spot_img
spot_img

ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್‌ ಅರೆಸ್ಟ್ ಆಗಿದ್ದು ; ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದೆನು.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್‌ ಅರೆಸ್ಟ್ ಆಗಿ 3 ತಿಂಗಳುಗಳೇ ಕಳೆದಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಾವಾಗ ರಿಲೀಸ್ ಆಗ್ತಾರೆ. ದಾಸನಿಗೆ ಬಿಡುಗಡೆಯ ಬಾಗಿಲು ಯಾವಾಗ ತೆರೆಯುತ್ತೆ ಅನ್ನೋದು ಕಾಯುತ್ತಿದ್ದಾರೆ. ಫ್ಯಾನ್ಸ್‌ಗಳ ಒದ್ದಾಟ ಒಂದು ಕಡೆಯಾದ್ರೆ  ಸ್ಯಾಂಡಲ್‌ವುಡ್‌ಗೂ ದರ್ಶನ್ ಅರೆಸ್ಟ್ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ : BSNL: ಪ್ರತಿದಿನ 2GB ಡೇಟಾ.. ದಿನಕ್ಕೆ 7 ರೂಪಾಯಿಯಂತೆ 75 ದಿನಗಳ ವ್ಯಾಲಿಡಿಟಿ

ರಿಯಲ್ ಸ್ಟಾರ್ ಉಪೇಂದ್ರ ಅವರು ನಟ ದರ್ಶನ್ ಅರೆಸ್ಟ್ ಆದ ಬಳಿಕ ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಮೌನ ಮುರಿದಿರುವ ಉಪೇಂದ್ರ ಅವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್‌ವುಡ್ ಸ್ಟಾರ್‌ ಆಗಿ ನಟ ದರ್ಶನ್ ಅರೆಸ್ಟ್‌ ಬಗ್ಗೆ ನಟ ಉಪೇಂದ್ರ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಖಂಡಿತವಾಗಿ ಈ ಪ್ರಕರಣದಿಂದ ಎಲ್ಲರಿಗೂ  ನೋವಾಗಿದೆ. ಸದ್ಯದಲ್ಲೇ ತೀರ್ಪು ಬರುತ್ತೆ ಕಾದು ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.

ಏನಂದ್ರೆ ಎಲ್ಲರಿಗೂ ನೋವಾಗಿದೆ. ಒಂದು ಅಂತು ಸತ್ಯ. ಇಂಡಸ್ಟ್ರಿಯಲ್ಲಿ ಇರುವವರಿಗೂ ಎಲ್ಲರಿಗೂ  ನೋವಾಗಿದೆ. ಯಾಕಂದ್ರೆ ನಾವೆಲ್ಲಾ ಒಂದೇ ಫ್ಯಾಮಿಲಿ. ಯಾರದೇ ತಪ್ಪಾಗಲಿ, ಸರಿಯಾಗಲಿ ನೋವಂತೂ ಎಲ್ಲರಿಗೂ ಆಗುತ್ತೆ. ಜನಗಳಿಗೂ ಅದೇ ಭಾವನೆ ಇದೆ.

ಇದನ್ನೂ ಓದಿ : ಜಮ್ಮು-ಕಾಶ್ಮೀರ ಚುನಾವಣೆ: ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ಇತರ ಸರ್ಕಾರಗಳಿಗಿಂತ ಉತ್ತಮವಾಗಿದೆ.

ಈ ಘಟನೆ ಆಗಬಾರದು ಅನ್ನೋದು ಎಲ್ಲರಲ್ಲೂ ಇದೆ. ಇನ್ನೂ ತನಿಖೆ ನಡೆಯುತ್ತಿದೆ. ಮಾಧ್ಯಮಗಳಲ್ಲಿ ತೋರಿಸುತ್ತಾ ಇರೋದನ್ನೇ ನಾವು ನೋಡುತ್ತಾ ಇದ್ದೇವೆ. ಈ ವಿಚಾರದಲ್ಲಿ ನಾವು ಜಡ್ಜ್‌ಮೆಂಟ್ ಕೊಡೋಕೆ ಆಗಲ್ಲ. ಇವ್ರು ಸರಿ ಇವ್ರು ತಪ್ಪು ಅಂತ ಹೇಳೋಕೆ ಆಗಲ್ಲ. ಸದ್ಯದಲ್ಲೇ ತೀರ್ಪು ಬರುತ್ತೆ.

ನಾವೆಲ್ಲಾ ಒಪ್ಪಿಕೊಳ್ಳಲೇ ಬೇಕು. ಒಂದು ನ್ಯಾಯ ವ್ಯವಸ್ಥೆ ಇದೆ. ಕೋರ್ಟ್‌ಗೆ ನಾವು ಗೌರವ ಕೊಡಬೇಕು. ಖಂಡಿತ ಒಂದು ರಿಸಲ್ಟ್ ಹೊರ ಬರುತ್ತೆ. ಅದಕ್ಕೆ ನಾವು ಕಾಯಬೇಕು ಅದನ್ನೇ ನಾವು ಮಾಡುತ್ತಿದ್ದೇವೆ ಅಷ್ಟೇ ಎಂದು ಉಪೇಂದ್ರ ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...

MATSYA 6000 : ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಯಶಸ್ವಿ

Matsya 6000: ದೇಶದ ನಾಲ್ಕನೇ ತಲೆಮಾರಿನ ಆಳ ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಪೂರ್ಣಗೊಂಡಿದ್ದು, 2025ರ ಅಂತ್ಯದ ವೇಳೆಗೆ 500 ಮೀಟರ್ ಪ್ರಯೋಗ ನಡೆಯಲಿದೆ. ಇದು...