spot_img
spot_img

ದಾಖಲೆ ಕೇಳಿದ ಸರಕಾರ: ಸುಲಭಕ್ಕೆ ಸಿಗದು ಭಾಗ್ಯಲಕ್ಷ್ಮೀ ಬಾಂಡ್‌

spot_img
spot_img

Share post:

ತೀರ್ಥಹಳ್ಳಿ (ಶಿವಮೊಗ್ಗ):  ಬಡ ಕುಟುಂಬದ ಹೆಣ್ಣು ಮಗು ವಯಸ್ಕಳಾದ ನಂತರ ಸರಕಾರದ ಭಾಗ್ಯಲಕ್ಷ್ಮೀ ಯೋಜನೆಯಡಿ ಆರ್ಥಿಕ ನೆರವು ಪಡೆಯುವುದು ಸುಲಭದ ಕೆಲಸವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಡ ಕುಟುಂಬದ ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡಿ ವಯಸ್ಕ ಅವಧಿಯಲ್ಲಿ ಸ್ವಾವಲಂಬಿ ಜೀವನ ಒದಗಿಸುವ ಉದ್ದೇಶದಿಂದ ರಾಜ್ಯ ಸರಕಾರ 2006ರಲ್ಲಿ ಭಾಗ್ಯಲಕ್ಷ್ಮೀ ಕಲ್ಯಾಣ ಯೋಜನೆ ಜಾರಿಗೊಳಿಸಿದೆ. ಅಗತ್ಯ ದಾಖಲೆಗಳೊಂದಿಗೆ ಅಂದು ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹರು ಈಗ ಹಣ ಪಡೆಯಲು ಪುನಾ ದಾಖಲೆ ಸಲ್ಲಿಸಬೇಕಿದೆ. ಷರತ್ತಿನ ದಾಖಲೆಗಳನ್ನು ಸರಕಾರಕ್ಕೆ ಪೂರ್ಣ ಸಲ್ಲಿಸಿದರೆ ಮಾತ್ರ ನಿಗದಿತ ಬಾಂಡ್‌ ಮೊತ್ತ ಪಡೆಯಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.

ಶಾಶ್ವತ ಕುಟುಂಬ ನಿಯಂತ್ರಣ ಯೋಜನೆಯಡಿ ತಾಯಿ ಆಪರೇಷನ್‌ ಕಾರ್ಡ್‌, ಬಿಪಿಎಲ್‌ ಕಾರ್ಡ್‌ ಸೇರಿದಂತೆ ಅನೇಕ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ.  8ನೇ ತರಗತಿ ವ್ಯಾಸಂಗ ಮಾಡಿರಲೇಬೇಕು. ವಿಶೇಷಚೇತನ ಹೆಣ್ಣು ಮಕ್ಕಳು 1ರಿಂದ 5ನೇ ತರಗತಿವರೆಗೆ ವ್ಯಾಸಂಗ ಮಾಡಬೇಕು. ಈ ಬಗ್ಗೆ ಶಾಲೆ ಮುಖ್ಯ ಶಿಕ್ಷಕರಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು. ತೀವ್ರ ತರಹ ವಿಶೇಷಚೇತನ ಹೆಣ್ಣು ಮಕ್ಕಳ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ವಾಸ್ತವ ವರದಿ ಸಲ್ಲಿಸಬೇಕು.

ಭಾಗ್ಯಲಕ್ಷ್ಮೀ ಯೋಜನೆ ಅನುಷ್ಠಾನ ಸಂಬಂಧ ಸರಕಾರ ಸುಮಾರು 13 ಬಾರಿ ತಿದ್ದುಪಡಿ ಆದೇಶಗಳನ್ನು ಮಾಡಿದೆ. ಷರತ್ತುಗಳ ಅನ್ವಯ ದಾಖಲೆಗಳನ್ನು ಪುನಾ ಒಟ್ಟುಗೂಡಿಸುವುದು ಫಲಾನುಭವಿಗಳ ಕುಟುಂಬಗಳನ್ನು ಪ್ರಸ್ತುತ ಅವಧಿಯಲ್ಲಿ ತಲೆಕೆಡಿಸುವಂತೆ ಮಾಡಿದೆ.

2024 ಏಪ್ರಿಲ್‌ ನಂತರ ಈ ಹೆಣ್ಣು ಮಕ್ಕಳಿಗೆ ನಿಗಮ ತಲಾ 50 ಸಾವಿರ ರೂ. ಪರಿಪಕ್ವ ಮೊತ್ತವನ್ನು ವಿತರಿಸುವ ಜವಾಬ್ದಾರಿ ಹೊಂದಿದೆ.

2006 ಏಪ್ರಿಲ್‌ 1ರಿಂದ 2008 ಜುಲೈ 31ರ ವರೆಗೆ ನಿಯಮಾವಳಿ ಅನ್ವಯ ಯೋಜನೆಯ ಪ್ರಥಮ ಹಂತದಲ್ಲಿ ರಾಜ್ಯದಲ್ಲಿ ಒಟ್ಟು 6,47,953 ಹೆಣ್ಣು ಮಕ್ಕಳ ಹೆಸರಲ್ಲಿ ತಲಾ 10 ಸಾವಿರ ರೂ. ಮೌಲ್ಯದ ಠೇವಣಿ ಹಣವನ್ನು ಸರಕಾರ ಭಾರತೀಯ ಜೀವವಿಮಾ ನಿಗಮದಲ್ಲಿ ಹೂಡಿಕೆ ಮಾಡಿದೆ.

ಜೀವವಿಮಾ ಪಾಲಿಸಿ ಬಾಂಡ್‌ ಕಳೆದುಕೊಂಡಿವೆ. ವಿಮಾ ಬಾಂಡ್‌ ಕಳೆದುಕೊಂಡರೆ ಪೊಲೀಸ್‌ ದೂರು ನೀಡಿ ಎಫ್‌ಐಆರ್‌ ಪ್ರತಿ ನೀಡಲು ಸರಕಾರ ಸೂಚಿಸಿದೆ.

ಭಾಗ್ಯಲಕ್ಷ್ಮೀ ಯೋಜನೆ ಬಾಂಡ್‌ ಪರಿಪಕ್ವಗೊಂಡ ಕುರಿತಂತೆ ಅನೇಕ ಫಲಾನುಭವಿಗಳ ಕುಟುಂಬಕ್ಕೆ ತಿಳಿದು ಬಂದಿಲ್ಲ  ಗೊತ್ತಿರುವ ಕುಟುಂಬಗಳು ದಾಖಲೆಗಳನ್ನು ಸಲ್ಲಿಸಲು ಕಚೇರಿ ಅಲೆಯುತ್ತಿವೆ. ತಂದೆ, ತಾಯಿ ಇಬ್ಬರು ಮೃತಪಟ್ಟ ಕುಟುಂಬಗಳ ಹೆಣ್ಣು ಮಕ್ಕಳ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಯೋಜನೆ ಇನ್ನಷ್ಟು ಸರಳ ಮಾರ್ಗದಲ್ಲಿ ಅನುಷ್ಠಾನ ಮಾಡಬೇಕಾದ ಅನಿವಾರ‍್ಯತೆ ಇದೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...