spot_img
spot_img

₹2025ಕ್ಕೆ ಜಿಯೋ ಆಫರ್‌.. ನ್ಯೂ ಇಯರ್ ವೆಲ್‌ಕಮ್ ಪ್ಲಾನ್ ಬಿಡುಗಡೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ರಿಲಯನ್ಸ್ ಜಿಯೋ ಹೊಸ ವರ್ಷವನ್ನು ಸ್ವಾಗತಿಸಲು ತನ್ನ ಗ್ರಾಹಕರಿಗೆ ‘ನ್ಯೂ ಇಯರ್ ವೆಲ್‌ಕಮ್ ಪ್ಲಾನ್ -2025’ ಬಿಡುಗಡೆ ಮಾಡಿದೆ. ಈ ಯೋಜನೆಯ ಬೆಲೆ ₹2025 ನಿಗದಿ ಪಡಿಸಲಾಗಿದೆ.

ದೀರ್ಘಾವಧಿಯ ಯೋಜನೆ ಇದಾಗಿದ್ದು, ಅನಿಯಮಿತ 5ಜಿ ಡೇಟಾ, ಉಚಿತ SMS ಮತ್ತು 200 ದಿನಗಳ‌ ಅನಿಯಮಿತ 5ಜಿ ಡೇಟಾ, ವಾಯ್ಸ್, ಎಸ್‌ಎಂಎಸ್ ಜೊತೆಗೆ ₹2,150ರ ಮೌಲ್ಯದ ಕೂಪನ್ ಸಹ ಸಿಗಲಿದೆ.

ಹೊಸ ವರ್ಷದ ಈ ಪ್ಲಾನ್ ಜಿಯೋದ ಹಾಲಿ ಮತ್ತು ಹೊಸ ಗ್ರಾಹಕರಿಗೂ ಲಭ್ಯ. 2024ರ ಡಿಸೆಂಬರ್ 11ರಿಂದ 2025ರ ಜನವರಿ 11ರವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ‌. ಮೈ ಜಿಯೋ ಆ್ಯಪ್, ಜಿಯೋದ ಅಧಿಕೃತ ವೆಬ್‌ಸೈಟ್‌ ಅಥವಾ ಅಧಿಕೃತ ರಿಟೇಲರ್ ಮೂಲಕ ರೀಚಾರ್ಜ್ ಮಾಡಬಹುದು.

ಯೋಜನೆ‌ಯ ವಿವರ
ಅನಿಯಮಿತ 5ಜಿ ಡೇಟಾ:
* 500 ಜಿಬಿಯಷ್ಟು 5 ಜಿ ಡೇಟಾ (ದಿನಕ್ಕೆ 2.5 ಜಿಬಿಯಷ್ಟು)
* ಅನಿಯಮಿತ ಕರೆ ಮತ್ತು ಎಸ್‌ಎಂಎಸ್ ಸೇವೆ
* ₹2,150ರ ಮೌಲ್ಯದ ಪಾರ್ಟ್ನರ್ ಕೂಪನ್
ಜಿಯೋದ ₹349ರ ಪ್ಲಾನ್‌ 200 ದಿನಗಳಿಗೆ ₹2,493ರಷ್ಟು ಆಗುತ್ತದೆ. ಇದಕ್ಕೆ ಹೋಲಿಸಿದರೆ ಈ ಹೊಸ ಪ್ಲಾನ್‌ನಲ್ಲಿ ₹468ರಷ್ಟು ಉಳಿತಾಯ ಆಗಲಿದೆ.

ಪಾರ್ಟನರ್ ಕೂಪನ್:
* ಅಜಿಯೋ ಖರೀದಿಗೆ ₹2500 ಅಥವಾ ಹೆಚ್ಚಿನ ಮೊತ್ತದ ಖರೀದಿಸಿದರೆ ₹500ರ ವಿನಾಯಿತಿ ಸಿಗಲಿದೆ, ಲಿಂಕ್ ಬಳಸಿ ರಿಡೀಮ್ ಮಾಡಬಹುದು.
* ಸ್ವಿಗ್ಗಿಯಲ್ಲಿ ₹499ರ ಮೇಲಿನ‌ ಖರೀದಿಗೆ ₹150 ವಿನಾಯಿತಿ.
* EaseMyTrip.com ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಫ್ಲೈಟ್ ಟಿಕೆಟ್ ಬುಕಿಂಗ್ ಮಾಡಿದರೆ ₹150 ವಿನಾಯಿತಿ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...