spot_img
spot_img

KUMBH MELA 2025 : ಕುಂಭಮೇಳ: ಜನದಟ್ಟಣೆ, ಕಾಲ್ತುಳಿತ ತಡೆಗೆ AI ತಂತ್ರಜ್ಞಾನ ಅಳವಡಿಕೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Prayagraj, Uttar Pradesh News:

ಈ ಬಾರಿಯ KUMBH MELA ದಲ್ಲಿ ಜನದಟ್ಟಣೆ ನಿಯಂತ್ರಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಲಾಗಿದೆ.ಇಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶವಾಗಿರುವ KUMBH MELA ದಲ್ಲಿ ಕಾಲ್ತುಳಿತದಂಥ ಘಟನೆಗಳನ್ನು ತಡೆಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.ಆದರೆ, ದೊಡ್ಡ ಪ್ರಮಾಣದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಲ್ತುಳಿತ ಉಂಟಾಗುವುದು ಭಾರತದ ಧಾರ್ಮಿಕ ಉತ್ಸವಗಳ ಆಚರಣೆಯಲ್ಲಿ ಕಪ್ಪು ಚುಕ್ಕೆಯಾಗಿದೆ.

ಸೋಮವಾರ ಪ್ರಾರಂಭವಾದ ಮತ್ತು ಮುಂದಿನ ಆರು ವಾರಗಳ ಕಾಲ ನಡೆಯುವ ಹಿಂದೂ ಭಕ್ತಿ ಮತ್ತು ಧಾರ್ಮಿಕ ಸ್ನಾನದ ಸಹಸ್ರಮಾನಗಳಷ್ಟು ಹಳೆಯ ಪವಿತ್ರ ಪ್ರದರ್ಶನವಾದ KUMBH MELA ಕ್ಕೆ 400 ಮಿಲಿಯನ್ ಯಾತ್ರಾರ್ಥಿಗಳು ಭೇಟಿ ನೀಡಬಹುದು ಎಂದು ಸಂಘಟಕರು ಅಂದಾಜಿಸಿದ್ದಾರೆ.

“ಸೂಕ್ಷ್ಮ ಸ್ಥಳಗಳಲ್ಲಿ ಏಕಕಾಲಕ್ಕೆ ದೊಡ್ಡ ಮಟ್ಟದ ಜನಸಂದಣಿ ಉಂಟಾಗುವುದನ್ನು ತಡೆಯಲು ಎಐ ನಮಗೆ ಸಹಾಯ ಮಾಡುತ್ತಿದೆ.” ಎಂದು ಅವರು ತಿಳಿಸಿದರು.”ಪ್ರತಿಯೊಬ್ಬರೂ ತಮ್ಮ ಆಧ್ಯಾತ್ಮಿಕ ಕರ್ತವ್ಯಗಳನ್ನು ಪೂರೈಸಿದ ನಂತರ ಸಂತೋಷದಿಂದ ಮನೆಗೆ ಮರಳಬೇಕೆಂದು ನಾವು ಬಯಸುತ್ತೇವೆ” ಎಂದು ಉತ್ಸವದಲ್ಲಿ ಟೆಕ್ ಕಾರ್ಯಾಚರಣೆಗಳ ನೇತೃತ್ವ ವಹಿಸಿರುವ ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ಎಎಫ್​​ಪಿಗೆ ತಿಳಿಸಿದರು.

A stampede took place in 1954: 1954ರ KUMBH MELA ದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಒಂದೇ ದಿನ 400 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಇದು ಜಾಗತಿಕವಾಗಿ ಜನಸಂದಣಿ ಸಂಬಂಧಿತ ದುರಂತದಲ್ಲಿ ಅತಿದೊಡ್ಡ ಸಾವು – ನೋವುಗಳಲ್ಲಿ ಒಂದಾಗಿದೆ. ಈ ಹಿಂದೆ 2013ರಲ್ಲಿ ಪ್ರಯಾಗ ರಾಜ್ ನಗರದಲ್ಲಿ ಕೊನೆಯ ಬಾರಿಗೆ KUMBH MELA ನಡೆದಿತ್ತು.

ಉತ್ಸವದ ಸ್ಥಳದಲ್ಲಿ ಮತ್ತು ವಿಶಾಲವಾದ ಶಿಬಿರಕ್ಕೆ ಹೋಗುವ ರಸ್ತೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧರಿತ 300 ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆದರೆ, ಈ ಬಾರಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿರುವುದರಿಂದ ಜನಸಂದಣಿಯ ಗಾತ್ರಗಳ ನಿಖರವಾದ ಅಂದಾಜುಗಳನ್ನು ಸಂಗ್ರಹಿಸಲು ಸಹಾಯಕವಾಗಲಿದೆ ಹಾಗೂ ಸಂಭಾವ್ಯ ಸಮಸ್ಯೆಗೆ ಉತ್ತಮವಾಗಿ ಸಿದ್ಧರಾಗಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಂಗಾ ಮತ್ತು ಯಮುನಾ ನದಿಗಳ ಸಂಗಮದಲ್ಲಿರುವ ಉತ್ಸವದ ಆಧ್ಯಾತ್ಮಿಕ ಕೇಂದ್ರದಿಂದ ಸ್ವಲ್ಪವೇ ದೂರದಲ್ಲಿರುವ ಈ ಜಾಲವನ್ನು ಪೊಲೀಸ್ ಅಧಿಕಾರಿಗಳು ಮತ್ತು ತಂತ್ರಜ್ಞರ ಸಣ್ಣ ತಂಡವೊಂದು ಕಮಾಂಡ್ ಮತ್ತು ನಿಯಂತ್ರಣ ಕೊಠಡಿಯಲ್ಲಿ ಮೇಲ್ವಿಚಾರಣೆ ಮಾಡುತ್ತಿದೆ.”ವಿವಿಧ ಒಳಹರಿವುಗಳಲ್ಲಿ ಜನರ ಸಂಚಾರ, ಜನಸಂದಣಿ ಸಾಂದ್ರತೆಯನ್ನು ಪತ್ತೆಹಚ್ಚಲು ನಾವು ಎಐ ಅನ್ನು ಬಳಸುತ್ತಿದ್ದೇವೆ.

ಈ ಎಲ್ಲ ಮಾಹಿತಿಗಳನ್ನು ಸೇರಿಸುತ್ತೇವೆ ಮತ್ತು ನಂತರ ಅಲ್ಲಿಂದ ಇಂಟರ್ ಪೋಲ್ ಮಾಡುತ್ತೇವೆ. ಜನಸಂದಣಿಯು ಅಪಾಯದ ಮಟ್ಟಕ್ಕೆ ಹೆಚ್ಚಾಗುತ್ತಿದ್ದರೆ ಈ ವ್ಯವಸ್ಥೆಯು ಎಚ್ಚರಿಕೆ ನೀಡುತ್ತದೆ.” ಎಂದು ಕುಮಾರ್ ಮಾಹಿತಿ ನೀಡಿದರು.”ನಾವು ಇಲ್ಲಿಂದ ಇಡೀ KUMBH MELA ವನ್ನು ನೋಡಬಹುದು. ಕ್ಯಾಮೆರಾಗಳ ಮೂಲಕ ನಾವು ಸಂಪೂರ್ಣ ದೇಹಗಳನ್ನು ನೋಡಲಾಗದಿದ್ದರೂ ತಲೆ ಅಥವಾ ಮುಂಡಗಳನ್ನು ಬಳಸಿ ಜನಸಂದಣಿಯನ್ನು ಎಣಿಸುತ್ತೇವೆ.

iರೈಲ್ವೆ ಮತ್ತು ಬಸ್ ನಿರ್ವಾಹಕರ ದತ್ತಾಂಶವನ್ನು ಕ್ರಾಸ್ – ಚೆಕ್ ಮಾಡಿ, ಪ್ರತಿ ದಿಕ್ಕಿನಲ್ಲಿಯೂ ಮೈಲುಗಳಷ್ಟು ವಿಸ್ತರಿಸಿರುವ ಜನಸಮೂಹದ ಒಟ್ಟಾರೆ ಅಂದಾಜು ನೀಡುವ ಎಐ ಅಲ್ಗಾರಿದಮ್​ಗೆ ಫುಟೇಜ್ ಅನ್ನು ಸೇರಿಸಲಾಗುತ್ತದೆ” ಎಂದು ಕುಮಾರ್ ತಿಳಿಸಿದರು.

ಇದನ್ನು ಓದಿರಿ : TRUMP TAKES VICTORY RALLY : ಟ್ರಂಪ್ ವಿಜಯೋತ್ಸವ; ಇಂದು ಪ್ರಮಾಣ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...