spot_img
spot_img

PRAWESH VERMA ON ARVIND KEJRIWAL : ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಠೇವಣಿ ಕಳೆದುಕೊಳ್ಳುತ್ತಾರೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ಪ್ರತಿಭಟನಾ ನಿರತ ಯುವಕರ ಮೇಲೆ ಅರವಿಂದ್ KEJRIWAL ತಮ್ಮ ಕಾರು ಹರಿಸಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಆರೋಪಿಸಿದ್ದಾರೆ.ಈಗ ಮತ್ತೆ, ನವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಅವರು ಮಾಜಿ ಸಿಎಂ ಅರವಿಂದ್ KEJRIWAL ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಮಾತಿನ ಸಮರ ಮುಂದುವರೆದಿದೆ.

KEJRIWAL​ ಅವರ ಬೆಂಗಾವಲು ವಾಹನದ ಮೇಲಿನ ದಾಳಿ ಕುರಿತು ಪ್ರತಿಕ್ರಿಯಿಸಿ, ”ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್​ KEJRIWAL​ ಅವರಿಗೆ ಜನರು ಕಪ್ಪು ಬಾವುಟಗಳನ್ನು ತೋರಿಸಿ, ಉದ್ಯೋಗ ಹಾಗೂ ಮತ್ತಿತರ ಸಮಸ್ಯೆಗಳಿಗೆ ಉತ್ತರ ನೀಡುವಂತೆ ಕೇಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.”KEJRIWAL ಅವರು ಹೋದಲ್ಲೆಲ್ಲಾ ಜನರು ಕಪ್ಪು ಬಾವುಟ ತೋರಿಸಿ ಉತ್ತರಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಅವರೆಲ್ಲರೂ ಗೂಂಡಾಗಳಾಗಿದ್ದರೆ, ದೆಹಲಿಯ ಜನರೆಲ್ಲರೂ ಗೂಂಡಾಗಳು ಎಂದಾಗುತ್ತದೆ. ಯಾಕೆಂದರೆ ದೆಹಲಿಯ ಎಲ್ಲ ಜನರೂ KEJRIWAL​ ಅವರನ್ನು ಪ್ರಶ್ನಿಸುತ್ತಿದ್ದಾರೆ. ಈ ಬಾರಿ KEJRIWAL​​ ಠೇವಣಿ ಕಳೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಯುವಕರ ವಿರುದ್ಧ ಪೊಲೀಸರಿ​ಗೂ ದೂರು ನೀಡಲಾಗುವುದು. ಕೊಲೆ ಯತ್ನ ಪ್ರಕರಣ ದಾಖಲಿಸಲಾಗುವುದು. KEJRIWAL ಅವರನ್ನು ಬಂಧಿಸಬೇಕು, ಅವರ ಕಾರನ್ನು ವಶಪಡಿಸಿಕೊಳ್ಳಬೇಕು ಮತ್ತು ಅವರ ಚಾಲಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು” ಎಂದು ಪ್ರವೇಶ್ ವರ್ಮಾ ಆಗ್ರಹಿಸಿದ್ದಾರೆ.

”ವಾಲ್ಮೀಕಿ ಸಮುದಾಯದ ಮೂವರು ಯುವಕರು KEJRIWAL​​ ಅವರನ್ನು ಉದ್ಯೋಗದ ಬಗ್ಗೆ ಕೇಳಿ ತಪ್ಪು ಮಾಡಿದ್ದಾರೆ. ಯಾರಾದರೂ KEJRIWAL​​ ಅವರನ್ನು ಕೇಳಿದರೆ, ಆಪ್​ ಕಾರ್ಯಕರ್ತರು ಅವರನ್ನು ಥಳಿಸುತ್ತಾರೆ. ನಂತರ KEJRIWAL​ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳುತ್ತಾರೆ. ಚುನಾವಣಾ ಆಯೋಗವಾಗಲಿ, ಪೊಲೀಸರಾಗಲಿ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.”ಸ್ಥಳೀಯ ಯುವಕರು KEJRIWAL ಅವರನ್ನು ಪ್ರಶ್ನಿಸುವ ಧೈರ್ಯ ಮಾಡಿದ್ದರು. ಮತ್ತು KEJRIWAL ಅವರನ್ನು ತಮ್ಮ ಕಾರಿನ ಕೆಳಗೆ ಹತ್ತಿಕ್ಕಲು ಸನ್ನೆ ಮಾಡಿದ್ದರು. ಅರವಿಂದ್ KEJRIWAL ಈ ರೀತಿ ದಲಿತ ಸಮುದಾಯವನ್ನು ಹತ್ತಿಕ್ಕುತ್ತಾರೆಯೇ?” ಎಂದು ವರ್ಮಾ ಪ್ರಶ್ನಿಸಿದರು.

What was it?: ಈ ದಾಳಿಗೆ ಆಮ್​ ಆದ್ಮಿ ಪಕ್ಷ ವರ್ಮಾ ಅವರ ಮೇಲೆ ಆರೋಪ ಮಾಡಿತ್ತು. ಪ್ರವೇಶ್​ ವರ್ಮಾ ಅವರ ಗೂಂಡಾಗಳು KEJRIWAL​ ಅವರ ಮೇಲೆ ದಾಳಿ ಮಾಡಿದ್ದಾರೆ. ಸೋಲಿನ ಭಯದಿಂದ ಬಿಜೆಪಿ ಭಯಭೀತವಾಗಿದೆ ಎಂದು ಆಪ್​ ದೂರಿತ್ತು.

ಅರವಿಂದ್​ KEJRIWAL​ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದಾಗ ಕೆಲವರು ಅವರಿಗೆ ಕಪ್ಪು ಬಾವುಟಗಳನ್ನು ತೋರಿಸಿ ಘೋಷಣೆಗಳನ್ನು ಕೂಗಿದ್ದರು. ಆಗ KEJRIWAL​ ಅವರಿದ್ದ ಕಾರು ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದರು.

ಇದನ್ನು ಓದಿರಿ : FIRST 3 HOSTAGES ARRIVE IN ISRAEL : ಇಸ್ರೇಲ್ – ಹಮಾಸ್ ಕದನವಿರಾಮ ಒಪ್ಪಂದ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...