spot_img
spot_img

HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

spot_img
spot_img

Share post:

Hyderabad News:

ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ ಅವಕಾಶಕ್ಕಾಗಿ ಕಾಯುತ್ತಿರುವ THIEVESಗೆ ಅಂತಾನೇ ಮನೆ ಮಾಲೀಕನೊಬ್ಬ ವಿಶೇಷ ಪತ್ರವೊಂದನ್ನು ಬರೆದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಹಬ್ಬ ಹರಿದಿನಗಳು ಬಂದರೆ ಊರಿಗೆ ಹೋಗುವ ಸಂಭ್ರಮ ಸಾಮಾನ್ಯ ಜನರಲ್ಲಿ ಮನೆ ಮಾಡಿದರೆ, THIEVESಗೆ ಮಾಲೀಕರಿಲ್ಲದಾಗ ದರೋಡೆ ಮಾಡುವ ಉತ್ತಮ ಅವಕಾಶದ ಸಂದರ್ಭವೂ ಏರ್ಪಡುತ್ತದೆ. ಸಂಕ್ರಾಂತಿ ಸಂಭ್ರಮದ ಆಚರಣೆ ಜೊತೆಗೆ ಬುದ್ದಿವಂತಿಕೆ ಉಪಯೋಗಿಸಿರುವ ಮನೆ ಮಾಲೀಕ, ಹಬ್ಬದ ದಿನ ಖನ್ನ ಹಾಕುವ ವ್ಯರ್ಥ ಪ್ರಯತ್ನ ನಡೆಸದಂತೆ ಕೈ ಬರಹದ ಲೆಟರ್​ವೊಂದನ್ನು ಬರೆದು ಮನೆಯ ಮುಂದೆ ಅಂಟಿಸಿ ಹೋಗಿದ್ದಾರೆ.

ಈ ಮೂಲಕ THIEVES ಹಣ ಒಡವೆ ಆಸೆಗೆ ವ್ಯರ್ಥ ಪ್ರಯತ್ನ ನಡೆಸದಂತೆ ಕಿವಿಮಾತನ್ನೂ ಕೂಡಾ ಹೇಳಲಾಗಿದೆ.ನಾವು ಸಂಕ್ರಾಂತಿಗೆಗೆ ಊರಿಗೆ ಹೋಗುತ್ತಿದ್ದೇವೆ. ಹೋಗುವಾಗ ಮನೆಯಲ್ಲಿದ್ದ ಆಭರಣ ಮತ್ತು ಹಣ ಕೊಂಡೊಯ್ಯುತ್ತಿದ್ದೇವೆ. ಹಾಗಾಗಿ ನಮ್ಮ ಮನೆಗೆ ಬರಬೇಡಿ. ನಿಮ್ಮ ಹಿತೈಷಿ ಎಂಬ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆಈ ನಿಟ್ಟಿನಲ್ಲಿ ಮನೆ ಮಾಲೀಕ ಮಾಡಿರುವ ಈ ಕ್ರಿಯಾತ್ಮಕ ಯೋಜನೆ ಹಾಗೂ ಚಾಲಕಿತನ ಪ್ರಶಂಸಗೆ ಅರ್ಹವಾಗಿದೆ.

ಇದು THIEVESಗೆ ಸೂಚನೆ ಜೊತೆಗೆ ಮನೆ ಮಾಲೀಕರು ಕೂಡ THIEVES ಎಣಿಸಿದಂತೆ ದಡ್ಡರಾಗಿರುವುದಿಲ್ಲ ಎಂಬುದನ್ನು ಸಾರಿದೆ.ಈ ರೀತಿಯ ವಿಚಿತ್ರ ಪತ್ರವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ದೊರೆಯುತ್ತಿದೆ. ಹಬ್ಬದ ಸಂದರ್ಭದಲ್ಲಿ ಊರಿಗೆ ತೆರಳುವ ಮನೆಗಳನ್ನೇ ಗುರಿಯಾಗಿಸಿ, ಕೈ ಚಳಕ ತೋರುವ ಖದೀಮರ ಸಂಖ್ಯೆ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಪೊಲೀಸರ ಗಸ್ತಿನಿಂದ ಕಣ್ತಪ್ಪಿ ಮನೆ ಲೂಟಿ ಮಾಡುವ ಚೋರರು ಇದ್ದೇ ಇರುತ್ತಾರೆ.

ಇನ್ನು ಕಳ್ಳನೊಂದಿಗೆಯೇ ನೇರವಾಗಿ ಪತ್ರದ ಮೂಲಕ ಸಂಭಾಷಣೆಗೆ ಮುಂದಾದ ಮನೆ ಮಾಲೀಕನ ಈ ಕ್ರಿಯೆ ಹಾಸ್ಯಕ್ಕೆ ಮುಂದಾದರೂ, ಇದರ ಗಂಭೀರ ಆಲೋಚನೆಗೆ ಮೆಚ್ಚಲೇಬೇಕು ಎಂಬ ಮಾತುಗಳು ಕೇಳಿ ಬಂದಿದೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿರುವ ಈ ಪತ್ರ ಮನೆ ಮಾಲೀಕನೊಬ್ಬನ ಸರಿಯಾದ ಮುನ್ನೆಚ್ಚರಿಕೆಯ ಭದ್ರತೆಯಾಗಿದೆ. ಈ ರೀತಿಯ ಪ್ರಯತ್ನಗಳ ಮೂಲಕ ನೆರೆ ಹೊರೆ ಮತ್ತು ಪೊಲೀಸರಿಗೆ ಮಾಹಿತಿ ನೀಡುವ ನಡುವೆ ತಮ್ಮ ಅಗೈರಿನಲ್ಲೂ ಭದ್ರತೆ ಏರ್ಪಾಡು ಮಾಡಿಕೊಳ್ಳುವ ಬುದ್ದಿವಂತಿಕೆ ಕ್ರಮವಾಗಿದೆ.

ಇದನ್ನು ಓದಿರಿ : PROTEIN RICH VEGETARIAN FOOD : ನೀವು ಸಸ್ಯಾಹಾರಿಯಾಗಿದ್ದರೆ ಯಾವ ಆಹಾರ ಸೇವಿಸಬೇಕು ಗೊತ್ತೇ?

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...