗೆ ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದರು.

ಜೈನ ಧರ್ಮ ಉಚ್ಛ ಮಟ್ಟದ ಸಂಸ್ಕಾರ ನೀಡುತ್ತದೆ. ವ್ಯಸನ ಮುಕ್ತ ಜೊತೆಗೆ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ದಾರಿ ದೀಪವಾಗಿದೆ. ಸಾಂಸ್ಕೃತಿಕ ಪ್ರಾಚೀನಕ್ಕೆ ಈ ಧರ್ಮ ಸೇರಿದೆ. ಜೈನ ಧರ್ಮ ಪರೋಪಕಾರಿಯಲ್ಲಿ ಕೈಲಾಸ ಕಾಣುತ್ತದೆ. ಭಗವಾನ್ ಮಹಾವೀರರು ನಾಡಿನ ವಿಶ್ವ ಶಾಂತಿಗಾಗಿ ಸಂದೇಶ ಸಾರಿದ್ದಾರೆ. ಪಂಚಕಲ್ಯಾಣ ಮಹೋತ್ಸವ ಹಾಗೂ ಸಮೇರ ಪರ್ವತ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸಿದರು.

ಸತ್ಯ, ಅಹಿಂಸಾ, ಧರ್ಮ‌ ಮಾರ್ಗದಲ್ಲಿ ನಡೆಯುವ ಮೂಲಕ ಜೈನ ಸಮಾಜ ಮಾದರಿಯಾಗಿದೆ. ತೀರ್ಥಂಕರರು ಮಾನವ ಕಲ್ಯಾಣಕ್ಕೆ ಜನಿಸಿದ ದೇವರಾಗಿದ್ದಾರೆ. ಇಂತಹ ಮಹಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೂ ಪಾವನರಾಗುವಂತೆ ಮಾಡಿದ್ದಾರೆ. ರಾಜ್ಯಪಾಲರಾದ ನಂತರ ರಾಜ ಭವನದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಯಾರೇ ವಿದೇಶಿಗರು ಬಂದರೂ ಅವರಿಗೆ ಸಸ್ಯಾಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ವಿಶ್ವಶಾಂತಿಗೆ, ಸಫಲತೆಗೆ ನಾವು ಜೈನ ಸಮಾಜದ ಸಿದ್ಧಾಂತ ಪಾಲಿಸೋಣ. ಭಾರತೀಯ ಸಂಸ್ಕೃತಿಯ ಪರಿಸರ, ಪ್ರಾಣಿ, ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಈಗ ಪರಿಸರ ಅಸಮತೋಲನವಾಗಿ ನಾಶವಾಗುತ್ತಿದೆ. ಅದನ್ನು ಸಂರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಸತ್ಯ, ಅಹಿಂಸಾ, ಧರ್ಮ‌ ಮಾರ್ಗದಲ್ಲಿ ನಡೆಯುವ ಮೂಲಕ ಜೈನ ಸಮಾಜ ಮಾದರಿಯಾಗಿದೆ.

ತೀರ್ಥಂಕರರು ಮಾನವ ಕಲ್ಯಾಣಕ್ಕೆ ಜನಿಸಿದ ದೇವರಾಗಿದ್ದಾರೆ. ಇಂತಹ ಮಹಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೂ ಪಾವನರಾಗುವಂತೆ ಮಾಡಿದ್ದಾರೆ. ರಾಜ್ಯಪಾಲರಾದ ನಂತರ ರಾಜ ಭವನದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಯಾರೇ ವಿದೇಶಿಗರು ಬಂದರೂ ಅವರಿಗೆ ಸಸ್ಯಾಹಾರ ನೀಡಲಾಗುತ್ತಿದೆ ಎಂದು ಹೇಳಿದರು. ಈ ಹಿಂದೆ ಶ್ರೀಗಳ ಜನ್ಮ ಶತಮಾನದ ಕಾರ್ಯಕ್ರಮಕ್ಕೆ ಮತ್ತು ಸುಮೇರು ಪರ್ವತ ನಿರ್ಮಾಣದ ವೇಳೆಯೂ ಆಗಮಿಸಿದ್ದೆ.

17 ನೇ ವಯಸ್ಸಿನಲ್ಲಿ ಬ್ರಹ್ಮಚಾರಿ, 27ಕ್ಕೆ ಆಚಾರ್ಯರಾಗಿ ಗುಣಧರ ನಂದಿ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಬಡವರಿಗೆ ಶಿಕ್ಷಣ, ಆರೋಗ್ಯ, ಆಧ್ಯಾತ್ಮಿಕ ಸೇರಿದಂತೆ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ. MAHAMASTAKABHISHEKA, ಪಂಚ ಕಲ್ಯಾಣ, ನವಗ್ರಹ ಇತ್ಯಾದಿ ಮಾಡಿದ್ದಾರೆ. ನಾವು ಸಂತರಾಗಲು ಸಾಧ್ಯವಿಲ್ಲ. ಆದರೆ ಅವರ ಸಂಪರ್ಕಕ್ಕೆ ಬಂದು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಇದನ್ನು ಓದಿರಿ : AMBIGARA CHOUDAYYA MANTAP : ಅಂಬಿಗರ ಚೌಡಯ್ಯ ಐಕ್ಯ ಮಂಟಪ ಅಭಿವೃದ್ಧಿಗಾಗಿ ಸ್ವಾಮೀಜಿಗೆ ಪಟ್ಟಾಭಿಷೇಕ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...