spot_img
spot_img

CONTENT CREATORS KUMBH JOURNEY:1500 ಕಿ.ಮೀ ದೂರದ ಪ್ರಯಾಗ್ರಾಜ್ಗೆ ನಯಾಪೈಸೆ ಖರ್ಚಿಲ್ಲದೆ ತಲುಪಿದ ಕಂಟೆಂಟ್ ಕ್ರಿಯೇಟರ್!

spot_img
spot_img

Share post:

New Delhi News:

ಮಹಾರಾಷ್ಟ್ರದ ಕಂಟೆಂಟ್​ ಕ್ರಿಯೇಟರ್​ ದಿವ್ಯಾ ಫೋಫಾನಿ ಕುಂಭಮೇಳಕ್ಕೆ ತಾವು ಮುಂಬೈನಿಂದ ಬಂದ ರೀತಿ ಮತ್ತು ಹಾದಿಯ ನಡುವೆ ಜನರು ನೀಡಿದ ನೆರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜನರಲ್ಲಿನ ಭಕ್ತಿ ಪರಾಕಾಷ್ಠೆಯನ್ನೂ ಅವರು ಹಾಡಿ ಹೊಗಳಿದ್ದಾರೆ.ಉತ್ತರಪ್ರದೇಶದ ಪ್ರಯಾಗ್​​ರಾಜ್​​ನಲ್ಲಿ ನಡೆಯುತ್ತಿರುವ ಸನಾತನ ಧರ್ಮದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳಕ್ಕೆ ವಿಶ್ವದ ಮೂಲೆಮೂಲೆಗಳಿಂದ ಭಕ್ತರು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಆಗಮಿಸುತ್ತಿದ್ದಾರೆ.

ಈವರೆಗೂ 59 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.ಮುಂಬೈನ ಸಾಮಾಜಿಕ ಮಾಧ್ಯಮ ಪ್ರಭಾವಿ ದಿವ್ಯಾ ಫೋಫಾನಿ ಅವರು ನಯಾಪೈಸೆ ಖರ್ಚಿಲ್ಲದೆ, ಪ್ರಯಾಗ್​ರಾಜ್​​ಗೆ ಹೇಗೆ ತಲುಪಿದೆ ಎಂಬುದನ್ನು ಇನ್​ಸ್ಟಾಗ್ರಾಮ್​​ನಲ್ಲಿ ತಿಳಿಸಿದ್ದಾರೆ.

Mumbai to Prayagraj Journey:1500 ಕಿ.ಮೀ ದೂರವನ್ನು ಒಂದೇ ಒಂದು ರೂಪಾಯಿ ಖರ್ಚು ಮಾಡದೆ ತಲುಪಿದ್ದಾರೆ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ. ಫೆಬ್ರವರಿ 12 ರಂದು ಮುಂಬೈನಿಂದ ಪ್ರಯಾಣ ಆರಂಭಿಸಿ, ಎರಡು ದಿನಗಳ ನಂತರ ಪ್ರಯಾಗ್‌ರಾಜ್‌ ತಲುಪಿದೆ.

ತಮ್ಮ ಈ ಪ್ರಯಾಣ ರೋಮಾಂಚಕ ಮತ್ತು ನಂಬಿಕೆ, ಸಾಹಸ ಮತ್ತು ಮಾನವ ದಯೆಯಿಂದ ಕೂಡಿತ್ತು ಎಂದು ಬಣ್ಣಿಸಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿ ಕಂಟೆಂಟ್​​ ಕ್ರಿಯೇಟರ್​ ಆಗಿರುವ ದಿವ್ಯಾ ಫೋಫಾನಿ ಅವರು ಮುಂಬೈನಿಂದ ಪ್ರಯಾಗ್​ರಾಜ್​​ ತಲುಪಲು ತಾನು ಏನೆಲ್ಲಾ ಮಾಡಿದೆ ಎಂಬ ಬಗ್ಗೆ ತಮ್ಮ ಇನ್​​ಸ್ಟಾಗ್ರಾಮ್​​ನಲ್ಲಿ ವಿಸ್ತಾರವಾದ ಪೋಸ್ಟ್​ ಹಂಚಿಕೊಂಡಿದ್ದಾರೆ.

Bhakti culmination of Sanatani:‘ಲಿಫ್ಟ್’ ಎಂದು ಬರೆದ ಫಲಕವನ್ನು ಹಿಡಿದುಕೊಂಡು, ಫೋಫಾನಿ ಮುಂಬೈನ ಉಪನಗರ ಥಾಣೆಯಿಂದ ನಾಗ್ಪುರಕ್ಕೆ ಬೈಕ್‌ಗಳು, ಸ್ಕೂಟರ್‌ಗಳು, ಕಾರುಗಳು ಮತ್ತು ಟ್ರಕ್‌ಗಳಲ್ಲಿ ಪ್ರಯಾಣಿಸಿದೆ. ಹೀಗೆಯೇ ಸುಮಾರು 1,500 ಕಿ.ಮೀ. ದೀರ್ಘ ಪ್ರಯಾಣವನ್ನು ಕ್ರಮಿಸಿದೆ.

ಮಧ್ಯಪ್ರದೇಶಕ್ಕೆ ತಲುಪಿದ ಬಳಿಕ, ಜಬಲ್‌ಪುರದಿಂದ ಪ್ರಯಾಗ್​ರಾಜ್​ ಬರಲು ತುಸು ಕಷ್ಟಪಡಬೇಕಾಯಿತು. ಪ್ರಯಾಗ್‌ರಾಜ್‌ವರೆಗಿನ ಅಂತಿಮ ಪ್ರಯಾಣ ಅತ್ಯಂತ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.ಮುಂಬೈನಿಂದ ಪ್ರಯಾಗ್​ರಾಜ್​​ಗೆ ಪ್ರಯಾಣಿಸುವಾಗ, ಭಾರತೀಯರು ಪವಿತ್ರ ಸ್ಥಳವನ್ನು ತಲುಪಲು ಯಾವುದೇ ಹಿಂಜರಿಕೆಯಿಲ್ಲದೆ ಪರಸ್ಪರ ಸಹಾಯ ಮಾಡುತ್ತಾರೆ ಎಂಬುದನ್ನು ನಾನು ನೇರವಾಗಿ ಕಂಡೆ. ಈ ಪ್ರಯಾಣವು ಅಪರಿಚಿತರಲ್ಲಿನ ದಯೆ, ಕರುಣೆ, ಸಹಾಯಹಸ್ತ ಮತ್ತು ಏಕತೆಯ ಪ್ರತೀಕವಾಗಿತ್ತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಜಬಲ್‌ಪುರದಿಂದ ಪ್ರಯಾಗ್‌ರಾಜ್‌ವರೆಗಿನ ಮಾರ್ಗದಲ್ಲಿ ಟ್ರಕ್‌ಗಳಿಗೆ ಅವಕಾಶವಿರಲಿಲ್ಲ. ಇದು ಪ್ರಯಾಣವನ್ನು ಕಷ್ಟಕರವಾಗಿಸಿತು.

ಆದಾಗ್ಯೂ, ಸ್ಥಳೀಯರ ನೆರವಿನಿಂದ ಫೆಬ್ರವರಿ 15 ಕ್ಕೆ ಕುಂಭಮೇಳ ಸ್ಥಳವನ್ನು ನಯಾಪೈಸೆ ಖರ್ಚು ಮಾಡದೆ ತಲುಪಿದೆ ಎಂದು ಬರೆದುಕೊಂಡಿದ್ದಾರೆ. ಈ ಅದ್ಭುತ ಯಾತ್ರೆಯ ಕುರಿತು ಪೋಸ್ಟ್ 36 ಸಾವಿರಕ್ಕೂ ಹೆಚ್ಚು ಲೈಕ್ಸ್​​ಗಳನ್ನು ಕಂಡಿದೆ.ಉತ್ತರಪ್ರದೇಶ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ 59 ಕೋಟಿ ಜನರು ಗಂಗಾ, ಯಮುನಾ ಮತ್ತು ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದಿದೆ.45 ದಿನಗಳ ಈ ಮಹಾ ಕುಂಭವು ಜನವರಿ 13 ರಂದು ಪ್ರಾರಂಭವಾಗಿದ್ದು, ಫೆಬ್ರವರಿ 26 ರಂದು ಮಹಾಶಿವರಾತ್ರಿಯ ದಿನದಂದು ಕೊನೆಗೊಳ್ಳುತ್ತದೆ.

 

ಇದನ್ನು ಓದಿರಿ :Pakistan To Repatriate 22 Indian Fishermen As They Complete Their Sentences

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...