spot_img
spot_img

ISRAEL RAIDS WEST BANK : ವೆಸ್ಟ್ಬ್ಯಾಂಕ್ನಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ತೀವ್ರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Jerusalem News:

ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಸ್ರೇಲಿ ಪಡೆಗಳು ಶಿಬಿರದಲ್ಲಿನ ಹಲವಾರು ಕುಟುಂಬಗಳನ್ನು ಮನೆಗಳಿಂದ ಹೊರಹಾಕಿ, ಅವುಗಳನ್ನು ಮಿಲಿಟರಿ ಹೊರಠಾಣೆಗಳಾಗಿ ಪರಿವರ್ತಿಸಿಕೊಂಡಿವೆ. ಆಕ್ರಮಿತ ISRAEL RAIDS WEST BANK ಭಾನುವಾರ ತಮ್ಮ ಸೇನಾ ಕಾರ್ಯಾಚರಣೆಯನ್ನು ವಿಸ್ತರಿಸಿದ್ದು, ನೂರ್ ಶಮ್ಸ್ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆಸಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ISRAEL RAIDS WEST BANK ಐಡಿಎಫ್, ಶಿನ್ ಬೆಟ್ ಭದ್ರತಾ ಸಂಸ್ಥೆ ಮತ್ತು ಗಡಿ ಪೊಲೀಸರ ದೊಡ್ಡ ಪಡೆಗಳು ನೂರ್ ಶಮ್ಸ್ ನಲ್ಲಿ ರಾತ್ರಿಯಿಡೀ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿವೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿಕೆಯಲ್ಲಿ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ISRAEL RAIDS WEST BANK ನಡೆಸಿರುವುದನ್ನು ದೃಢಪಡಿಸಿರುವ ತುಲ್ಕರೆಮ್ ಗವರ್ನರ್ ಅಬ್ದುಲ್ಲಾ ಕಾಮಿಲ್, ಈ ಪ್ರದೇಶದಲ್ಲಿ ನಡೆಯುತ್ತಿರುವ ಅಭೂತಪೂರ್ವ ಆಕ್ರಮಣವನ್ನು ತಡೆಗಟ್ಟಲು ಅಂತರರಾಷ್ಟ್ರೀಯ ಮಧ್ಯಪ್ರವೇಶಕ್ಕೆ ಕರೆ ನೀಡಿದರು.

ಈ ಮಿಲಿಟರಿ ದಾಳಿಯಲ್ಲಿ ದೊಡ್ಡ ಸಂಖ್ಯೆಯ ಇಸ್ರೇಲಿ ಪಡೆಗಳು ಭಾಗಿಯಾಗಿದ್ದು, ಬುಲ್ಡೋಜರ್​ಗಳ ಮೂಲಕ ಶಿಬಿರವನ್ನು ಪ್ರವೇಶಿಸಿ ಅದರ ಮೇಲೆ ದಿಗ್ಬಂಧನ ವಿಧಿಸಿವೆ ಎಂದು ಅವರು ಹೇಳಿದರು. ISRAEL RAIDS WEST BANK ಶಿಬಿರದ ಅಲ್-ಮಸ್ಲಾಖ್ ಬಡಾವಣೆಯ ಪ್ರವೇಶ ದ್ವಾರವನ್ನು ಬುಲ್ಡೋಜರ್​ಗಳು ನೆಲಸಮ ಮಾಡಲು ಪ್ರಾರಂಭಿಸಿದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇಸ್ರೇಲಿ ಬೆದರಿಕೆಯಿಂದಾಗಿ 150 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದು, ಸೈನಿಕರು ತಮ್ಮ ಮನೆಗಳನ್ನು ಮಿಲಿಟರಿ ಹೊರಠಾಣೆಗಳಾಗಿ ಪರಿವರ್ತಿಸಿದ್ದಾರೆ ಎಂದು ಶಿಬಿರದ ಸ್ಥಳೀಯ ಕಾರ್ಯಕರ್ತ ನಿಹಾದ್ ಶಾವಿಶ್ ಹೇಳಿದ್ದಾರೆ.

ಶಿಬಿರವನ್ನು ಈಗಾಗಲೇ ಇಸ್ರೇಲಿ ಸೈನ್ಯವು ಸುತ್ತುವರೆದಿದ್ದು, ಅದು ಪ್ರದೇಶದಾದ್ಯಂತ ಸ್ನೈಪರ್ಗಳನ್ನು ನಿಯೋಜಿಸಿದೆ ಎಂದು ಶಾವಿಶ್ ಹೇಳಿದರು. ಸ್ಥಳಾಂತರಗೊಂಡ ಕುಟುಂಬಗಳಿಗೆ ಕನಿಷ್ಠ ಎರಡು ವಾರಗಳವರೆಗೆ ಮರಳಲು ಅವಕಾಶ ನೀಡುವುದಿಲ್ಲ ಎಂದು ಸೇನೆ ಹೇಳಿದೆ ಎಂದು ಅವರು ತಿಳಿಸಿದರು. ಶಿಬಿರದಲ್ಲಿನ ವಿಧ್ವಂಸಕ ಚಟುವಟಿಕೆಗಳನ್ನು ತಡೆಗಟ್ಟಲು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ISRAEL RAIDS WEST BANK ವಾಯುವ್ಯ ಪಶ್ಚಿಮ ದಂಡೆಯ ತುಲ್ಕರ್ಮ್ ಗವರ್ನರೇಟ್​ನಲ್ಲಿರುವ ಈ ಶಿಬಿರವು ಇತ್ತೀಚಿನ ದಾಳಿಗಳ ಕೇಂದ್ರಬಿಂದುವಾಗಿದೆ. ತನ್ನ ಪಡೆಗಳು ಹಲವಾರು ಉಗ್ರರನ್ನು ಹೊಡೆದುರುಳಿಸಿವೆ ಮತ್ತು ಹಲವಾರು ವ್ಯಕ್ತಿಗಳನ್ನು ಬಂಧಿಸಿವೆ ಎಂದು ಮಿಲಿಟರಿ ಹೇಳಿದೆ.

ಶಿಬಿರದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡದಂತೆ ತುರ್ತು ವೈದ್ಯಕೀಯ ತಂಡಗಳನ್ನು ತಡೆಯಲಾಗುತ್ತಿದೆ, ಇದು ಮತ್ತಷ್ಟು ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಕಾಮಿಲ್ ಹೇಳಿದರು.

ಇದನ್ನು ಓದಿರಿ : Will BJP Govt In Delhi Continue With AAP Freebies? Here Is What Experts Say

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TALKS WITH FARMERS:ಸೌಹಾರ್ದಯುತವಾಗಿ ಕೊನೆಗೊಂಡ ಕೇಂದ್ರ ಸರ್ಕಾರ, ರೈತ ಸಂಘಟನೆಗಳ ಮಾತುಕತೆ

Chandigarh News: ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೌಹಾಣ್, "ಮುಂದಿನ ಸಭೆ ಮಾರ್ಚ್ 19ರಂದು ನಡೆಯಲಿದೆ" ಎಂದು ಹೇಳಿದರು. ಚೌಹಾಣ್ ಸೇರಿದಂತೆ ಕೇಂದ್ರ ವಾಣಿಜ್ಯ ಮತ್ತು...

MANN KI BAAT:ಅಂದು ಮಹಿಳೆಯರೇ ನಿರ್ವಹಿಸಲಿದ್ದಾರೆ ಪ್ರಧಾನಿಯ ಸೋಶಿಯಲ್ ಮೀಡಿಯಾ

New Delhi News: "ಮಹಿಳೆಯರ ಅದಮ್ಯ ಮನೋಭಾವವನ್ನು ನಾವು ಸಂಭ್ರಮಿಸೋಣ ಮತ್ತು ಗೌರವಿಸೋಣ" ಎಂದ ಅವರು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.ಮಾರ್ಚ್ 8...

INDIAN NATIONAL ANTHEM IN PAKISTAN:ಭಾರತ ತಂಡ ದುಬೈನಲ್ಲಿದ್ದರೂ ಪಾಕ್ ಮೈದಾನದಲ್ಲಿ ಮೊಳಗಿದ ರಾಷ್ಟ್ರಗೀತೆ!

Indian National Anthem in Pakistan News : ಈ ಪಂದ್ಯದಲ್ಲಿ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದು, PAKISTANದ ಗಡಾಫಿ ಮೈದಾನ ಆತಿಥ್ಯ...

MOHAMMED SHAMI DIET:90 ಕೆ.ಜಿ ಇದ್ರಂತೆ ಬೌಲರ್ ಮೊಹಮ್ಮದ್ ಶಮಿ, ತೂಕ ಇಳಿಸಿದ್ದು ಹೇಗೆ?

Dubai News: ತಾವು 34ರ ಪ್ರಾಯದಲ್ಲೂ ಫಿಟ್‌ ಆಗಿರುವುದು ಹೇಗೆ ಎಂಬುದನ್ನು ಅವರು ವಿವರಿಸಿದರು. ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ನವಜೋತ್ ಸಿಂಗ್ ಸಿಧು ಅವರೊಂದಿಗೆ...