spot_img
spot_img

DHARAVI REDEVELOPMENT PROJECT : ಧಾರಾವಿ ಮೊದಲ ಮಹಡಿ ನಿವಾಸಿಗಳಿಗೂ ಸಿಗಲಿದೆ ಮನೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mumbai News:

ಸಾಂಪ್ರದಾಯಿಕವಾಗಿ, ಕೊಳಗೇರಿಗಳಲ್ಲಿ ಮೇಲ್ಮಹಡಿ ಬಾಡಿಗೆದಾರರನ್ನು ಅಕ್ರಮ ಎಂದು ಗುರುತಿಸಿ, ಅವರನ್ನು ಕೊಳಗೇರಿ ಪುನರ್ವಸತಿ ಯೋಜನೆಯಿಂದ ಹೊರಗೆ ಇಡಲಾಗುವುದು. ಇವರಿಗೆ ಯಾವುದೇ ಪರ್ಯಾಯ ಇಲ್ಲದಿರುವುದರಿಂದ ಇದು ಅನೇಕ ನಿವಾಸಿಗಳ ಸ್ಥಳಾಂತರದ ಆಕ್ರೋಶಕ್ಕೆ ಗುರಿಯಾಗುತ್ತದೆ.

ಕೊಳಗೇರಿ ಪುನರ್ವಸತಿ ಪ್ರಾಧಿಕಾರ (ಎಸ್​ಆರ್​ಎ) ಉಪಕ್ರಮದಲ್ಲಿ ಧಾರಾವಿ ಪುನಾರಾಭಿವೃದ್ಧಿ ಯೋಜನೆಯಲ್ಲಿ ಹೊಸ ರೀತಿಯ ವಿಶಿಷ್ಟ ನೀತಿಯೊಂದನ್ನು ಪರಿಚಯಿಸಿದೆ. ಅದರ ಅನುಸಾರ, ಕೊಳಗೇರಿಯಲ್ಲಿನ ಮೊದಲ ಮಹಡಿಯಲ್ಲಿ ವಾಸಿಸುತ್ತಿರುವ ಬಾಡಿಗೆದಾರರನ್ನು ಪುನರ್ವಸತಿ ಯೋಜನೆಗೆ ಸೇರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೇಲ್ಮಹಡಿಯ ಬಾಡಿಗೆದಾರರು ಮತ್ತೊಂದು ಕೊಳಗೇರಿಗೆ ಸ್ಥಳಾಂತರವಾಗುವುದರ ಜೊತೆಗೆ ಮತ್ತೊಂದು ಹೊಸ ಸಮಸ್ಯೆಗೆ ಕಾರಣವಾಗುತ್ತಾರೆ.2024ರ ಅಕ್ಟೋಬರ್​ 4ರಂದು ಹೊರಡಿಸಲಾದ ಸರ್ಕಾರದ ಆದೇಶದ ಪ್ರಕಾರ, 2022ರ ನವೆಂಬರ್ 15ರವರೆಗೆ ಧಾರಾವಿಯಲ್ಲಿನ ಎಲ್ಲಾ ಮೇಲಿನ ಮಹಡಿಯ ಬಾಡಿಗೆದಾರರು ಬಾಡಿಗೆ ಖರೀದಿ ಯೋಜನೆಯಲ್ಲಿ ಪುನರ್ವಸತಿಗೆ ಅರ್ಹರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.

ಈ ವಿಷಯವನ್ನು ಗುರಿಯಾಗಿಸಿಕೊಂಡು ಕೊಳಗೇರಿ ಮುಕ್ತ ಮುಂಬೈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಧಾರಾವಿ ಪುನರಾಭಿವೃದ್ಧಿ ಯೋಜನೆಯಲ್ಲಿ ಈ ಯೋಜನಾಬದ್ದ ತಂತ್ರಗಾರಿಕೆ ರೂಪಿಸಿದ್ದು, ಮೊದಲ ಮಹಡಿ ನಿವಾಸಿಗಳಿಗೂ ಕೂಡ ಮನೆ ಭರವಸೆ ನೀಡಿದೆ.

Rules :

ಈ ಯೋಜನೆ ಅಡಿ ಬಾಡಿಗೆದಾರರು ಮುಂಬೈನಲ್ಲಿ 300 ಚ.ಮೀ ಮನೆಯನ್ನು ಧಾರಾವಿ ಹೊರವಲಯದಲ್ಲಿ 25 ವರ್ಷಗಳ ನಾಮಮಾತ್ರ ಬಾಡಿಗೆ ಪಡೆಯುತ್ತಾರೆ. ಇದಾದ ಬಳಿಕ ಅವರು ಮಾಲೀಕತ್ವ ಹೊಂದುತ್ತಾರೆ. ಈ ಯೋಜನೆಯು ಸರಳೀಕೃತ ಮತ್ತು ಮಾಲೀಕತ್ವವನ್ನು ಪಡೆಯಲೂ 25 ವರ್ಷಗಳೊಳಗೆ ಹಣವನ್ನು ಪಾವತಿ ಮಾಡಲು ಸಹಾಯ ಮಾಡುತ್ತದೆ. ಇವರು ವಾಸಿಸುವ ಮನೆಯ ಬಾಡಿಗೆ ಮತ್ತು ಮಾಲೀಕತ್ವದ ಹಣವನ್ನು ಡಿಆರ್​ಪಿ ಅಥವಾ ರಾಜ್ಯ ಸರ್ಕಾರ ಸಂಗ್ರಹಿಸಲಿದೆ.

The scheme can be availed by providing all these documents:

ಮೇಲ್ಮಹಡಿಯ ನಿವಾಸಿಗಳು ವಿದ್ಯುತ್ ಬಿಲ್‌ಗಳು, ನೋಂದಾಯಿತ ಮಾರಾಟ ಅಥವಾ ಬಾಡಿಗೆ ಒಪ್ಪಂದ , ಆಧಾರ್ ಕಾರ್ಡ್‌, ರೇಷನ್ ಕಾರ್ಡ್‌ ಅಥವಾ ಅರ್ಹ ನೆಲಮಹಡಿ ನಿವಾಸಿಗಳು ಪ್ರಮಾಣೀಕರಿಸಿದ ಅಫಿಡವಿಟ್‌ನಂತಹ ದಾಖಲೆಗಳನ್ನು ಒದಗಿಸಿದಲ್ಲಿ ಮಾತ್ರ ಅವರು ಯೋಜನೆಗೆ ಅರ್ಹರಾಗುತ್ತಾರೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Measures to protect the dignity of residents:

ಉನ್ನತ ಖರೀದಿ ಯೋಜನೆಯಲ್ಲಿ ಧಾರಾವಿ ನಿವಾಸಿಗಳು ಪ್ರತ್ಯೇಕ ಶೌಚಾಲಯ ಮತ್ತು ಅಡುಗೆ ಕೋಣೆಯಂತಹ ಅಗತ್ಯ ಸೌಲಭ್ಯವುಳ್ಳ ಆಧುನಿಕ ಮನೆಗೆ ತೆರಳಲಿದ್ದು, ಇದು ಅವರ ಘನತೆ, ಖಾಸಗಿತನ ಮತ್ತು ಉತ್ತಮ ಜೀವನವನ್ನು ಖಾತ್ರಿಪಡಿಸುತ್ತದೆ ಎಂದು ಡಿಪಿಆರ್ ​ – ಎಸ್ಆರ್​ಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಟ್ಟಡಗಳನ್ನು ಡೆವಲಪರ್​ಗಳು ಪುನರ್ವಸತಿ ನಂತರದ ನಿರ್ವಹಣೆ ಮಾಡಲಿದ್ದು, ಇದು ನಿವಾಸಿಗಳ ಮೇಲೆ ಆರ್ಥಿಕ ಹೊರೆಯನ್ನು ಕೆಳಗಿಳಿಸಲಿದೆ. ಅಲ್ಲದೇ, ಕಟ್ಟಡ ಶೇ 10ರಷ್ಟು ಪ್ರದೇಶವನ್ನು ವಾಣಿಜ್ಯ ಅಭಿವೃದ್ಧಿ ನಡೆಸುವುದರಿಂದ ಇದು ಹೌಸಿಂಗ್​ ಸೊಸೈಟಿಗೆ ಶಾಶ್ವತ ಆದಾಯ ನೀಡುತ್ತದೆ.

ಆಧುನಿಕ ನಗರ ನಿರ್ಮಾಣದಲ್ಲಿ ಅಗಲವಾದ ರಸ್ತೆ, ಗಿಡ – ಮರಕ್ಕೆ ಜಾಗ, ಆರೋಗ್ಯ ಸೇವೆ, ಶಿಕ್ಷಣ ಸಂಸ್ಥೆ ಮತ್ತು ಕ್ರೀಡೆಗಳಿಗಾಗಿ ಇಲ್ಲಿ ಜಾಗ ಬಿಡಲಾಗಿದೆ. ಈ ಉಪಕ್ರಮವೂ ಜೀವನ ಮಟ್ಟ ಸುಧಾರಣೆ ಮಾತ್ರವಲ್ಲದೇ, ನಿವಾಸಿಗಳಿಗೆ ಮಾಲೀಕತ್ವ ಮತ್ತು ಹೆಮ್ಮೆಯನ್ನು ನೀಡಲಿದ್ದು, ಕೊಳಗೇರಿ ಪುನರ್ವಸತಿ ಕಡೆಗೆ ಮುಂಬೈನ ಪ್ರಯತ್ನಗಳಲ್ಲಿ ಹೊಸ ಅಧ್ಯಾಯವಾಗಲಿದೆ.

ಈ ಯೋಜನೆ ಮೂಲಕ ಸಾವಿರಾರು ಕುಟುಂಬಗಳು ದೃಢ, ಕೈಗೆಟುಕುವ ದರದ ಮನೆ ಜೊತೆಗೆ ಘನತೆಯ ಭವಿಷ್ಯವನ್ನು ಪಡೆಯಲಿದ್ದಾರೆ ಎಂದು ಡಿಪಿಆರ್​​-ಎಸ್​ಆರ್​ಎ ಅಧಿಕಾರಿಗಳು ತಿಳಿಸಿದ್ದಾರೆ. (ಐಎಎನ್​ಎಸ್​)

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RAVI BASRUR : ‘ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ನಿಮ್ಮ ಹೆಸರೇಳಿ ಬದುಕೊಳ್ತಾರೆ’

Bagalkote News: ಸಿದ್ದನಕೊಳ್ಳ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಶಾಸಕ...

BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

Mathura (Uttar Pradesh) News: ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ BUS​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ...

NEW PRESIDENT FOR KPCC : ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ

Bangalore News: ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು NEW PRESIDENT FOR KPCC ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ...

HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

Hyderabad News: ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ...