spot_img
spot_img

ದಾಖಲೆ ಕೇಳಿದ ಸರಕಾರ: ಸುಲಭಕ್ಕೆ ಸಿಗದು ಭಾಗ್ಯಲಕ್ಷ್ಮೀ ಬಾಂಡ್‌

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ತೀರ್ಥಹಳ್ಳಿ (ಶಿವಮೊಗ್ಗ):  ಬಡ ಕುಟುಂಬದ ಹೆಣ್ಣು ಮಗು ವಯಸ್ಕಳಾದ ನಂತರ ಸರಕಾರದ ಭಾಗ್ಯಲಕ್ಷ್ಮೀ ಯೋಜನೆಯಡಿ ಆರ್ಥಿಕ ನೆರವು ಪಡೆಯುವುದು ಸುಲಭದ ಕೆಲಸವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಡ ಕುಟುಂಬದ ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡಿ ವಯಸ್ಕ ಅವಧಿಯಲ್ಲಿ ಸ್ವಾವಲಂಬಿ ಜೀವನ ಒದಗಿಸುವ ಉದ್ದೇಶದಿಂದ ರಾಜ್ಯ ಸರಕಾರ 2006ರಲ್ಲಿ ಭಾಗ್ಯಲಕ್ಷ್ಮೀ ಕಲ್ಯಾಣ ಯೋಜನೆ ಜಾರಿಗೊಳಿಸಿದೆ. ಅಗತ್ಯ ದಾಖಲೆಗಳೊಂದಿಗೆ ಅಂದು ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹರು ಈಗ ಹಣ ಪಡೆಯಲು ಪುನಾ ದಾಖಲೆ ಸಲ್ಲಿಸಬೇಕಿದೆ. ಷರತ್ತಿನ ದಾಖಲೆಗಳನ್ನು ಸರಕಾರಕ್ಕೆ ಪೂರ್ಣ ಸಲ್ಲಿಸಿದರೆ ಮಾತ್ರ ನಿಗದಿತ ಬಾಂಡ್‌ ಮೊತ್ತ ಪಡೆಯಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.

ಶಾಶ್ವತ ಕುಟುಂಬ ನಿಯಂತ್ರಣ ಯೋಜನೆಯಡಿ ತಾಯಿ ಆಪರೇಷನ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌ ಸೇರಿದಂತೆ ಅನೇಕ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ.  8ನೇ ತರಗತಿ ವ್ಯಾಸಂಗ ಮಾಡಿರಲೇಬೇಕು. ವಿಶೇಷಚೇತನ ಹೆಣ್ಣು ಮಕ್ಕಳು 1ರಿಂದ 5ನೇ ತರಗತಿವರೆಗೆ ವ್ಯಾಸಂಗ ಮಾಡಬೇಕು. ಈ ಬಗ್ಗೆ ಶಾಲೆ ಮುಖ್ಯ ಶಿಕ್ಷಕರಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು. ತೀವ್ರ ತರಹ ವಿಶೇಷಚೇತನ ಹೆಣ್ಣು ಮಕ್ಕಳ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ವಾಸ್ತವ ವರದಿ ಸಲ್ಲಿಸಬೇಕು.

ಭಾಗ್ಯಲಕ್ಷ್ಮೀ ಯೋಜನೆ ಅನುಷ್ಠಾನ ಸಂಬಂಧ ಸರಕಾರ ಸುಮಾರು 13 ಬಾರಿ ತಿದ್ದುಪಡಿ ಆದೇಶಗಳನ್ನು ಮಾಡಿದೆ. ಷರತ್ತುಗಳ ಅನ್ವಯ ದಾಖಲೆಗಳನ್ನು ಪುನಾ ಒಟ್ಟುಗೂಡಿಸುವುದು ಫಲಾನುಭವಿಗಳ ಕುಟುಂಬಗಳನ್ನು ಪ್ರಸ್ತುತ ಅವಧಿಯಲ್ಲಿ ತಲೆಕೆಡಿಸುವಂತೆ ಮಾಡಿದೆ.

2024 ಏಪ್ರಿಲ್‌ ನಂತರ ಈ ಹೆಣ್ಣು ಮಕ್ಕಳಿಗೆ ನಿಗಮ ತಲಾ 50 ಸಾವಿರ ರೂ. ಪರಿಪಕ್ವ ಮೊತ್ತವನ್ನು ವಿತರಿಸುವ ಜವಾಬ್ದಾರಿ ಹೊಂದಿದೆ.

2006 ಏಪ್ರಿಲ್‌ 1ರಿಂದ 2008 ಜುಲೈ 31ರ ವರೆಗೆ ನಿಯಮಾವಳಿ ಅನ್ವಯ ಯೋಜನೆಯ ಪ್ರಥಮ ಹಂತದಲ್ಲಿ ರಾಜ್ಯದಲ್ಲಿ ಒಟ್ಟು 6,47,953 ಹೆಣ್ಣು ಮಕ್ಕಳ ಹೆಸರಲ್ಲಿ ತಲಾ 10 ಸಾವಿರ ರೂ. ಮೌಲ್ಯದ ಠೇವಣಿ ಹಣವನ್ನು ಸರಕಾರ ಭಾರತೀಯ ಜೀವವಿಮಾ ನಿಗಮದಲ್ಲಿ ಹೂಡಿಕೆ ಮಾಡಿದೆ.

ಜೀವವಿಮಾ ಪಾಲಿಸಿ ಬಾಂಡ್‌ ಕಳೆದುಕೊಂಡಿವೆ. ವಿಮಾ ಬಾಂಡ್‌ ಕಳೆದುಕೊಂಡರೆ ಪೊಲೀಸ್‌ ದೂರು ನೀಡಿ ಎಫ್‌ಐಆರ್‌ ಪ್ರತಿ ನೀಡಲು ಸರಕಾರ ಸೂಚಿಸಿದೆ.

ಭಾಗ್ಯಲಕ್ಷ್ಮೀ ಯೋಜನೆ ಬಾಂಡ್‌ ಪರಿಪಕ್ವಗೊಂಡ ಕುರಿತಂತೆ ಅನೇಕ ಫಲಾನುಭವಿಗಳ ಕುಟುಂಬಕ್ಕೆ ತಿಳಿದು ಬಂದಿಲ್ಲ  ಗೊತ್ತಿರುವ ಕುಟುಂಬಗಳು ದಾಖಲೆಗಳನ್ನು ಸಲ್ಲಿಸಲು ಕಚೇರಿ ಅಲೆಯುತ್ತಿವೆ. ತಂದೆ, ತಾಯಿ ಇಬ್ಬರು ಮೃತಪಟ್ಟ ಕುಟುಂಬಗಳ ಹೆಣ್ಣು ಮಕ್ಕಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಯೋಜನೆ ಇನ್ನಷ್ಟು ಸರಳ ಮಾರ್ಗದಲ್ಲಿ ಅನುಷ್ಠಾನ ಮಾಡಬೇಕಾದ ಅನಿವಾರ‍್ಯತೆ ಇದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GOLD PRICE TODAY: ಲಕ್ಷದ ಹತ್ತಿರಕ್ಕೆ ಬಂದು ನಿಂತ ಬೆಳ್ಳಿ ಬೆಲೆ; ಷೇರುಪೇಟೆಯಲ್ಲಿ ಹೊಯ್ದಾಟ

Gold Rate Today News : GOLDದ ಬೆಲೆಯಲ್ಲಿ ಭಾರೀ ಏರಿಕೆ - GOLDಭರಣ ಖರೀದಿಸುವುದೇ ಬೇಡವೇ? - ಕರ್ನಾಟಕದ ವಿವಿಧೆಡೆ ಇಂದಿನ ದರ ಎಷ್ಟು?...

MAHABHARATA KURUKSHETRA WAR:ಘನಘೋರ ಕುರುಕ್ಷೇತ್ರ ಯುದ್ಧದ ಬಳಿಕ ಬದುಕುಳಿದವರು ಯಾರು?

Kurukshetra War News: ಕುರುಕ್ಷೇತ್ರ ಯುದ್ಧವು MAHABHARATAದ ಪ್ರಮುಖ ಘಟ್ಟ. ಈ ಯುದ್ಧದಲ್ಲಿ ಭೀಷ್ಮನಿಂದ ಕರ್ಣನವರೆಗೆ ಅನೇಕ ಪ್ರಮುಖ ಸಾವನ್ನಪ್ಪಿದ್ದಾರೆ. ಕೆಲವರು ಮಾತ್ರ ಬದುಕುಳಿದಿದ್ದು, ಅವರು...

WEEKLY INSULIN FOR TYPE 2 DIABETES:ಶುಗರ್ ಪೇಷೆಂಟ್ಗಳಿಗೆ ಗುಡ್ನ್ಯೂಸ್

Weekly Insulin for Type 2 Diabetes News: ಟೈಪ್-2 ಡಯಾಬಿಟಿಸ್​ನಿಂದ ಬಳಲುತ್ತಿರುವವರು ವಾರಕ್ಕೊಮ್ಮೆ ಇನ್ಸುಲಿನ್ ಇಂಜೆಕ್ಷನ್​ ಸಾಕಾಗುತ್ತದೆ. ಹೌದು, 'ಎಫ್ಸಿಟೋರಾ'ದಿಂದ ಇದನ್ನು ಹೋಗಲಾಡಿಸಬಹುದು ಎಂದು...

TIPS TO PREVENT MOSQUITO BITES:ಸಂಜೆ ವೇಳೆ ಸೊಳ್ಳೆಗಳು ಮನೆಗೆ ಬರುತ್ತಿವೆಯೇ?

Hyderabad News: ಈ ಎಲ್ಲಾ ತಡೆಯ ನಡುವೆಯೂ ಸೊಳ್ಳೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತದೆ. ಅಷ್ಟೇ ಅಲ್ಲ ಹೀಗೆ ದಾಂಗುಡಿ ಇಡುವ ಈ ಸೊಳ್ಳೆಗಳಿಂದ ಆರೋಗ್ಯದ ಮೇಲೆ...