spot_img
spot_img

BWSSB DRINKING WATER BAN : ಬೆಂಗಳೂರಲ್ಲಿ ಕುಡಿಯುವ ನೀರಿನ ಅನ್ಯ ಬಳಕೆ ನಿಷೇಧಿಸಿ ಜಲಮಂಡಳಿ ಆದೇಶ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News :

ಕುಡಿಯುವ ಉದ್ದೇಶ ಹೊರತುಪಡಿಸಿ ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನರಂಜನೆಯ ಉದ್ದೇಶದ ಕಾರಂಜಿಗಳಿಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿ ಇತರ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ ಎಂದು ಬಿಡಬ್ಯುಎಸ್ಎಸ್ ಬಿ ಇಂದು ಆದೇಶ ಹೊರಡಿಸಿದೆ.

ಬೇಸಿಗೆ ಕಾಲದಲ್ಲಿ ಎದುರಾಗುವ ಕುಡಿಯುವ ನೀರಿನ ಕೊರತೆ ನಿಭಾಯಿಸಲು ಬೆಂಗಳೂರು ಜಲಮಂಡಳಿ ಈಗಿನಿಂದಲೇ ನಿಯಂತ್ರಣ ಕ್ರಮಗಳನ್ನು ಅನುಷ್ಠಾನಕ್ಕೆ ತರತೊಡಗಿದೆ. ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ನಿಷೇಧಿಸಿ BWSSB DRINKING WATER BAN ಇಂದು ಆದೇಶ ಹೊರಡಿಸಿದೆ.

Background Action on Decline in Ground Water Level:

ನಗರದಲ್ಲಿ ಪ್ರತಿದಿನ ಉಷ್ಣಾಂಶ ಹೆಚ್ಚಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಕುಸಿದಿದೆ. BWSSB DRINKING WATER BAN ಇಂತಹ ಸಂದರ್ಭದಲ್ಲಿ ಕುಡಿಯುವ ನೀರು ವ್ಯರ್ಥ ಮಾಡುವುದನ್ನು ತಡೆಗಟ್ಟುವುದು ಅವಶ್ಯವಾಗಿದೆ.

ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿರುವ ಜಲಮಂಡಳಿ ಅಧ್ಯಕ್ಷರು ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಪೋಲು ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

Water cannot be used for any purpose other than all these purposes:

ಕುಡಿಯುವ ನೀರನ್ನು ಅನ್ಯ ಉದ್ದೆಶಗಳ ಬಳಕೆಗೆ ಇರುವ ನಿಷೇಧ ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರ ಪ್ರಕಾರ 5000 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ನಿಷೇಧದ ಉಲ್ಲಂಘನೆ ಮರುಕಳಿಸಿದರೆ 5000 ಸಾವಿರ ರೂಪಾಯಿ ದಂಡದ ಜೊತೆಗೆ ಹೆಚ್ಚುವರಿಯಾಗಿ ಪ್ರತಿದಿನ 500 ರೂಪಾಯಿ ದಂಡ ಹಾಕಲಾಗುತ್ತದೆ.

ಸಾರ್ವಜನಿಕರು ಕುಡಿಯುವ ನೀರಿನ ದುರ್ಬಳಕೆ ಕಂಡುಬಂದಲ್ಲಿ ಕೂಡಲೇ ಕಾಲ್ ಸೆಂಟರ್ ನಂಬರ್ 1916 ಗೆ ಮಾಹಿತಿ ನೀಡಬಹುದಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ಹೇಳಿದ್ದಾರೆ. BWSSB DRINKING WATER BAN  ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನರಂಜನೆಯ ಉದ್ದೇಶದ ಕಾರಂಜಿಗಳಿಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿ ಕುಡಿಯುವ ಉದ್ದೇಶ ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಹಾಗೂ ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಸಹ ಕುಡಿಯುವ ನೀರಿನ ಬಳಕೆಯನ್ನ ನಿಷೇಧಿಸಲಾಗಿದೆ ಎಂದು ಜಲಮಂಡಳಿಯ ಆದೇಶದಲ್ಲಿ ವಿವರಿಸಲಾಗಿದೆ.

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಯ್ದೆ – 1964 ರ ಕಲಂ 33 ಮತ್ತು 34ರ ಪ್ರಕಾರ ಕುಡಿಯುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಜಲಮಂಡಳಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿರಿ : India Has Been Victim Of Terror Acts Perpetrated By Pakistan Through Groups Such As JeM: Delhi Tells UNSC

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAMSUNG GALAXY A06 5G: ಆಂಡ್ರಾಯ್ಡ್ 15ನೊಂದಿಗೆ ಬಂತು ಸ್ಯಾಮ್ಸಂಗ್ನ ಹೊಸ ಪೋನ್

Samsung Galaxy A06 5G News: ಈ ಸುದ್ದಿ SAMSUNG ಪ್ರಿಯರಿಗೆ. Samsung Galaxy A06 ಅನ್ನು 5Gಗೆ ಅಪ್​ಡೇಟ್​ ಮಾಡಿ ಪರಿಚಯಿಸಿದೆ. ಇದರ ಬೆಲೆ...

ISRAEL HOSTAGES FREED BY HAMAS:ಮಹಿಳೆ, ಮಕ್ಕಳು ಸೇರಿ ನಾಲ್ವರು ಇಸ್ರೇಲಿಗರ ಶವ ಹಸ್ತಾಂತರಿಸಿದ ಹಮಾಸ್ ಉಗ್ರರು

Jerusalem (Israel) News: ಕದನ ವಿರಾಮದ ಒಪ್ಪಂದದಂತೆ ಮೊದಲ ಹಂತದಲ್ಲಿ 33 ಜನರನ್ನು ಬಿಡುಗಡೆ ಮಾಡಲು ಹಮಾಸ್​ ಒಪ್ಪಿದೆ. ಈ ಪೈಕಿ ಮಹಿಳೆಯರು, ಪುರುಷರು ಸೇರಿ...

NAXALITES KILL TWO MEN:ಪೊಲೀಸ್ ಮಾಹಿತಿದಾರರೆಂದು ಇಬ್ಬರು ನಾಗರಿಕರ ಹತ್ಯೆಗೈದ ನಕ್ಸಲರು

Danthewada (Chhattisgarh) News: ಬಮನ್​ ಕಶ್ಯಪ್​ (29) ಮತ್ತು ಅನಿಸ್​ ರಾಮ್​ ಪೊಯಮ್​ (38) ಕೊಲೆಯಾದವರು. ಇವರು ಬರ್ಸೊರ್​ ಪೊಲೀಸ್​ ಠಾಣಾ ವ್ಯಾಪ್ತಿಯ ತೊಡ್ಮ ಗ್ರಾಮದವರು...

NAMMA METRO PRICE HIKE EFFECT:ದರ ಹೆಚ್ಚಳದ ಬಿಸಿ

Bangalore News: ಈ ಮೊದಲು ನಮ್ಮ METROದಲ್ಲಿ ದಿನಕ್ಕೆ 8.5 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು. ಆದರೆ, ದರ ಏರಿಕೆ ಬಳಿಕ ಈ ಸಂಖ್ಯೆ ಅಂದಾಜು...