spot_img
spot_img

ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವಿನ ಬಗ್ಗೆ ಪರಿಶೀಲನೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

“ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಬಗ್ಗೆ ಮತ್ತೆ ಪರಿಶೀಲನೆ ಮಾಡಲಾಗುತ್ತಿದೆ” ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

“ಹಿಂದೆಯೂ ಅನೇಕ ಸಲ ರಾತ್ರಿ ಸಂಚಾರಕ್ಕೆ ಅವಕಾಶ ಕೊಟ್ಟಿದ್ದಾರೆ. ಜನರು ಮತ್ತು ಪ್ರಾಣಿಗಳಿಗೆ ಸಮಸ್ಯೆ ಆಗುತ್ತೆ ಎನ್ನುವ ಎರಡು ದೃಷ್ಟಿಯಿಂದ ಸಂಚಾರ ನಿಷೇಧ ಮಾಡಲಾಯ್ತು. ಈಗ ಅದನ್ನು ಮತ್ತೆ ಪರಿಶೀಲನೆ ಮಾಡಲಾಗುತ್ತಿದೆ” ಎಂದರು ಸಚಿವ ಜಿ.ಪರಮೇಶ್ವರ್.
ಗೃಹಸಚಿವ ಜಿ.ಪರಮೇಶ್ವರ್ (ETV Bharat)

ನಾಗೇಂದ್ರ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಸಿಎಂ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿ, “ನಾಗೇಂದ್ರ ಅವರ ಪಾತ್ರ ವಾಲ್ಮೀಕಿ ಪ್ರಕರಣದಲ್ಲಿ ಏನೂ ಇಲ್ಲವೆಂದು ಕ್ಲೀನ್‌ಚಿಟ್ ಪಡೆದು ಹೊರಬಂದರೆ, ಸಂಪುಟ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಹಿಂದೆ ಕೆ.ಜೆ.ಜಾರ್ಜ್ ಪ್ರಕರಣ ಸೇರಿ ಅನೇಕ ಪ್ರಕರಣಗಳಲ್ಲಿ ಇಂಥದ್ದು ಆಗಿದೆ. ಸಂಪುಟಕ್ಕೆ ನಾಗೇಂದ್ರ ಸೇರ್ಪಡೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು” ಎಂದು ಹೇಳಿದರು.

ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡುತ್ತಾ, “ಸಚಿವ ಸಂಪುಟ ವಿಸ್ತರಣೆ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ಇದೆಲ್ಲ ಸಿಎಂ ಮತ್ತು ಹೈಕಮಾಂಡ್ ನಡುವೆ ನಡೆಯುವ ಚರ್ಚೆ. ಸಿಎಂ ದೆಹಲಿಗೆ ಹಿಂದೆ ಹೋಗಿದ್ದಾಗ, ಈ ವಿಚಾರ ಚರ್ಚೆಗೆ ಬಂದಿತ್ತು. ಡಿಸೆಂಬರ್​ಗೆ ಮಾಡಬಹುದು ಅಂತ ಆಗ ಊಹಿಸಲಾಗಿತ್ತು. ನಾವು ಇದಕ್ಕೆ ಉತ್ತರ ಕೊಡಲು ಬರಲ್ಲ” ಎಂದು ತಿಳಿಸಿದರು.

ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಪ್ರಸ್ತಾಪ ವಿಚಾರವಾಗಿ ಮಾತನಾಡಿ, “ಇದರಲ್ಲಿ ತಪ್ಪು ಗ್ರಹಿಕೆ ಆಗಿದೆ. ಕೆಲವು ಶಾಸಕರು, ಮುಖಂಡರು ಗುತ್ತಿಗೆ ಮೀಸಲು ಕೋರಿ ಸಿಎಂಗೆ ಮನವಿ ಪತ್ರ ಕೊಟ್ಟಿದ್ರು. ಸಿಎಂ ಅದನ್ನು ಅಲ್ಪಸಂಖ್ಯಾತ ಇಲಾಖೆಗೆ ಪರಿಶೀಲನೆಗೆ ಕಳಿಸಿದ್ರು. ಇಷ್ಟುಬಿಟ್ಟರೆ ಬೇರೇನೂ ಆಗಿಲ್ಲ. ಏನೇ ತೀರ್ಮಾನ ಆದರೂ ಸಚಿವ ಸಂಪುಟ ಸಭೆಯಲ್ಲೇ ತಗೋಬೇಕು. ಸಂಬಂಧಿಸಿದ ಇಲಾಖೆ ಸಂಪುಟ ಸಭೆಗೆ ಪ್ರಸ್ತಾವನೆ ತಂದು, ತೀರ್ಮಾನ ಆಗಿ ಸರ್ಕಾರಿ ಆದೇಶ ಆಗಬೇಕಾಗುತ್ತದೆ. ಪರಿಶೀಲನೆ ಮಾಡಿ ಅಂದಾಕ್ಷಣ ತೀರ್ಮಾನ ಆದಂತಲ್ಲ” ಎಂದು ಸ್ಪಷ್ಟಪಡಿಸಿದರು.

ದರ್ಶನ್ ಮಧ್ಯಂತರ ತಡೆ ತೆರವು ಕೋರಿ ಸುಪ್ರೀಂ ಕೋರ್ಟ್​ಗೆ‌ ಮೇಲ್ಮನವಿ ಸಲ್ಲಿಕೆ ವಿಳಂಬವಾಗಿರುವುದಕ್ಕೆ, “ಮೇಲ್ಮನವಿ ಸಲ್ಲಿಕೆಗೆ ವಿಳಂಬ ಆಗಿಲ್ಲ. ಯಾವ ದಿನಾಂಕದಲ್ಲಿ‌ ಕೇಳಿದ್ದಾರೆ, ಯಾವಾಗ ತೀರ್ಮಾನ ಮಾಡಬೇಕು ಅಂತ ಗೃಹ ಇಲಾಖೆ ಕಾರ್ಯದರ್ಶಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನೂ‌ ಕೂಡಾ ಅವರಿಗೆ ಮೇಲ್ಮನವಿಗೆ ಹೋಗುವುದಾದರೆ ಹೋಗಿ ಅಂತ ಹೇಳಿದ್ದೇನೆ. ಪ್ರೊಸೀಜರ್ ಅನುಸರಿಸಿಯೇ ಇಂಥ ಕೇಸ್​ಗಳಲ್ಲಿ ಮುಂದುವರೆಯಬೇಕು. ಕಾನೂನು ಇಲಾಖೆಯಿಂದ ಮಾಹಿತಿ ತೆಗೆದುಕೊಳ್ಳಬೇಕು, ಗೃಹ ಇಲಾಖೆ‌ ತೀರ್ಮಾನ ತೆಗೆದುಕೊಳ್ಳಬೇಕು, ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಬರಬೇಕು. ಇದೆಲ್ಲ ಆದ ನಂತರವೇ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ” ಎಂದರು.

ನಕ್ಸಲರು ಮತ್ತೆ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡಿ, “ನಾಲ್ವರೋ ಐವರೋ ನಕ್ಸಲರು ಕಾಣಿಸಿಕೊಂಡಿದ್ದಾರೆ ಅಂತ ಹೇಳಿದ್ದಾರೆ. ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ‌. ನಿನ್ನೆ ಎಲ್ಲ ವೆಪನ್‌ಗಳು ಸಿಕ್ಕಿವೆ” ಎಂದು ತಿಳಿಸಿದರು.

ಕೋವಿಡ್ ಅಕ್ರಮ ಕುರಿತು ಪ್ರಾಸಿಕ್ಯೂಷನ್‌ಗೆ ಅನುಮತಿ‌ ಕೊಡುವ ವಿಚಾರವಾಗಿ ಮಾತನಾಡಿ, “ಕೋವಿಡ್ ಕಾಲದಲ್ಲಿ ನಡೆದ ಅಕ್ರಮಗಳಿಗೆ ಬೇರೆ ಬೇರೆ ಆಯಾಮ ಇದೆ. ಬೆಡ್, ಔಷಧ, ಪಿಪಿಇ‌ ಕಿಟ್, ಟೆಸ್ಟ್ ಕಿಟ್ ಖರೀದಿ ವಿಚಾರಗಳಿವೆ. ಎಲ್ಲವನ್ನೂ ಸಂಪುಟ ಉಪಸಮಿತಿ ಅಧ್ಯಯನ ನಡೆಸಿ ಒಂದು ತೀರ್ಮಾನಕ್ಕೆ ಬರಲಿದೆ‌. ಉಪಸಮಿತಿಯ ತೀರ್ಮಾನವನ್ನು ಸಚಿವ ಸಂಪುಟ ಸಭೆಗೆ ಇಡುತ್ತೇವೆ. ನಾಳೆಯ ಸಂಪುಟ ಸಭೆಯಲ್ಲಿ ಇದರ ಚರ್ಚೆ ಆಗಲ್ಲ. ಇನ್ನೂ ನಾವು ಸಂಪುಟ ಉಪಸಮಿತಿ ಸಭೆಯನ್ನೇ ಸೇರಿಲ್ಲ. ಡಿಸಿಎಂ ಅವರೇ ಉಪಸಮಿತಿ ಅಧ್ಯಕ್ಷರು, ನಾವು ಸದಸ್ಯರು. ಇದರಲ್ಲಿ ಮೊದಲು ಚರ್ಚೆ ಆಗಬೇಕು, ನಂತರ ಸಂಪುಟ ಸಭೆಗೆ ಬರುವುದು” ಎಂದರು.

“ಪಿಪಿಇ ಕಿಟ್ ಅಕ್ರಮ ಬಗ್ಗೆ ತನಿಖೆಗೆ ಕೊಡಬೇಕು ಅಂತ ಮಾತಾಡಿದ ಕ್ಷಣ ತೀರ್ಮಾನ ಆಗಲ್ಲ. ಮೊದಲು ಸಂಪುಟ ಉಪಸಮಿತಿಯಲ್ಲಿ ಇದರ ಬಗ್ಗೆ ಪರಿಶೀಲನೆ ಆಗಬೇಕು. ನ್ಯಾ.ಡಿ’ಕುನ್ಹಾ ಅವರು ಅಕ್ರಮಗಳಿಗೆ ಪ್ರೂಫ್ ಇದೆ ಅಂತ ಹೇಳಿದ್ರೆ, ಅದರ ಬಗ್ಗೆ ಸಂಪುಟ ಉಪಸಮಿತಿ ಹಾಗೂ ಸಂಪುಟ ಸಭೆಗಳಲ್ಲಿ ಚರ್ಚೆ ಆಗಲಿದೆ” ಎಂದು ತಿಳಿಸಿದರು.

ಸರ್ಕಾರ ರಾಜ್ಯವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ ಎಂಬ ಅಶೋಕ್ ಆರೋಪ ಕುರಿತು ಪ್ರತಿಕ್ರಿಯಿಸಿ, “ಹಾಗೆ ಮಾತನಾಡುವುದು ಬಿಜೆಪಿಯವರ ಸಂಸ್ಕೃತಿಯನ್ನು ತೋರಿಸುತ್ತದೆ. ನಾವು ತುಷ್ಟೀಕರಣ ಮಾಡುತ್ತಿಲ್ಲ, ಅದರ ಅಗತ್ಯ ನಮಗೆ ಇಲ್ಲ. ಯಾವುದೇ ಸಮುದಾಯದವರು ಹಿಂದುಳಿದವರು, ಬಡವರು ಇದ್ದರೆ ಸರ್ಕಾರ ಸಹಾಯ ಮಾಡುವುದು ಕರ್ತವ್ಯ.

ಎಸ್ಸಿ ಎಸ್ಟಿಗಳಿಗೆ ಇದೇ ಕಾರಣಕ್ಕೆ ಮೀಸಲಾತಿ ಕೊಟ್ಟಿರುವುದು. ಮುಸ್ಲಿಮರಿಗೂ ಸರ್ಕಾರ ಕೆಲ ಕಾರ್ಯಕ್ರಮ ಕೊಟ್ಟರೆ ಅದು ತುಷ್ಟೀಕರಣ ಆಗುವುದಿಲ್ಲ. ಅದನ್ನು ಟೀಕೆ‌ ಮಾಡುವುದನ್ನು ಬಿಜೆಪಿ ಮೊದಲಿಂದಲೂ ಮಾಡಿಕೊಂಡು ಬಂದಿದೆ. ಇದೇನೂ ಹೊಸದಲ್ಲ ನಮಗೆ” ಎಂದರು.

ಒಳಮೀಸಲಾತಿ ಸಂಬಂಧ ಇನ್ನೂ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗ ರಚನೆ ಮಾಡದ ಕುರಿತು ಮಾತನಾಡಿ, “ಉಚುನಾವಣೆ ಮುಗಿದ ನಂತರ ತೀರ್ಮಾನ ಮಾಡುತ್ತೇವೆ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಸಂಪುಟ ಸಭೆಯಲ್ಲಿ ಆಯೋಗ ರಚನೆ ತೀರ್ಮಾನ ಆಗಿದೆ. ಉಪಚುನಾವಣೆ ಮುಗಿದ ನಂತರ ಯಾರ ನೇತೃತ್ವ ಅಂತ ತೀರ್ಮಾನ ಮಾಡುತ್ತಾರೆ.

ಚುನಾವಣೆ ವೇಳೆ ಈ ತೀರ್ಮಾನ ಮಾಡಿದರೆ ಚುನಾವಣಾ ಆಯೋಗವೇ ಆಕ್ಷೇಪ ಎತ್ತುತ್ತದೆ. ಇದು ಮುಂದೆ ಪಾಲಿಸಿ ಆಗುವ ವಿಚಾರ, ಹಾಗಾಗಿ ಎಲ್ಲವನ್ನೂ ಗಮನಿಸಿಯೇ ತೀರ್ಮಾನ ಮಾಡಲಾಗುತ್ತದೆ” ಎಂದರು

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...