spot_img
spot_img

CHILDREN DRESSED AS MAHATMA GANDHI : ಗಮನ ಸೆಳೆದ 101 ಗಾಂಧೀಜಿ ವೇಷಧಾರಿ ಮಕ್ಕಳು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Belgaum News:

CHILDREN DRESSED AS MAHATMA GANDHI ಬಂದಿದ್ದ ಜನರು ಹಾಗೂ ಪೊಲೀಸ್​ ಅಧಿಕಾರಿಗಳು ಕೂಡ ಫೋಟೋ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು. ಬೋಳಿಸಿದ ತಲೆ, ದೋತರ (ಪಂಚೆ) ಉಟ್ಟು, ಕೈಯಲ್ಲಿ ಕೋಲು ಹಿಡಿದು, ಜನಿವಾರ ಧರಿಸಿ, ಮುಖಕ್ಕೆ ಬಣ್ಣ ಹಚ್ಚಿಕೊಂಡಿದ್ದ ಈ ಮಕ್ಕಳು ಗಾಂಧೀಜಿ ದರ್ಶನ ಮಾಡಿಸಿದರು. ಹುಬ್ಬಳ್ಳಿ ತಾಲ್ಲೂಕಿನ ದೇವರಗುಡಿಹಾಳ ಮತ್ತು ಈಶ್ವರ ನಗರದ 101 ಹುಡುಗರು ಕಾಂಗ್ರೆಸ್ ಸಮಾವೇಶದಲ್ಲಿ ಮಹಾತ್ಮನ ಕಳೆ ತಂದರು.

ಥೇಟ್ ಗಾಂಧಿ ಅವರಂತೆ ಮಕ್ಕಳು ಕಾಣುತ್ತಿದ್ದರು. 3 ರಿಂದ 14 ವರ್ಷದೊಳಗಿನ ಮಕ್ಕಳ ಈ ಅಭಿಮಾನಕ್ಕೆ ಎಲ್ಲರೂ ಫಿದಾ ಆದರು. ಈ ಗಾಂಧಿ ಹುಡುಗರ ಜೊತೆಗೆ ಸಮಾವೇಶಕ್ಕೆ ಬಂದಿದ್ದ ಜನರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಕೆಲ ಪೊಲೀಸ್ ಅಧಿಕಾರಿಗಳು ಮಕ್ಕಳ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು ವಿಶೇಷ. ಬೆಳಗಾವಿಯಲ್ಲಿ ಇಂದು ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಮಹಾತ್ಮ ಗಾಂಧೀಜಿಯ ವೇಷ ಧರಿಸಿ ಬಂದಿದ್ದ ಮಕ್ಕಳು ಎಲ್ಲರ ಗಮನ ಸೆಳೆದರು.

ನಾವೂ ಗಾಂಧಿ ಎಂಬ ಸಂದೇಶವನ್ನು ಹೊತ್ತು ಬಂದಿದ್ದ ಅವರು ಜನರಲ್ಲಿ ಅವರ ವಿಚಾರಧಾರೆಗಳನ್ನು ಬಿತ್ತಿದರು.”ಗಾಂಧೀಜಿ ವೇಷ ಧರಿಸಿದ್ದಕ್ಕೆ ನಮಗೆ ತುಂಬಾ ಸಂತೋಷವಿದೆ. ಗಾಂಧಿ ಅಜ್ಜ ಕಂಡಿದ್ದ ರಾಮರಾಜ್ಯದ ಕನಸು ಸಾಕಾರಗೊಳಿಸುವ ದೃಢ ವಿಶ್ವಾಸ ನಮ್ಮಲ್ಲಿದೆ. CHILDREN DRESSED AS MAHATMA GANDHIಹೇಗೆ ಗಾಂಧೀಜಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರೋ, ಅದೇ ರೀತಿ ನಾವೂ ದೇಶವನ್ನು ಮತ್ತಷ್ಟು ಬಲಿಷ್ಠ ಪಡಿಸಲು ಶ್ರಮಿಸುತ್ತೇವೆ” ಎನ್ನುವುದು ಗಾಂಧಿ ವೇಷಧಾರಿ ಸುನೀಲ್ ಗಾರ್ಗೆ ಮಾತು.

ಸೇವಾದಳದ ಸ್ವಯಂ ಸೇವಕಿ ತೇಜಸ್ವಿನಿ ಬೆಂಗಳೂರು, “ಮಕ್ಕಳು ಸ್ವಯಂ ಪ್ರೇರಿತವಾಗಿ CHILDREN DRESSED AS MAHATMA GANDHI. ಅದೆಷ್ಟೋ ಪಾಲಕರು ಆಸಕ್ತಿಯಿಂದ ಕಳಿಸಿಕೊಟ್ಟರು.‌ ಒಂದಿಷ್ಟು ಪಾಲಕರು ತಮ್ಮ ಮಕ್ಕಳು ತಲೆ ಬೋಳಿಸಲು ಒಪ್ಪದಿದ್ದಾಗ, ಆ ಮಕ್ಕಳು ಕಾಡಿ-ಬೇಡಿ, ಅತ್ತು-ಕರೆದು CHILDREN DRESSED AS MAHATMA GANDHI.  ರೋಹಿತ್ ಮಡಿವಾಳ ಮಾತನಾಡಿ, “ದ್ವೇಷ ಬಿಡು-ಪ್ರೀತಿ ಮಾಡು ಎಂದು ಗಾಂಧಿ ಅಜ್ಜ ಹೇಳಿದ್ದರು.‌ ಆ ನಿಟ್ಟಿನಲ್ಲಿ ನಾವು ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುತ್ತಿದ್ದೇವೆ. ಇನ್ನು ತಲೆ ಬೋಳಿಸಿಕೊಳ್ಳುವಾಗ ನನಗೆ ಯಾವುದೇ ಹಿಂಜರಿಕೆ ಆಗಲಿಲ್ಲ. ಯಾಕೆಂದರೆ ದೇಶಕ್ಕಾಗಿ ಬಲಿದಾನ ಮಾಡಿದ ಗಾಂಧೀಜಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ” ಎಂದರು.

ಇದು ಗಾಂಧೀಜಿ ಅವರ ಬಗ್ಗೆ ಅವರಿಗೆ ಎಷ್ಟು ಅಭಿಮಾನವಿದೆ ಎಂಬುದನ್ನು ತೋರಿಸುತ್ತದೆ. 101 ಮಕ್ಕಳು ಮುಂದೆ ಸಾವಿರಾರು ಜನರಿಗೆ ಪ್ರೇರಣೆಯಾಗಲಿ. ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸು ನನಸು ಮಾಡುವುದೇ ನಮ್ಮ ಗುರಿ” ಎಂದರು.

ಇದನ್ನು ಓದಿರಿ : DEMAND FOR OLD PENSION SCHEME : ನ್ಪಿಎಸ್-ಯುಪಿಎಸ್ ಬೇಡ; OPS ಜಾರಿಗೆ ಸರ್ಕಾರಿ ನೌಕರರ ಬಿಗಿಪಟ್ಟು

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...

MATSYA 6000 : ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಯಶಸ್ವಿ

Matsya 6000: ದೇಶದ ನಾಲ್ಕನೇ ತಲೆಮಾರಿನ ಆಳ ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಪೂರ್ಣಗೊಂಡಿದ್ದು, 2025ರ ಅಂತ್ಯದ ವೇಳೆಗೆ 500 ಮೀಟರ್ ಪ್ರಯೋಗ ನಡೆಯಲಿದೆ. ಇದು...

THE BEAST CAR : ಡೇಟೋನಾ 500 ಮೋಟಾರ್ ರೇಸ್ಗೆ ಜೀವಕಳೆ ತುಂಬಿದ ಟ್ರಂಪ್ ಕಾರ್

The Beast Car : ಅಮೆರಿಕದ ಅಧ್ಯಕ್ಷರ THE BEAST CAR​ ರೇಸ್​ವೊಂದರ ಲ್ಯಾಪ್​ನಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ಹುರಿದುಂಬಿಸಿತು. ಏರ್ ಫೋರ್ಸ್ ಒನ್ ವಿಮಾನ ರೇಸಿಂಗ್...