ಮೈಸೂರು: ಸದ್ಯ ಮೈಸೂರಿನಲ್ಲಿ ರಸ್ತೆಗಳಲ್ಲಿ ಕಾಣುತ್ತಿರುವ ವಿದ್ಯುತ್ ಕಂಬಗಳು ಇನ್ನ ಕೆಲ ವರ್ಷಗಳಲ್ಲಿಯೇ ಮಾಯವಾಗಲಿವೆ. ಅಂದರೆ, ವಿದ್ಯುತ್ ಮಾರ್ಗ ಭೂಗತ ಮಾಡಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮುಂದಾಗಿದೆ.
2 ವರ್ಷದಲ್ಲಿ ಯೋಜನೆ ಅನುಷ್ಠಾನ ಮಾಡಲಿದ್ದು, 458 ಕೋಟಿ ರೂ.ಗಳ ಯೋಜನೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ನಗರದ ರಿಂಗ್ ರಸ್ತೆ ಒಳಭಾಗದ ಪ್ರಮುಖ ಪ್ರದೇಶದ ಭೂಮಿಯ ಮೇಲ್ಮೈನಲ್ಲಿರುವ ಎಲ್ಲಾ ವಿದ್ಯುತ್ ಮಾರ್ಗವನ್ನು ಭೂಮಿಯ ಕೆಳಭಾಗಕ್ಕೆ ವರ್ಗಾಯಿಸುವ 458 ಕೋಟಿ ರೂ.ಗಳ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಈ ದೊಡ್ಡ-ಪ್ರಮಾಣದ ಯೋಜನೆಯು ಮೈಸೂರಿನ ರಿಂಗ್ ರಸ್ತೆ ಒಳಭಾಗದಲ್ಲಿರುವ ಹಾಗೂ ಪ್ರಮುಖ ರಸ್ತೆಗಳಲ್ಲಿರುವ ಓವರ್ಹೆಡ್ ಪವರ್ ಲೈನ್ಗಳನ್ನು ಭೂಗತ (ಯುಜಿ) ಕೇಬಲ್ಗಳಾಗಿ ಪರಿವರ್ತಿಸುವುದು, ಇದಲ್ಲದೇ ವಿದ್ಯುತ್ ಕಳವು ಮತ್ತು ಅಪಘಾತ ವಲಯಗಳಲ್ಲಿರುವ ಎಲ್ಟಿ (ವಿತರಣ ಕೇಂದ್ರದಿಂದ ಮನೆಗಳಿಗೆ ವಿದ್ಯುತ್ ಸರಬರಲಾಜು ಮಾಡುವ ಲೊ ಟೆನ್ಷನ್ ಲೈನ್)ಓವರ್ಹೆಡ್ ಲೈನ್ಗಳಿಗೆ ಎಬಿ ಕೇಬಲ್ ಅಳವಡಿಸಲಾಗುತ್ತದೆ.
ಆರ್ಎಂಯುಗಳು ಮತ್ತು ಸಿಎಸ್ಎಸ್ನಂತಹ ಸುಧಾರಿತ ವ್ಯವಸ್ಥೆ ಅಳವಡಿಸಲಾಗುತ್ತದೆ. ಎಲ್ಲಾಎಚ್ಟಿ (ಹೈ ಟೆನ್ಷನ್)ಲೈನ್ಗಳನ್ನು ಅಂಡರ್ಗ್ರೌಂಡ್ ಕೇಬಲ್ ಲೈನ್ಗಳಾಗಿ ಪರಿವರ್ತಿಸಲಾಗುತ್ತದೆ.
ಮೈಸೂರಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿನಾಗರಿಕರಿಗೆ ವಿಶ್ವಾಸಾರ್ಹತೆ ಹೆಚ್ಚಿಸುವುದು ಮತ್ತು ಸುರಕ್ಷತೆ ಹೆಚ್ಚಿಸಲು ನಗರದಾದ್ಯಂತ ಅಸ್ತಿತ್ವದಲ್ಲಿರುವ ಎಚ್ಟಿ/ಎಲ್ಟಿ ಓವರ್ಹೆಡ್ ಪವರ್ಲೈನ್ಗಳನ್ನು ಭೂಗತ (ಯುಜಿ) ಕೇಬಲ್ಗಳಾಗಿ ಪರಿವರ್ತಿಸುವ 458 ಕೋಟಿ ರೂ.
ಯೋಜನೆ ರೂಪಿಸಲಾಗಿದೆ. ವಿದ್ಯುತ್ ಮೂಲ ಸೌಕರ್ಯವನ್ನು ಆಧುನೀಕರಿಸಿ ವಿದ್ಯುತ್ ವಿತರಣೆಯಲ್ಲಿಉಂಟಾಗುತ್ತಿದ್ದ ಅಡಚಣೆ ಕಡಿಮೆ ಮಾಡುವ ಮೂಲಕ ಗ್ರಾಹಕ ಸ್ನೇಹಿ ಸೇವೆ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಮೂರು ದಿನಗಳ ಹಿಂದೆ ಸೆಸ್ಕ್ ವತಿಯಿಂದ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, ಎಲೆಕ್ಟ್ರಾನಿಕ್ ಬಿಡ್ ಆಹ್ವಾನಿಸಿದೆ. ಗುತ್ತಿಗೆದಾರರಿಗೆ ಕಾಮಗಾರಿ ನೀಡಿದ ದಿನಾಂಕದಿಂದ 2 ವರ್ಷಗಳಲ್ಲಿಯೋಜನೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸೆಸ್ಕ್ನ ವ್ಯವಸ್ಥಾಪಕ ನಿರ್ದೇಶಕಿ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ವಿದ್ಯುತ್ ಮೂಲಸೌಕರ್ಯ ವೃದ್ಧಿ: ಈ ನವೀಕರಣವು ಮೈಸೂರಿನ ವಿದ್ಯುತ್ ಮೂಲಸೌಕರ್ಯ ಸುಧಾರಿಸುವುದಲ್ಲದೆ ನಗರದ ಸೌಂದರ್ಯ ಮತ್ತು ಸೇವಾ ಗುಣಮಟ್ಟ ವೃದ್ಧಿಸುತ್ತದೆ.
ವೋಲ್ಟೇಜ್ ಏರಿಳಿತ ತಗ್ಗಲಿದೆ. ಇದರಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾನಿಗೊಳಗಾಗುವುದು ತಪ್ಪುತ್ತದೆ. ಮಳೆಗಾಲದಲ್ಲಿಮಿಂಚು ಬಂದಾಗ ಅತಿಯಾದ ವಿದ್ಯುತ್ ತೆರದ ವಿದ್ಯುತ್ ಲೈನ್ಗಳಲ್ಲಿಪ್ರವಹಿಸಿ ನಾನಾ ರೀತಿಯ ಅವಘಡಗಳಾಗುವ ಸಮಸ್ಯೆ ದೂರವಾಗುತ್ತದೆ. ಸುರಕ್ಷಿತ ವಿದ್ಯುತ್ ವಿತರಣೆಯೊಂದಿಗೆ ಗ್ರಾಹಕರಿಗೆ ಸುಧಾರಿತ ಸೇವೆ ದೊರೆಯಲಿದೆ.
ಮಳೆಗಾಲದಲ್ಲಿಬಿರುಗಾಳಿಯಿಂದ ಮರಗಳು ಭೂಮಿಯ ಮೇಲ್ಮೈನಲ್ಲಿರುವ ವಿದ್ಯುತ್ ಲೈನ್ಗಳ ಮೇಲೆ ಬಿದ್ದು ನೂರಾರು ಲೈಟ್ಕಂಬಗಳು ಧರೆಗುರುಳಿ ವಿದ್ಯುತ್ ಸರಬರಾಜು ಕಡಿತಗೊಳ್ಳುತ್ತಿತ್ತು.
ಅಲ್ಲದೇ ಮುರಿದ ಕಂಬಗಳಿಗೆ ಹೊಸ ಕಂಬ ವಿದ್ಯುತ್ ತಂತಿ ಅಳವಡಿಕೆ ಸೇರಿದಂತೆ ಇನ್ನಿತರ ದುರಸ್ತಿ ಕಾರ್ಯಕ್ಕೆ ಲಕ್ಷಾಂತರ ರೂ. ಖರ್ಚಾಗುತ್ತಿತ್ತು. ಅಲ್ಲದೇ ಮಾನವ ಹಾನಿಯಾಗುವ ಸಾಧ್ಯತೆಯೂ ಇತ್ತು. ಇದೀಗ ಈ ಲೈನ್ಗಳನ್ನು ಭೂಗತವಾಗಿ ಅಳವಡಿಸುವುದರಂದ ಈ ರೀತಿಯ ಅವಘಡ ಸಂಭವಿಸುವುದು ತಪ್ಪಲಿದೆ.
ಉಪ ವಿಭಾಗವಾರು ಯೋಜನೆ
ಎನ್ಆರ್ ಮೊಹಲ್ಲಾ ಮತ್ತು ಚಾಮುಂಡಿಪುರಂ ಉಪವಿಭಾಗ -110.169 ಕೋಟಿ ರೂ.
ಕುವೆಂಪುನಗರ, ಹೂಟಗಳ್ಳಿ, ರಾಮಕೃಷ್ಣನಗರ ಉಪವಿಭಾಗ- 103.099 ಕೋಟಿ ರೂ.
ವಿ.ವಿ. ಮೊಹಲ್ಲಾ ಉಪವಿಭಾಗ-132.634 ಕೋಟಿ ರೂ.
ಜ್ಯೋತಿನಗರ ಮತ್ತು ಕೇಂದ್ರ ವಲಯ ಉಪವಿಭಾಗ- 112.792 ಕೋಟಿ
ಪ್ರಯೋಜನಗಳು
ಸೇವೆ ಮೇಲಿನ ವಿಶ್ವಾಸಾರ್ಹತೆ ವೃದ್ದಿ
ಅಡಚಣೆ ಕಡಿಮೆ
ಸುರಕ್ಷತೆ ಹೆಚ್ಚಳ, ತಾಂತ್ರಿಕ ನಷ್ಟ ಕಡಿತ.
ಮೇಲ್ಮೈ ವಿದ್ಯುತ್ಲೈನ್ ತೆರವು
ಗರ ಸೌಂದರ್ಯಕ್ಕೆ ಪೂರಕ
ಪರಿಸರಸ್ನೇಹಿ ಯೋಜನೆ
ನಿರ್ವಹಣೆ ವೆಚ್ಚ ಇಳಿಕೆ
ಈ ಯೋಜನೆ ಅನುಷ್ಠಾನದಿಂದ ಮೈಸೂರಿನ ವಿದ್ಯುತ್ ಮೂಲಸೌಕರ್ಯ ಆಧುನಿಕ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಂಡಂತಾಗುತ್ತದೆ. ಸಾಂಸ್ಕೃತಿಕ ನಗರಿಯ ಸೌಂದರ್ಯವೂ ವೃದ್ಧಿಯಾಗುತ್ತದೆ. ವಿದ್ಯುತ್ ನಷ್ಟ ತಪ್ಪಿ ಸೆಸ್ಕ್ಗೆ ಲಾಭದಾಯಕವಾಗಲಿದೆ.
– ಶೀಲಾ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ