spot_img
spot_img

ಫೆಂಗಲ್​ ಹಾನಿ : ಕೇಂದ್ರದಿಂದ 944 ಕೋಟಿ ಪರಿಹಾರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ನವೆಂಬರ್​ 30ರಂದು ಫೆಂಗಲ್​ ಚಂಡಮಾರುತದಿಂದ ಹಾನಿಗೊಳಗಾದ ತಮಿಳುನಾಡು ಜನರಿಗೆ ನೆರವು ನೀಡಲು ಎಸ್​ಡಿಆರ್​ಎಫ್​​ ಮೂಲಕ ಎರಡು ಕಂತಿನಲ್ಲಿ 944.8 ಕೋಟಿ ನೀಡಲು ಅನುಮೋದನೆ ನೀಡಿದೆ.
ಫೆಂಗಲ್​ ಚಂಡಮಾರುತಕ್ಕೆ ತತ್ತರಿಸಿದ ತಮಿಳುನಾಡಿಗೆ ಕೇಂದ್ರ ಸರ್ಕಾರ 944.8 ಕೋಟಿ ನೆರವು ಘೋಷಿಸಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎಸ್‌ಡಿಆರ್‌ಎಫ್) ಎರಡು ಕಂತುಗಳಲ್ಲಿ ಕೇಂದ್ರ ಈ ಪರಿಹಾರ ಬಿಡುಗಡೆ ಮಾಡಲು ಅನಮೋದನೆ ನೀಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಮಾರ್ಗದರ್ಶನ ಅಡಿಯಲ್ಲಿ ಸರ್ಕಾರವು ನೈಸರ್ಗಿಕ ವಿಪತ್ತಿನಲ್ಲಿ ಸಂಕಷ್ಟಕ್ಕೆ ಒಳಗಾದ ರಾಜ್ಯದ ಜನರಿಗೆ ಹೆಗಲಿಗೆ ಹೆಗಲಿ ಕೊಟ್ಟು ನಿಲ್ಲಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಂತರ ಸಚಿವಾಲಯ ಕೇಂದ್ರ ತಂಡವನ್ನು ತಮಿಳುನಾಡು ಮತ್ತು ಪುದುಚೇರಿಗೆ ಹಾನಿ ಪ್ರಮಾಣದ ಅಂದಾಜು ನಡೆಸುವಂತೆ ಕಳುಹಿಸಲಾಗಿದೆ. ಐಎಂಸಿಟಿಯ ಮೌಲ್ಯಮಾಪನ ವರದಿ ಬಳಿಕ ಅದರ ಅನುಸಾರವಾಗಿ ವಿಪತ್ತು ಪೀಡಿತ ರಾಜ್ಯಕ್ಕೆ ಎನ್​ಡಿಆರ್​ಎಫ್​ನಿಂದ ಹೆಚ್ಚುವರಿ ಆರ್ಥಿಕ ಸಹಾಯ ಅನುಮೋದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರ್ಥಿಕ ಜೊತೆಗೆ, ಎಲ್ಲಾ ಪ್ರವಾಹ ಮತ್ತು ಚಂಡಮಾರುತ ಪೀಡಿತ ರಾಜ್ಯಗಳಿಗೆ ಅಗತ್ಯವಿರುವ ಎನ್​ಡಿಆರ್​ಎಫ್​, ಸೇನಾ ಮತ್ತು ವಾಯು ತಂಡದ ಬೆಂಬಲವನ್ನು ನೀಡಲಾದೆ. ರಾಜ್ಯದಲ್ಲಿ ಫೆಂಗಲ್​ ಚಂಡಮಾರುತದಿಂದ ಅಪಾರ ಹಾನಿಯಾಗಿದ್ದು, ಉತ್ತರ ತಮಿಳುನಾಡಿನ ವಿಲ್ಲುಪುರಂ, ತಿರುವಣ್ಣಾಮಲೈ ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಉಂಟಾಗಿದೆ. ಇದರಿಂದ 69 ಲಕ್ಷಕ್ಕೂ ಹೆಚ್ಚು ಕುಟುಂಬಳ 1.5 ಕೋಟಿ ಜನರು ವಿಪತ್ತಿಗೆ ಒಳಗಾಗಿದ್ದಾರೆ.
ಫೆಂಗಲ್​ ಚಂಡಮಾರುತದ ದುರಂತ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು ಈ ನೈಸರ್ಗಿಕ ವಿಪತ್ತು ನಿರ್ವಹಣೆಗೆ ರಾಜ್ಯಕ್ಕೆ ತುರ್ತು ಹಣಕಾಸಿನ ನೆರವಿನ ಅಗತ್ಯವಿದೆ ಎಂದಿದ್ದರು.
ದೇಶದ 28 ರಾಜ್ಯಗಳಿಗೆ ವಿಪತ್ತು ಪರಿಹಾರವಾಗಿ ಈಗಾಗಲೇ ಕೇಂದ್ರ ಸರ್ಕಾರ 21,718.716 ಕೋಟಿ ರೂ.ಗಿಂತ ಹೆಚ್ಚು ಹಣ ಬಿಡುಗಡೆ ಮಾಡಿದೆ. ಎಸ್‌ಡಿಆರ್‌ಎಫ್‌ನಿಂದ 26 ರಾಜ್ಯಗಳಿಗೆ ರೂ.14,878.40 ಕೋಟಿ, ಎನ್‌ಡಿಆರ್‌ಎಫ್‌ನಿಂದ 18 ರಾಜ್ಯಗಳಿಗೆ ರೂ.4,808.32 ಕೋಟಿ, ಹಾಗೂ 11 ರಾಜ್ಯಗಳಿಗೆ ಎಸ್​ಡಿಎಂಎಫ್​ನಿಂದ ನಿಧಿ ಬಿಡುಗಡೆ ಮಾಡಲಾಗಿದೆ.
ನವೆಂಬರ್​ 30ರಂದು ಫೆಂಗಲ್​ ಚಂಡಮಾರುತದಿಂದ ಹಾನಿಗೊಳಗಾದ ತಮಿಳುನಾಡು ಜನರಿಗೆ ನೆರವು ನೀಡಲು ಎಸ್​ಡಿಆರ್​ಎಫ್​​ ಮೂಲಕ ಎರಡು ಕಂತಿನಲ್ಲಿ 944.8 ಕೋಟಿ ನೀಡಲು ಅನುಮೋದನೆ ನೀಡಿದೆ.
ಈ ನಿಟ್ಟಿನಲ್ಲಿ ಅವರಿಗೆ ತಾತ್ಕಾಲಿಕ ಪುನರ್​ಜೀವನ ಪ್ರಯತ್ನ ಕಲ್ಪಿಸಲು ಅಂದಾಜು 2,475 ಕೋಟಿ ರೂ.ಗಳ ಅಗತ್ಯವಿದೆ ಎಂದು ಸ್ಟಾಲಿನ್​ ತಿಳಿಸಿದ್ದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

205 INDIANS DEPORTED BY US : ಅಕ್ರಮವಾಗಿ ಅಮೆರಿಕದಲ್ಲಿದ್ದ ಭಾರತೀಯರ ಗಡಿಪಾರು

Amritsar News: ಅಕ್ರಮ ವಲಸಿಗರ ವಿರುದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕಠಿಣಕ್ರಮ ಕೈಗೊಂಡಿದ್ದಾರೆ. ಅದರಂತೆ ದಾಖಲೆ ರಹಿತವಾಗಿ ಅಮೆರಿಕದಲ್ಲಿ ನೆಲೆನಿಂತಿದ್ದ205 INDIANS DEPORTED BY...

PM MODI SPEECH : SC, ST, OBC ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಹೆಚ್ಚಳ

New Delhi News: ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿಂದು ಪ್ರPM MODI SPEECH. ಸರ್ಕಾರದ ಸಾಧನೆಗಳ ಕುರಿತು ಸುದೀರ್ಘ ಭಾಷಣ ಮಾಡಿದ ಅವರು,...

PM MODI PRAYAGRAJ VISIT : ಕುಂಭಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಲಿರುವ ಪ್ರಧಾನಿ

Prayagraj, Uttar Pradesh News: ಮಹಾಕುಂಭ ಮೇಳದಲ್ಲಿ ಭಾಗಿಯಾಲು PM MODI PRAYAGRAJ VISIT ನೀಡುತ್ತಿದ್ದಾರೆ. ಈ ವೇಳೆ ಅವರು ಭದ್ರತೆಯ ನಡುವೆ ಸಾಧು -...

ICC CHAMPIONS TROPHY 2025 : 1.8 ಲಕ್ಷ ರೂಪಾಯಿ ಬೆಲೆಯ ಟಿಕೆಟ್ಗಳೂ ಖಾಲಿ!

India vs Pakistan, ICC Champions Trophy-2025: 2023ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಉಭಯ ತಂಡಗಳು ಎದುರುಬದುರಾಗಿದ್ದವು. ಇದೀಗ 15 ತಿಂಗಳ ನಂತರ ಎರಡೂ...