spot_img
spot_img

BRAHMA RAKSHASA EXPULSION : ರಸ್ತೆ ಉದ್ದಕ್ಕೂ ದೈವಾವೇಷದಲ್ಲಿ ಸಂಚರಿಸಿ ಬ್ರಹ್ಮರಾಕ್ಷಸನ ಉಚ್ಛಾಟಿಸಿದ ದೈವ

spot_img
spot_img

Share post:

Mangalore (South Kannada) News:

BRAHMA RAKSHASA EXPULSION ಮಂಗಳೂರಿನ ಕೊಟ್ಟಾರ ಬಳಿಯ ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಅಪರೂಪವೂ ಆದ ಬ್ರಹ್ಮರಾಕ್ಷಸ ಉಚ್ಛಾಟನೆಯು ಬುಧವಾರ ರಾತ್ರಿ ಧಾರ್ಮಿಕ ವಿಧಿ – ವಿಧಾನದೊಂದಿಗೆ ನಡೆಯಿತು.

Ritual held at midnight:

ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರದ ಚಿಂತನೆಯಲ್ಲಿದ್ದ ಆಡಳಿತ ಕಮಿಟಿಯು ತಂತ್ರಿಗಳಿಂದ ಪ್ರಶ್ನಾಚಿಂತನೆ ಇಟ್ಟಿದ್ದರು‌. BRAHMA RAKSHASA EXPULSION ಈ ವೇಳೆ, ಪ್ರಶ್ನಾಚಿಂತನೆಯಲ್ಲಿ ಜೀರ್ಣೋದ್ಧಾರಕ್ಕೂ ಮುನ್ನ ಅಲ್ಲಿರುವ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳ ಉಚ್ಛಾಟನೆ ಆಗಬೇಕು. ಇಲ್ಲದಿದ್ದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಅಡೆತಡೆ ಎದುರಾಗಬಹುದು ಎಂಬ ಹೇಳಲಾಗಿತ್ತು. ಅದರಂತೆ ಅಮಾವಾಸ್ಯೆಯ ನಡುರಾತ್ರಿಯಲ್ಲಿ ಈ ಪ್ರಕ್ರಿಯೆ ನಡೆಯಿತು.

Brahma Rakshasa who wandered invisibly:

ಅಗೋಚರವಾಗಿ ಆ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದ ಬ್ರಹ್ಮರಾಕ್ಷಸನ ಉಚ್ಛಾಟನೆಯ ವಿಶೇಷ ದೃಶ್ಯವನ್ನು ಕಾಣಲೆಂದೇ ಊರ ಜನತೆ ದೈವಸ್ಥಾನದಲ್ಲಿ ರಾತ್ರಿ 10 ಗಂಟೆಗಿಂತ ಮೊದಲೇ ಸೇರಿದ್ದರು. ಪ್ರತೀ ಮನೆಯವರು ಉಚ್ಛಾಟನೆಗೆ ಅಗತ್ಯವಾಗಿದ್ದ ತೆಂಗಿನಕಾಯಿ, ಕೋಳಿ, ತೆಂಗಿನಗರಿಯ ಸೂಟೆಗಳನ್ನು ಹರಕೆ ಸಲ್ಲಿಸಿದರು.

ರಾತ್ರಿ 12 ಗಂಟೆ ಆಗುತ್ತಿದ್ದಂತೆ ಬಬ್ಬುಸ್ವಾಮಿ ಹಾಗೂ ಗುಳಿಗ ದೈವಗಳ ದರ್ಶನಪಾತ್ರಿಗಳು ಆವೇಶಕ್ಕೆ ನಿಂತರು. ದೈವಾವೇಶದಲ್ಲಿಯೇ ಆ ಪ್ರದೇಶದಲ್ಲಿ ಅಗೋಚರವಾಗಿ ಅಲೆಯುತ್ತಿದ್ದ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳನ್ನು ಆವಾಹಿಸಿ ದೈವಸ್ಥಾನದ ಮುಂಭಾಗ ಇಟ್ಟಿದ್ದ ಬಲಿಗೆ ಹಾಕಿದರು. ಬಲಿಯಲ್ಲಿ ಆ ಕ್ಷುದ್ರಶಕ್ತಿಗಳು ದಿಗ್ಭಂಧನಕ್ಕೊಳದವು.

Traffic Prohibition:

ನಡುರಾತ್ರಿ ಕಳೆಯುತ್ತಿದ್ದಂತೆ ದೈವಪಾತ್ರಿ ಈ ಕ್ಷುದ್ರಶಕ್ತಿಗಳಿಗೆ ಮುಕ್ತಿಕೊಡಲು ಆವೇಶದಲ್ಲಿಯೇ ಕೂಳೂರು ನದಿಯತ್ತ ತೆರಳಿದರು. BRAHMA RAKSHASA EXPULSION ಜನರೂ ಅದರ ಹಿಂದೆಯೇ ಓಡಿದರು. ಈ ವೇಳೆ ಯಾರೂ ಎದುರು ಸಿಕ್ಕಬಾರದೆಂಬ ನಂಬಿಕೆಯಿದೆ. ಆದ್ದರಿಂದ ಈ ಪ್ರದೇಶದ ಎಲ್ಲ ರಸ್ತೆಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಸಂಚಾರ ನಿಷೇಧಿಸಲಾಗಿತ್ತು.

ಈ ಬಗ್ಗೆ ಮುಂಚೆಯೇ ಮುನ್ಸೂಚನೆ ನೀಡಲಾಗಿತ್ತು. ಜನಸಂಚಾರ ಇರದಂತೆ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆಯೂ ಸಹಕರಿಸಿತ್ತು. ಈ ಬಗ್ಗೆ ಮಾತನಾಡಿದ ದೈವಪಾತ್ರಿ ಪ್ರಜ್ವಲ್, ”ಈ ಪ್ರದೇಶದಲ್ಲಿ ಮಧ್ಯಾಹ್ನದ ಮತ್ತು ರಾತ್ರಿ ವೇಳೆ ಸಂಚರಿಸುವವರಿಗೆ ತೊಂದರೆಯಾಗುವುದು, ಆರೋಗ್ಯದಲ್ಲಿ ವ್ಯತ್ಯಾಸವಾಗುವುದು ಆಗಬಾರದೆಂದು ದೈವಸ್ಥಾನದ ಜೀರ್ಣೋದ್ದಾರದ ವೇಳೆ ಕ್ಷುದ್ರ ಶಕ್ತಿಗಳನ್ನು ಉಚ್ಛಾಟನೆ ಮಾಡಲಾಗುತ್ತಿದೆ” ಎಂದರು. ಗ್ರಾಮಸ್ಥ ರಾಜೇಶ್ ಮಾತನಾಡಿ,

”ಈ ದೈವಸ್ಥಾನ ಜೀರ್ಣೋದ್ದಾರ ಮಾಡುವ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿತು. ಇಲ್ಲಿ ಇರುವ ಬ್ರಹ್ಮ ರಾಕ್ಷಸನ ಉಚ್ಛಾಟನೆ ಮಾಡುವಂತೆ ಕಾಣಿಸಿತು. ದೈವದ ದರ್ಶನದ ಸಂದರ್ಭದಲ್ಲಿಯೂ ಇದೇ ರೀತಿ ಕಾಣಿಸಿತು. ಅದರಂತೆ ಬ್ರಹ್ಮ ರಾಕ್ಷಸನ ಉಚ್ಛಾಟನೆ ನಡೆಯಿತು” ಎಂದು ಹೇಳಿದರು.

ಇದನ್ನು ಓದಿರಿ : JAYALALITHA JEWELLERY : ಜಯಲಲಿತಾ ಚಿನ್ನಾಭರಣ ಒಯ್ಯಲು 6 ದೊಡ್ಡ ಪೆಟ್ಟಿಗೆ ತನ್ನಿ

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...