spot_img
spot_img

JAIPUR LITERATURE FESTIVAL:ಅಕ್ಷತಾ ಮೂರ್ತಿ ಸ್ವಾರಸ್ಯಕರ ಚರ್ಚೆ.

spot_img
spot_img

Share post:

Jaipur News:

JAIPUR ಅಂತಾರಾಷ್ಟ್ರೀಯ ಸಾಹಿತ್ಯ ಉತ್ಸವದಲ್ಲಿ ಸುಧಾಮೂರ್ತಿ – ಅಕ್ಷತಾ ಮೂರ್ತಿ ನಡೆಸಿದ ಮಾತುಕತೆ ಎಲ್ಲರ ಗಮನ ಸೆಳೆಯಿತು.ಇದೇ ವೇಳೆ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕು ನಿರ್ವಹಣೆಯಲ್ಲಿ ನಾರಾಯಣ ಮೂರ್ತಿ ಅವರು ಬೆಂಬಲವಾಗಿ ನಿಂತಿದ್ದರು.

ಪ್ರತಿ ಯಶಸ್ವಿ ಮಹಿಳೆ ಹಿಂದೆ ಬುದ್ಧಿವಂತ ಪುರುಷನಿರುತ್ತಾನೆ. ನನ್ನ ಪತಿ ಸದಾ ನನಗೆ ಬೆಂಬಲವಾಗಿ ನಿಂತು ಮುನ್ನಡೆಯಲು ಸಹಾಯ ಮಾಡಿದರು ಎಂದರು.ರಾಜಸ್ಥಾನದ ಪಿಂಕ್​ ಸಿಟಿಯಲ್ಲಿ ನಡೆಯುತ್ತಿರುವ JAIPUR ಸಾಹಿತ್ಯ ಉತ್ಸವದಲ್ಲಿ ಸುಧಾಮೂರ್ತಿ ತಮ್ಮ ಮಗಳು ಅಕ್ಷತಾ ಮೂರ್ತಿಯೊಂದಿಗೆ ‘ಮೈ ಮದರ್​ ಮೈಸೆಲ್ಫ್​’ (ನಾನು, ನನ್ನ ತಾಯಿ) ಎಂಬ ವಿಚಾರ ಕುರಿತು ಸಂಭಾಷಣೆ ನಡೆಸಿ, ಗಮನ ಸೆಳೆದರು.

ವಿಶೇಷ ಎಂದರೆ, ಈ ವೇಳೆ ಸುಧಾಮೂರ್ತಿಯವರ ಅಳಿಯ, ಬ್ರಿಟನ್​ ಮಾಜಿ ಪ್ರಧಾನಿ ರಿಷಿ ಸುನಕ್​ ಮತ್ತು ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರು ವೇದಿಕೆಯ ಕೆಳಗೆ ಕೇಳುಗರ ಆಸನದ ಮೊದಲಿನ ಸಾಲಿನಲ್ಲಿ ಕಾಣಿಸಿಕೊಂಡರು.ಮಕ್ಕಳ ಬೆಳೆಸಲು ನಾನು ಉದ್ಯೋಗ ತೊರೆದೆ ಎಂದ ಸುಧಾ ಮೂರ್ತಿ, ಮಕ್ಕಳೊಂದಿಗೆ ಉತ್ತಮ ಸಮಯವನ್ನು ವಿನಿಯೋಗಿಸಿ ಎಂದು ಪೋಷಕರಿಗೆ ಸಲಹೆ ನೀಡಿದರು.

ಅಲ್ಲದೇ, ಅವರಿಗೆ ನೈತಿಕ ಮೌಲ್ಯಗಳ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು.ಮುಕ್ತವಾಗಿ ತಾಯಿಯೊಂದಿಗೆ ಸಂಭಾಷಣೆಗಿದ ಅಕ್ಷತಾ ಮೂರ್ತಿ, ಹೇಗೆ ನೀವು ಜೀವನ ಮತ್ತು ಕಾರ್ಯವನ್ನು ಸಮತೋಲನ ನಡೆಸಿದ್ರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸುಧಾಮೂರ್ತಿ, ನನ್ನ ತಂದೆ ವೈದ್ಯರಾಗಿದ್ದು, ಅವರಿಗೆ ಆಸ್ಪತ್ರೆಯೇ ದೇಗುಲವಾಗಿತ್ತು.

ಕೆಲಸದ ಮೇಲಿನ ಶ್ರದ್ಧೆ ನನ್ನ ತಂದೆಯಿಂದ ಬಂದಿತು ಎಂದರು.ಇದಕ್ಕೆ ಉತ್ತರಿಸಿದ ಸುಧಾ ಮೂರ್ತಿ, ನಾನು ನನ್ನ ಮಕ್ಕಳು ಉತ್ತಮ ನಾಗರಿಕರಾಗಬೇಕು ಎಂದು ಬಯಸಿದ್ದೆ. ನೀನು ಕೂಡ ನಿನ್ನ ಮಕ್ಕಳು ಮತ್ತು ಪತಿ ನಿನ್ನ ಬಗ್ಗೆ ಹೆಮ್ಮೆ ಪಡುವ ದಿನವನ್ನು ನೋಡುತ್ತಿಯ ಎಂದು ಹರಸಿದರು.

ಮಕ್ಕಳ ಬೆಳೆಸಲು ನಾನು ಉದ್ಯೋಗ ತೊರೆದೆ ಎಂದ ಸುಧಾ ಮೂರ್ತಿ, ಮಕ್ಕಳೊಂದಿಗೆ ಉತ್ತಮ ಸಮಯವನ್ನು ವಿನಿಯೋಗಿಸಿ ಎಂದು ಪೋಷಕರಿಗೆ ಸಲಹೆ ನೀಡಿದರು. ಅಲ್ಲದೇ, ಅವರಿಗೆ ನೈತಿಕ ಮೌಲ್ಯಗಳ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು.ಇದನ್ನು ಒಪ್ಪಿದ ಅಕ್ಷತಾ ಕೂಡ ಪೋಷಕರು ಏಕಕಾಲದಲ್ಲಿ ಎರಡನ್ನು ಒಟ್ಟಿಗೆ ಮಾಡಲು ಸಾಧ್ಯವಿಲ್ಲ.

ಪೋಷಕರು ಮಕ್ಕಳಿಗೆ ಆದ್ಯತೆ ನೀಡಬೇಕು ಎಂದ ಅವರು, ತಮಗೆ ಪಾಠ ಹೇಳಿ ಮಾರ್ಗ ಸೂಚಿಸಿದ ತಾಯಿಗೆ ಧನ್ಯವಾದ ತಿಳಿಸಿದರು. ನೀವು ಮತ್ತು ತಂದೆ ನನ್ನ ರೋಲ್​ ಮಾಡೆಲ್​. ಇಬ್ಬರು ಪರಸ್ಪರ ಬೆಂಬಲಿಸಿದ್ದಿರಿ ಎಂದು ಕೃತಜ್ಞತೆ ಸಲ್ಲಿಸಿದರು. ಈ ಸಂಭಾಷಣೆಯು ಬುದ್ದಿವಂತಿಕೆ, ಉತ್ಸಾಹಗಳಿಂದ ಕೂಡಿತ್ತು ಎಂದು ತಿಳಿಸಿದೆ.

ಕಾರ್ಯಕ್ರಮದ ಬಳಿಕ ಸುನಕ್​ ಸೇರಿದಂತೆ ನೆರೆದ ಸಭಿಕರಿಂದ ಚಪ್ಪಾಳೆಯ ಕರತಾಡನ ಕಂಡುಬಂತು. ರಾಜಸ್ಥಾನ ಮುಖ್ಯ ಕಾರ್ಯದರ್ಶಿ ಸುಂಧಾಶು ಪಂತ್​ ಕೂಡ ಸಭಿಕರ ಸ್ಥಾನದಲ್ಲಿದ್ದು, ಸುನಕ್ ಅವರನ್ನು ಭೇಟಿಯಾದರು.ತಾಯಿ ಮತ್ತು ಮಗಳ ನಡುವೆ ನಡೆದ ಈ ಸ್ವಾರಸ್ಯಕರ ಸಂಭಾಷಣೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಜೆಎಲ್​ಎಫ್​,JAIPURJAIPUR LITERATURE FESTIVAL: ಸಾಹಿತ್ಯ ಉತ್ಸವ 2025ರಲ್ಲಿ ಅಪರೂಪದ ತಾಯಿ ಮತ್ತು ಮಗಳ ನಡುವಿನ ಚರ್ಚೆಯಲ್ಲಿ ಇಬ್ಬರು ಮಹಿಳೆಯರು ತಮ್ಮ ಜೀವನ, ತಾವು ನಡೆಸಿದ ಆಯ್ಕೆ, ತೆಗೆದುಕೊಂಡ ಮಾರ್ಗದ ಕುರಿತು ಚರ್ಚಿಸಿದರು.

 

ಇದನ್ನು ಓದಿರಿ :CONCUSSION SUBSTITUTE:’ಕನ್ಕ್ಯುಶನ್ ಸಬ್’ ಆಗಿ ಬೌಲ್ ಮಾಡಿದ ಹರ್ಷಿತ್ ರಾಣಾ:

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...