spot_img
spot_img

HOW NAGASADHUS SURVIVE IN HIMALAYAS : ಮಂಜುಗಟ್ಟುವ ಚಳಿಯಲ್ಲಿಯೂ ನಾಗಾಸಾಧುಗಳು ಹೇಗಿರ್ತಾರೆ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Himalaya News:

ಹಿಮಾಲಯದ ಕೊರೆಯುವ ಚಳಿಯಲ್ಲಿ ನಾಗಾ ಸಾಧುಗಳು ಬಟ್ಟೆಯನ್ನೂ ಧರಿಸದೆHOW NAGASADHUS SURVIVE IN HIMALAYAS. ಅವರಿಗೆ ಆ ಶಕ್ತಿ ಹೇಗೆ ಬರುತ್ತದೆ ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆ. ಹೌದು ಇಂದು ಇಡೀ ಜಗತ್ತು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಬಗ್ಗೆ ಮಾತನಾಡುತ್ತಿದೆ! ಮಹಾ ಕುಂಭಮೇಳದಲ್ಲಿ ನಾಗಾ ಸಾಧುಗಳು ಗಮನ ಸೆಳೆಯುತ್ತಿದ್ದಾರೆ. ಈ ಮಧ್ಯೆ HOW NAGASADHUS SURVIVE IN HIMALAYAS ಬದುಕುವ ರೀತಿಯ ಬಗ್ಗೆ ಕುತೂಹಲ ಹೆಚ್ಚಿದೆ.

Kumbh Mela once in 144 years:

ಜನವರಿ 13 ಪುಷ್ಯ ಪೌರ್ಣಮಿಯ ದಿನದಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳವು ಅದ್ಧೂರಿಯಾಗಿ ಪ್ರಾರಂಭವಾಯಿತು. 144 ವರ್ಷಗಳಿಗೊಮ್ಮೆ ಮಾತ್ರ ನಡೆಯುವ ಮಹಾ ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಉತ್ಸವ ಎಂದು ಕರೆಯಲ್ಪಡುತ್ತದೆ.

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ದೇಶಾದ್ಯಂತ ಮತ್ತು ವಿದೇಶಗಳಿಂದ ಭಕ್ತರು, ನಾಗಾ ಸಂತರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಹಾ ಕುಂಭಮೇಳಕ್ಕೆ ಬರುವ ನಾಗಾ ಸಂತರು ಎಲ್ಲರ ಗಮನ ಸೆಳೆಯುತ್ತಾರೆ. ಪ್ರಯಾಗ್‌ರಾಜ್‌ನಲ್ಲಿ ತೀವ್ರ ಚಳಿಯಿಂದಾಗಿ ಸಾಮಾನ್ಯ ಭಕ್ತರು ಸ್ನಾನ ಮಾಡುವಾಗ ನಡುಗುತ್ತಿರುತ್ತಾರೆ. ಆದ್ರೆ ನಾಗ ಸಂತರು ಯಾವುದೇ ಚಳಿಗೆ ನಡುಗದೇ ಸ್ನಾನ ಮಾಡುತ್ತಾರೆ. ಅಷ್ಟೇ ಅಲ್ಲ ಈ ಸಾಧುಗಳು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲೂ ಹಿಮಾಲಯದಲ್ಲಿ ತಪಸ್ಸು ಮಾಡುತ್ತಿರುತ್ತಾರೆ.

ಯಾವುದೇ ಬಟ್ಟೆ ಧರಿಸದೆ ಕೊರೆಯುವ ಚಳಿಯನ್ನು ಇವರು ಹೇಗೆ ತಡೆದುಕೊಳ್ಳಲು ಸಾಧ್ಯವೆಂಬುದು ಎಲ್ಲರಲ್ಲೂ ಕಾಡುವ ಪ್ರಶ್ನೆ. ಕುಂಭಮೇಳದ ಸಮಯದಲ್ಲಿ ಮಾತ್ರ ಇವರು ಜನವಸತಿ ಪ್ರದೇಶಗಳಿಗೆ ಬಂದು ನಂತರ ಹಿಮಾಲಯಕ್ಕೆ ಹಿಂತಿರುಗುತ್ತಾರೆ.

Since when did Nagas exist?:

ಶಂಕರಾಚಾರ್ಯರು ನಾಲ್ಕು ಮಠಗಳನ್ನು ಸ್ಥಾಪಿಸಿದ ನಂತರ ಅವುಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ ನಾಗಾ ಸಂತರ ಗುಂಪುಗಳನ್ನು ರಚಿಸಿದರು ಎಂದು ಹೇಳಲಾಗುತ್ತದೆ. ಮೊದಲ ದಿನದಿಂದಲೇ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕೆ ಹೆಚ್ಚಿನ ಸಂಖ್ಯೆಯ ನಾಗಾ ಸಂತರು, ಅಘೋರಿಗಳು ಮತ್ತು ಸನ್ಯಾಸಿಗಳು ಹಾಜರಾಗಿದ್ದರು. ಬಟ್ಟೆ ಇಲ್ಲದೆ ಕೇವಲ ನಿಲುವಂಗಿಯನ್ನು ಧರಿಸುವ ಇವರು ತೀವ್ರ ಚಳಿಯನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೇಗೆ ಹೊಂದಿದ್ದಾರೆಂದು ಭಕ್ತರು ಆಶ್ಚರ್ಯಚಕಿತರಾಗುತ್ತಾರೆ.

ನಾಗಾ ಸಾಧು ಆಗುವುದು ಒಂದು ಸವಾಲಿನ ಆಧ್ಯಾತ್ಮಿಕ ಪ್ರಯಾಣ. ಇತರ ಸಂತರಿಗಿಂತ ಭಿನ್ನವಾಗಿ, ನಾಗಾ ಸಂತರು ‘ಹಠಯಾಗ’ ಅಭ್ಯಾಸ ಮಾಡುತ್ತಾರೆ. ಈ ಬಾರಿ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದ ಕೆಲವು ನಾಗಾ ಸಂತರು ತಮ್ಮ ವಿಶಿಷ್ಟತೆಯಿಂದ ಎಲ್ಲರ ಗಮನ ಸೆಳೆದರು.

ಓರ್ವ ನಾಗಾ ಸಂತ ಹಲವು ವರ್ಷಗಳ ಕಾಲ 1.25 ಲಕ್ಷ ರುದ್ರಾಕ್ಷಿಗಳನ್ನು ಧರಿಸಿದ್ದು, ಆದರೆ ಇನ್ನೋರ್ವ ಸಂತ ಒಂದು ಕೈಯನ್ನು ವರ್ಷಗಳ ಕಾಲ ಮೇಲಕ್ಕೆತ್ತಿ ಹಿಡಿದಿರುವುದು… ನಾಗಾ ಸಂತರು ಎಷ್ಟು ಸಮರ್ಪಿತರು ಎಂಬುದಕ್ಕೆ ಇದು ಒಂದು ಉತ್ತಮ ಸಾಕ್ಷಿಯಾಗಿದೆ.

This is why Naga Saints do not get cold!:

ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಸಹ, ಬಟ್ಟೆ ಧರಿಸದ ನಾಗಾ ಸಂತರು ಯಾವುದೇ ಅಸ್ವಸ್ಥತೆಯನ್ನು ಅನುಭವಿಸುವುದಿಲ್ಲ. ಇದು ವೈದ್ಯಕೀಯ ವಿಜ್ಞಾನಕ್ಕೆ ವಿರುದ್ಧವಾಗಿದ್ದರೂ ಸಹ ಸತ್ಯ! ವೈದ್ಯಕೀಯ ಅಧ್ಯಯನಗಳ ಪ್ರಕಾರ, ಮೈನಸ್ 20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸರಿಯಾದ ಬಟ್ಟೆ ಇಲ್ಲದೆ ಮನುಷ್ಯರು ಬದುಕುವುದು ಕಷ್ಟಸಾಧ್ಯ. ಆದರೆ ನಾಗಾ ಸಂತರು ತಮ್ಮ ರಹಸ್ಯ ಆಧ್ಯಾತ್ಮಿಕ ಅಭ್ಯಾಸಗಳಿಂದ ಮೈಕೊರೆಯುವ ಚಳಿಯಲ್ಲಿಯೂ ಬದುಕುವ ಸಾಮರ್ಥ್ಯ ಕರಗತ ಮಾಡಿಕೊಂಡಿದ್ದಾರೆ. ಇನ್ನು ಎಲ್ಲಾ ಋತುಗಳಲ್ಲಿ ಬದುಕಲು ನಾಗಾ ಸಾಧುಗಳು ಈ 3 ರೀತಿಯ ಸಾಧನೆಗಳನ್ನು ಮಾಡುತ್ತಾರೆ.

Fire Device:

ನಾಗಾ ಸಂತರು ತಮ್ಮ ದೇಹದಲ್ಲಿನ ಅಗ್ನಿ ಮೂಲವನ್ನು ಪ್ರೇರೇಪಿಸಲು ಒಂದು ರೀತಿಯ ಧ್ಯಾನವನ್ನು ಅಭ್ಯಾಸ ಮಾಡುತ್ತಾರೆ. ಈ ಆಂತರಿಕ ಶಾಖವು ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ಅವರ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.

Pulse detection:

ನಾಗಾಸಾಧುಗಳು ಪ್ರಾಣಾಯಾಮದ ಮೂಲಕ ತಮ್ಮ ದೇಹದಲ್ಲಿ ಗಾಳಿಯ ಹರಿವನ್ನು ಸಮತೋಲನಗೊಳಿಸುತ್ತಾರೆ. ಇದು ದೇಹದ ಉಷ್ಣತೆಯು ಎಲ್ಲಾ ಸಮಯದಲ್ಲೂ ಸ್ಥಿರವಾಗಿ ಮತ್ತು ಬೆಚ್ಚಗಿರುವುದನ್ನು ಖಚಿತಪಡಿಸುತ್ತದೆ.

Mantra Chanting:

ನಿರಂತರವಾಗಿ ಮಂತ್ರಗಳನ್ನು ಪಠಿಸುವ ಮೂಲಕ ತಮ್ಮ ದೇಹದಲ್ಲಿ ದೈವಿಕ ಸಕಾರಾತ್ಮಕ ಶಕ್ತಿಯನ್ನು ಸೃಜಿಸುತ್ತಾರೆ. ಇದು ದೇಹದಲ್ಲಿ ಶಾಖ ಉತ್ಪಾದಿಸುತ್ತದೆ ಮತ್ತು ಶೀತ ತಾಪಮಾನವನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ.

Vibhuti Yaga:

ನಾಗಾ ಸಂತರು ತಮ್ಮ ದೇಹಕ್ಕೆ ಹಚ್ಚಿಕೊಳ್ಳುವ ವಿಭೂತಿಯಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಿವೆ. ಅವು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತವೆ ಮತ್ತು ಶೀತದಿಂದ ರಕ್ಷಿಸುತ್ತವೆ. ಇದರರ್ಥ ವಿಭೂತಿ ಇನ್ಸುಲೇಟಿಂಗ್​ ಪದರಾಗಿ ಕೆಲಸಮಾಡುತ್ತದೆ.

ಮೇಲಿನ ವಿವರಗಳನ್ನು ಕೆಲವು ತಜ್ಞರು ಮತ್ತು ವಿವಿಧ ವಿಜ್ಞಾನಗಳು ಒದಗಿಸಿದ ಮಾಹಿತಿಯ ಆಧಾರದ ಮೇಲೆ ಮಾತ್ರ ಒದಗಿಸಲಾಗಿದೆ. ಇವೆಲ್ಲವೂ ಆಧುನಿಕ ವೈಜ್ಞಾನಿಕ ಪುರಾವೆಗಳನ್ನು ಹೊಂದಿಲ್ಲದಿರಬಹುದು ಎಂಬುದನ್ನು ಓದುಗರು ಗಮನಿಸಬೇಕು. ನೀವು ಇದನ್ನು ಎಷ್ಟರ ಮಟ್ಟಿಗೆ ನಂಬುತ್ತೀರಿ ಎಂಬುದು ಸಂಪೂರ್ಣವಾಗಿ ವೈಯಕ್ತಿಕ ವಿಷಯ.

ಇದನ್ನು ಓದಿರಿ : ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

NARGIS FAKHRI MARRIAGE:ವರ ಟೋನಿ ಬಗ್ಗೆ ಇಲ್ಲಿದೆ ಮಾಹಿತಿ

  Nargis marriage news: ಸೂಪರ್​ ಹಿಟ್​ ರಾಕ್‌ಸ್ಟಾರ್, ಮೆ ತೇರಾ ಹೀರೋ ಮತ್ತು ಹೌಸ್‌ಫುಲ್ 3 ಚಿತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis...

THREE BUS EXPLOSION IN ISRAEL:ಉಗ್ರರ ಕೃತ್ಯದ ಶಂಕೆ, ವ್ಯಗ್ರಗೊಂಡ ಇಸ್ರೇಲ್

Bat Yam News: ಒಂದೂವರೆ ವರ್ಷಗಳ ಕಾಲ ನಡೆದ ಯುದ್ದದ ಬಳಿಕ ಕದನ ವಿರಾಮಕ್ಕೆ ಹಮಾಸ್​, ISRAEL​ ಒಪ್ಪಿದ್ದು, ಇದರ ಭಾಗವಾಗಿ ಹಸ್ತಾಂತರ ಪ್ರಕ್ರಿಯೆ ಕೂಡ...

NEW BAT CORONAVIRUS: ಕೋವಿಡ್ ರೀತಿಯ ಮತ್ತೊಂದು ವೈರಸ್ ಬಾವಲಿಯಲ್ಲಿ ಪತ್ತೆ

  Beijing, China News: ಇದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಚೀನಾದ ಬ್ಯಾಟ್​ ವುಮೆನ್​ ಎಂದೇ ಖ್ಯಾತಿಯಾಗಿರುವ ವೈರಾಲಾಜಿಸ್ಟ್​​ ಶಿ ಜೆಂಗಾಲಿ ಅಧ್ಯಯನ ನಡೆಸಿದ್ದಾರೆ....

CONTENT CREATORS KUMBH JOURNEY:1500 ಕಿ.ಮೀ ದೂರದ ಪ್ರಯಾಗ್ರಾಜ್ಗೆ ನಯಾಪೈಸೆ ಖರ್ಚಿಲ್ಲದೆ ತಲುಪಿದ ಕಂಟೆಂಟ್ ಕ್ರಿಯೇಟರ್!

New Delhi News: ಮಹಾರಾಷ್ಟ್ರದ ಕಂಟೆಂಟ್​ ಕ್ರಿಯೇಟರ್​ ದಿವ್ಯಾ ಫೋಫಾನಿ ಕುಂಭಮೇಳಕ್ಕೆ ತಾವು ಮುಂಬೈನಿಂದ ಬಂದ ರೀತಿ ಮತ್ತು ಹಾದಿಯ ನಡುವೆ ಜನರು ನೀಡಿದ ನೆರವನ್ನು...