spot_img
spot_img

KICCHA SUDEEP : ಹೈದರಾಬಾದ್ ಮೆಟ್ರೋನಲ್ಲಿ ಕಿಚ್ಚನ ಪ್ರಯಾಣ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hyderabad News:

ಸಿಸಿಎಲ್​ ಹಿನ್ನೆಲೆ ಹೈದರಾಬಾದ್​ಗೆ ತೆರಳಿರುವ ನಟ KICCHA SUDEEP​ ತಮ್ಮ ತಂಡದ ಆಟಗಾರರೊಂದಿಗೆ ಮೆಟ್ರೋದಲ್ಲಿ ಕ್ರಿಕೆಟ್​ ಸ್ಟೇಡಿಯಂಗೆ ತಲುಪಿದರು. 11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ ನಡೆಯುತ್ತಿದ್ದು, ಕರ್ನಾಟಕ ಬುಲ್ಡೋಜರ್​ ತಂಡದ ನಾಯಕನಾಗಿ KICCHA SUDEEP​ ಇದ್ದಾರೆ.

ನಾಳೆ (ಫೆಬ್ರವರಿ 14) ಕರ್ನಾಟಕ ತಂಡ ಚೆನ್ನೈನ ರೈನೊಸ್​​ ತಂಡವನ್ನು ಎದುರಿಸಲಿದೆ. ಜೊತೆಗೆ ಫೆಬ್ರವರ 15ರಂದು ತೆಲುಗು ವಾರಿಯರ್ಸ್​ ಮತ್ತು ಚೆನ್ನೈ ರೈನೋಸ್​ ತಂಡ ಕೂಡ ಸೆಣಸಲಿದ್ದು, ಇದಕ್ಕಾಗಿ ಸ್ಟೇಡಿಯಂ ಮುಂದೆ ಬಿಗಿ ಪೊಲೀಸ್​ ಭದ್ರತೆ ಕೂಡ ಮಾಡಲಾಗಿದೆ.

KICCHA SUDEEP​ ಹೈದರಾಬಾದ್​ ಹೈದರಾಬಾದ್​ನ ಮೆಟ್ರೋದಲ್ಲಿ ಪ್ರಯಾಣ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ (CCL)ಗಾಗಿ ಹೈದರಾಬಾದ್​ಗೆ ತೆರಳಿದ ಅವರು ತಮ್ಮ ತಂಡದ ಸದಸ್ಯರೊಂದಿಗೆ ಉಪ್ಪಾಳ್​​ ಸ್ಟೇಡಿಯಂಗೆ ಮೆಟ್ರೋದಲ್ಲಿ ಬುಧವಾರ ಸಂಜೆ ಪ್ರಯಾಣಿಸಿದರು.

ಈ ವೇಳೆ ತಮ್ಮ ನೆಚ್ಚಿನ ನಟನನ್ನು ಕಂಡ ಅನೇಕ ಅಭಿಮಾನಿಗಳು ಮತ್ತು ಮೆಟ್ರೋ ಸಿಬ್ಬಂದಿಗಳು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಸಾಮಾನ್ಯ ಜನರಂತೆ ಮೆಟ್ರೋದಲ್ಲಿ ಪ್ರಯಾಣಿಸಿದ ಸುದೀಪ್​ ಅವರ ನಡೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

Victory for Karnataka team:

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯನಲ್ಲಿ ಫೆಬ್ರವರಿ 8ರಂದು ಕರ್ನಾಟಕ ಬುಲ್ಡೋಜರ್​ ಮತ್ತು ತೆಲುಗು ವಾರಿಯರ್​ ನಡುವೆ ಪಂದ್ಯ ನಡೆದಿದ್ದು, ಇದರಲ್ಲಿ ತೆಲುಗು ತಂಡ 46 ರನ್​ಗಳಿಂದ ಸೋಲು ಕಂಡಿತು. ತೆಲುಗು ವಾರಿಯರ್​ ತಂಡದ ನೇತೃತ್ವವನ್ನು ಅಕ್ಕಿನೇನಿ ಅಖಿಲ್​ ವಹಿಸಿದ್ದರೆ, ಕರ್ನಾಟಕ ತಂಡಕ್ಕೆ ಸುದೀಪ್​ ಸಾರಥ್ಯವಿದೆ.

ಮೆಟ್ರೋದಲ್ಲಿ ಇವರನ್ನು ಕಂಡ ಸಹ ಪ್ರಯಾಣಿಕರು ಸುದೀಪ್​ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ ಅವರ ಸರಳತೆಗೆ ಮನಸೋತರು. ತೆಲುಗಿನ ‘ಈಗಾ’ ಚಿತ್ರದಲ್ಲಿ ವಿಲನ್​ ಆಗಿ ನಟಿಸಿರುವ ಬಹುಭಾಷಾ ನಟ ಸುದೀಪ್​ ತೆಲುಗು ನಾಡಿನಲ್ಲಿಯೂ ತಮ್ಮದೇ ಆದ ಅಭಿಮಾನ ಬಳಗ ಹೊಂದಿದ್ದಾರೆ.

Tight security for CCL:

ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ ಮ್ಯಾಚ್​ಗೆ ಜನರು ತಮ್ಮ ನೆಚ್ಚಿನ ನಟರನ್ನು ಕಣ್ತುಂಬಿಕೊಳ್ಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಉಪ್ಪಾಳ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ಈ ಮ್ಯಾಚ್​ಗಳು ನಡೆಯಲಿದೆ. ಈ ನಿಟ್ಟಿನಲ್ಲಿ ಬಿಗಿ ಭದ್ರತೆ ನಡೆಸಲಾಗಿದೆ.

ಈ ಕುರಿತು ಮಾತನಾಡಿರುವ ಪೊಲೀಸ್​ ಆಯುಕ್ತರು ಸಿಸಿಎಲ್​ ಮ್ಯಾಚ್​ಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ನಡೆಸಲು ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಮ್ಯಾಚ್​ನಲ್ಲಿ ಪ್ರತಿಯೊಬ್ಬರ ಚಲನವನದ ಮೇಲೂ ಕಣ್ಣಿಡಲಾಗಿದೆ. ಹಾಗೇ ವಾಹನ ಪಾರ್ಕಿಂಗ್​ಗೆ ವ್ಯವಸ್ಥೆ ನಡೆಸಲಾಗಿದೆ ಎಂದರು.

ಇದನ್ನು ಓದಿರಿ : JK Govt Issues Bid For Golden Card Scheme Insurer With Curtailed Surgeries, Decreased Budget

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

NARGIS FAKHRI MARRIAGE:ವರ ಟೋನಿ ಬಗ್ಗೆ ಇಲ್ಲಿದೆ ಮಾಹಿತಿ

  Nargis marriage news: ಸೂಪರ್​ ಹಿಟ್​ ರಾಕ್‌ಸ್ಟಾರ್, ಮೆ ತೇರಾ ಹೀರೋ ಮತ್ತು ಹೌಸ್‌ಫುಲ್ 3 ಚಿತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis...

THREE BUS EXPLOSION IN ISRAEL:ಉಗ್ರರ ಕೃತ್ಯದ ಶಂಕೆ, ವ್ಯಗ್ರಗೊಂಡ ಇಸ್ರೇಲ್

Bat Yam News: ಒಂದೂವರೆ ವರ್ಷಗಳ ಕಾಲ ನಡೆದ ಯುದ್ದದ ಬಳಿಕ ಕದನ ವಿರಾಮಕ್ಕೆ ಹಮಾಸ್​, ISRAEL​ ಒಪ್ಪಿದ್ದು, ಇದರ ಭಾಗವಾಗಿ ಹಸ್ತಾಂತರ ಪ್ರಕ್ರಿಯೆ ಕೂಡ...

NEW BAT CORONAVIRUS: ಕೋವಿಡ್ ರೀತಿಯ ಮತ್ತೊಂದು ವೈರಸ್ ಬಾವಲಿಯಲ್ಲಿ ಪತ್ತೆ

  Beijing, China News: ಇದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಚೀನಾದ ಬ್ಯಾಟ್​ ವುಮೆನ್​ ಎಂದೇ ಖ್ಯಾತಿಯಾಗಿರುವ ವೈರಾಲಾಜಿಸ್ಟ್​​ ಶಿ ಜೆಂಗಾಲಿ ಅಧ್ಯಯನ ನಡೆಸಿದ್ದಾರೆ....

CONTENT CREATORS KUMBH JOURNEY:1500 ಕಿ.ಮೀ ದೂರದ ಪ್ರಯಾಗ್ರಾಜ್ಗೆ ನಯಾಪೈಸೆ ಖರ್ಚಿಲ್ಲದೆ ತಲುಪಿದ ಕಂಟೆಂಟ್ ಕ್ರಿಯೇಟರ್!

New Delhi News: ಮಹಾರಾಷ್ಟ್ರದ ಕಂಟೆಂಟ್​ ಕ್ರಿಯೇಟರ್​ ದಿವ್ಯಾ ಫೋಫಾನಿ ಕುಂಭಮೇಳಕ್ಕೆ ತಾವು ಮುಂಬೈನಿಂದ ಬಂದ ರೀತಿ ಮತ್ತು ಹಾದಿಯ ನಡುವೆ ಜನರು ನೀಡಿದ ನೆರವನ್ನು...