spot_img
spot_img

DELHI ELECTIONS : ಭರಪೂರ ಉಚಿತ ಕೊಡುಗೆ, ಅಭಿವೃದ್ಧಿ ಮಂತ್ರ – ಮತದಾರರ ಓಲೈಕೆಗೆ ಪಕ್ಷಗಳ ಕಸರತ್ತು

spot_img
spot_img

Share post:

Delhi News

ಬಿಜೆಪಿ 27 ವರ್ಷಗಳ ನಂತರ ಮತ್ತೊಮ್ಮೆ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದ್ದರೆ (ದೆಹಲಿಯಲ್ಲಿ ಬಿಜೆಪಿ 1998 ರಲ್ಲಿ ಕೊನೆಯ ಬಾರಿಗೆ ಆಡಳಿತ ನಡೆಸಿತ್ತು), ಕಾಂಗ್ರೆಸ್ 1998 ರಿಂದ 2013 ರವರೆಗೆ ಶೀಲಾ ದೀಕ್ಷಿತ್ ಅವರ ಆಡಳಿತದ ಆಧಾರದಲ್ಲಿ ಮತ ಯಾಚನೆ ಮಾಡುತ್ತಿದೆ.

ಆಡಳಿತಾರೂಢ ಆಮ್ ಆದ್ಮಿ ಪಕ್ಷವು ತನಗೆ ಸುತ್ತಿಕೊಂಡಿರುವ ಹಲವಾರು ವಿವಾದಗಳು ಮತ್ತು ಸವಾಲುಗಳ ನಡುವೆ, 2014 ರಲ್ಲಿ 48 ದಿನಗಳ ಸಂಕ್ಷಿಪ್ತವಾಗಿ ಆಡಳಿತದ ಚುಕ್ಕಾಣಿ ಹಿಡಿದ ನಂತರ ಈವರೆಗೆ ತನ್ನ ರಾಜಕೀಯ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ವಿಧಾನಸಭಾ ಚುನಾವಣೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

DELHI ELECTIONS 70 ಸ್ಥಾನಗಳ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ತೀವ್ರ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ದೆಹಲಿ ಕಾ ದಿಲ್ ಅನ್ನು ಗೆಲ್ಲುವ ಈ ತುರುಸಿನ ಸ್ಪರ್ಧೆಯಲ್ಲಿ, ರಾಜಕೀಯ ಪಕ್ಷಗಳು ವಿವಿಧ ನಾಗರಿಕ ಮತ್ತು ಅನಾಗರಿಕ ತಂತ್ರಗಳನ್ನು ಬಳಸುತ್ತಿವೆ.

Congress shouts silently:

ದೆಹಲಿಯಲ್ಲಿ ಫೆಬ್ರವರಿ 5 ರಂದು DELHI ELECTIONS ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿವೆ. ಮೇಲ್ನೋಟಕ್ಕೆ ಕಾಂಗ್ರೆಸ್​​​ಗೆ ಹೋಲಿಸಿದರೆ ಬಿಜೆಪಿ ಮತ್ತು ಎಎಪಿಯ ಪ್ರಚಾರ ಹೆಚ್ಚು ತೀವ್ರವಾಗಿದೆ. ಆದಾಗ್ಯೂ, ಈ ಕಡಿಮೆ ಮಟ್ಟದ ಪ್ರಚಾರದ ಹೊರತಾಗಿಯೂ, ಕಾಂಗ್ರೆಸ್ ಆಪ್​​ನ ಮತಗಳನ್ನು ತನ್ನತ್ತ ವಾಲಿಸಿಕೊಳ್ಳುವ ಮೂಲಕ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಬಹುದು.

ಇತ್ತೀಚಿನ ದಿನಗಳಲ್ಲಿ ಚುನಾವಣಾ ರ‍್ಯಾಲಿಗಳ ಮೂಲಕ ಮತದಾರರನ್ನು ಓಲೈಸುವ ತಂತ್ರವು ವ್ಯಾಪಕವಾಗಿದೆ. DELHI ELECTIONS ಎದುರಾಳಿಯನ್ನು ಟೀಕಿಸಲು ಮತ್ತು ಮತದಾರರನ್ನು ತಮ್ಮ ಪರವಾಗಿ ಸೆಳೆಯಲು ಪಕ್ಷಗಳು ಪರಸ್ಪರರ ಮೇಲೆ ಕೆಸರೆರಚಾಟ ನಡೆಸುತ್ತಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿಯ ಸ್ಟಾರ್ ಪ್ರಚಾರಕರು ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಇನ್ನು ಪಕ್ಷಗಳ ದೊಡ್ಡ ನಾಯಕರು ತಮ್ಮ ಪ್ರತಿಸ್ಪರ್ಧಿಗಳನ್ನು ಮಾತಿನ ಜಾಣ್ಮೆ ಮತ್ತು ನಿರೂಪಣೆಗಳ ಮೂಲಕ ಅವರಿಗೆ ಅಪಖ್ಯಾತಿ ತರುವಲ್ಲಿ ನಿರತರಾಗಿದ್ದಾರೆ. ಆರೋಪ ಪ್ರತ್ಯಾರೋಪಗಳು ಕೆಲ ಬಾರಿ ಸತ್ಯವಾಗಿದ್ದರೆ, ಇನ್ನು ಕೆಲ ಬಾರಿ ಸುಳ್ಳಾಗಿಯೂ ಇರುತ್ತವೆ.

BJP accuses AAP with documents:

ತನಗೆ ಮತ ಹಾಕಿ ಅಧಿಕಾರಕ್ಕೆ ತಂದಲ್ಲಿ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಬಿಜೆಪಿ ಮತದಾರರಿಗೆ ಮನವರಿಕೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. DELHI ELECTIONS ಬಿಜೆಪಿ ರಾಜ್ಯ ಮುಖ್ಯಸ್ಥ ವೀರೇಂದ್ರ ಸಚ್ದೇವ್ ಅವರು ಮಾಧ್ಯಮಗಳ ಮುಂದೆ ದಾಖಲೆಗಳನ್ನು ತೋರಿಸಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಎಎಪಿ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಹೆಲ್ತ್ ಕ್ಲಿನಿಕ್​ಗಳಲ್ಲಿ ಬಹುಕೋಟಿ ಮೊತ್ತದ ಹಗರಣಗಳು ನಡೆದಿರುವುದು ಆರೋಗ್ಯ ಸಚಿವರಾಗಿರುವುದರಿಂದ ತಮಗೆ ತಿಳಿದಿದೆ ಎಂದು ಜೆಪಿ ನಡ್ಡಾ ತಮ್ಮ ಅಧಿಕೃತ ಸ್ಥಾನವನ್ನು ಉಲ್ಲೇಖಿಸಿದ್ದಾರೆ. DELHI ELECTIONS ಎಎಪಿಗಿಂತಲೂ ಹೆಚ್ಚಿನ ಪ್ರಮಾಣದ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವುದಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಮಯದಲ್ಲಿ ಸಂಸದ ಅನುರಾಗ್ ಠಾಕೂರ್ ಭರವಸೆ ನೀಡಿದ್ದಾರೆ.

ಇನ್ನು ಬಿಜೆಪಿಯ ಚುನಾವಣಾ ಭರವಸೆಗಳ ವಿರುದ್ಧ ರ‍್ಯಾಲಿಗಳಲ್ಲಿ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಎಎಪಿ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳನ್ನು ರದ್ದು ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

BJP talks on education, health and women’s rights:

ಈ ಮಧ್ಯೆ, ಹಿಂದುತ್ವವನ್ನು ಸಾಮಾನ್ಯವಾಗಿ ತನ್ನ ಚುನಾವಣಾ ಪ್ರಚಾರದ ಕೇಂದ್ರ ಬಿಂದುವಾಗಿ ಬಳಸುವ ಬಿಜೆಪಿ ಹಿಂದುತ್ವ ಅಜೆಂಡಾವನ್ನು ಅಷ್ಟೊಂದು ತೀವ್ರವಾಗಿ ಬಳಸುತ್ತಿಲ್ಲ. DELHI ELECTIONS ಕೇಜ್ರಿವಾಲ್ ಮತ್ತು ಅವರ ತಂಡವನ್ನು ‘ಚುನಾವಿ ಹಿಂದೂ’ (ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂ) ಎಂದು ಗೇಲಿ ಮಾಡುತ್ತಿದ್ದ ಬಿಜೆಪಿ ಈಗ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಹಕ್ಕುಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದೆ.

ಆಮ್ ಆದ್ಮಿ ಪಕ್ಷದ ಬಗ್ಗೆ ನೋಡುವುದಾದರೆ, ಅದರ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಮ್ಮ ಸಾಧನೆಗಳನ್ನು ಜನರ ಮುಂದೆ ಇಟ್ಟು ಅವರಿಂದ ಮೆಚ್ಚುಗೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. 2020 ರ ವಿಧಾನಸಭಾ ಚುನಾವಣೆಯಲ್ಲಿ ಮನೀಶ್ ಸಿಸೋಡಿಯಾ 3,000 ಮತಗಳ ಅಂತರದಿಂದ ಗೆದ್ದ ಪಟಪರ್​ಗಂಜ್​​ನಲ್ಲಿ ನಡೆದ ರ‍್ಯಾಲಿಯಲ್ಲಿ ನೆರೆದಿದ್ದ ಅಗಾಧ ಸಂಖ್ಯೆಯ ಜನ ಸೇರಿದ್ದು ಗಮನಾರ್ಹ.

ಸಿಸೋಡಿಯಾ ಈ ಬಾರಿ ಕ್ಷೇತ್ರದಿಂದ ಸ್ಪರ್ಧಿಸದಿದ್ದರೂ, ಈ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಕೇಜ್ರಿವಾಲ್ ಹಟ ತೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಯುಪಿಎಸ್​ಸಿ ಪರೀಕ್ಷೆಗಳ ತರಬೇತುದಾರ ಮತ್ತು ರಾಜಕಾರಣಿ ಅವಧ್ ಓಜಾ ಅವರಿಗೆ ಕೇಜ್ರಿವಾಲ್ ಟಿಕೆಟ್ ನೀಡಿದ್ದಾರೆ ಮನೀಷ್ ಸಿಸೋಡಿಯಾ ಈ ಬಾರಿ ಜಂಗ್​ಪುರದಿಂದ ಸ್ಪರ್ಧಿಸುತ್ತಿದ್ದಾರೆ.

2020 ರಲ್ಲಿ ಈ ಕ್ಷೇತ್ರದಲ್ಲಿ ಆಪ್​ನ ಪ್ರವೀಣ ಕುಮಾರ್ ಶೇ 50ಕ್ಕೂ ಹೆಚ್ಚು ಮತಗಳನ್ನು ಪಡೆದು ಗೆದ್ದಿದ್ದರು. ಸಿಸೋಡಿಯಾ ಈ ಬಾರಿ ಇಲ್ಲಿ ಬಿಜೆಪಿಯ ತರ್ವಿಂದರ್ ಮಾರ್ವಾ ಮತ್ತು ಕಾಂಗ್ರೆಸ್​ನ ಮಾಜಿ ಮೇಯರ್ ಫರ್ಹಾದ್ ಸೂರಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕಳೆದ ಮೂರು ಅವಧಿಗಳಿಂದ ಈ ಸ್ಥಾನವು ಎಎಪಿ ಬಳಿಯೇ ಇದೆ.

Kejri’s army exercises to get people’s blessings again:

ದೊಡ್ಡ ಪ್ರಹಸನದ ನಂತರ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿರುವ ಅತಿಶಿ, ಆಗ್ನೇಯ ದೆಹಲಿಯ ಕಾಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ದಕ್ಷಿಣ ದೆಹಲಿಯಿಂದ ಎರಡು ಬಾರಿ ಸಂಸದ ಮತ್ತು ಮೂರು ಬಾರಿ ಶಾಸಕರಾಗಿರುವ ಬಿಜೆಪಿಯ ರಮೇಶ್ ಬಿಧುರಿ ಮತ್ತು 2019 ರಲ್ಲಿ ಕಾಂಗ್ರೆಸ್ ಸೇರುವ ಮೊದಲು 2015 ರಲ್ಲಿ ಚಾಂದನಿ ಚೌಕ್ ಕ್ಷೇತ್ರದಿಂದ ಎಎಪಿ ಟಿಕೆಟ್​ನಲ್ಲಿ ಗೆದ್ದ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಅಲ್ಕಾ ಲಂಬಾ ಅವರಂತಹ ಪ್ರಮುಖ ನಾಯಕರು ಅತಿಶಿ ವಿರುದ್ಧ ಕಣದಲ್ಲಿದ್ದಾರೆ.

ರ‍್ಯಾಲಿಗಳಲ್ಲಿ ಕೇಜ್ರಿವಾಲ್ ಅವರ ಭಾಷಣಗಳನ್ನೇ ದೆಹಲಿ ಮುಖ್ಯಮಂತ್ರಿ ಅತಿಶಿ ಪುನರಾವರ್ತಿಸುತ್ತಿದ್ದಾರೆ. ದೆಹಲಿ ಜನತೆಗೆ ಉಚಿತ ವಿದ್ಯುತ್ ನೀಡುತ್ತಿರುವುದಾಗಿ ಹೇಳುವ ಕೇಜ್ರಿವಾಲ್ ಅವರ ಮಾತುಗಳನ್ನು ಅತಿಶಿ ಜನರ ಮುಂದಿಡುತ್ತಿದ್ದಾರೆ. “ಕ್ಯಾ ಆಪ್ ಕೋ ಮುಫ್ತ್ ಬಿಜ್ಲಿ ಮಿಲ್ತಿ ಹೈ (ನಿಮಗೆ ಉಚಿತ ವಿದ್ಯುತ್ ಸಿಗುತ್ತಿದೆಯೇ?) ಎಂದು ಕೇಳಿ ಅವರಿಂದ ಹೌದು ಎಂದು ಹೇಳಿಸಿ ಅತಿಶಿ ಜನರನ್ನು ತಮ್ಮತ್ತ ಓಲೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.ರ‍್ಯಾಲಿಗಳಲ್ಲಿ ರಾಜಕಾರಣಿಗಳ ಭಾಷಣಗಳನ್ನು ನೋಡಿದರೆ ಚುನಾವಣಾ ಫಲಿತಾಂಶಗಳು ತೀರಾ ಅನಿರೀಕ್ಷಿತ ಮತ್ತು ರೋಚಕವಾಗಿರಲಿವೆ ಎಂಬುದು ಕಂಡು ಬರುತ್ತಿದೆ.

ಬಿಜೆಪಿ ಪ್ರಚಾರಕರು ತಮ್ಮ ಭಾಷಣಗಳಲ್ಲಿ ಮುಖ್ಯವಾಗಿ ಎಎಪಿ ಸರ್ಕಾರದ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್, ಜೆಪಿ ನಡ್ಡಾ ಮತ್ತು ಅಮಿತ್​ ಶಾ ಅವರು ಬಿಡುಗಡೆ ಮಾಡಿದ ಬಿಜೆಪಿಯ ಮೂರು ಪ್ರಣಾಳಿಕೆಗಳಲ್ಲಿ ನೀಡಲಾದ ಭರವಸೆಗಳು ಎಎಪಿ ಘೋಷಿಸಿದ ಕಲ್ಯಾಣ ಯೋಜನೆಗಳಂತೆಯೇ ಇವೆ.

BJP staked to clear people’s doubts:

ಕೇಜ್ರಿವಾಲ್ ಅವರ ಹೇಳಿಕೆಯ ನಂತರ ಮತದಾರರ ಮನದಲ್ಲಿ ಹುಟ್ಟಿರಬಹುದಾದ ಭಯವನ್ನು ನಿವಾರಿಸುವ ಪ್ರಯತ್ನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಈಗ ಜಾರಿಯಲ್ಲಿರುವ ಯೋಜನೆಗಳನ್ನು ಮುಂದುವರೆಸುವುದಾಗಿ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಕರೋಲ್ ಬಾಗ್​ನಲ್ಲಿ ನಡೆದ ರ‍್ಯಾಲಿಯಲ್ಲಿ ಯೋಗಿ ಆದಿತ್ಯನಾಥ್ ಕೇಜ್ರಿವಾಲ್ ಅವರನ್ನು “ಸುಳ್ಳುಗಳ ಎಟಿಎಂ” ಎಂದು ಜರಿದರು.  DELHI ELECTIONS ಕಲುಷಿತವಾಗಿರುವ ಯಮುನಾ ನದಿ ಮತ್ತು ಯುಪಿಯಲ್ಲಿ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡುವ ಗಂಗಾ ನದಿಗಳನ್ನು ಅವರು ಹೋಲಿಕೆ ಮಾಡಿದರು.

Yogi Lightning Movement:

ಎಎಪಿಯ ವಿಶೇಷ್ ರವಿ ಮತ್ತು ಕಾಂಗ್ರೆಸ್ ನ ರಾಹುಲ್ ಧನಕ್ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ದುಶ್ಯಂತ್ ಗೌತಮ್ ಅವರ ಪರವಾಗಿ ಯೋಗಿ ಆದಿತ್ಯನಾಥ್ ಈ ಬಾರಿ ಪ್ರಚಾರ ಮಾಡಿದರು. ಕಳೆದ ಎರಡು ಚುನಾವಣೆಗಳಲ್ಲಿ ವಿಶೇಷ್ ರವಿ ಬಿಜೆಪಿ ಅಭ್ಯರ್ಥಿಯನ್ನು ಗಮನಾರ್ಹ ಅಂತರದಿಂದ ಸೋಲಿಸಿದ್ದರು. ಈ ಬಾರಿ, ದುಶ್ಯಂತ್ ಅವರು ಚುನಾವಣಾ ಆಟವನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳಲಿದ್ದಾರೆ ಎಂಬ ಭರವಸೆಯೊಂದಿಗೆ ಬಿಜೆಪಿ ಅವರನ್ನು ಕಣಕ್ಕಿಳಿಸಿದೆ.

ಶಕುರ್ ಬಸ್ತಿ ಕ್ಷೇತ್ರದಲ್ಲಿ ಬಿಜೆಪಿ ಕರ್ನೈಲ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಇವರು ಪಕ್ಷದ ದೇವಸ್ಥಾನ ಘಟಕದ ಮುಖ್ಯಸ್ಥರಾಗಿದ್ದಾರೆ. ಇವರು ಮೂರು ಬಾರಿಯ ಎಎಪಿ ಶಾಸಕ ಸತೇಂದ್ರ ಜೈನ್ ಅವರನ್ನು ಎದುರಿಸುತ್ತಿದ್ದಾರೆ. ದೆಹಲಿಯ ಬ್ರಾಹ್ಮಣರನ್ನು ಒಲಿಸಿಕೊಳ್ಳಲು 2022 ರಲ್ಲಿ ಬಿಜೆಪಿ ದೇವಸ್ಥಾನ ಘಟಕವನ್ನು ರಚಿಸಿದೆ. ನಡ್ಡಾ ಸ್ವತಃ ಸಿಂಗ್ ಅವರ ಪರವಾಗಿ ಪ್ರಚಾರ ಮಾಡಿದರು. ಇದು ಈ ಕ್ಷೇತ್ರದ ಮಹತ್ವವನ್ನು ಸೂಚಿಸುತ್ತದೆ.

ಸಿಂಗ್ ತಮ್ಮನ್ನು ತಾವು ಸನಾತನ ಧರ್ಮದ ಸೇವಕ ಎಂದು ಕರೆದುಕೊಳ್ಳುತ್ತಾರೆ. ಇನ್ನು ಶಕುರ್ ಬಸ್ತಿಯಲ್ಲಿ ನಡ್ಡಾ ನಡೆಸಿದ ಪ್ರಚಾರವು ಹೆಚ್ಚಾಗಿ ಕೇಜ್ರಿವಾಲ್ ಕೇಂದ್ರಿತವಾಗಿತ್ತು. DELHI ELECTIONS ಕಾಂಗ್ರೆಸ್ ದುರ್ಬಲವಾಗಿರುವ ಮಧ್ಯೆ, ಬಿಜೆಪಿ ಮತ್ತು ಎಎಪಿ ಮತಗಳನ್ನು ಸೆಳೆಯಲು ಪರಸ್ಪರರ ವಿರುದ್ಧ ಎಷ್ಟು ಸಾಧ್ಯವೋ ಅಷ್ಟು ಕೀಳು ಮಟ್ಟದ ಪ್ರಚಾರ ನಡೆಸಿವೆ. ಫೆಬ್ರವರಿ 5 ರಂದು ಮತದಾರರು ಮತ ಚಲಾಯಿಸಿದ ನಂತರ ಯಾವುದು ಸತ್ಯ ಯಾವುದು ಸುಳ್ಳು ಎಂಬುದು ನಿರ್ಧಾರವಾಗಲಿದೆ.

“ನೀವು ಒಂದು ದಿನ ಚಲಾಯಿಸುವ ಮತದ ಪರಿಣಾಮವು ನಿಮ್ಮ ಮೇಲೆ ಐದು ವರ್ಷಗಳವರೆಗೆ ಇರುತ್ತದೆ” ಎಂದು ದಿಯೋಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ ಅತಿಶಿ ಹೇಳಿದ್ದು ಸರಿಯಾಗಿಯೇ ಇದೆ.

ಇದನ್ನು ಓದಿರಿ : ATTACKS ON HINDUS : ಬಾಂಗ್ಲಾದೇಶದಲ್ಲಿ ಇಸ್ಲಾಂ ಮೂಲಭೂತವಾದಿಗಳಿಂದ ಹಿಂದೂಗಳ ಮೇಲೆ ದಾಳಿ

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...