spot_img
spot_img

LOS ANGELES RECOVER FROM WILDFIRES : ಅಗ್ನಿ ಅನಾಹುತಕ್ಕೆ ಒಳಗಾಗಿರುವ ಲಾಸ್ ಏಂಜಲೀಸ್ಗೆ ಕ್ಯಾಲಿಫೋರ್ನಿಯಾ ನೆರವು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Sacramento (USA) News:

ಬೆಂಕಿ ಅನಾಹುತಕ್ಕೆ ತುತ್ತಾಗಿರುವ LOS ANGELES​ನಲ್ಲಿ ಮರು ನಿರ್ಮಾಣ ಕಾರ್ಯಕ್ಕಾಗಿ ಕ್ಯಾಲಿಫೋರ್ನಿಯಾ, ಸ್ಥಳೀಯ ಸರ್ಕಾರಕ್ಕೆ ಪರಿಹಾರ ಹಣ ನೀಡಲು ಮುಂದಾಗಿದೆ.ಭೀಕರ ಬೆಂಕಿ ಅನಾಹುತಕ್ಕೆ ತುತ್ತಾಗಿದ್ದLOS ANGELES ​ ಪ್ರದೇಶದ ಚೇತರಿಕೆಗಾಗಿ 2.5 ಬಿಲಿಯನ್​ ನೀಡಲು ಕ್ಯಾಲಿಫೋರ್ನಿಯಾ ಸರ್ಕಾರ ಮುಂದಾಗಿದೆ. ಈ ಕುರಿತು ಪರಿಹಾರ ಪ್ಯಾಕೇಜ್​ಗೆ ಗುರುವಾರ ಡೆಮಾಕ್ರಟಿಕ್​ ಗವರ್ನರ್​ ಗವಿನ್​ ನ್ಯೂಸಮ್​ ಸಹಿ ಹಾಕಿದ್ದಾರೆ.

ಮನೆಗಳ ಪುನರ್​ನಿರ್ಮಾಣಕ್ಕೆ ಸ್ಥಳೀಯ ಸರ್ಕಾರ 4 ಮಿಲಿಯನ್​ ಡಾಲರ್​ಗೆ ಕೂಡ, ಕ್ಯಾಲಿಫೋರ್ನಿಯಾ ಶಾಸಕರು ಅನುಮತಿ ನೀಡಿದ್ದು, 1 ಮಿಲಿಯನ್​ ಡಾಲರ್​ಗಳನ್ನು ಮರು ನಿರ್ಮಾಣ ಕಾರ್ಯಕ್ಕೆ ನೀಡಲಾಗಿದೆ.ರಾಜ್ಯ ಶಾಸಕಾಂಗದ ಅನುಮತಿ ಬಳಿಕ ನ್ಯೂಸಮ್​ ಈ ಕಾನೂನಿಗೆ ಸಹಿ ಹಾಕಿದರು. ಈ 2.5ಬಿಲಿಯನ್​ ಡಾಲರ್​ ಪರಿಹಾರದಲ್ಲಿ ರಾಜ್ಯ ವಿಪತ್ತು ನಿರ್ವಹಣೆಯ ಪ್ರಕ್ರಿಯೆಯ ಪ್ರಯತ್ನವಾದ ಸ್ಥಳಾಂತರ, ಬದುಕುಳಿದವರಿಗೆ ಆಶ್ರಯ ಮತ್ತು ಅಪಾಯಕಾರಿ ತ್ಯಾಜ ನಿವಾರಣೆ ಕ್ರಮ ಕೈಗೊಳ್ಳುವ ಯತ್ನ ಮಾಡಲಿದೆ.

ಯಾವುದೇ ಫೆಡರಲ್​ ಅಗ್ನಿ ಅನಾಹುತ ಪರಿಹಾರ ಬರಬೇಕಾದರೆ, ಅದು ಷರತ್ತಿನೊಂದಿಗೆ ಬರಬೇಕು ಎಂದು ಅವರು ಸಲಹೆ ನೀಡಿದ್ದರು. ಮಾಜಿ ಅಧ್ಯಕ್ಷ ಬೈಡನ್​​ ಕೂಡ ಈ ತಿಂಗಳ ಆರಂಭದಲ್ಲಿ ವಿಪತ್ತು ಸಹಾಯಕ್ಕೆ ಅನುಮತಿ ನೀಡಿದ್ದರು.ಇದು ಭರವಸೆಯ ಭಾವವನ್ನು ನೀಡುವುದಾಗಿದೆ ಎಂದು ನ್ಯೂಸಮ್​ ಪಸಡೆನಾದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಕ್ಯಾಲಿಫೋರ್ನಿಯಾ ಬೆಂಕಿ ಅನಾಹುತದ ಹಾನಿಯ ಪರಿಶೀಲನೆ ಮಾಡುವ ನಿರ್ಧಾರಕ್ಕೂ ಮುನ್ನವೇ ಈ ನಿರ್ಧಾರ ಕೈಗೊಳ್ಳಲಾಗಿದೆ.

Newsom called a special session to prepare for the legal battle: LOS ANGELES​ ಅಗ್ನಿ ಅನಾಹುತ ಹಿನ್ನಲೆ ಸರ್ಕಾರವೂ ಈ ಪರಿಹಾರ ಹಣವನ್ನು ತನ್ನ ಪ್ರಾಧಾನ್ಯತೆಯಾಗಿಸಿಕೊಂಡಿದೆ. ರಿಪಬ್ಲಿಕನ್ ರಾಜ್ಯ ಶಾಸಕರ ಒತ್ತಾಸೆಯ ಮೇಲೆ ಚೇತರಿಕೆ ನಿಧಿಗೆ ಅನುಮೋದನೆ ನೀಡಲು ವಿಶೇಷ ಅಧಿವೇಶನ ಕರೆದಿದ್ದರು.

ರಾಜ್ಯ ವಿಪತ್ತನ್ನು ಎದುರಿಸುತ್ತಿರುವಾಗ ಟ್ರಂಪ್ ಅವರ ಮೇಲೆ ಗಮನ ನೀಡುವುದು ತಪ್ಪಾಗಲಿದೆ ಎಂದಿದ್ದರು.ಟ್ರಂಪ್​ ಆಡಳಿತದ ವಿರುದ್ಧ ಕಾನೂನಾತ್ಮಕ ಹೋರಾಟದ ಸಿದ್ಧತೆಗಾಗಿ ನವೆಂಬರ್​ನಲ್ಲಿ ಗ್ಯಾವಿನ್ ನ್ಯೂಸಮ್​ ಶಾಸಕರ ವಿಶೇಷ ಅಧಿವೇಶನವನ್ನು ಕರೆದಿದ್ದರು.

Opposition also supports Governor’s decision: ಸ್ಟೇಟ್​ ಸೆನೆಟ್​​​ ಕೂಡ 25 ಮಿಲಿಯನ್​ ಡಾಲರ್​ಗೆ ಅನುಮತಿ ನೀಡಿದೆ. ಜನವರಿ 7ರಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಬೆಂಕಿ ದುರಂತ ಕಾಣಿಸಿಕೊಂಡಿತ್ತು. ಭಾರಿ ಅಗ್ನಿ ಅನಾಹುತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ ರಾಜ್ಯಕ್ಕಾಗಿ ಒಟ್ಟಾಗಿ ಕಾರ್ಯ ನಿರ್ವಹಿಸುವ ಭರವಸೆ ಇದೆ.

ನ್ಯೂಸಮ್​ ಸ್ವಂತವಾಗಿ ಈ ಪರಿಹಾರ ಹಣವನ್ನು ನೀಡುತಿಲ್ಲ ಎಂದು ಕೆಲ್ಲೆ ಸೆಯರ್ಟೊ ಟೀಕಿಸಿದ್ದರೂ, ಈ ಮಸೂದೆಗೆ ಅವರು ಬೆಂಬಲಿಸಿದ್ದಾರೆ. ಭವಿಷ್ಯದಲ್ಲಿ ಡೆಮಾಕ್ರಟಿಕರು ರಿಪಬ್ಲಿಕನ್ನರ ಜೊತೆಗೆ ಸೇರಿ ಮತ್ತುಷ್ಟು ಉತ್ತಮವಾದ ಕೆಲಸ ಮಾಡಬೇಕು. ಈ ರೀತಿಯ ಅನಾಹುತ ಮತ್ತೆಂದು ಆಗದಂತೆ ನಾವೆಲ್ಲಾ ಯೋಜನೆ ರೂಪಿಸಬೇಕು ಎಂದರು.

ಇದನ್ನು ಓದಿರಿ : YALLAPUR ACCIDENT CASE : ಭೀಕರ ಅಪಘಾತ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...