spot_img
spot_img

ಕೋಸ್ಟಲ್ ಫ್ರೆಂಡ್ಸ್ ​ವತಿಯಿಂದ ಅನಾಥ ಮಕ್ಕಳಿಗೆ ‘ಸಾಂತ್ವನ ಸಂಚಾರ’

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮಂಗಳೂರು(ದಕ್ಷಿಣ ಕನ್ನಡ): ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ವತಿಯಿಂದ ಅನಾಥ ಮಕ್ಕಳಿಗಾಗಿ ಸಾಂತ್ವನ ಸಂಚಾರ ಎಂಬ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋಸ್ಟಲ್ ಫ್ರೆಂಡ್ಸ್ ಸಂಘಟನೆ ಅನಾಥ ಮಕ್ಕಳಿಗೆ ಸಾಂತ್ವನ ಸಂಚಾರ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಬಗ್ಗೆ ಕಾರ್ಯಕ್ರಮದ ಸಂಯೋಜಕ ನಝೀರ್‌ ಬೆದ್ರೋಡಿ ಮಾತನಾಡಿ, “ನಾವು ಮಕ್ಕಳನ್ನು ‘ಅನಾಥರು’ ಎಂದು ಕರೆಯುವುದಿಲ್ಲ. ಅವರು ನಮ್ಮ ಕುಟುಂಬದ ಸದಸ್ಯರೆಂದು ನೋಡಿದ್ದೇವೆ. ಬೇರೆ ಮಕ್ಕಳಂತೆ ಈ ಮಕ್ಕಳು ಖುಷಿ ಅನುಭವಿಸಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಸುಮಾರು 87 ಅನಾಥ ಮಕ್ಕಳನ್ನು ಆಯ್ದುಕೊಂಡಿದ್ದೇವೆ” ಎಂದರು.

ಪಾಲಕರ ಅನುಮತಿ ಪಡೆದು ಮಕ್ಕಳನ್ನು ಅವರಿದ್ದ ಸ್ಥಳದಿಂದಲೇ ಕರೆದುಕೊಂಡು ಬಂದು ಮಂಗಳೂರಿನ ಖ್ಯಾತ ಹೋಟೆಲ್​ನಲ್ಲಿ ಉಪಹಾರ, ಪಿಲಿಕುಳ ಮೃಗಾಲಯ, 3ಡಿ ಪ್ಲಾನಿಟೋರಿಯಂ, ಮಧ್ಯಾಹ್ನ ನಂತರ ರೆಸಾರ್ಟ್​ನಲ್ಲಿ ಆಟೋಟ, ಮನೋರಂಜನೆ ಕಾರ್ಯಕ್ರಮ ನಡೆಸಿ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ಬಿಟ್ಟು ಬರಲಾಗುತ್ತದೆ.

ಬಾಲಕಿಯರ ನಿಗಾಕ್ಕೆ ಮಹಿಳಾ ಸದಸ್ಯರು, ಬಾಲಕರ ನಿಗಾಕ್ಕೆ ಪುರುಷ ಸದಸ್ಯರನ್ನು ನಿಯೋಜಿಸಲಾಗಿದೆ. ಇಷ್ಟೇ ಅಲ್ಲದೇ ಪ್ರತಿ ಮಕ್ಕಳಿಗೂ ಸುಮಾರು 10 ಸಾವಿರ ಮೌಲ್ಯದ ಗಿಫ್ಟ್​ ಅನ್ನು ಸಹ ನೀಡಲಾಗುತ್ತಿದೆ.

“ಅನೇಕರು ಈ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ನೀಡಿ ಆರ್ಥಿಕ ಸಹಾಯ ಮಾಡಿದ್ದಾರೆ. ಈ ವಿಶೇಷ ಪ್ರಯತ್ನವು ಸಮಾಜದಲ್ಲಿ ಪ್ರೀತಿ ಮತ್ತು ಸಮಾನತೆಯ ಸಂದೇಶವನ್ನು ಹಂಚಲಿದೆ.

ಕಲಾ ಕಾರ್ಯಕ್ರಮಗಳು, ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಮಕ್ಕಳನ್ನು ಮನರಂಜಿಸಲು ವ್ಯವಸ್ಥೆ ಮಾಡಲಾಗಿದೆ. ಈ ಪ್ರಯತ್ನವು ಮಕ್ಕಳ ಮನಸ್ಸಿನಲ್ಲಿ ಸಂತೋಷ ಮೂಡಿಸಲಿದೆ” ಎಂದು ಹೇಳಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...