spot_img
spot_img

SAIF ALI KHAN CASE:ಆರೋಪಿಯ ಪೊಲೀಸ್ ಕಸ್ಟಡಿ ವಿಸ್ತರಣೆ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mumbai (Maharashtra) News:

ನಟ SAIF ALI KHAN ಪ್ರಕರಣದ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್​ನ ಪೊಲೀಸ್​ ಕಸ್ಟಡಿ ಜನವರಿ 29ರವರೆಗೆ ವಿಸ್ತರಣೆಯಾಗಿದೆ.ಕಳೆದ ಗುರುವಾರ (ಜನವರಿ 16) ಮುಂಜಾನೆ ಬಾಂದ್ರಾದಲ್ಲಿರುವ ಅಪಾರ್ಟ್‌ಮೆಂಟ್‌ ಒಂದರ 12ನೇ ಮಹಡಿಯಲ್ಲಿರುವ SAIF ALI KHAN ನಿವಾಸಕ್ಕೆ ನುಗ್ಗಿದ ವ್ಯಕ್ತಿ, 54ರ ಹರೆಯದ ನಟನ ಮೇಲೆ ಚಾಕುವಿನಿಂದ ಹಲವು ಬಾರಿ ಇರಿದಿದ್ದನು.

ಈ ದಾಳಿ ಭದ್ರತೆ ಮತ್ತು ಸೆಲೆಬ್ರಿಟಿ ಜೀವನದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿತು.ಬಾಲಿವುಡ್ ನಟSAIF ALI KHAN ಅಲಿ ಖಾನ್ ಅವರಿಗೆ ಚಾಕುವಿನಿಂದ ಹಲವು ಬಾರಿ ಇರಿದಿರುವ ಆರೋಪ ಹೊತ್ತಿರುವ ಬಾಂಗ್ಲಾದೇಶಿಗನ ಪೊಲೀಸ್ ಕಸ್ಟಡಿಯನ್ನು ಮುಂಬೈ ನ್ಯಾಯಾಲಯ ಶುಕ್ರವಾರ ಜನವರಿ 29ರವರೆಗೆ ವಿಸ್ತರಿಸಿದೆ. ಕಳ್ಳತನಕ್ಕೆಂದು SAIF ALI KHAN​ ಕರೀನಾ ನಿವಾಸಕ್ಕೆ ನುಗ್ಗಿದ ವ್ಯಕ್ತಿ, ನಟನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ.

ಮುಂಬೈನ ಥಾಣೆ ನಗರದಲ್ಲಿ ಭಾನುವಾರದಂದು ಬಂಧನಕ್ಕೊಳಗಾದ ಆರೋಪಿ ಬಾಂಗ್ಲಾದೇಶದವನಾಗಿದ್ದು, ಕಳೆದ ವರ್ಷ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ನಂತರ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು.ದಾಳಿ ನಡೆದ ಕೂಡಲೇ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯಿತು.

ಕುತ್ತಿಗೆ ಮತ್ತು ಬೆನ್ನುಮೂಳೆ ಸೇರಿದಂತೆ ಹಲವೆಡೆ ಗಂಭೀರ ಗಾಯಗಳಾಗಿದ್ದ ಹಿನ್ನೆಲೆ ಆ ಕೂಡಲೇ ಎರಡು ಶಸ್ತ್ರಚಿಕಿತ್ಸೆಗೆ ಒಳಗಾದರು. ಜನವರಿ 21ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆ ತಲುಪಿದರು.ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಎಂಬಾತನನ್ನು ಪೊಲೀಸರು ಬಾಂದ್ರಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಹಾಜರುಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ನಿರ್ಣಾಯಕ ಅಂಶಗಳ ಕುರಿತು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ವಾದಿಸಿ, ನ್ಯಾಯಾಲಯದಿಂದ ಇನ್ನೂ ಏಳು ದಿನಗಳ ಕಾಲ ಆರೋಪಿಯನ್ನು ಕಸ್ಟಡಿಗೆ ಕೋರಿದರು. ಪೊಲೀಸರ ಮನವಿಗೆ ಸ್ಪಂದಿಸಿದ ನ್ಯಾಯಾಲಯ, ಜನವರಿ 29ರವರೆಗೆ ಆರೋಪಿಯ ಕಸ್ಟಡಿ ವಿಸ್ತರಿಸಿತು.

ನಟನ ಹೇಳಿಕೆಗಳು, ತಮ್ಮ ಪುತ್ರ ಜಹಾಂಗೀರ್‌ನನ್ನು ದುಷ್ಕರ್ಮಿಯಿಂದ ಹೇಗೆ ರಕ್ಷಿಸಿದರೆಂಬುದನ್ನು ಮತ್ತು ತಮ್ಮ ಮೇಲಾದ ಹಲ್ಲೆ ಬಗ್ಗೆ ತಿಳಿಸಿದೆ. SAIF ALI KHAN ಹೇಳಿಕೆಯ ಪ್ರಕಾರ, SAIF ALI KHAN​ ಹಾಗೂ ಕರೀನಾ ತಮ್ಮ ರೂಮ್​​ನಲ್ಲಿದ್ದರು. ಕಿರಿಯ ಮಗ ಜಹಾಂಗೀರ್ ಅಲಿ ಖಾನ್‌ನನ್ನು ನೋಡಿಕೊಳ್ಳುವ ಎಲಿಯಾಮಾ ಫಿಲಿಪ್‌ನ (Eliama Philip) ಅವರ ಕಿರುಚಾಟ ಕೇಳಿಸಿತು.

ಆ ಕೂಡಲೇ ಜಹಾಂಗೀರ್‌ನ ಕೋಣೆಗೆ ಧಾವಿಸಿದ SAIF ALI KHAN, ದುಷ್ಕರ್ಮಿಯು ತಮ್ಮ ಮಗ ಮತ್ತು ಫಿಲಿಪ್​​​ ಮೇಲೆ ದಾಳಿ ಮಾಡಲು ಮುಂದಾಗಿದ್ದನ್ನು ಕಂಡುಕೊಂಡರು. ಅವರನ್ನು ರಕ್ಷಿಸೋ ಭರದಲ್ಲಿ ಸ್ವತಃ ಗಂಭೀರ ಗಾಯಕ್ಕೊಳಗಾದರು.ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಎರಡು ದಿನಗಳ ನಂತರ, ಮುಂಬೈ ಕ್ರೈಂ ಬ್ರ್ಯಾಂಚ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಜನವರಿ 16ರಂದು ನಡೆದ ಘಟನೆ ಬಗ್ಗೆ ನಟ ಸಂಪೂರ್ಣವಾಗಿ ವಿವರಿಸಿದರು.

 

ಇದ್ದನು ಓದಿರಿ :TRAFFIC CONGESTION CRISIS : ಭಾರತದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಬಿಕ್ಕಟ್ಟು: ಇಲ್ಲವೇ ಇದಕ್ಕೆ ಪರಿಹಾರ?!

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

PRABHAS : ಕಣ್ಣಪ್ಪ ಚಿತ್ರದಲ್ಲಿ ‘ರುದ್ರ’ನಾಗಿ ಸೂಪರ್ ಸ್ಟಾರ್ ಪ್ರಭಾಸ್

Prabhas News : ಬಹುನಿರೀಕ್ಷಿತ ಕಣ್ಣಪ್ಪ ಚಿತ್ರದಿಂದ ರೆಬೆಲ್​ ಸ್ಟಾರ್​ PRABHAS ​ ಅವರ ಮೊದಲ ನೋಟ ಅನಾವರಣಗೊಂಡಿದೆ.'ಕಣ್ಣಪ್ಪ', ಭಾರತೀಯ ಚಿತ್ರರಂಗದ ಒಂದು ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು,...

UNION BUDGET SESSION : ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ, ಸಂಜೆ ಪ್ರಧಾನಿ ಮೋದಿ ಉತ್ತರ

New Delhi News: UNION BUDGET SESSION ನಾಲ್ಕನೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರ ನೀಡಲಿದ್ದಾರೆ....

PRAYAGRAJ MAHA KUMBH LIGHTING : ಗಮನ ಸೆಳೆಯುತ್ತಿದೆ ಮಹಾಕುಂಭದ ಲೈಟಿಂಗ್ ವ್ಯವಸ್ಥೆ

Lucknow, Uttar Pradesh News: PRAYAGRAJ MAHA KUMBH LIGHTING ವಿದ್ಯುತ್ ಇಲಾಖೆ ಕನಸಿನ ಲೋಕವನ್ನೇ ಸೃಷ್ಟಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ಭಕ್ತರ...

TRANSGENDERS IN AKKA CAFE : ಮಂಗಳಮುಖಿಯರಿಂದ ‘ಅಕ್ಕ’ ಕೆಫೆ ನಿರ್ವಹಣೆ

Haveri News: ಹಾವೇರಿ ಜಿಲ್ಲಾ ಪಂಚಾಯತ್​ ದಿಟ್ಟ ನಿರ್ಧಾರಕ್ಕೆ ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸುಮಾರು 10 ಜನ ಮಂಗಳಮುಖಿಯರು ನಿರ್ವಹಣೆ ಮಾಡಲಿರುವ TRANSGENDERS IN AKKA CAFEಗೆ...