spot_img
spot_img

ರೋಗಗಳಿಂದ ಕಂಗೆಟ್ಟಿದ್ದ ಮಲೆನಾಡಿನ ರೈತರಲ್ಲಿ ಆಶಾಕಿರಣ: ಭರವಸೆ ಮೂಡಿಸಿದ ಮಂಗಳ ಅಡಕೆ

spot_img
spot_img

Share post:

ಶೃಂಗೇರಿ: ಹಳದಿ ಎಲೆ. ಬೇರು ಹುಳ, ಎಲೆ ಚುಕ್ಕಿ ರೋಗ ಹೀಗೆ ಮಲೆನಾಡಿನ ಅಡಕೆ ಬೆಳೆಗಾರರು ಕಳೆದ ಕೆಲವು ವರ್ಷಗಳಿಂದ ಸಾಲು ಸಾಲು ರೋಗ ಬಾಧೆಗಳಿಂದ ಹೈರಾಣಾಗಿದ್ದಾರೆ. ಅವರಿಗೆ ದಕ್ಷಿಣ ಕನ್ನಡ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಮಂಗಳ ತಳಿ ಅಡಕೆ ಭರವಸೆ ಮೂಡಿಸಿದೆ.

ಅಡಕೆ ಬೆಳೆಗೆ ವ್ಯಾಪಕವಾಗಿ ಹರಡುತ್ತಿರುವ ಹಳದಿ ಎಲೆ, ಎಲೆ ಚುಕ್ಕಿ ರೋಗದ ನಡುವೆಯೂ ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಇಂಟರ್‌ಸಿ ಮಂಗಳ ತಳಿ ಮಲೆನಾಡಿನಲ್ಲಿ ಯಶಸ್ಸು ಕಾಣುತ್ತಿದೆ.

ಸುತ್ತಲೂ ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳ ಸಮೀಪ ಹೊಸದಾಗಿ ನಾಟಿ ಮಾಡಿರುವ ಇಂಟರ್‌ಸಿ ಮಂಗಳ ತಳಿ ತೋಟವನ್ನು ಹಸಿರಾಗಿ ಕಂಗೊಳಿಸುವಂತೆ ಮಾಡಿದೆ.

ಈ ಬೆಳವಣಿಗೆ ಮಲೆನಾಡಿನ ರೈತರಿಗೆ ಆಶಾದಾಯಕವಾಗಿದೆ. ಮೆಣಸೆ ಗ್ರಾಮ ಪಂಚಾಯಿತಿಯ ಮಸಿಗೆ ಗ್ರಾಮದ ಹನಕೋಡು ಶಾರದಾ ಮತ್ತು ನೆಮ್ಮಾರ್‌ ಗ್ರಾಮ ಪಂಚಾಯಿತಿಯ ನಾಯನಾಡಿನ ಶ್ರೀಧರ ಬುಕುಡಿಬೈಲಿನಲ್ಲಿ ನಾಟಿ ಮಾಡಿರುವ ತೋಟದಲ್ಲಿ ಈಗ ಫಸಲು ಬರುತ್ತಿದೆ.

ಕರಾವಳಿ ಭಾಗದ ಅಮಾವಾಸೆಬೈಲಿನಲ್ಲಿ ಉತ್ತಮ ಫಸಲು ನೀಡುತ್ತಿದ್ದ ಇಂಟರ್‌ಸಿ ಮಂಗಳ ತೋಟದಿಂದ ಅಡಕೆ ಸಸಿ ತಂದು ಪ್ರಾಯೋಗಿಕವಾಗಿ ನೆಡಲಾಗಿತ್ತು.

ಸಾಂಪ್ರಾದಾಯಿಕ ಅಡಕೆ ತಳಿಗಿಂತಲೂ ಚುರುಕಾಗಿ ಬೆಳವಣಿಗೆ ಕಂಡ ಇಂಟರ್‌ಸಿ ಮಂಗಳ ಆರೋಗ್ಯಕರವಾಗಿ ಬೆಳೆದಿದ್ದು, ನಿರೀಕ್ಷೆಗೂ ಮುನ್ನ ನಾಲ್ಕನೇ ವರ್ಷಕ್ಕೆ ಸಿಂಗಾರ (ಹೂವು) ಬೀಸಿತ್ತು. ಸ್ಥಳಿಯ ತಳಿ ಅಡಕೆ ಹೂವು ಬಿಡಲು ಕನಿಷ್ಠ 8 ವರ್ಷವಾದರೂ ಅಗತ್ಯವಿದೆ.

ಮಂಗಳ ತಳಿ ಅಡಕೆ ಮರಗಳು ಆರೋಗ್ಯಕರವಾಗಿದ್ದು, ಹಸಿರಿನಿಂದ ಕಂಗೊಳಿಸುತ್ತಿವೆ. ಹಳದಿ ಎಲೆ ರೋಗ ಇದುವರೆಗೂ ಕಾಣಿಸಿಕೊಳ್ಳದಿದ್ದರೂ, ಎಲೆ ಚುಕ್ಕಿ ರೋಗ ಕಳೆದ ಮೂರು ವರ್ಷದಿಂದ ಈ ಬೆಳೆಗೂ ಬಂದಿದೆ. ಸದೃಢವಾಗಿರುವ ಅಡಕೆ ಮರ ರೋಗವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ.

ಫಸಲು ನಷ್ಟವಾದರೂ ಅಡಕೆ ಮರ ಆರೋಗ್ಯದಾಯಕವಾಗಿದೆ. 2022-23ನೇ ಸಾಲಿನಲ್ಲಿ ಎಲೆ ಚುಕ್ಕಿ ರೋಗ ಹೆಚ್ಚಾಗಿದ್ದರೂ, ಪಕ್ಕದ ಸಾಂಪ್ರದಾಯಿಕ ಅಡಕೆ ತೋಟದಲ್ಲಿ ಬಹುತೇಕ ಮರಗಳು ರೋಗದಿಂದ ನಿರ್ನಾಮವಾದರೂ ಇಂಟರ್‌ಸಿ ಮಂಗಳ ತಳಿ ರೋಗವನ್ನು ತಡೆದುಕೊಂಡು ಮತ್ತೆ ಬೆಳವಣಿಗೆ ವೇಗ ಪಡೆದುಕೊಂಡಿದೆ.

ನಾಲ್ಕನೇ ವರ್ಷದಿಂದ ಪೈರು ಆರಂಭವಾಗುವುದರಿಂದ ರೈತರಿಗೂ ಬೇಗ ಆದಾಯ ದೊರಕುತ್ತದೆ. ಒಂದು ಮರದಲ್ಲಿ 5ರಿಂದ 8 ಕೊನೆ ಬಿಡುತ್ತಿದ್ದು, ಸ್ಥಳೀಯ ದೇಶಿ ಅಡಕೆಗಿಂತ ಗಾತ್ರದಲ್ಲಿ ದೊಡ್ಡದಿದೆ. ಕೊನೆಯಲ್ಲಿ ಅಡಕೆ ಕಾಯಿ ಸಂಖ್ಯೆ ಸಾಂಪ್ರದಾಯಿಕ ತಳಿಯಷ್ಟು ಇಲ್ಲದಿದ್ದರೂ, ಉತ್ತಮ ಫಸಲು ಪಡೆಯಬಹುದೆಂಬುದು ಬೆಳೆದಿರುವ ರೈತರ ಆಶಾಭಾವ.

“ಕ್ವಿಂಟಲ್‌ಗಟ್ಟಲೆ ಅಡಕೆ ಬೆಳೆಯುತ್ತಿದ್ದ ನಮ್ಮ ಮನೆಯಲ್ಲಿ ಈಗ ಇಳುವರಿ ಕೆಜಿ ಲೆಕ್ಕಕ್ಕೆ ಇಳಿದಿದೆ. ಅಡಕೆ ತೋಟದಲ್ಲಿ ಮರಗಳೆಲ್ಲ ನಾಶವಾಗಿ, ಅಲ್ಲೊಂದು ಇಲ್ಲೊಂದು ಉಳಿದಿವೆ.

7 ವರ್ಷದ ಹಿಂದೆ ಪ್ರಾಯೋಗಿಕವಾಗಿ 200 ಇಂಟರ್‌ಸಿ ಮಂಗಳ ತಳಿಯ ಸಸಿ ನಾಟಿ ಮಾಡಿದ್ದೆ.

ನಾಲ್ಕನೇ ವರ್ಷದಿಂದ ಕೆಲವು ಮರದಲ್ಲಿ ಫಸಲು ಬಂದಿದ್ದು, ಈಗ ಬಹುತೇಕ ಎಲ್ಲ ಮರದಲ್ಲೂ ಕೊನೆ ಬಂದಿವೆ. ಕಾಳು ಮೆಣಸು ಬೆಳೆಸಲು ಸಹಾಯಕವಾಗಿದೆ” ಎಂದು ಶೃಂಗೇರಿಯ ಹನಕೋಡು ಶಾರದಾ ತಿಳಿಸಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...