spot_img
spot_img

INDIA JAPAN MILITARY EXERCISE:ಮೌಂಟ್ ಫ್ಯೂಜಿಯಲ್ಲಿ ಫೆ.25ರಿಂದ ಭಾರತ-ಜಪಾನ್ ಜಂಟಿ ಸಮರಾಭ್ಯಾಸ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ವಿಶ್ವಸಂಸ್ಥೆಯ ಸೂಚನೆಯ ಅಡಿಯಲ್ಲಿ ಜಂಟಿ ನಗರ ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಉಭಯ ಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಈ ಸಮರಾಭ್ಯಾಸ ಹೊಂದಿದೆ ಎಂದು ರಕ್ಷಣಾ ಸಚಿವಾಲಯದ (ಸೇನೆ) ಐಎಚ್​ಕ್ಯೂನ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಮಹಾನಿರ್ದೇಶಕರು ಸಾಮಾಜಿಕ ಮಾಧ್ಯಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು JAPAN ನಡುವಿನ ‘ಧರ್ಮ ಗಾರ್ಡಿಯನ್’ ಆರನೇ ಆವೃತ್ತಿಯ ಜಂಟಿ ಸಮರಾಭ್ಯಾಸವು ಫೆಬ್ರವರಿ 25 ರಿಂದ ಮಾರ್ಚ್ 9 ರವರೆಗೆ JAPANನ ಮೌಂಟ್ ಫ್ಯೂಜಿಯಲ್ಲಿ ನಡೆಯಲಿದೆ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ.”2024 ರ ಅಕ್ಟೋಬರ್ 14 ರಿಂದ 17 ರವರೆಗೆ ಸೇನಾ ಮುಖ್ಯಸ್ಥರ (ಸಿಒಎಎಸ್) JAPAN ಭೇಟಿಯ ಸಮಯದಲ್ಲಿ ಸಾಧಿಸಲಾದ ಪ್ರಗತಿಯನ್ನು ಆಧರಿಸಿ, ಧರ್ಮ ಗಾರ್ಡಿಯನ್ 2025 ಸಮರಾಭ್ಯಾಸವು ಭಾರತ ಮತ್ತು JAPAN ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ” ಎಂದು ಅದು ಹೇಳಿದೆ.

Cyclone Exercise:‘ಸೈಕ್ಲೋನ್’ ಸಮರಾಭ್ಯಾಸವು ಭಾರತ ಮತ್ತು ಈಜಿಪ್ಟ್​ನಲ್ಲಿ ಪರ್ಯಾಯವಾಗಿ ನಡೆಸಲಾಗುವ ವಾರ್ಷಿಕ ಕಾರ್ಯಕ್ರಮವಾಗಿದೆ. ಈ ಹಿಂದೆ ಈ ಯೋಜನೆಯಡಿಯ ಸಮರಾಭ್ಯಾಸವು 2024 ರ ಜನವರಿಯಲ್ಲಿ ಈಜಿಪ್ಟ್​ನಲ್ಲಿ ನಡೆದಿತ್ತು” ಎಂದು ಅಧಿಕಾರಿ ಹೇಳಿದರು.

ಇದಕ್ಕೂ ಮುನ್ನ ಫೆಬ್ರವರಿ 11 ರಂದು ಭಾರತ ಮತ್ತು ಈಜಿಪ್ಟ್​ನ ವಿಶೇಷ ಪಡೆಗಳು ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್​ಗಳಲ್ಲಿ ‘ಸೈಕ್ಲೋನ್ 3’ ಸಮರಾಭ್ಯಾಸವನ್ನು ಪ್ರಾರಂಭಿಸಿವೆ. ಸಮರಾಭ್ಯಾಸ ಫೆಬ್ರವರಿ 23 ರಂದು ಕೊನೆಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ಕಾರ್ಯಾಚರಣೆ ತಂತ್ರಗಳ ಪರಸ್ಪರ ಕಾರ್ಯಸಾಧ್ಯತೆ, ಜಂಟಿ ಕಾರ್ಯಾಚರಣೆ ಮತ್ತು ಪರಸ್ಪರ ಮಾಹಿತಿ ವಿನಿಮಯವನ್ನು ಹೆಚ್ಚಿಸುವ ಮೂಲಕ ಉಭಯ ದೇಶಗಳ ನಡುವಿನ ಮಿಲಿಟರಿ ಸಂಬಂಧವನ್ನು ಉತ್ತೇಜಿಸುವ ಗುರಿಯನ್ನು ಈ ಸಮರಾಭ್ಯಾಸ ಹೊಂದಿದೆ ಎಂದು ಅಧಿಕಾರಿ ಹೇಳಿದರು.25 ಜನ ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ತುಕಡಿಯನ್ನು ಎರಡು ವಿಶೇಷ ಪಡೆಗಳ ಬೆಟಾಲಿಯನ್ ಗಳ ಸೈನಿಕರು ಪ್ರತಿನಿಧಿಸುತ್ತಿದ್ದಾರೆ.

25 ಸಿಬ್ಬಂದಿಯನ್ನು ಒಳಗೊಂಡ ಈಜಿಪ್ಟ್ ತುಕಡಿಯನ್ನು ವಿಶೇಷ ಪಡೆಗಳ ಗುಂಪು ಮತ್ತು ಈಜಿಪ್ಟ್ ವಿಶೇಷ ಪಡೆಗಳ ಕಾರ್ಯಪಡೆ ಪ್ರತಿನಿಧಿಸುತ್ತಿದೆ.ಮರುಭೂಮಿ ಮತ್ತು ಅರೆ ಮರುಭೂಮಿ ಭೂಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಯುದ್ಧತಂತ್ರದ ಅಭ್ಯಾಸಗಳನ್ನು ಪೂರ್ವಾಭ್ಯಾಸ ಮಾಡಲು 48 ಗಂಟೆಗಳ ಸುದೀರ್ಘ ಮೌಲ್ಯಮಾಪನದೊಂದಿಗೆ ಈ ಸಮರಾಭ್ಯಾಸವು ಕೊನೆಗೊಳ್ಳಲಿದೆ. ಈ ಸಮರಾಭ್ಯಾಸವು ಸ್ಥಳೀಯ ಮಿಲಿಟರಿ ಉಪಕರಣಗಳ ಪ್ರದರ್ಶನ ಮತ್ತು ಈಜಿಪ್ಟ್ ಕಡೆಯ ರಕ್ಷಣಾ ಉತ್ಪಾದನಾ ಉದ್ಯಮದ ಅವಲೋಕನವನ್ನು ಸಹ ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.

 

ಇದನ್ನು ಓದಿರಿ :A view of Bakkal village in Sersandwan Panchayat of Jammu and Kashmir

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KL RAHUL SACRIFICE:ಕನ್ನಡಿಗ ಕೆ.ಎಲ್.ರಾಹುಲ್ ತ್ಯಾಗಕ್ಕೆ ಫ್ಯಾನ್ಸ್ ಮೆಚ್ಚುಗೆ

KL Rahul: ಹೌದು, ಬಾಂಗ್ಲಾ ನೀಡಿದ್ದ 228 ರನ್​ಗಳ ಗುರಿ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆದಿದ್ದರೂ ಬಳಿಕ ರೋಹಿತ್​ ಶರ್ಮಾ (41), ವಿರಾಟ್​ ಕೊಹ್ಲಿ...

HUAWEI MATE XT TRI FOLD PHONE:ಇದರ ಬೆಲೆ 2 ಬುಲೆಟ್ ಬೈಕ್ಗಳಿಗೆ ಸಮ!

Huaveli Re-Launched Ultimate Design News: ಇತ್ತೀಚೆಗೆ ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ. ಆದ್ರೆ ಇದರ ಬೆಲೆ ಎರಡು ರಾಯಲ್​ ಎನ್​ಫೀಲ್ಡ್​ಗೆ ಸಮ. ರಾಯಲ್​ ಎನ್‌ಫೀಲ್ಡ್...

PAYTM SOLAR SOUND BOX:ಸೂರ್ಯನ ಬೆಳಕಿನಿಂದಲೇ ಚಾರ್ಜ್ ಆಗುತ್ತೆ ‘ಪೇಟಿಎಂ ಸೌಂಡ್ಬಾಕ್ಸ್’

Paytm Solar SoundBoss News: ಇತ್ತೀಚೆಗೆ PAYTMನ ಪೋಷಕ ಕಂಪನಿ 'ಒನ್97 ಕಮ್ಯುನಿಕೇಷನ್ಸ್' ಮತ್ತೊಂದು ವಿಷಯದೊಂದಿಗೆ ಸುದ್ದಿಯಲ್ಲಿದೆ. ವ್ಯಾಪಾರಿಗಳಿಗಾಗಿ ದೇಶದ ಮೊದಲ ಸೌರಶಕ್ತಿ ಚಾಲಿತ 'ಸೋಲಾರ್​...

UNSAFE MEDICINES:9 ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ಗುಂಡೂರಾವ್ ಪತ್ರ

Bangalore News: ಈ ಕುರಿತು ನಡ್ಡಾರಿಗೆ 9 MEDICINES ಕಂಪನಿಗಳ ಅಸುರಕ್ಷಿತ MEDICINES ವಿವರಗಳನ್ನು ಉಲ್ಲೇಖಿಸಿ ದಿನೇಶ್ ಗುಂಡೂರಾವ್ ಫೆ.20ರಂದು ಪತ್ರ ಬರೆದಿದ್ದಾರೆ.ವಿವಿಧ 9 MEDICINES...