spot_img
spot_img

ಕೃಷಿ ಮೇಳ 2024: ನೆಲಗಡಲೆ ಬಿತ್ತನೆಗೆ ಬಂತು ‘ಕೃಷಿಬಾಟ್‌’ ಯಂತ್ರ

spot_img
spot_img

Share post:

ಬೆಂಗಳೂರು: ಕುಳಿತಲ್ಲಿಂದಲೇ ಕಡಲೆಬೀಜ ಬಿತ್ತನೆ ಮಾಡಬಹುದು. ಕೂಲಿಕಾರರ ಅಗತ್ಯವಿಲ್ಲ, ಶ್ರಮ ಪಡಬೇಕಿಲ್ಲ. ಅಂತಹ ವಿಶಿಷ್ಟ ರೀತಿಯ ಕಡಲೆಕಾಯಿ ಬಿತ್ತನೆ ಬೀಜ ಯಂತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ.

ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷ ರೀತಿಯ ಕಡಲೆಕಾಯಿ ಬಿತ್ತನೆ ಯಂತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಇರಿಸಿದ್ದು, ಇದು ಜನರನ್ನು ಆಕರ್ಷಿಸುತ್ತಿದೆ.

ಈ ಬ್ಯಾಟರಿ ಚಾಲಿತ ಯಂತ್ರಕ್ಕೆ ‘ಕೃಷಿಬಾಟ್’ ಎಂದು ಹೆಸರಿಡಲಾಗಿದ್ದು, ಇದನ್ನು ರಿಮೋಟ್ ಸಿಸ್ಟಂ ಮೂಲಕ ನಿಯಂತ್ರಿಸಬಹುದಾಗಿದೆ. ಈ ಯಂತ್ರ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗಲಿದ್ದು, ಹಳ್ಳಿಗಾಡಿನ ಕೃಷಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸುವ ಕೆಲಸ ಮಾಡಲಿದೆ.

ನೆಲಗಡಲೆ ಸುಲಭವಾಗಿ ಬಿತ್ತನೆ ಮಾಡಲು ಅನುಕೂಲವಾಗುವಂತೆ ತಯಾರಾಗಿರುವ ಬ್ಯಾಟರಿ ಚಾಲಿತ ಕೃಷಿಬಾಟ್ ಕೂಲಿಕಾರರ ಅಗತ್ಯವಿಲ್ಲದೇ ಕಾರ್ಯಾಚರಣೆ ನಡೆಸುತ್ತದೆ. ಇದರಿಂದ ಬೀಜ ಬಿತ್ತನೆ ಮಾಡುವುದರ ಜೊತೆಗೆ ರಸಗೊಬ್ಬರವನ್ನು ಕೂಡ ಸಮಾನವಾಗಿ ಸಿಂಪಡಿಸಬಹುದಾಗಿದೆ.

ಕೆಲವೊಮ್ಮೆ ಮಳೆ ಬಿದ್ದಾಗ ಬಿತ್ತನೆ ಮಾಡಲು ಸಕಾಲದಲ್ಲಿ ಕೂಲಿಕಾರರು ಸಿಗದೇ ತೊಂದರೆಪಡುತ್ತಿರುವ ರೈತರಿಗೆ ಈ ಯಂತ್ರ ಸಹಕಾರಿಯಾಗಿದೆ.

ಕೃಷಿಬಾಟ್ ಸುಧಾರಿತ ಬಿತ್ತನೆ ತಂತ್ರಜ್ಞಾನ ಹೊಂದಿದೆ. ಈ ಯಂತ್ರವನ್ನು ಬಳಸಿ ಪ್ರತಿ ಬೀಜವನ್ನು ಬೇಕಾಗುವ ಆಳ ಮತ್ತು ಗರಿಷ್ಠ ಇಳುವರಿಯನ್ನು ಮನಗಂಡು ಸಮಾನಾಂತರದಲ್ಲಿ ನೀಡಬಹುದಾಗಿದೆ.

ಕೃಷಿ ಬಾಟ್ ಯಂತ್ರದ ಸಹಾಯದಿಂದ ವ್ಯರ್ಥ ಬೀಜ ನೆಡುವುದನ್ನು ತಡೆಯಬಹುದಾಗಿದೆ. ಇದು ಕೇವಲ ಬೀಜಗಳನ್ನು ನೆಡುವುದಲ್ಲದೇ, ಗೊಬ್ಬರ ಹಾಕಲು ಕೂಡ ಬಳಕೆಯಾಗಲಿದೆ.

ಕೃಷಿ ಬಾಟ್ ಅನ್ನು ಸಂಪೂರ್ಣವಾಗಿ ರಿಮೋಟ್ ಸಿಸ್ಟಂ ಮೂಲಕ ನಿಯಂತ್ರಿಸಬಹುದಾಗಿದೆ. ಇದರಿಂದ ಗೊಬ್ಬರ ಸಿಂಪಡಿಸುವುದು ಮತ್ತು ಕೃಷಿಯ ಸಂಪೂರ್ಣ ಪ್ರಕ್ರಿಯೆಯನ್ನು ದೂರದಿಂದಲೇ ಸುಲಭವಾಗಿ ನಿಯಂತ್ರಿಸಬಹುದಾಗಿದೆ. ಇಡೀ ದಿನದ ಕಾರ್ಯಾಚರಣೆಗೆ ಇದನ್ನು ಸಜ್ಜುಗೊಳಿಸಲಾಗಿದೆ. ಈ ಯಂತ್ರದಲ್ಲಿ ಬ್ಯಾಟರಿ ಬದಲಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ.

ಸ್ವಯಂಚಾಲಿತ ರಸಗೊಬ್ಬರ ಹಾಕಲು ಕೂಡ ಇದು ಸಹಕಾರಿಯಾಗಿದೆ. ಈ ಉಪಕರಣ ಗೊಬ್ಬರವನ್ನು 7 ಮೀಟರ್ ದೂರದವರೆಗೆ ಹರಡುತ್ತದೆ. ಶಿಫಾರಸು ಮಾಡಿದ ರಸಗೊಬ್ಬರ ನಕ್ಷೆಯನ್ನು ಕೂಡ ಒದಗಿಸಲಿದೆ.

ಯಾವುದೇ ರಸಗೊಬ್ಬರ ವ್ಯರ್ಥವಾಗದಂತೆ ಏಕರೂಪದ ವಿತರಣೆಗೆ ಇದು ಸಹಾಯ ಮಾಡಲಿದೆ. ಸುಮಾರು 20 ನಿಮಿಷಗಳಲ್ಲಿ 1 ಎಕರೆ ವಿಸ್ತೀರ್ಣಕ್ಕೆ ಗೊಬ್ಬರ ಹರಡಬಲ್ಲ ಸಾಮರ್ಥ್ಯ ಕೃಷಿ ಕೃಷಿಬಾಟ್ ಯಂತ್ರಕ್ಕೆ ಇದೆ.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ಮಾತನಾಡಿ, “ಈ ಬಾರಿ ಕೃಷಿ ಮೇಳದಲ್ಲಿ ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯಂತ್ರಗಳನ್ನು ಪರಿಚಯಿಸಲಾಗಿದೆ.

ನಾನಾ ಸ್ಟಾರ್ಟಪ್‌ಗಳು ಆವಿಷ್ಕರಿಸಿರುವ ಯಂತ್ರಗಳನ್ನೂ ಪ್ರದರ್ಶಿಸಲಾಗುತ್ತಿದೆ. ಕಡಲೆಬೀಜ ಬಿತ್ತನೆ, ರಸಗೊಬ್ಬರ ಹಾಕಲು, ಔಷಧ ಸಿಂಪಡಣೆ ಹೀಗೆ ಹಲವು ಕೆಲಸಗಳನ್ನು ಕೂಲಿಕಾರರಿಲ್ಲದೇ ಮಾಡಲು ಇವು ಅನುಕೂಲಕರವಾಗಲಿವೆ. ಈ ಯಂತ್ರಗಳಿಂದ ರೈತರು ಲಾಭದಾಯಕ ಹಾಗೂ ವೈಜ್ಞಾನಿಕ ಕೃಷಿಗೆ ಒತ್ತು ನೀಡಬಹುದಾಗಿದೆ” ಎಂದು ತಿಳಿಸಿದರು.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...