spot_img
spot_img

ಹಾಲು ಉತ್ಪಾದನೆಯಲ್ಲಿ ನಷ್ಟ : ಗ್ರಾಹಕರಿಗೆ ಕುತ್ತು

spot_img
spot_img

Share post:

ಶಿವಮೊಗ್ಗ: ಈಗಿನ ಮಾರುಕಟ್ಟೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಕಳೆದ ವರ್ಷದ ಹಾಲಿನ ದರ ಪರಿಷ್ಕರಣೆ, ಕ್ಷೀರಭಾಗ್ಯ ಯೋಜನೆ, ಮಾರುಕಟ್ಟೆಯಲ್ಲಿ ಹಾಲಿನ ಪೌಡರ್‌ ದರ ಕುಸಿತದ ಪರಿಣಾಮವಾಗಿ ರಾಜ್ಯದ 15 ಹಾಲು ಒಕ್ಕೂಟಗಳಲ್ಲಿ 9 ಒಕ್ಕೂಟಗಳು ನಷ್ಟದ ಕೂಪದಲ್ಲಿ ಬಿದ್ದಿವೆ. ಪರಿಸ್ಥಿತಿ ಇದೇ ರೀತಿ ಇನ್ನೊಂದು ವರ್ಷ ಮುಂದುವರಿದಲ್ಲಿ ಸಣ್ಣ ಒಕ್ಕೂಟಗಳಿಗೆ ಬೀಗಬಿದ್ದರೂ ಅಚ್ಚರಿ ಇಲ್ಲ.

ರಾಜ್ಯ ಸರಕಾರವು 2023ನೇ ಆಗಸ್ಟ್‌ನಲ್ಲಿ ಗ್ರಾಹಕರ ಹಾಲಿನ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಿ ಪೂರ್ಣ ದರವನ್ನು ಉತ್ಪಾದಕರಿಗೆ ವರ್ಗಾಯಿಸಲು ಆದೇಶಿಸಿದ್ದು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಗಳು ನಷ್ಟದ ಕೂಪಕ್ಕೆ ಬೀಳಲು ಕಾರಣವಾಯಿತು.

ಗ್ರಾಹಕರಿಗೆ ಹೆಚ್ಚಿಸಲಾದ 3 ರೂ. ದರವು ಮಾರಾಟವಾಗುವಂತಹ 52ರಿಂದ 54 ಲಕ್ಷ ಲೀಟರ್‌ಗೆ ಮಾತ್ರ ಸಿಗುತ್ತದೆ. ಉಳಿಕೆಯಾಗುವ 38ರಿಂದ 39 ಲಕ್ಷ ಲೀಟರ್‌ ಹಾಲಿಗೆ ಹೆಚ್ಚುವರಿಯಾದ 3 ರೂ. ದರವನ್ನು ಹಾಲು ಒಕ್ಕೂಟಗಳು ಭರಿಸಬೇಕಾಗಿದೆ. ರಾಜ್ಯದ 15 ಹಾಲು ಒಕ್ಕೂಟಗಳಲ್ಲಿ ಪ್ರತಿದಿನ ಸರಾಸರಿ 90ರಿಂದ 93 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಆದರೆ, ಪ್ರತಿದಿನ ಮಾರುಕಟ್ಟೆಗಳಲ್ಲಿ 52ರಿಂದ 54 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತದೆ. ಪ್ರತಿದಿನ 38ರಿಂದ 39 ಲಕ್ಷ ಲೀಟರ್‌ ಹಾಲು ಉಳಿಕೆಯಾಗುತ್ತದೆ.

ಉತ್ಪಾದನೆಗಿಂತಲೂ ಅಧಿಕ ಮಾರಾಟ ಹೊಂದಿರುವ ದಕ್ಷಿಣ ಕನ್ನಡ ಹಾಲು ಒಕ್ಕೂಟ 4 ಕೋಟಿ ರೂ.ಗಳಿಗಿಂತ ಅಧಿಕ ಲಾಭದಲ್ಲಿದ್ದರೆ, ಧಾರವಾಡ, ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಒಕ್ಕೂಟಗಳು ಲಾಭ ನಷ್ಟ ಇಲ್ಲದೆ ಸರಿದೂಗಿಸಿಕೊಂಡು ಹೋಗುತ್ತಿವೆ. ಮಾರಾಟ ಕಡಿಮೆ ಇದ್ದರೂ ತುಮಕೂರು ಒಕ್ಕೂಟ 2 ಕೋಟಿ ರೂ. ಲಾಭದಲ್ಲಿದೆ. ಆದರೆ, ಅತಿ ಹೆಚ್ಚು ಹಾಲಿನ ಉತ್ಪಾದನೆ ಮತ್ತು ಕಡಿಮೆ ಮಾರಾಟ ಇರುವಂತಹ ಬೆಂಗಳೂರು, ಹಾಸನ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ಚಾಮರಾಜನಗರ ಮತ್ತು ಹಾವೇರಿ ಹಾಲು ಒಕ್ಕೂಟಗಳು ನಷ್ಟಕ್ಕೆ ಸಿಲುಕಿವೆ.

1 ಕೆ.ಜಿ. ಹಾಲಿನ ಪೌಡರ್‌ ಉತ್ಪಾದನೆಗೆ 361 ರೂ. ವೆಚ್ಚವಾಗುತ್ತದೆ. ಕ್ಷೀರಭಾಗ್ಯ ಯೋಜನೆ (ಕೆ.ಜಿ.ಗೆ 325 ರೂ.)ಯಲ್ಲಿ 36 ರೂ. ನಷ್ಟವಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಪೌಡರ್‌ ಧಾರಣೆ 220 ರೂ.ಗಳಿಗಿಂತ ಕಡಿಮೆ ಇರುವುದರಿಂದ ಹೊರಗೆ ಕಳುಹಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಮಾರಾಟವಾಗದೆ ಉಳಿಯುವ ಹಾಲು ಒಕ್ಕೂಟಗಳ ಪಾಲಿಗೆ ದೊಡ್ಡ ಹೊರೆಯಾಗಿದೆ. 38ರಿಂದ 39 ಲಕ್ಷ ಲೀಟರ್‌ ಹಾಲಿಗೆ ಪ್ರತಿದಿನ 1.14ರಿಂದ 1.17 ಕೋಟಿ ರೂ. ಪಾವತಿಸುವುದಲ್ಲದೆ ಹಾಲಿನ ಪುಡಿಯಾಗಿ ಪರಿವರ್ತಿಸುವಲ್ಲೂ ನಷ್ಟ ಅನುಭವಿಸುತ್ತಿವೆ.

“ಪ್ರತಿವರ್ಷ ಹಾಲಿನ ಸುಗ್ಗಿ ಸಮಯದಲ್ಲಿ ದರ ಕಡಿತ ಮಾಡಿ ಆವಕ ಕಡಿಮೆಯಾದ ಬಳಿಕ ಹೆಚ್ಚಳ ಮಾಡುವುದು ಒಕ್ಕೂಟಗಳಲ್ಲಿ ಸಂಪ್ರದಾಯ. ಈ ಬಾರಿ ತಡವಾಗಿ ಹಾಲಿನ ದರ ಕಡಿಮೆ ಮಾಡಲಾಗಿದೆ. ಇಷ್ಟಾಗಿಯೂ ಒಕ್ಕೂಟಗಳು ನಷ್ಟದಿಂದ ಹೊರಬರಲು ಸಾಧ್ಯವಿಲ್ಲ. ಗ್ರಾಹಕರ ಹಾಲಿನ ದರ ಪರಿಷ್ಕರಣೆ ಮಾಡಿ ಒಕ್ಕೂಟಗಳಿಗೆ ವರ್ಗಾಯಿಸದೆ ಹೋದಲ್ಲಿ ಆರ್ಥಿಕವಾಗಿ ಚೇತರಿಸಿಕೊಳ್ಳುವುದು ಸಾಧ್ಯವಿಲ್ಲ” ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ್‌ ತಿಳಿಸಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...