spot_img
spot_img

DIGITAL EXPERIENCE CENTRE : ಎಐ ಮೂಲಕ ಮಹಾಕುಂಭ ಮೇಳದ ಕಥೆ:

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Prayagraj (Uttar Pradesh) News:

ಆಧುನಿಕ ತಂತ್ರಜ್ಞಾನ ಬಳಸಿ ಮಹಾಕುಂಭದ ಕಥೆ, ಪುರಾಣವನ್ನು ಪ್ರವಾಸಿಗರಿಗೆ ತಿಳಿಸಲು ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಂಡಿದೆ. ಇದು ಯಾತ್ರಿಗಳಿಗೆ ಅದ್ಭುತ ಅನುಭವ ನೀಡುತ್ತಿದೆ.ಮಹಾಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗೆ ಈ ಧಾರ್ಮಿಕ ಮಹಾ ಕಾರ್ಯಕ್ರಮದ ವೈಭವದ ಕಥೆಯನ್ನು ಮನಮುಟ್ಟುವಂತೆ ತಿಳಿಸಲು ಉತ್ತರ ಪ್ರದೇಶ ಸರ್ಕಾರ DIGITAL​ ತಂತ್ರಜ್ಞಾನವನ್ನು ಬಳಸುತ್ತಿದೆ.

ಎಐ, ವಿಆರ್​ ಮತ್ತು ಎಆರ್​ನಂತಹ ತಂತ್ರಜ್ಞಾನಗಳ ಸಹಾಯದಿಂದ ಮಹಾಕುಂಭದ ಕಥೆ, ಪುರಾಣವನ್ನು ಪ್ರವಾಸಿಗರಿಗೆ ಮನಮುಟ್ಟುವಂತೆ ತಿಳಿಸಲಾಗುತ್ತಿದೆ.ಇದರಲ್ಲಿ ಕೃತಕ ಬುದ್ಧಿಮತ್ತೆ(ಎಐ), ವರ್ಚುಯಲ್​ ರಿಯಾಲಿಟಿ, ಅಗ್ಯುಮೆಂಟೆಟ್​ ರಿಯಾಲಿಟಿ ಹಾಗೂ ಲೈಟ್​ ಡಿಟೆಕ್ಷನ್​ ಆ್ಯಂಡ್​ ರೇಜಿಂಗ್​ ತಂತ್ರಜ್ಞಾನ ಮತ್ತು ಎಲ್​ಇಡಿ ಡಿಸ್​ಪ್ಲೆ ಹಾಗೂ ಹಾಲೋಗ್ರಾಮ್ಸ್​ ಮೂಲಕ ಮಹಾಕುಂಭದ ಪೌರಾಣಿಕ ಹಿನ್ನೆಲೆಯಲ್ಲಿ ವಿವರಿಸಲಾಗುತ್ತಿದೆ.

ಇಂದಿನಿಂದ ಅಂದರೆ, ಜನವರಿ 13ರಿಂದ ಆರಂಭವಾಗಿರುವ ಮಹಾಕುಂಭ ಮೇಳದಲ್ಲಿ DIGITAL​ ಮಹಾಕುಂಭ ಅನುಭವ ಕೇಂದ್ರವನ್ನು ತೆರೆಯಲಾಗಿದೆ. DIGITAL​ ಮಹಾಕುಂಭ ಅನುಭವ ಕೇಂದ್ರವನ್ನು 60,000 ಚದರ ಕಿ.ಮೀನಲ್ಲಿ ಸ್ಥಾಪಿಸಲಾಗಿದೆ. ಇದನ್ನು 12 ವಲಯಗಳಾಗಿ ವಿಭಾಗಿಸಲಾಗಿದೆ. ಈ ಕೇಂದ್ರದಲ್ಲಿ ಪೌರಾಣಿಕ ವಾಸ್ತುಶಿಲ್ಪಗಳ ನಿರ್ಮಾಣ ಪ್ರಮುಖ ಆಕರ್ಷಣೆಯಾಗಿದೆ.

Features of the Centre: ಹಾಗೆಯೇ ಮುಂದೆ ಸಾಗಿದರೆ, ಯಮುನೋತ್ರಿ ಹಿಮಶಿಖರದ ಕುರಿತು ಅನುಭವ ಪಡೆಯಬಹುದು. ಯಮುನಾ ನದಿ ಕಣ್ಮುಂದೆಯೇ ಹರಿಯುತ್ತಿದೆ ಎಂಬ ವರ್ಚುಯಲ್​ ಅನುಭವ ಇಲ್ಲಿ ಸಿಗುತ್ತದೆ. ಹಾಗೆಯೇ ಪ್ರಯಾಗ್​ ಮಹತಮ್​ ಮತ್ತು ತ್ರಿವೇಣಿ ಸಂಗಮದ ಕಥೆಯನ್ನು ಕೂಡ ಅನುಭವಿಸಬಹುದು.

ಈ ಕೇಂದ್ರದೊಳಗೆ ಪ್ರವೇಶಿಸುತ್ತಿದ್ದಂತೆ ಮಹಾಕುಂಭ ಮೇಳದ ಟ್ರೇಲರ್​ ನೋಡಬಹುದು. ಇದಾದ ಬಳಿಕ ಮರದ ಗೋಡೆಯನ್ನು ಸ್ಕ್ರೋಲ್​ ರೀತಿ ನಿರ್ಮಿಸಿ ಅದರಲ್ಲಿ ಸಮುದ್ರ ಮಂಥನದ ಕಥೆ ಹೇಳಲಾಗುತ್ತಿದೆ.ಜನವರಿ 9ರಂದು ಈ ಕೇಂದ್ರವನ್ನು ಉದ್ಘಾಟಿಸಿದ್ದ ಸಿಎಂ ಯೋಗಿ ಆದಿತ್ಯನಾಥ್​, ಇಂದಿನ ಯುವ ಜನತೆ ಮತ್ತು ವಿದೇಶಿ ಪ್ರವಾಸಿಗರಿಗೆ ಭಾರತದ ಸಂಸ್ಕೃತಿಯ ಆಳ ಮತ್ತು ಐತಿಹಾಸಿಕ ಶ್ರೀಮಂತಿಕೆಯನ್ನು ತಿಳಿಸಲು ಈ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದ್ದರು.

ಈ ಎಲ್ಲಾ ಅನುಭವವನ್ನು DIGITAL​ ರೂಪದಲ್ಲಿ ರಚಿಸಲಾಗಿದ್ದು, ಮಹಾಕುಂಭಕ್ಕೆ ಆಗಮಿಸುವ ಹೊಸ ಪೀಳಿಗೆಯ ಹಾಗೂ ವಿದೇಶಿ ಪ್ರವಾಸಿಗರಿಗೆ ಪೌರಾಣಿಕ ಕಥೆಗಳನ್ನು ವಿಶೇಷವಾಗಿ ರೂಪಿಸಲಾಗಿದೆ.

DIGITAL ಕೇಂದ್ರ ಸ್ಥಾಪನೆಯ ಹಿಂದಿನ ರೂವಾರಿ ಮತ್ತು ನೋಯ್ಡಾದ ಪೆವಿಲಿಯನ್ಸ್ ಮತ್ತು ಇಂಟೀರಿಯರ್ಸ್ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮುಖ್ಯಸ್ಥ ಮೊಹಿತ್​ ವರ್ಮಾ ಈಟಿವಿ ಭಾರತ್​ ಜೊತೆ ಮಾತನಾಡಿದ್ದು, “ಸಂಪೂರ್ಣ ಮಹಾಕುಂಭ ಕಥೆ ಹೇಳುವ ಮತ್ತು ತೋರಿಸುವ ಈ ಯೋಜನೆ ಮುಖ್ಯಮಂತ್ರಿಗಳದ್ದು. ಮೇಳದ ಅಧಿಕಾರಿಗಳು ಟೆಂಡರ್​ ಬಿಡುಗಡೆ ಮಾಡಿದಾಗ, ಕಳೆದ ವರ್ಷದ ಡಿಸೆಂಬರ್​ 16ರಂದು ನಾವು ಟೆಂಡರ್​ ಪಡೆದೆವು” ಎಂದರು.

Construction in three weeks: ವಾಸ್ತುಶಿಲ್ಪದ ಗೋಡೆಗಳಿಂದ ಹಿಡಿದು ಇಲ್ಲಿ ಎಲ್ಲವೂ ನಮ್ಮ ತಂಡದಿಂದ ಅದರಲ್ಲೂ ಕೈಯಿಂದಲೇ ನಿರ್ಮಿಸಲಾಗಿರುವ ಕಲೆಯಾಗಿದೆ. ಯಾವುದನ್ನೂ ಹೊರಗಿನ ಮೂಲದಿಂದ ತಂದಿಲ್ಲ.

ಕೇಂದ್ರ ನಿರ್ಮಾಣಕ್ಕೆ ನಮ್ಮ ತಂಡ 21 ದಿನ ತೆಗೆದುಕೊಂಡಿದೆ. ಮೂರು ವಾರದಲ್ಲಿ ಎಲ್ಲವನ್ನೂ ನಾವು ನಿರ್ಮಿಸಿದ್ದೇವೆ” ಎಂದು ವಿವರಿಸಿರು.”ಡಿಸೆಂಬರ್​ 18ರಂದು ನಾವು ಮಹಾಕುಂಭ ಮೇಳದ ಸೆಕ್ಟರ್​ 3 ಪ್ರದೇಶಕ್ಕೆ ಬಂದಾಗ ನಮ್ಮ ಕಂಟೆಂಟ್​ ತಂಡ ಪ್ರಾಥಮಿಕ ಹಂತದಿಂದ ನಮ್ಮ ಯೋಜನೆ ಕಾರ್ಯಗತಗೊಳಿಸುವ ಕುರಿತು ವಿಸ್ತೃತ ಚರ್ಚೆ ನಡೆಸಿತು.

Center Viewing Hours: “DIGITAL​ ಮಹಾಕುಂಭ ಕೇಂದ್ರಕ್ಕೆ ತೆರಳಲು ಎರಡು ಟಿಕೆಟ್​ ಕೌಂಟರ್‌ಗಳ​ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನಕ್ಕೆ 3ರಿಂದ 4 ಸಾವಿರ ಜನ ಭೇಟಿ ನೀಡುತ್ತಿದ್ದಾರೆ. ಕೇಂದ್ರದಲ್ಲಿ ಒಬ್ಬರಿಗೆ 50 ರೂ ಟಿಕೆಟ್​ ದರ ನಿಗದಿಸಲಾಗಿದೆ. ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಕೇಂದ್ರ ತೆರೆದಿರುತ್ತದೆ.

ಮಧ್ಯಾಹ್ನ 2ರಿಂದ 3ರವರೆಗೆ ಮಾತ್ರ ಒಂದು ವಿರಾಮವಿದ್ದು, ಜನವರಿ 13 ಮತ್ತು 14ರ ಪವಿತ್ರ ಸ್ನಾನದ ದಿನ ಮುಚ್ಚಲಾಗುವುದು” ಎಂದು ಅವರು ಮಾಹಿತಿ ನೀಡಿದರು.

ಇದನ್ನು ಓದಿರಿ : KASHMIR Z MORH TUNNEL : ಕಾಶ್ಮೀರದಲ್ಲಿಂದು ಝಡ್-ಮೋರ್ಹಾ ಸುರಂಗ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...