Srinagar News:
ಚಳಿಗಾಲದಲ್ಲಿ ಏರಿಕೆಯಾಗುತ್ತಿರುವ ತಾಪಮಾನ ಇಲ್ಲಿನ ಪ್ರಕೃತಿ ಮೇಲೆ ಪರಿಣಾಮ ಬೀರುತ್ತಿದೆ. ಇದು ಎಂದಿಗೂ ಉತ್ತಮ ಸೂಚನೆ ಅಲ್ಲ. ಅವಧಿ ಪೂರ್ವಕವಾಗಿ ಈ ರೀತಿ ಹೂವು ಅರಳಿರುವುದು ಉತ್ತಮ ಪರಿಸ್ಥಿತಿಯ ಲಕ್ಷಣವಲ್ಲ. ಇವು ವಸಂತ ಕಾಲದ ಹೂವಾಗಿದೆ. ಆದರೆ, ಇದೀಗ ನಾವು ಚಳಿಗಾಲದಲ್ಲಿಯೇ ತಾಪಮಾನ ಏರಿಕೆಗೆ ಸಾಕ್ಷಿಯಾಗಿದ್ದರ ಪರಿಣಾಮವಾಗಿ ಅಕಾಲಿಕವಾಗಿ ಹೂ ಅರಳಿದೆ.
KASHMIRS EARLY BLOOM ಇದು ಜೀವವೈವಿಧ್ಯತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಶ್ಮೀರ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರಜ್ಞ ಅಖ್ತಾರ್ ಎಚ್ ಮಲ್ಲಿಕ್ ತಿಳಿಸಿದ್ದಾರೆ.KASHMIRS EARLY BLOOMಸಾಂಪ್ರಾದಾಯಿಕ ಮತ್ತು ಚಿಗುರಿನ ದಾಖಲೆ ಪ್ರಕಾರ ಹೂವುಗಳು ದಳಗಳು ನಗಲಾರಂಭಿಸುವುದು ಫೆಬ್ರವರಿಯಲ್ಲಿ. ಆದರೆ, ಈ ವರ್ಷ ಈ ಹೂವುಗಳು ಜನವರಿಯಲ್ಲಿ ಶುಭ್ರ ನೀಲಿ ಆಕಾಶದಲ್ಲಿ ಅವಧಿ ಪೂರ್ವವಾಗಿ ಅರಳಿದೆ.
KASHMIRS EARLY BLOOM ಕಣಿವೆ ರಾಜ್ಯದಲ್ಲಿ ಗುಲ್ – ಇ – ತೂರ್ (ಸ್ಟೆರ್ನಬೆರ್ಗಿಯಾ ವರ್ನಲಿಸಾ) ಮತ್ತು ವಿರೆಕುಮ್ (ಕೊಲ್ಚಿಕಮ್ ಲ್ಯುಟೆಯಮ್) ಎಂಬ ಹಳದಿ ಹೂಗಳು ಅರಳುವುದು ವಸಂತ ಋತು ಆಗಮನದ ಚಿಹ್ನೆಯಾಗಿದೆ. ಶ್ರೀನಗರದಲ್ಲಿನ ಭಾರತೀಯ ಹವಾಮಾನ ಇಲಾಖೆ ಕೇಂದ್ರದ ಪ್ರಕಾರ, ಸಾಮಾನ್ಯಕ್ಕಿಂತ ಜನವರಿಯಲ್ಲಿ 8 ಡಿಗ್ರಿ ತಾಪಮಾನ ಹೆಚ್ಚಿದ್ದು, ಜನವರಿ ಮಧ್ಯದಲ್ಲಿ ಗರಿಷ್ಠ ತಾಪಮಾನ 15 ಡಿಗ್ರಿ ದಾಖಲಾಗಿದೆ.ಈ ಸೂಚನೆ ಕೇವಲ ಹೂವಿಗಳಿಗೆ ಸೀಮಿತವಾಗಿಲ್ಲ.
ಕಾಶ್ಮೀರದಲ್ಲಿ ತೀವ್ರ ಚಳಿಗಾಲವಾದ ಡಿಸೆಂಬರ್ – ಜನವರಿಯಲ್ಲಿ ಹೆಚ್ಚು ಹಿಮ, ಮಳೆ ಮತ್ತು ಚಳಿಯಾಗುತ್ತದೆ. ಆದರೆ, ಇದೀಗ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ದೀರ್ಘಕಾಲದ ಶುಷ್ಕತೆ ಹೆಚ್ಚಿದೆ.
Lack of rain:
ಶ್ರೀನಗರ ಹವಾಮಾನ ಕೇಂದ್ರ ನಿರ್ದೇಶಕ ಮುಖ್ತರ್ ಅಹಮದ್ ಹೇಳುವಂತೆ, ದೀರ್ಘಕಾಲದ ಶುಷ್ಕತೆ ಚಿಲ್ಲೈ ಕಾಲನ್ನಲ್ಲಿ ತಾಪಮಾನದ ಏರಿಕೆಗೆ ಕಾರಣವಾಗಿದೆ. ಡಿಸೆಂಬರ್ 21ರಿಂದ ಜನವರಿ 31ರವರೆಗೆ 40 ದಿನದ ಅತ್ಯಂತ ಚಳಿ ದಿನದಲ್ಲಿ ಬೆಳಗಿನ ಹೊತ್ತು ತಾಪಮಾನದಲ್ಲಿ ಗಣನೀಯ ಏರಿಕೆ ಕಂಡಿದ್ದು,KASHMIRS EARLY BLOOM ಇದು ಈ ಪ್ರದೇಶದ ನೈಸರ್ಗಿಕ ಚಕ್ರಕ್ಕೆ ಅಡ್ಡಿಯುಂಟು ಮಾಡಿದೆ.
ಮಳೆಯ ಕೊರತೆಯೂ ಕಾಡಿದ್ದು, ಇದಕ್ಕೆ ವಿರುದ್ಧವಾಗಿ ದತ್ತಾಂಶದಲ್ಲಿ ತೋರಿಸಿದಂತೆ ಕಣಿವೆಯಲ್ಲಿ ವಸಂತಕಕಾಲಕ್ಕೆ ಮುನ್ನವೇ 25 ರಿಂದ 30ರಷ್ಟು ಮಾತ್ರ ಮಳೆ, ಹಿಮವಾಗಿದೆ. ಬೆಳಗಿನ ಹೊತ್ತು ತಾಪಮಾನವೂ ಎರಡಂಕಿ ದಾಖಲಾಗುತ್ತಿದೆ.ಶುಭ್ರ ಆಕಾಶ ಮತ್ತು ಶುಷ್ಕತೆ ತಾಪಮಾನದ ಏರಿಕೆಗೆ ಕಾರಣವಾಗಿದೆ.
ಇದು ಬೆಟ್ಟದ ಮೇಲೆ ಇರುವ ಹಿಮ ಬೇಗ ಕರಗಲು ಕಾರಣವಾಗಿದೆ. ಹಾಗೇ ಅವಧಿಪೂರ್ವವಾಗಿ KASHMIRS EARLY BLOOM ಮಾಡಿದೆ. ಹವಾಮಾನ ಕೇಂದ್ರದ ಮುನ್ಸೂಚನೆ ಅನುಸಾರ, ಜನವರಿ ಅಂತ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
70% damage to pollination:
ಇದು ಕೇವಲ ಹೂವಿಗೆ ಮಾತ್ರವಲ್ಲದೇ, ಬೇಸಿಗೆಗೆ ಬರುವ ಏಪ್ರಿಕಾಟ್, ಚೆರ್ರಿ, ಪ್ಲಮ್ನಂತಹ ಹಣ್ಣುಗಳ ಅರಳುವುದರ ಮೇಲೂ ಪರಿಣಾಮ ಬೀರುತ್ತದೆ. ಚಳಿಯು KASHMIRS EARLY BLOOM ಬಾಡಿಸುವ ಜೊತೆಗೆ ಕಳಪೆ ಇಳುವರಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಮಲ್ಲಿಕ್.ಜಮ್ಮು ಮತ್ತು ಕಾಶ್ಮೀರ ಹಿಮಾಲಯವು ಹಿಂದೂ ಕುಶ್ ಪ್ರದೇಶದಲ್ಲಿ ಕೆಲವು ದೊಡ್ಡ ಹಿಮನದಿಗಳನ್ನು ಹೊಂದಿದೆ.
KASHMIRS EARLY BLOOM ಈ ಕೊಲಹೊಯ್ ಕಾಶ್ಮೀರದಲ್ಲಿ ಅತ್ಯಂತ ದೊಡ್ಡ ಹಿಮನದಿಯಾಗಿದ್ದು ದೊಡ್ಡದಾಗಿದ್ದು, ಝೀಲಂ ನದಿಯ ನೀರಿನ ಮುಖ್ಯ ಮೂಲವಾಗಿದೆ. ಆದರೆ, ಕಾಶ್ಮೀರದ ಅತಿ ದೊಡ್ಡದಾದ ಕೊಲಾಹೊಯ್ ಹಿಮನದಿಯೂ 1962ರಿಂದ ಶೇ 23ರಷ್ಟು ಪ್ರದೇಶ ಆವರಿಸಿದೆ. ಇದು ಕೃಷಿಗೆ ಮೂಲ ನೀರಾಗಿರುವ ಝೀಲಂ ನದಿಗೆ ಬೆದರಿಕೆ ಒಡ್ಡಿದೆ.
ಆರ್ದ್ರತೆಯಿಂದ ಉಂಟಾಗುವ ತಾಪಮಾನದಲ್ಲಿನ ಕುಸಿತವು ಸಸ್ಯಗಳಿಗೆ ಹೆಚ್ಚು ಆತಂಕಕಾರಿಯಾಗಿದೆ ಎಂದು ಕಾಶ್ಮೀರ ವಿಶ್ವವಿದ್ಯಾನಿಲಯದ ಹರ್ಬೇರಿಯಂನ 60,000 ಸಸ್ಯ ಮಾದರಿಗಳನ್ನು ನೋಡಿಕೊಳ್ಳುವ ಮಲಿಕ್ ಹೇಳುತ್ತಾರೆ. ಒಮ್ಮೆ ತಾಪಮಾನ ಕುಸಿತಕಂಡರೆ, ಇದು ಹೂವಿನ ದಳ ಅರಳುವುದಕ್ಕೆ ಇದು ಅಪಾಯ ಮಾಡುವ ಜೊತೆಗೆ ಪರಾಗಸ್ಪರ್ಶಕ್ಕೆ ಶೇ 70ರಷ್ಟು ಹಾನಿ ಮಾಡುತ್ತದೆ.
Direct effect of glacier collapse:
ಪಶ್ಚಿಮ ಹಿಮಾಲಯವು ಚಿಲ್ಲೈ ಕಲಾನ್ ಸಮಯದಲ್ಲಿ ಪಡೆದ ಹಿಮದಿಂದ ಹಿಮನದಿಯ ಆರೋಗ್ಯವನ್ನು ನಿಯಂತ್ರಿಸಲು ಮತ್ತು ಅಂತರ್ಜಲ ವೃದ್ಧಿಗೆ ಮುಖ್ಯವಾಗಿದೆ. ಸದ್ಯ ಕ್ಷೀಣಿಸುತ್ತಿರುವ ಹಿಮದಿಂದ ಮುಂಬರುವ ಬೇಸಿಗೆಯ ಶಾಖವು ಹಿಮನದಿಯನ್ನು ಮತ್ತಷ್ಟು ಹೆಚ್ಚು ಕರಗಿಸುತ್ತದೆ.
ಹಿಮನದಿ ಮೇಲ್ಮೈಗಳು ಸಾಮಾನ್ಯವಾಗಿ ಮೇವರೆಗೆ ಹಿಮದಿಂದ ಆವೃತ್ತವಾಗಿರುತ್ತದೆ. ಆದರೆ, ಮುಂಚಿತವಾಗಿ ಈ ಹಿಮಗಳು ಶಾಖಕ್ಕೆ ಒಡ್ಡಿಕೊಂಡರೆ ಇದು ಈ ಪ್ರದೇಶದಲ್ಲಿ ಜಲವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರಬಹುದು.ಈ ಪ್ರದೇಶದಲ್ಲಿ ಹವಾಮಾನ ಬದಲಾವಣೆ ಮುಂದುವರೆದಂತೆ ಸಾಂಪ್ರದಾಯಿಕ ಕೃಷಿಯಿಂದ ಕಡಿಮೆ ನೀರಾವರಿ ಅಗತ್ಯವಾಗಿರುವ ತೋಟಗಾರಿಕೆ ಗಮನಾರ್ಹ ಬದಲಾವಣೆ ಆಗುತ್ತಿದೆ.
KASHMIRS EARLY BLOOM ಕಾಶ್ಮೀರ ವಿವಿ ಜೊತೆಗೆ ಭೂಮಾಹಿತಿ ಇಲಾಖೆ ಸಹಯೋಗದಲ್ಲಿ 2020ರಲ್ಲಿ ಡುಡ್ಲೆ ಯುಎಸ್ಎಯ ಹವಾಮಾನ ವಿಜ್ಞಾನ ನಿಕೊಲಸ್ ಕಾಲೇಜ್ ನಡೆಸಿದ ಗ್ಲೇಸಿಯರ್ ರಿಟ್ರೀಟ್ ಮತ್ತು ಡಿಪ್ಲೇಟಿಂಗ್ ಮತ್ತು ಸ್ಟ್ರೀಮ್ಫ್ಲೋ ಪ್ಯಾಟರ್ನ್ ವಿತ್ ಲ್ಯಾಂಡ್ ಸಿಸ್ಟಂ ಚೇಂಜ್ ಕಾಶ್ಮೀರ್ ಹಿಮಾಲಯ, ಇಂಡಿಯಾ ವರದಿ ಅನುಸಾರ, ಈ ಪ್ರದೇಶದಲ್ಲಿ 1980 ರಿಂದ 2017ರವರೆಗೆ ನೀರಾವತಿ ತೀವ್ರತೆಯ ಕೃಷಿ ಶೇ 79ರಷ್ಟು ಕುಸಿದಿದೆ.
ಈ ಪ್ರದೇಶದ ಜನರು ಶೇ 70ರಷ್ಟು ಜೀವನೋಪಾಯವು ಕೃಷಿಯ ಮೇಲೆ ಅವಲಂಬಿತವಾಗಿದೆ, ಇಲ್ಲಿನ ಜನರು ನೀರಾವರಿಗಾಗಿ ಹಿಮ ಕರಗುವಿಕೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈ ಹಿನ್ನೆಲೆ ದೀರ್ಘಕಾಲದ ಶುಷ್ಕತೆಯಿಂದಾಗಿ ಹಿಮನದಿ ಕುಸಿತವು ಸಾಮಾಜಿಕ – ಆರ್ಥಿಕ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹಿರಿಯ ವಿಜ್ಞಾನಿಗಳು ತಿಳಿಸಿದೆ.
Lack of water source:
ದಕ್ಷಿಣ ಕಾಶ್ಮೀರದ ಶೋಫಿಯಾನ ಉತ್ತಮ ಗುಣಮಟ್ಟದ ಸೇಬಿಗೆ ಪರಿಚಿತ. ಇದೀಗ ಅದರ ಉತ್ಪಾದನಾ ಗುಣಮಟ್ಟ ಮತ್ತು ಗಾತ್ರದ ಮೇಲೆ ಪರಿಣಾಮ ಬೀರುವ ಚಿಂತೆ ಎದುರಾಗಿದೆ ಎಂದು ಮುಸ್ತಾಕ್ ಅಹಮದ್ ಮಲ್ಲಿಕ್ ತಿಳಿಸಿದ್ದಾರೆ. ಈ ಶುಷ್ಕತೆ ಗಣನೀಯವಾಗಿ ನಷ್ಟವನ್ನು ಉಂಟು ಮಾಡುತ್ತದೆ. ನಮ್ಮ ಸೇವಿ ಬಣ್ಣ, ಗಾತ್ರ ಮತ್ತು ನೀರಿನಾಂಶದಿಂದ ಪರಿಚಿತವಾಗಿದೆ. ಇದೀಗ ಅರ ಮೇಲೆ ಪರಿಣಾಮ ಬೀರಿದ್ದು, ನಮ್ಮ ಮೇಲೆ ಕೃಪೆ ತೋರುವಂತೆ ದೇವರನ್ನು ಕೇಳುತ್ತಿದ್ದೇವೆ ಎಂದರು.
ಈ ಬದಲಾವಣೆಯು ಪ್ರದೇಶದ ಹವಾಮಾನ ಬದಲಾವಣೆ ಪರಿಸ್ಥಿತಿಯ ಅಳವಡಿಕೆಯನ್ನು ತೋರಿಸುವ ಜೊತೆಗೆ ನೀರಿನ ಮೂಲದ ಕೊರತೆ ಸವಾಲನ್ನು ಹೆಚ್ಚಿಸಿದೆ. ತೋಟಗಾರಿಕೆ ವಲಯವೂ ಜಮ್ಮು ಮತ್ತು ಕಾಶ್ಮೀರ ಆರ್ಥಿಕತೆಯಲ್ಲಿ ಪ್ರಮುಖವಾಗಿದ್ದು, ಇದು ವಾರ್ಷಿಕವಾಗಿ 10 ಸಾವಿರದಿಂದ 12,000 ಕೋಟಿ ಕೊಡುಗೆ ನೋಡುತ್ತಿದೆ. ಇದರ ಮೇಲೆ ಏಳು ಲಕ್ಷ ಜನರು ಅಲವಂಬಿತವಾಗಿದ್ದಾರೆ. ಇಲ್ಲಿನ 2.15 ಲಕ್ಷ ಹೆಕ್ಟೇರ್ನಲ್ಲಿ 8 ಕೋಟಿ ಹಣ್ಣಿನ ಗಿಡಗಳು ಹರಡಿದ್ದು, ಈ ಪ್ರದೇಶ ವಾರ್ಷಿಕವಾಗಿ 24 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡುತ್ತದೆ. ಈ ಅಕಾಲಿಕ ಹೂವು ಅರಳುವಿಕೆ ಈ ಪ್ರಮುಖ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ.
ಇದನ್ನು ಓದಿರಿ : CM ON MUDA CASE : ಇಡಿ ನೋಟಿಸ್ ರಾಜಕೀಯ ಪ್ರೇರಿತ, ಮುಡಾ ಪ್ರಕರಣವೇ ರಾಜಕೀಯ ಪ್ರೇರಿತ