ರಾಮನಗರ: ಅನಕ್ಷರಸ್ಥರಿಗೂ ಅಕ್ಷರಗಳನ್ನು ಕಲಿಸಿದಾಗ ಮಾತ್ರ ಸಾಕ್ಷರತೆಯಂತಹ ಕಾರ್ಯಕ್ರಮಗಳು ಸಾಧ್ಯವಾಗುತ್ತವೆ. ಈ ನಿಟ್ಟಿನಲ್ಲಿ ವಯಸ್ಸಾದ ಮಹಿಳೆಯರೂ ಕೂಡ ಅಕ್ಷರ ಕಲಿಯಲು ಸರ್ಕಾರ ಸ್ಥಾಪಿಸಿರುವ ಗ್ರಂಥಾಲಯಗಳು ನೆರವಾಗುತ್ತಿದೆ.
ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಅನಕ್ಷರಸ್ಥ ಮಹಿಳೆಯರಿಗೂ ಕಲಿಕಾ ಕೇಂದ್ರಗಳಾಗಿ ಗ್ರಂಥಾಲಯಗಳು ಮಾರ್ಪಟ್ಟಿವೆ.
ಗ್ರಾಮದ ಮಹಿಳೆಯರು ಈ ಗ್ರಂಥಾಲಯದ ಮೂಲಕ ತಮ್ಮ ಓದುವ ಹಾಗೂ ಬರೆಯುವ ಕನಸ್ಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ.ಈ ಮೊದಲು ನನಗೆ ಪೆನ್ನನ್ನೂ ಹಿಡಿಯುವುದು ಹೇಗೆ ಎಂಬುದು ಗೊತ್ತಿರಲಿಲ್ಲ. ಆದರೆ, ಇದು ನಾನು ಎಲ್ಲಿಗೇ ಹೋದರೂ ನನ್ನೊಂದಿಗೆ ಒಂದು ಪೆನ್ನು ಇದ್ದೇ ಇರುತ್ತದೆ. ಪೆನ್ನಿನ ಕ್ಯಾಪ್ ತೆಗೆದು ಸಹಿ ಮಾಡಲು ಬಹಳ ಸಂತೋಷವಾಗುತ್ತದೆ.
ಅನಕ್ಷರಸ್ಥ ಮಹಿಳೆಯರಿಗೆ ಈ ಗ್ರಂಥಾಲಯಗಳು ಅಕ್ಷರ ಜ್ಞಾನ ನೀಡುತ್ತಿದ್ದು, ಈ ಮೂಲಕ ಅಕ್ಷರದ ಮೌಲ್ಯವನ್ನು ತಿಳಿಸುತ್ತಿದೆ.
ಬ್ಯಾಂಕ್ ಅಥವಾ ಸರ್ಕಾರಿ ಕಚೇರಿಗೆ ಹೋದಾಗಲೆಲ್ಲ ಅಧಿಕಾರಿಗಳು ನನ್ನನ್ನು ಹೆಬ್ಬೆಟ್ಟು (ಅನಕ್ಷರಸ್ಥ) ಎಂದು ನಿಂದಿಸುತ್ತಿದ್ದರು. ನಾನು ನನ್ನ ಹೆಬ್ಬೆರಳಿನ ಗುರುತನ್ನು ನೀಡುತ್ತಿದ್ದೆ. ಆದರೆ, ಈಗ ಅವರು ನನ್ನ ಹೆಬ್ಬೆರಳಿನ ಗುರುತನ್ನು ನೀಡುವಂತೆ ಹೇಳಿದರೆ ಸಹಿ ಮಾಡಲು ಮುಂದಾಗುತ್ತೇನೆ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಗೌರಮ್ಮ ಅವರು ಹೇಳಿದ್ದಾರೆ.
7ನೇ ತರಗತಿಯ ನಂತರ ಓದು ನಿಲ್ಲಿಸಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ 44 ವರ್ಷದ ಮಂಜುಳಾ ಎಂಬುವವರು ಕೂಡ ಇದೀಗ ಗ್ರಂಥಾಲಯ ಅಧಿಕಾರಿಗಳ ನೆರವಿನೊಂದಿಗೆ ಎಸ್ಎಸ್ಎಲ್’ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಜಿಲ್ಲಾಪಂಚಾಯತ್ ಗಳಲ್ಲಿ ಸ್ಥಾಪಿತವಾಗಿರುವ ಗ್ರಂಥಾಲಯ ಸಾಕಷ್ಟು ಸಹಾಯ ಮಾಡುತ್ತಿದ್ದು, ಈ ಗ್ರಂಥಾಲಯಗಳು ಅನಕ್ಷರಸ್ಥ ಮಹಿಳೆಯರನ್ನು ಓದಲು ಮತ್ತು ಬರೆಯಲು ಪ್ರೇರೇಪಿಸುತ್ತಿವೆ.
ನೀಲಸಂದ್ರ ಜಿಪಿ ವ್ಯಾಪ್ತಿಯಲ್ಲಿ 11 ಗ್ರಾಮಗಳಿದ್ದು, ಪ್ರತಿದಿನ ಸುಮಾರು 80 ಜನರು ಈ ‘ಅರಿವು ಕೇಂದ್ರ’ಕ್ಕೆ (ಗ್ರಂಥಾಲಯ) ಭೇಟಿ ನೀಡುತ್ತಾರೆ.
ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪರೀಕ್ಷೆ ಸಿದ್ಧತೆಗೆ ಸಹಾಯ ಮಾಡುತ್ತೇವೆ. ಕಲಿಯುವ ಹಂಬಲವಿರುವ ವೃದ್ಧರ ಮನೆಗಳಿಗೆ ಭೇಟಿ ನೀಡುತ್ತೇವೆಂದು ಗ್ರಂಥಪಾಲಕಿ ಶಿವರುದ್ರಮ್ಮ ಎ.ಆರ್. ಅವರು ತಿಳಿಸಿದ್ದಾರೆ.
ಸಾಕಷ್ಟು ಮಹಿಳೆಯರು ಪದವೀಧರರಾಗಲು ಬಯಸುತ್ತಿದ್ದಾರೆ. ಜಿಲ್ಲಾಪಂಚಾಯತ್ ಗಳಲ್ಲಿ ಸ್ಥಾಪಿತವಾಗಿರುವ ಗ್ರಂಥಾಲಯ ಸಾಕಷ್ಟು ಸಹಾಯ ಮಾಡುತ್ತಿದ್ದು, ಈ ಗ್ರಂಥಾಲಯಗಳು ಅನಕ್ಷರಸ್ಥ ಮಹಿಳೆಯರನ್ನು ಓದಲು ಮತ್ತು ಬರೆಯಲು ಪ್ರೇರೇಪಿಸುತ್ತಿವೆ.