spot_img
spot_img

Benki Anjaneya Festival : ಮೈಮೇಲೆ ಬೆಂಕಿ ಎರಚಿಕೊಂಡು ಆಂಜನೇಯನ ಹರಕೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hassan News :

ಜಾನುವಾರುಗಳನ್ನು ಬೆಂಕಿಯಲ್ಲಿ ಹಾಯಿಸುವುದನ್ನು ನೋಡಿದ್ದೇವೆ. ಆದ್ರೆ ಮನುಷ್ಯರೇ ಜಾನುವಾರುಗಳ ರೀತಿ ಬೆಂಕಿ ಹಾಯ್ದು, ಬೆಂಕಿ ಉಂಡೆಗಳನ್ನು ಎರಚಿ ಹರಕೆ ತೀರಿಸುವ ಪದ್ಧತಿಯನ್ನು ಬಹುತೇಕರು ನೋಡಿರಲ್ಲ. ಅಂಥದ್ದೊಂದು ಆಚರಣೆಯನ್ನು ಇಲ್ಲಿ ನೋಡಬಹುದು.

ತ್ರೇತಾಯುಗ ಕಳೆದು ಶತಮಾನಗಳಾದ್ರೂ ಕಲಿಯುಗದಲ್ಲಿ ಇನ್ನೂ ರಾಮದೂತನ ಪವಾಡಗಳು ಜೀವಂತವಾಗಿವೆ ಎಂಬುದಕ್ಕೆ ಹಾಸನ ಜಿಲ್ಲೆಯಲ್ಲಿರುವ ಆಂಜನೇಯನ ದೇವಾಲಯವೇ ಸಾಕ್ಷಿ.ಹರಕೆ ಹೊತ್ತ ಭಕ್ತರು ಜೀವದ ಹಂಗು ತೊರೆದು ಬೆಂಕಿ ಹಾಯುತ್ತಾರೆ. ಬಳಿಕ ಬೆಂಕಿ ಉಂಡೆಗಳನ್ನು ಲಂಕಾ ದಹನದ ಸ್ಥಳದಿಂದ ದೇವಾಲಯದ ಮೇಲ್ಭಾಗ ಮತ್ತು ದೇವಾಲಯದ ಮೇಲಿಂದ ಲಂಕಾದಹನದ ಸ್ಥಳಕ್ಕೆ ಎರಚಾಡುತ್ತಾರೆ.

ಈ ಸಂದರ್ಭದಲ್ಲಿ ಗರ್ಭಗುಡಿಯಲ್ಲಿರುವ ಆಂಜನೇಯ ಸನ್ನಿಧಿಯಲ್ಲಿ ಹೂವಿನ ಪ್ರಸಾದವಾಗುತ್ತದೆ. ಇದರೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುತ್ತದೆ.ಚನ್ನರಾಯಪಟ್ಟಣ ತಾಲೂಕಿನ ಮಡಬ ಗ್ರಾಮದಲ್ಲಿ ನಡೆಯುವ ಇಂಥದ್ದೊಂದು ಜಾತ್ರಾ ಮಹೋತ್ಸವ ಬಹಳ ವಿಭಿನ್ನ.

48 ದಿನಗಳ ಕಾಲ ನಡೆಯುವ ಜಾತ್ರೆಯ ಕೊನೆಯ ಐದು ದಿನಗಳು ಸಾವಿರಾರು ಭಕ್ತರ ಗಮನ ಸೆಳೆಯುತ್ತದೆ. ವಿವಾಹ, ಸಂತಾನ ಭಾಗ್ಯ, ಚರ್ಮರೋಗ ಸಮಸ್ಯೆ, ಜಮೀನು ವ್ಯಾಜ್ಯ, ವ್ಯಾಪಾರಾಭಿವೃದ್ದಿ ಸೇರಿದಂತೆ ಹಲವು ರೀತಿಯ ಹರಕೆಗಳನ್ನು ಹೊತ್ತ ಭಕ್ತರು ಇಲ್ಲಿ ಬಂದು ಹರಕೆ ತೀರಸುತ್ತಾರೆ.

Consumption of non-vegetarian food is forbidden :

ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಸ್ವಾಮಿ ಮಾತನಾಡಿ, ”ದೇವರಿಗೆ ವಂಶಪಾರಂಪರ್ಯವಾಗಿ ನಾವು ಪೂಜೆ ಮಾಡಿಕೊಂಡು ಬಂದಿದ್ದೇವೆ. ದೀಪಾವಳಿ ಹಬ್ಬದಂದು ದೇವರಿಗೆ ಕಂಕಣ ಕಟ್ಟುತ್ತೇವೆ. 48 ದಿನದ ನಂತರ ಈ ಹಬ್ಬ ಬರುತ್ತೆ. ಗ್ರಾಮಸ್ಥರು ವ್ರತದಲ್ಲಿರುತ್ತಾರೆ. ಯಾರೇ ಇಲ್ಲಿಗೆ ಬಂದು ಸಂಕಲ್ಪ ಮಾಡಿ ಹರಕೆ ಹೇಳಿಕೊಂಡರೂ ಇಷ್ಟಾರ್ಥ ನೆರವೇರುತ್ತದೆ” ಎಂದರು.

ಹರಕೆ ಹೊತ್ತವರು ಮೂರು ದಿನಗಳ ಕಾಲ ಉಪವಾಸವಿರಬೇಕು. ಮಾಂಸಹಾರ ಸೇವನೆ ನಿಷಿದ್ಧ. ಕೊನೆಯ ದಿನ ಮುಂಜಾನೆ ನಾಲ್ಕು ಗಂಟೆಗೆ ಶುಚಿರ್ಭೂತರಾಗಿ, ದೇವಾಲಯಕ್ಕೆ ಆಗಮಿಸಿ ಹರಕೆ ತೀರಿಸಬೇಕಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ, ದೇವಾಲಯದ ಮುಂಭಾಗದಲ್ಲಿ ಲಂಕಾದಹನವಾಗುವ ವೇಳೆ ಆತನ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂಬುದು ನಂಬಿಕೆ.

ಮತ್ತೋರ್ವ ಭಕ್ತರಾದ ಕುಮಾರ್ ಮಾತನಾಡಿ, ”ಇಲ್ಲಿನ ದೇವರನ್ನು ನಂಬಿದ ಮೇಲೆ ನಮ್ಮ ಎಲ್ಲ ಇಷ್ಟಾರ್ಥಗಳೂ ನೆರವೇರಿವೆ. ನಾವೆನಾದ್ರೂ ತಪ್ಪು ಮಾಡಿಕೊಂಡು ಇಲ್ಲಿಗೆ ಬಂದರೆ ಕೆಂಡದಿಂದ ಮೈ ಸುಟ್ಟು ಹೋಗುತ್ತೆ, ಇಲ್ಲ ಅಂದ್ರೆ ಏನೂ ಆಗಲ್ಲ” ಎಂದು ಹೇಳಿದರು.ಭಕ್ತರಾದ ಮಂಜುನಾಥ್ ಮಾತನಾಡಿ, ”ಇಲ್ಲಿ ನಾನು ಏನು ಬೇಕಾದ್ರೂ ಬೇಡಿಕೊಳ್ಳಬಹುದು. ಭಗವಂತ ಎಲ್ಲವನ್ನೂ ಕರುಣಿಸುತ್ತಾನೆ. ದೇವಾಲಯಕ್ಕೆ ಬಂದು ನಿಷ್ಠೆಯಿಂದ ಹರಕೆ ತೀರಿಸಿದರೆ ಇಷ್ಟಾರ್ಥ ನೆರವೇರುತ್ತದೆ” ಎಂದು ಹೇಳಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SHIVASENA SUPPORT TO BJP : ಬಿಜೆಪಿ ಅಭ್ಯರ್ಥಿಗಳಿಗೆ ಶಿಂಧೆ ಬಣದ ಶಿವಸೇನೆ ಬೆಂಬಲ ಘೋಷಣೆ

New Delhi News: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಔಪಚಾರಿಕವಾಗಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಮಿತ್ರ ಪಕ್ಷ ಬಿಜೆಪಿಗೆ ಬೆಂಬಲ ನೀಡುವುದಾಗಿ SHIVASENA SUPPORT TO BJP...

SIGANDUR BRIDGE : ಅಂತಿಮ ಹಂತದಲ್ಲಿ ಸಿಗಂದೂರು ಸೇತುವೆ ಕಾಮಗಾರಿ, ಕೆಲವೇ ತಿಂಗಳಲ್ಲಿ ಲೋಕಾರ್ಪಣೆShimoga News: ಸಾಗರ ತಾಲೂಕಿನ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ...

Shivamogga News: ಸಾಗರ ತಾಲೂಕಿನ SIGANDUR BRIDGE ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಇದೇ ವರ್ಷದ ಏಪ್ರಿಲ್ ಅಥವಾ ಮೇ ನಲ್ಲಿ ಲೋಕಾರ್ಪಣೆಯಾಗಲಿದೆ. ಹೌದು ನಾಡಿಗೆ...

HOW TO AWARE OF CYBER FRAUD : ಹಾಗಿದ್ರೆ ಮಾತ್ರ ಸೈಬರ್ ವಂಚನೆಯಿಂದ ಬಚಾವ್ ಆಗಲು ಸಾಧ್ಯ

Hyderabad News: ನಿಜವೆಂದು ತೋರುವ ಈ ನಕಲಿ ವೆಬ್​​ಸೈಟ್​ ಪತ್ತೆ ಮಾಡುವುದು ಹೇಗೆ, ಎಚ್ಚರಿಕೆ ಹೇಗೆ ವಹಿಸಬೇಕು, ವಂಚನೆಗೆ ಗುರಿಯಾಗದಂತೆ ಇರುವುದು ಹೇಗೆ ಎಂಬ ಇಲ್ಲಿದೆ...

COFFEE EXPORTS : 1.29 ಶತಕೋಟಿ ಡಾಲರ್ಗೆ ತಲುಪಿದ ಭಾರತದ ಕಾಫಿ ರಫ್ತು

New Delhi News: ಭಾರತದ COFFEE ರಫ್ತು ದ್ವಿಗುಣಗೊಂಡಿದೆ. ಈ ಮೂಲಕ ದೇಶದ ರಫ್ತಿನ ಪ್ರಮಾಣ ಹೆಚ್ಚಿಸಲು ತನ್ನದೇ ಕೊಡುಗೆ ನೀಡಿದೆ.ಉತ್ತಮ ಗುಣಮಟ್ಟ ಮತ್ತು ಅನನ್ಯ...