spot_img
spot_img

EFFECTS OF JAGGERY ON DIABETES : ಶುಗರ್ ಪೇಷಂಟ್ಗಳು ಬೆಲ್ಲ ಸೇವಿಸೋದು ಉತ್ತಮವೇ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Can Diabetes Patients At Jagary News:

ಮಧುಮೇಹಿಗಳು JAGGERYದಿಂದ ರೆಡಿ ಮಾಡಿದ ಸಿಹಿ ತಿಂಡಿಗಳನ್ನು ಸೇವಿಸಬಹುದೇ? ಇಲ್ಲವೆ JAGGERYವನ್ನು ಮಾತ್ರ ತಿನ್ನಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ತಜ್ಞರು ವಿವರವಾಗಿ ತಿಳಿಸಿದ್ದಾರೆ.ಆದ್ರೆ, ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ 20 ರಿಂದ 30 ವರ್ಷ ವಯಸ್ಸಿನವರ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ.ಇಂದಿನ ಆಧುನಿಕ ಯುಗದಲ್ಲಿ ಅನೇಕರು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈ ಹಿಂದೆ, ಟೈಪ್ 2 ಮಧುಮೇಹವು 40 ವಯಸ್ಸಿಗಿಂತಲೂ ಮೇಲ್ಪಟ್ಟವರಲ್ಲಿ ಮಾತ್ರ ಕಂಡುಬರುತ್ತಿತ್ತು.25 ವರ್ಷದೊಳಗಿನ ಸುಮಾರು ಶೇ. 25ರಷ್ಟು ಜನರು ಟೈಪ್ 2 ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭಾರತದ ಜನಸಂಖ್ಯೆಯ ಶೇ. 50ಕ್ಕಿಂತ ಹೆಚ್ಚು ಜನರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ಶೇ 65ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇದ್ದಾರೆ.

ಮಹಿಳೆಯರು ಆರಂಭಿಕ ಹಂತದಲ್ಲಿ ಟೈಪ್ 2 ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆ. ನಾವು ಸಂಭಾವ್ಯ ವಿನಾಶಕಾರಿ ಮಧುಮೇಹ ಸಾಂಕ್ರಾಮಿಕ ಕಾಯಿಲೆಯ ಅಂಚಿನಲ್ಲಿದ್ದೇವೆ.ಆದ್ರೆ, ಇದನ್ನು ನಿಯಂತ್ರಿಸಲು ಜನರು ಆಹಾರ ಕ್ರಮದಲ್ಲಿ ಹಾಗೂ ಜೀವನಶೈಲಿಯಲ್ಲಿ ಬದಲಾವಣೆ ಸೇರಿದಂತೆ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹುಮುಖ್ಯವಾಗಿದೆ.

ರೋಗಿಯ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾದರೆ ಅವರು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಬೊಜ್ಜಿನ ಸಮಸ್ಯೆ ಹೊಂದಿರುವವರು ಈ ಕಾಯಿಲೆಗೆ ದೊಡ್ಡ ಕಾರಣವೆಂದು ಗಮನಿಸಲಾಗಿದೆ. ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿ, ವ್ಯಾಯಾಮದ ಕೊರತೆಯೂ ಸಹ ಸಕ್ಕರೆ ಕಾಯಿಲೆಗೆ ಅಪಾಯಕಾರಿ ಅಂಶವಾಗಿದೆ. ಸಕ್ಕರೆ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ.

ಇದರಿಂದ ಮಧುಮೇಹಿಗಳು ಶುಗರ್​ ಇರುವ ಆಹಾರವನ್ನು ಸೇವಿಸಬಾರದು. ಮಧುಮೇಹಿಗಳು ಸಕ್ಕರೆ ಸೇವನೆಯಿಂದಾಗಿ ತಮ್ಮ ರಕ್ತದಲ್ಲಿ ಗ್ಲೂಕೋಸ್/ಸಕ್ಕರೆ ಮಟ್ಟ ಹೆಚ್ಚಾಗುವ ಅಪಾಯವಿರುತ್ತದೆ. ಇದಕ್ಕಾಗಿಯೇ ಶುಗರ್​ ಪೇಷಂಟ್​ಗಳು ಇದನ್ನು ತಡೆಯಲು ಸಿಹಿತಿಂಡಿಗಳನ್ನು ಸೇವಿಸಬಾರದು. ಇದೀಗ ಮಧುಮೇಹಿಗಳು JAGGERY ಸೇವಿಸಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

Is jaggery safe for diabetics?: ವೆಬ್​ಸೈಟ್​ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಿದ ತಜ್ಞರು ಹಾಗೂ ಸಂಶೋಧನೆಯ ಪ್ರಕಾರ, JAGGERY ತುಂಬಾ ಆರೋಗ್ಯಕರವಾಗಿದೆ. ಆದರೆ, ಮಧುಮೇಹದಲ್ಲಿ ಈ ಸೇವನೆ ಮಾಡೋದು ಒಳ್ಳೆಯದಲ್ಲ. ಬೆಲ್ಲ ಹಾಗೂ ಸಕ್ಕರೆ ಎರಡನ್ನೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ.

ಆದ್ದರಿಂದ ಶುಗರ್​ ಪೇಷಂಟ್​ಗಳಿಗೆ ಬೆಲ್ಲ ಸೇವನೆ ಮಾಡುವುದು ಅಷ್ಟೊಂದು ಸುರಕ್ಷಿತವಲ್ಲ.ಮಧುಮೇಹಿಗಳು ಕುದಿಸಿದ ಸಿಹಿ ಗೆಣಸನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಏಕೆಂದರೆ, ಸಿಹಿ ಗೆಣಸಿನ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇದೆ. ಶುಗರ್​ ಪೇಷಂಟ್​ಗಳು ಕಿತ್ತಳೆ, ಆವಕಾಡೊ, ಖರ್ಜೂರ ಕೂಡ ಸೇವಿಸಬಹುದು.

ಬೆಲ್ಲ ಸೇವನೆ ಮಾಡುವುದರಿಂದ ಶುಗರ್​ ಲೆವಲ್​ ಇನ್ನೂ ಜಾಸ್ತಿಯಾಗುತ್ತದೆ. ಮಧುಮೇಹ ಇರುವವರು ಸಿಹಿ ಏನನ್ನಾದರೂ ತಿನ್ನಬೇಕೆಂದು ಅನಿಸಿದರೆ, JAGGERYದ ಬದಲು, ಸಿಹಿ ಗೆಣಸಿನಂತಹ ನೈಸರ್ಗಿಕ ಸಿಹಿಕಾರಕಗಳನ್ನು ಬಳಕೆ ಮಾಡಬಹುದು. ಜೊತೆಗೆ ಮಧುಮೇಹ ರೋಗಿಗಳು ಇದನ್ನು ಮಿತವಾಗಿ ಸೇವಿಸುವುದು ಒಳ್ಳೆಯದಲ್ಲ.

What are the benefits of jaggery?:

JAGGERYವನ್ನು ಸಕ್ಕರೆ ರೀತಿ ಸಂಸ್ಕರಿಸದ ಕಾರಣಕ್ಕೆ JAGGERYವನ್ನು ಸಕ್ಕರೆಗಿಂತ ಆರೋಗ್ಯಕರವೆಂದು ಹೇಳಲಾಗುತ್ತದೆ. JAGGERYದಲ್ಲಿ ಕಬ್ಬಿಣ ಹಾಗೂ ಇತರ ಕೆಲವು ಪೋಷಕಾಂಶಗಳು ಇವೆ. JAGGERY ದೇಹಕ್ಕೆ ತುಂಬಾ ಉಪಯುಕ್ತವಾಗಿದೆ.

JAGGERY ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಗ್ಯಾಸ್ಟ್ರಿಕ್, ಉಬ್ಬುವುದು ಮತ್ತು ಇತರ ಹೊಟ್ಟೆಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ.

ನಿಯಮಿತವಾಗಿ JAGGERY ತಿನ್ನುವುದರಿಂದ ರಕ್ತ ಕೂಡ ಶುದ್ಧವಾಗುತ್ತದೆ. JAGGERY ಸೇವಿಸುವುದರಿಂದ ದೇಹದ ದೌರ್ಬಲ್ಯ ದೂರವಾಗಿ ದೇಹಕ್ಕೆ ಶಕ್ತಿ ಲಭಿಸುತ್ತದೆ.

ಬೆಲ್ಲವು ಪೊಟ್ಯಾಸಿಯಮ್ ಎಂಬ ಪೋಷಕಾಂಶ ಹೊಂದಿದೆ. ಇದು ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ JAGGERYದ ನೀರನ್ನು ಕುಡಿಯುವುದರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಿಸಲು ಸಾಧ್ಯವಿದೆ.

ಇದನ್ನು ಓದಿರಿ : US EXPORT CONTROL LIST : ಭಾರತದ 3 ಪ್ರಮುಖ ಪರಮಾಣು ಸಂಸ್ಥೆಗಳನ್ನು ರಫ್ತು

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...