spot_img
spot_img

COLD WEATHER – ಚಾಮುಂಡಿಬೆಟ್ಟದ ಮಂಜಿನಲೋಕದಲ್ಲಿ ಮಿಂದೇಳಲು ಇದು ಸಕಾಲ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mysore News:

ವಾಸಿಗರು ಇಲ್ಲಿಗೆ ಬರುವುದು ಸೂರ್ಯ ಉದಯಿಸಿದ ಬಳಿಕ. ಹೀಗಾಗಿ ಅವರಿಗೆ ಚಾಮುಂಡಿ ಬೆಟ್ಟದ ಈ ಸೊಬಗಿನ ಪರಿಚಯವಿಲ್ಲ. ಸ್ವತಃ ಮೈಸೂರಿನ ಅನೇಕರಿಗೇ ಇದರ ಬಗ್ಗೆ ತಿಳಿಸಿಲ್ಲ. ಚಳಿಗಾಲದಲ್ಲಿ ಮುಂಜಾನೆ ಬೆಟ್ಟಕ್ಕೆ ನಡೆದು ಹೋಗುವುದೇ ವಿಶಿಷ್ಟ ಅನುಭವ.ಮಂಜಿನಪರದೆಯಲ್ಲಿ ತಣ್ಣನೆ ಮಲಗಿರುವ ಚಾಮುಂಡಿಬೆಟ್ಟದಲ್ಲಿ ಮುಂಜಾನೆ ಅಡ್ಡಾಡಿ ಸುಂದರ ಅನುಭವಗಳನ್ನು ಪಡೆಯಲು ಇದು ಸಕಾಲ.

ಒಬ್ಬರಿಗೊಬ್ಬರು ಕಾಣದಷ್ಟು ದಟ್ಟ ಮಂಜಿನಲ್ಲಿ ತಣ್ಣಗೆ ಬೀಸುವ ತಂಗಾಳಿಯಲ್ಲಿ ಹೆಜ್ಜೆ ಹಾಕುತ್ತಿದ್ದರೆ ಕಲ್ಪನೆಯ ಸ್ವರ್ಗಲೋಕ ಇದೆನಾ? ಎಂಬ ಪ್ರಶ್ನೆಯೊಂದು ಧುತ್ತನೆ ಎದುರಾಗಿ ಬಿಡುತ್ತದೆ. ಹಸಿರ ಮೇಲೆ ಮಂಜು ಚೆಲ್ಲಿ ಇಡೀ ಬೆಟ್ಟವನ್ನೇ ಮಂಜಿನ ಸಾಗರವಾಗಿಸಿ ನಮ್ಮನ್ನೇ ತಬ್ಬಿಬ್ಬುಗೊಳಿಸುವ ಮಂಜಿನಾಟಕ್ಕೆ ಬೆರಗಾಗದೆ ಇರುವುದಿಲ್ಲ. ಬೀಸಿ ಬರುವ ತಂಗಾಳಿಗೆ ಮೈಯೊಡ್ಡಿ ನಿಂತರೆ ಅದೊಂಥರ ಸುಖ ಮೈಮನವನ್ನು ಪುಳಕಗೊಳಿಸುತ್ತದೆ. ನೆನಪಿರಲಿ ಇಂತಹದೊಂದು ಅನುಭವ ಎಲ್ಲ ಸಮಯದಲ್ಲಿ ನಿರೀಕ್ಷೆ ಮಾಡಲಾಗದು. ಆದರೆ ಈ ಸಮಯದಲ್ಲಿ ಮುಂಜಾನೆ ಬಂದವರಿಗೆ ಮಂಜಿನಲೋಕ ತೆರೆದುಕೊಳ್ಳುವುದಂತು ನಿಜ.

ಯಾವತ್ತೋ ಒಂದು ದಿನ ಹಗಲು ಹೊತ್ತಿನಲ್ಲಿ ಚಾಮುಂಡಿಬೆಟ್ಟಕ್ಕೆ ಬಂದು ಚಾಮುಂಡೇಶ್ವರಿಯ ದರ್ಶನ ಮಾಡಿಕೊಂಡು ಹೋದವರು ಮುಂಜಾನೆ ಹೊತ್ತು ಇಲ್ಲಿಗೆ ಬಂದಿದ್ದೇ ಆದರೆ ಅಚ್ಚರಿಪಡುವುದಂತು ಖಚಿತ… ಏಕೆಂದರೆ ಮುಂಜಾನೆಯಲ್ಲಿ ಮಂಜಿನ ಆಟ ಹಾಗಿರುತ್ತದೆ. ಹಗಲು ಹೊತ್ತಿನಲ್ಲಿ ಸದಾ ಭಕ್ತರು, ಪ್ರವಾಸಿಗರು, ಅಡ್ಡಾಡುವ ಜನರು, ವ್ಯಾಪಾರಸ್ಥರು, ವಾಹಗಳು ಹೀಗೆ ಸದಾ ಗಿಜಿಗಿಡುವ ಚಾಮುಂಡಿಬೆಟ್ಟ ರಾತ್ರಿಯಾಗುತ್ತಿದ್ದಂತೆಯೇ ಮೌನಕ್ಕೆ ಜಾರುತ್ತದೆ. ಬಳಿಕ ಮುಂಜಾನೆಯಾಗುತ್ತಿದ್ದಂತೆಯೇ ಮಂಜು ಇಡೀ ಬೆಟ್ಟವನ್ನು ಆವರಿಸಲು ಆರಂಭಿಸುತ್ತದೆ.

ಚುಮುಚುಮು ಬೆಳಕಿನಲ್ಲಿ ಮಂಜಿನ ರಂಗಿನಾಟ ಜೋರಾಗಿರುತ್ತದೆ. ಇಡೀ ಬೆಟ್ಟವನ್ನು ಆವರಿಸಿಕೊಂಡು ಅತ್ತಿಂದ ಇತ್ತ ಏನೋ ತುರ್ತು ಕೆಲಸವಿದ್ದವರಂತೆ ಅಡ್ಡಾಡುತ್ತದೆ. ಬೆಳಕಿನ ಕಿರಣಗಳಿಗೆ ಅಡ್ಡಲಾಗಿ ನಿಂತು ಸವಾಲ್ ಎಸೆಯುತ್ತದೆ. ಬಹಳಷ್ಟು ಜನರ ಮನದಲ್ಲಿ ನಿಜವಾಗಿಯೂ ಚಾಮುಂಡಿಬೆಟ್ಟದಲ್ಲಿ ಇಂತಹದೊಂದು ಸುಂದರ ಮಂಜಿನಲೋಕ ಸೃಷ್ಟಿಯಾಗುತ್ತಾ? ಎಂಬ ಅಚ್ಚರಿಯ ಪ್ರಶ್ನೆಗಳು ಹುಟ್ಟಿಕೊಳ್ಳದಿರದು. ಏಕೆಂದರೆ ಮುಂಜಾನೆ ಬೆಚ್ಚಗೆ ಮಲಗಿದವರಿಗೆ ಆ ಅನುಭವವೂ ಆಗಲಾರದು. ಆದರೆ ಚುಮುಚುಮು ಚಳಿಯಲ್ಲಿ ಚಾಮುಂಡಿಬೆಟ್ಟದತ್ತ ಹೆಜ್ಜೆ ಹಾಕುವವರಿಗೆ ನಿತ್ಯವೂ ಮಂಜಿನ ನೋಟ ಲಭ್ಯವಾಗುತ್ತದೆ. ಅಷ್ಟೇ ಅಲ್ಲದೆ ಆ ಸುಂದರ ಕ್ಷಣಗಳಿಗೆ ಅವರು ಸಾಕ್ಷಿಯಾಗುತ್ತಾರೆ.

Paradise for Airfarers :

ಚಾಮುಂಡಿಬೆಟ್ಟದ ಮೆಟ್ಟಿಲನ್ನೇರಿ ಹೋಗುವುದು ಒಂದು ಸುಂದರ ಅನುಭವ. ಹಸಿರು ಲೋಕದಲ್ಲಿ ಒಂದೊಂದೇ ಮೆಟ್ಟಿಲೇರುತ್ತಾ ಮುನ್ನಡೆಯುವುದು ದೇಹಕ್ಕೊಂದು ವ್ಯಾಯಾಮ. ಈ ವ್ಯಾಯಾಮ ಬೇರೆಲ್ಲೂ ಆಗಲು ಸಾಧ್ಯವಿಲ್ಲ. ಆಕ್ಸಿಜನ್ ಕಣಜದಂತಿರುವ ಚಾಮುಂಡಿಬೆಟ್ಟದಲ್ಲಿ ಅಡ್ಡಾಡುವುದು ದೈವಿಕವಾಗಿ, ವೈಜ್ಞಾನಿಕವಾಗಿ ಉತ್ತಮ. ಹೀಗಾಗಿಯೇ ಮುಂಜಾನೆ ಮೆಟ್ಟಿಲೇರಿ ದರ್ಶನ ಪಡೆಯುವವರು ಒಂದೆಡೆಯಾದರೆ, ಬೆಟ್ಟ ಹತ್ತುವ ಮೂಲಕ ವ್ಯಾಯಾಮ ಮಾಡಿ ದೇಹದ ಆರೋಗ್ಯ ಕಾಪಾಡಿಕೊಳ್ಳುವವರು ಇನ್ನೊಂದೆಡೆ ಕಾಣಲು ಸಿಗುತ್ತಾರೆ.

ನಿಜಹೇಳಬೇಕೆಂದರೆ ಇನ್ನು ಬೆಳಕೇ ಹರಿಯದ ಹೊತ್ತಿನಲ್ಲಿ ಮೈಸೂರು ನಗರದಿಂದ ಬರುವ ನೂರಾರು ವಾಯುವಿಹಾರಿಗಳು ಚಾಮುಂಡಿಬೆಟ್ಟದ ಪಾದದ ಮೂಲಕ ಸಾವಿರ ಮೆಟ್ಟಿಲನ್ನೇರಿ ಬೆಟ್ಟದ ಮೇಲ್ಭಾಗಕ್ಕೆ ಬಂದು ತಾಯಿ ಚಾಮುಂಡೇಶ್ವರಿಗೆ ನಮಸ್ಕರಿಸಿ ದೇಗುಲದ ಸುತ್ತಮುತ್ತ ವ್ಯಾಯಾಮಗಳನ್ನು ಮಾಡಿ ಹಿಂತಿರುಗುತ್ತಾರೆ. ಇಂತಹ ವಾಯುವಿಹಾರಿಗಳ ದೊಡ್ಡ ದಂಡೇ ಚಾಮುಂಡಿಬೆಟ್ಟದಲ್ಲಿ ಕಾಣಸಿಗುತ್ತದೆ. ಇವರ ಪೈಕಿ ಮಕ್ಕಳಿಂದ ವೃದ್ಧರವರೆಗೂ ಇದ್ದಾರೆ. ಚಾಮುಂಡಿಬೆಟ್ಟಕ್ಕೆ ಮೆಟ್ಟಿಲೇರಿ ಹೋಗುವುದು ತುಸು ಕಷ್ಟವಾಗುತ್ತದೆ.

ಹತ್ತುತ್ತಾ ಹೋದಂತೆ ಆಯಾಸ, ಸುಸ್ತು ಎಲ್ಲವೂ ಕಾಣಿಸಿಕೊಳ್ಳದಿರದು. ಆದರೆ ಹಸಿರ ನಡುವೆ, ಬೀಸುವ ತಂಗಾಳಿ ಮುದನೀಡಿ ಮೆಟ್ಟಿಲೇರುವಂತೆ ಉತ್ಸಾಹ ತುಂಬುತ್ತದೆ. ಸುಮಾರು 600 ಮೆಟ್ಟಿಲೇರಿದಾಗ ನಂದಿಗೆ ಹಾದು ಹೋದ ರಸ್ತೆ ಸಿಗುತ್ತದೆ. ಇಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬಹುದು ಅಥವಾ ಅಲ್ಲಿಂದ ರಸ್ತೆ ಮೂಲಕ ಅಥವಾ ನೂರು ಮೆಟ್ಟಿಲೇರಿದರೆ ನಂದಿಯನ್ನು ತಲುಪಬಹುದು.

ವಾರದ ಇತರೆ ದಿನಗಳಲ್ಲಿ ಮುಂಜಾನೆ ಚಾಮುಂಡಿಬೆಟ್ಟಕ್ಕೆ ಬರುವವರ ಸಂಖ್ಯೆ ತುಸು ಕಡಿಮೆ ಇರುತ್ತದೆಯಾದರೂ, ವಾರಾಂತ್ಯದ ದಿನಗಳಲ್ಲಿ ಪ್ರವಾಹದಂತೆ ಹರಿದು ಬರುತ್ತಾರೆ. ನಂದಿಯನ್ನು ತಲುಪುತ್ತಿದ್ದಂತೆಯೇ ಆಗುವ ಅನುಭವ ಮರೆಯಲಾರದ್ದು, ಅಲ್ಲಿ ತನಕ ಮೆಟ್ಟಿಲೇರಿ ಬಂದ ಕಾವನ್ನು ಬೀಸಿ ಬರುವ ತಂಗಾಳಿ ಹೊಡೆದೋಡಿಸಿ ಆಹ್ಲಾದಗೊಳಿಸುತ್ತದೆ. ಅಲ್ಲಿಂದ ಮುಂದಕ್ಕೆ ಸುಮಾರು ಮುನ್ನೂರಕ್ಕೂ ಹೆಚ್ಚು ಮೆಟ್ಟಿಲಿದ್ದರೂ ಆಯಾಸವಾಗಿಸದೆ ಬೆಟ್ಟದ ಮೇಲ್ಭಾಗಕ್ಕೆ ಕರೆದೊಯ್ಯುತ್ತದೆ.

ಹೀಗೆ ಹೋಗುವಾಗ ಅಲ್ಲಿಂದ ಕಂಡು ಬರುವ ನಿಸರ್ಗ ಸುಂದರ ನೋಟ ಅದ್ಭುತವಾಗಿರುತ್ತದೆ. ಅದರಲ್ಲೂ ಬೆಟ್ಟದ ಮೇಲ್ಭಾಗ ತಲುಪಿ ಚಾಮುಂಡೇಶ್ವರಿ ದೇಗುಲ ಬಳಿ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಕಾಣುವ ನೋಟ ಮತ್ತು ಆಗುವ ಅನುಭವ ಸಂದರ ಮಾತ್ರವಲ್ಲ ಸುರಸುಂದರವಾಗಿರುತ್ತದೆ.

ವಾರಪೂರ್ತಿ ಕೆಲಸದ ಒತ್ತಡದಲ್ಲಿದ್ದವರು ಬೆಳಕು ಹರಿಯುವ ಮುನ್ನವೇ ಬೆಟ್ಟದ ಪಾದದ ಬಳಿಗೆ ಆಗಮಿಸಿ ತಂಡೋಪತಂಡವಾಗಿ ಮೆಟ್ಟಿಲು ಹತ್ತಲು ಆರಂಭಿಸುತ್ತಾರೆ. ಆ ಮೂಲಕ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಮೆಟ್ಟಿಲು ಹತ್ತುವುದು ಸುಂದರ ಅನುಭವ ಎಂದರೂ ತಪ್ಪಾಗಲಾರದು.

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

IPL 2025 RCB CAPTAIN:RCB ಮುಂದಿನ ನಾಯಕ ಯಾರು ಗೊತ್ತಾ?

IPL 2025 RQB Captain News: ಮಾರ್ಚ್​,21 ರಿಂದ ಚುಟುಕು ಕ್ರಿಕೆಟ್​ ಹಬ್ಬ ಪ್ರಾರಂಭವಾಗಲಿದ್ದು ಎರಡು ತಿಂಗಳು ಕಾಲ ನಡೆಯಲಿದೆ.ಐಸಿಸಿ ಚಾಂಪಿಯನ್ಸ್​ ಟ್ರೋಫಿ ಮುಗಿದ ಬೆನ್ನಲ್ಲೆ...

MAHA KUMBH MELA TOUR PACKAGE : ಎಚ್ಚರ.. ಎಚ್ಚರ… ಮಹಾ ಕುಂಭಮೇಳದ ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ವಂಚನೆ

Bangalore News: MAHA KUMBH MELA TOUR PACKAGE ಯಾತ್ರಿಗಳ ಈ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವವರು ಇದೀಗ ವಂಚನೆಗೆ ಇಳಿದಿದ್ದಾರೆ. ಈ ಹಿನ್ನೆಲೆ ಪ್ರಯಾಗ್​ರಾಜ್​ ಪ್ರವಾಸಕ್ಕೆ...

BSNL RS 99 PLAN : ಕೇವಲ 99 ರೂ.ಗೆ ಅನ್ಲಿಮಿಟೆಡ್ ಕಾಲಿಂಗ್ ಪ್ಲಾನ್ ತಂದ ಬಿಎಸ್ಎನ್ಎಲ್!

BSNL 99 Plan: ಬಿಎಸ್​ಎನ್​ಎಲ್​ ತಮ್ಮ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಈ ಆಫರ್​ ಎರಡು ಸಿಮ್‌ಗಳನ್ನು ಬಳಸುವ ಗ್ರಾಹಕರಿಗೆ ಉಪಯುಕ್ತ. ಭಾರತ್ ಸಂಚಾರ್ ನಿಗಮ್...

WORLD CANCER DAY : ಶಿವಣ್ಣ To ಸಂಜಯ್ ದತ್ – ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು

Shivanna News: ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ ಕ್ಯಾನ್ಸರ್​​ ಗೆದ್ದು ಬಂದಿದ್ದಾರೆ. 2024ರ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಸ್ಯಾಂಡಲ್​ವುಡ್​ನ ಖ್ಯಾತ ನಟ, ಅಲ್ಲೇ ಕೆಲ...