spot_img
spot_img

DELHI ELECTION 2025:ಕೇಜ್ರಿವಾಲ್ಗಿದ್ದ ಹಣದ ದುರಾಸೆಯೇ ಎಎಪಿ ಹಿನ್ನಡೆಗೆ ಕಾರಣ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mumbai, Maharashtra News:

ಮುಂದುವರೆದು ಮಾತನಾಡಿದ ಅಣ್ಣಾ ಹಜಾರೆ, ಅಭ್ಯರ್ಥಿಗಳ ವ್ಯಕ್ತಿತ್ವವೂ ಶುದ್ದವಾಗಿರಬೇಕು. ಅವರು ತ್ಯಾಗದ ಬಗ್ಗೆ ತಿಳಿದಿರಬೇಕು. ಮದ್ಯ ನೀತಿ ಮತ್ತು ಹಣ ಹಾಗೂ ಸಂಪತ್ತಿನ ಬಗ್ಗೆ ಇದ್ದ ದುರಾಸೆ ಕೇಜ್ರಿವಾಲ್​ ಅಪಖ್ಯಾತಿಗೆ ಒಳಗಾಗಲು ಕಾರಣವಾಯಿತು. ಕೇಜ್ರಿವಾಲ್​ ಒಂದು ಕೈಯಲ್ಲಿ ಒಳ್ಳೆ ಗುಣದ ಬಗ್ಗೆ ಮಾತನಾಡುತ್ತಾ, ಮತ್ತೊಂದು ಕಡೆ ಮದ್ಯವನ್ನು ಉತ್ತೇಜಿಸಿದರು. ಇದೇ ಕಾರಣ ಅವರಿಗೆ ಕೆಲವೇ ಮತಗಳು ಲಭ್ಯವಾಯಿತು ಎಂದರು. ದೆಹಲಿ ವಿಧಾನಸಭಾ ELECTIONಯಲ್ಲಿ ಆಮ್​ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದ್ದು, 26 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

ಎಎಪಿಯ ಹಿನ್ನಡೆ ಕುರಿತು ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮದ್ಯ ನೀತಿ ಮತ್ತು ಹಣದ ಬಗ್ಗೆ ಎಎಪಿಗಿದ್ದ ಗಮನವೇ ಪಕ್ಷದ ಹಿನ್ನಡೆಗೆ ಕಾರಣ ಎಂದಿದ್ದಾರೆ.ಜನರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಎಪಿ ಸೋಲು ಕಂಡಿದ್ದು, ಅದು ತಪ್ಪು ಮಾರ್ಗದಲ್ಲಿ ಸಾಗಿತ್ತು. ಹಣವನ್ನು ಅವರು ಪ್ರಮುಖವಾಗಿ ಪರಿಗಣಿಸಿದ ಹಿನ್ನಲೆ ಅವರಿಗೆ ಈ ನಿರಾಸೆ ಆಯಿದೆ ಎಂದು ಅವರು ಹೇಳಿದ್ದಾರೆ.

Kejriwal with Anna:ಎಎಪಿ ಸಂಸ್ಥಾಪನೆಯಾದ ಬಳಿಕ ಹಜಾರೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದರು. ELECTIONಗೆ ಅಭ್ಯರ್ಥಿಗಳು ಸ್ಪರ್ಧಿಸುವಾಗ ಅವರ ಚಾರಿತ್ರ್ಯ ಶುದ್ಧವಾಗಿ, ಕಪ್ಪು ಚುಕ್ಕೆ ಇಲ್ಲದಂತಿರಬೇಕು ಎಂದು ನಾನು ಆರಂಭದಿಂದಲೂ ಹೇಳುತ್ತಿದ್ದೇನೆ.

ಅಭ್ಯರ್ಥಿಗಳು ತ್ಯಾಗದ ಮಹತ್ವವನ್ನು ತಿಳಿದಿರಬೇಕು. ಹಾಗೇ ಅವಮಾನವನ್ನು ಸಹಿಸುವ ಸಾಮರ್ಥ್ಯವನ್ನೂ ಹೊಂದಿರಬೇಕು.ದಶಕಗಳ ಹಿಂದೆ ನಡೆಸಿದ ಅಣ್ಣಾ ಹಜಾರೆ ಭ್ರಷ್ಟಾಚಾರ ಹೋರಾಟದಲ್ಲಿ ಅರವಿಂದ್​ ಕೇಜ್ರಿವಾಲ್​ ಜೊತೆಯಾಗಿದ್ದರು.

ಇದಾದ ಬಳಿಕ ಹಜಾರೆ ಮತ್ತು ಕೇಜ್ರಿವಾಲ್​ ಅವರು ಪ್ರತ್ಯೇಕ ದಾರಿ ಆಯ್ಕೆ ಮಾಡಿಕೊಂಡರು. 2012ರಲ್ಲಿ ಎಎಪಿ ಹುಟ್ಟುಹಾಕಲು ಕೇಜ್ರಿವಾಲ್​ ನಿರ್ಧರಿಸಿದ್ದರು.ಇನ್ನು ದೆಹಲಿಯ ಜಂಗಪುರ್​ ಕ್ಷೇತ್ರದಲ್ಲಿ ಮಾಜಿ ಸಿಎಂ ಮನೀಶ್​ ಸಿಸೋಡಿಯಾ ಮತ್ತು ನವದೆಹಲಿಯ ಕ್ಷೇತ್ರದಲ್ಲಿ ಅರವಿಂದ್​ ಕೇಜ್ರಿವಾಲ್​ ಅವರು ಸೋಲಿನ ಅಘಾತವನ್ನು ಅನುಭವಿಸಿದ್ದಾರೆ.

ಇಂತಹ ಗುಣಗಳು ಹೊಂದಿರುವ ಅಭ್ಯರ್ಥಿಗಳು ಮಾತ್ರ ಗೆಲುವು ಕಂಡು ಏನಾದರೂ ಮಾಡಲು ಸಾಧ್ಯ. ನಾನು ಎಎಪಿಗೆ ಇದನ್ನು ಮುಂಚಿನಿಂದ ಹೇಳಿದೆ. ಆದರೆ, ಅವರಿಗೆ ಅದು ಅರ್ಥವಾಗಲಿಲ್ಲ. ಯಾವಾಗ ಈ ರೀತಿಯ ಆರೋಪಗಳು ಕೇಳಿ ಬರುತ್ತದೆಯೋ ಆಗ, ಜನರಿಗೆ ಇದು ತಪ್ಪು ಎಂದು ತಿಳಿಸುವುದು ಅವಶ್ಯ ಎಂದರು.

 

ಇದನ್ನು ಓದಿರಿ :Arvind Kejriwal will be chief minister ?

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...