spot_img
spot_img

INDIA ISRAEL MAITRI PROJECT : ಭಾರತದ ಪ್ರಭಾವಿಗಳ ಭೇಟಿಯೊಂದಿಗೆ ಆರಂಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Jerusalem (Israel) News:

ಇಸ್ರೇಲಿ ಸಮಾಜದ ಬಗೆಗಿನ ಭಾರತೀಯರ ಅಭಿಪ್ರಾಯ ಮತ್ತು ವಾಸ್ತವತೆಯನ್ನು ಅರಿಯಲು, ತಿಳಿವಳಿಕೆಯನ್ನು ಉತ್ತೇಜಿಸಲು ಈ ಯೋಜನೆ ಕೈಗೊಳ್ಳಲಾಗಿದೆ. ಇಸ್ರೇಲ್​ನ​ ಸರ್ಕಾರೇತರ ಸಂಸ್ಥೆ ಶರಕಾ ಮೂಲಕ ಭಾರತದ ತಂಡವೊಂದು INDIA ISRAEL MAITRI PROJECT ಯಡಿ ಇಸ್ರೇಲ್​ಗೆ ತೆರಳಿ ಅಲ್ಲಿನ ವಾಸ್ತವತೆಯ ಬಗ್ಗೆ ಮಾಹಿತಿ ಸಂಗ್ರಹಿಸಿದೆ.

ಈ ಮೂಲಕ INDIA ISRAEL MAITRI PROJECT ಸಂಬಂಧವು ಮತ್ತಷ್ಟು ಬಲಗೊಳ್ಳಲು ಈ ಭೇಟಿ ಸಹಾಯವಾಗಲಿದೆ. ಭಾರತ -ಇಸ್ರೇಲ್​ ಮೈತ್ರಿ ಯೋಜನೆಯಡಿಯಲ್ಲಿ ಭಾರತದಿಂದ ಮೊದಲ ಗಣ್ಯ ವ್ಯಕ್ತಿಗಳ ನಿಯೋಗ ಇಸ್ರೇಲ್​ನ​ ಸರ್ಕಾರೇತರ ಸಂಸ್ಥೆ ಶರಕಾ ಮೂಲಕ ಈ ವಾರದ ಮೊದಲಲ್ಲಿ ಇಸ್ರೇಲ್​ಗೆ ಕರೆಸಿಕೊಂಡಿತ್ತು.

ಈ ಬಗ್ಗೆ ಶರಕಾದ ಅಧ್ಯಕ್ಷ ಮತ್ತು ಸಹ-ಸಂಸ್ಥಾಪಕ ಅಮಿತ್ ಡೆರಿ ಭಾರತದ ಗಣರಾಜ್ಯೋತ್ಸವದ ಭೇಟಿಯ ಆರಂಭದಲ್ಲಿ ಹೇಳಿದ್ದರು.ಭಾರತೀಯ ಗಣ್ಯರ ನಿಯೋಗಕ್ಕೆ ಒಟ್ಟು ಆರು ದಿನಗಳ ಭೇಟಿ ಇದಾಗಿದ್ದು, ಜನವರಿ 31ರಂದು ಮುಕ್ತಾಯಗೊಂಡಿದೆ. INDIA ISRAEL MAITRI PROJECT ಈ ಪ್ರವಾಸದ ವೇಳೆ ಭಾರತದ ನಿಯೋಗವು ಜೆರುಸಲೆಮ್​ನ ಐತಿಹಾಸಿಕ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದೆ.

ತಜ್ಞರು ಮತ್ತು ವೈವಿಧ್ಯಮಯ ಸಮುದಾಯ ನಾಯಕರನ್ನು ಭೇಟಿ ಮಾಡಿದ್ದು, ಇಸ್ರೇಲಿ ಅರಬ್ಬರೊಂದಿಗೆ ಸಂವಾದ ನಡೆಸಿದೆ. ಮತ್ತು ಸ್ಥಳೀಯ ಶಿಕ್ಷಣ ತಜ್ಞರು ಮತ್ತು ಸಾರ್ವಜನಿಕ ನೀತಿ ಬುದ್ಧಿಜೀವಿಗಳೊಂದಿಗೆ ಸಂಪರ್ಕ ಸಾಧಿಸಿದೆ. ಅಕ್ಟೋಬರ್ 7, 2023 ರಂದು INDIA ISRAEL MAITRI PROJECT ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪ್ರಭಾವಿತವಾದ ಸ್ಥಳಗಳಲ್ಲೂ ಸಹ ಅವರು ಪ್ರವಾಸ ಮಾಡಿದ್ದಾರೆ.

ಈ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದರು ಮತ್ತು 251 ಜನರನ್ನು ಹಮಾಸ್​ ಒತ್ತೆಯಾಳುಗಳಾಗಿ ಇಟ್ಟುಕೊಂಡಿದೆ. ಅದರಲ್ಲಿ ಈಗ ಕೆಲವರನ್ನು ಬಿಡುಗಡೆ ಮಾಡಿದೆ. INDIA ISRAEL MAITRI PROJECT “ಈ ಭಾರತೀಯ ನಿಯೋಗವನ್ನು ಆತಿಥ್ಯ ವಹಿಸಲು ನಮಗೆ ಗೌರವವಿದೆ. ಇಸ್ರೇಲ್​ ಭೇಟಿಯಿಂದ ಭಾರತೀಯರು ಪಡೆಯುವ ಜ್ಞಾನ ಮತ್ತು ಅನುಭವಗಳು ಭಾರತ ಮತ್ತು ಇಸ್ರೇಲ್​ ಸಂಬಂಧಗಳ ಭವಿಷ್ಯಕ್ಕೆ ಅಡಿಪಾಯ ಹಾಕುತ್ತವೆ.

ಭಾರತದಿಂದ ಬಂದಿರುವ ಮುಸ್ಲಿಂ, ಹಿಂದೂ ಮತ್ತು ಕ್ರಿಶ್ಚಿಯನ್​ ನಾಯಕರ ನಿಯೋಗವನ್ನು ಇಸ್ರೇಲ್​ನಲ್ಲಿ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ಇಸ್ರೇಲ್​ ಮೇಲೆ ಭಾರತೀಯರು ಸಾಮಾನ್ಯ ಒಲವು ಹೊಂದಿದ್ದಾರೆ. ಅಲ್ಲದೇ ನಮ್ಮ ಸಮಾಜವು ಕೂಡ ಭಾರತೀಯರೊಂದಿಗೆ ಪರಸ್ಪರ ಆಳವಾಗಿ ಪರಿಚಿತವಾಗಿಲ್ಲ. ಆದರೆ, ಈಗಿನ ಭಾರತ-ಇಸ್ರೇಲ್ ಮೈತ್ರಿ ಯೋಜನೆಯು ವಿಶ್ವದ ಅತಿದೊಡ್ಡ ಮುಸ್ಲಿಂ ಸಮುದಾಯ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವದೊಂದಿಗೆ ಸಂಬಂಧವನ್ನು ನಿರ್ಮಿಸಲು ಅವಕಾಶವನ್ನು ಒದಗಿಸುತ್ತಿದೆ” ಎಂದಿದ್ದರು.

INDIA ISRAEL MAITRI PROJECT “ನಾನು ನೋವಾ ಉತ್ಸವ ಸ್ಥಳ ಮತ್ತು ಹಮಾಸ್ ಭಯೋತ್ಪಾದಕರು ನೂರಾರು ಅಮಾಯಕ ಇಸ್ರೇಲಿಗಳನ್ನು ಕೊಂದು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಿರ್ ಓಜ್ ಕಿಬ್ಬುಟ್ಜ್‌ಗೆ ಹೋಗಿದ್ದೆ. ಭಯೋತ್ಪಾದನೆ ಮತ್ತು ಅದರ ಪರಿಣಾಮಗಳನ್ನು ನಾನು ಎಂದಿಗೂ ಹತ್ತಿರದಿಂದ ನೋಡಿಲ್ಲ. ಒಬ್ಬ ಮುಸ್ಲಿಂ ಆಗಿ, ಅದು ನಮ್ಮ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವುದಕ್ಕೆ ನನಗೆ ನಾಚಿಕೆಯಾಗುತ್ತದೆ” ಎಂದು ಭಾರತದ ನಿಯೋಗದಲ್ಲಿದ್ದ ಸುಪ್ರೀಂ ಕೋರ್ಟ್ ವಕೀಲ ಮತ್ತು ರಾಷ್ಟ್ರ ಜಾಗರಣ್ ಅಭಿಯಾನದ ಸ್ಥಾಪಕ ಮತ್ತು ರಾಷ್ಟ್ರೀಯ ಸಂಚಾಲಕ ಸುಬುಹಿ ಖಾನ್ ಅನುಭವ ಹಂಚಿಕೊಂಡಿದ್ದಾರೆ.

ಇದನ್ನು ಓದಿರಿ : SACHIN TENDULKAR : ಸಚಿನ್ ತೆಂಡೂಲ್ಕರ್ಗೆ ಜೀವಮಾನ ಸಾಧನೆ ಪ್ರಶಸ್ತಿ ಗರಿ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

Aryan Khan News: ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ...