spot_img
spot_img

MAHA KUMBH 2025 : ಮಹಾಕುಂಭ ಮೇಳದ ಮುಕ್ತಾಯದ ದಿನಾಂಕ ವಿಸ್ತರಣೆ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mahakumbha Nagar (Uttar Pradesh) News:

MAHA KUMBH 2025 ಮುಕ್ತಾಯದ ದಿನಾಂಕವು ವಿಸ್ತರಣೆ ಆಗಲಿದೆ ಎಂಬ ಸುದ್ದಿಗಳ ಕುರಿತಂತೆ ಪ್ರಯಾಗ್‌ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ ನೀಡಿದ್ದಾರೆ. ಧಾರ್ಮಿಕ ಮುಹೂರ್ತಗಳನ್ನು ಆಧರಿಸಿ ಮಹಾ ಕುಂಭಮೇಳದ ವೇಳಾಪಟ್ಟಿ ಇರುತ್ತದೆ ಎಂದಿದ್ದಾರೆ.

ಜನವರಿ 13ರಂದು ಆರಂಭಗೊಂಡಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಇದುವರೆಗೂ ನಿರೀಕ್ಷೆಗೂ ಮೀರಿ 50 ಕೋಟಿಗೂ ಅಧಿಕ ಜನರು ಭಾಗವಹಿಸಿ, ಪವಿತ್ರ ಸ್ನಾನ ಮಾಡಿದ್ದಾರೆ. ಅಲ್ಲದೇ, ಮಹಾಕುಂಭವು ಪೂರ್ವ ನಿರ್ಧಾರಿತವಾದಂತೆ ಫೆಬ್ರವರಿ 26ರಂದು ಸಮಾಪ್ತಿಯಾಗಲಿದೆ. MAHA KUMBH 2025 ಪ್ರಯಾಗ್​ರಾಜ್​ನಲ್ಲಿ 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸಾಗರೋಪಾದಿಯಲ್ಲಿ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ.

ಭಾರಿ ಜನದಟ್ಟಣೆ ಹಿನ್ನೆಲೆಯಲ್ಲಿ ಮಹಾಕುಂಭಮೇಳವನ್ನು ಪೂರ್ವ ನಿರ್ಧರಿತ ದಿನಾಂಕದಂದು ಮುಗಿಸದೇ, ವಿಸ್ತರಣೆ ಮಾಡಲಾಗುತ್ತಿದೆ ಎಂಬ ವದಂತಿಗಳು ಹರಡಿವೆ.”ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆಗಳ ಪ್ರಕಾರ, ಆಡಳಿತವು ಎಲ್ಲ ಭಕ್ತರಿಗೆ ಸುಗಮ ಪ್ರಯಾಣ ಮತ್ತು ಇತರ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. ಮೇಳದ ದಿನಾಂಕ ವಿಸ್ತರಿಸಲು ಸರ್ಕಾರ ಅಥವಾ ಜಿಲ್ಲಾಡಳಿತದಿಂದ ಯಾವುದೇ ಪ್ರಸ್ತಾಪವಿಲ್ಲ. ಯಾತ್ರಿಕರು ಅಂತಹ ತಪ್ಪು ಮಾಹಿತಿ ನಂಬಬಾರದು” ಎಂದು ಡಿಎಂ ಹೇಳಿದ್ದಾರೆ.

ಮಹಾಕುಂಭಮೇಳವು ವಿಸ್ತರಣೆ ಆಗಲಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಪ್ರಯಾಗರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ರವೀಂದ್ರ ಮಂದರ್ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

”ಕಾರ್ಯಕ್ರಮದ ವೇಳಾಪಟ್ಟಿಯನ್ನು ಧಾರ್ಮಿಕ ಮುಹೂರ್ತಗಳನ್ನು (ಶುಭ ಸಮಯಗಳು) ಆಧರಿಸಿ ನಿರ್ಧರಿಸಲಾಗುತ್ತದೆ ಹಾಗೂ ಅದರಲ್ಲಿ ಯಾವುದೇ ಬದಲಾಣೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. MAHA KUMBH 2025 ”ತ್ರಿವೇಣಿ ಸಂಗಮದಲ್ಲಿ ಯಾವುದೇ ತೊಡಕುಗಳಿಲ್ಲದೇ ಪವಿತ್ರ ಸ್ನಾನ ಮಾಡಲು ಅನುಕೂಲವಾಗುವಂತೆ ಮಹಾಕುಂಭದ ಉಳಿದ ದಿನಗಳಲ್ಲಿಯೂ ಎಲ್ಲ ಅಗತ್ಯ ವ್ಯವಸ್ಥೆಗಳು ಮುಂದುವರೆಯಲಿದೆ.

ಪ್ರಯಾಗ್‌ರಾಜ್‌ನಲ್ಲಿ ಭಕ್ತರ ಚಲನವಲನ ಮತ್ತು ಸಾಮಾನ್ಯ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಆಡಳಿತವು ಸಂಚಾರ ನಿರ್ವಹಣೆಯತ್ತ ಗಮನಹರಿಸಿದೆ” ಎಂದು ತಿಳಿಸಿದರು.

Railway station not closed:

ರೈಲು ನಿಲ್ದಾಣ ಬಂದ್​ ಮಾಡುವ ಕುರಿತು ಪ್ರತಿಕ್ರಿಯಿಸಿ, ಯಾವುದೇ ನಿಲ್ದಾಣವನ್ನು ಪೂರ್ವ ಸೂಚನೆ ಇಲ್ಲದೇ ಮುಚ್ಚಲಾಗಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. MAHA KUMBH 2025 “ದಟ್ಟಣೆ ಆದ ದಿನಗಳಲ್ಲಿ ದರಗಂಜ್‌ನಲ್ಲಿರುವ ಪ್ರಯಾಗ್ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚುವುದು ಹಿಂದಿನಿಂದಲೂ ನಿಯಮಿತವಾಗಿ ನಡೆದುಕೊಂಡುಬಂದಿದೆ.

ಯಾಕೆಂದರೆ ಅದು ಮೇಳ ಸ್ಥಳದ ಸಮೀಪವೇ ಇದೆ. ಜನದಟ್ಟಣೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಆದಾಗ್ಯೂ, ಎಲ್ಲ ಇತರ ರೈಲು ನಿಲ್ದಾಣಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರು ಸುಗಮವಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಡಿಸಿ ಸ್ಪಷ್ಟಪಡಿಸಿದರು.

ಭಕ್ತರು ಮತ್ತು ನಿವಾಸಿಗಳು ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಪ್ರಯಾಗರಾಜ್ ಜಿಲ್ಲಾಡಳಿತವು ವಿನಂತಿಸಿದೆ. ”ಅಲ್ಲದೇ, ಮೇಳದ ಕಾರಣಕ್ಕೆ ಇಲ್ಲಿಯವರೆಗೆ ಯಾವುದೇ ವಿದ್ಯಾರ್ಥಿಗಳು ತಮ್ಮ ಬೋರ್ಡ್ ಪರೀಕ್ಷೆಗಳನ್ನು ತಪ್ಪಿಸಿಕೊಂಡಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರೀಕ್ಷಾ ಕೇಂದ್ರಗಳನ್ನು ಮುಂಚಿತವಾಗಿ ತಲುಪಲು ನಾವು ಮೊದಲೇ ಸೂಚಿಸಿದ್ದೇವೆ.

ಎಲ್ಲರೂ ಆ ಸೂಚನೆಗಳನ್ನು ಪಾಲಿಸಿದ್ದಾರೆ. ಇದಲ್ಲದೇ, ಅನಿವಾರ್ಯ ಸಂದರ್ಭಗಳಲ್ಲಿ ಪರೀಕ್ಷೆಗಳನ್ನು ತಪ್ಪಿಸಿಕೊಳ್ಳಬಹುದಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿಗಳು ನಿರ್ಧರಿಸಿವೆ” ಎಂದು ರವೀಂದ್ರ ಮಂದರ್ ಹೇಳಿದರು.

ಇದನ್ನು ಓದಿರಿ : ICC CHAMPIONS TROPHY : ಪಾಕಿಸ್ತಾನಕ್ಕೆ ಪ್ರಯಾಣಿಸಲಿರುವ ಮೂವರು ಭಾರತೀಯ ಕ್ರಿಕೆಟರ್ಸ್

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAMSUNG GALAXY A06 5G: ಆಂಡ್ರಾಯ್ಡ್ 15ನೊಂದಿಗೆ ಬಂತು ಸ್ಯಾಮ್ಸಂಗ್ನ ಹೊಸ ಪೋನ್

Samsung Galaxy A06 5G News: ಈ ಸುದ್ದಿ SAMSUNG ಪ್ರಿಯರಿಗೆ. Samsung Galaxy A06 ಅನ್ನು 5Gಗೆ ಅಪ್​ಡೇಟ್​ ಮಾಡಿ ಪರಿಚಯಿಸಿದೆ. ಇದರ ಬೆಲೆ...

ISRAEL HOSTAGES FREED BY HAMAS:ಮಹಿಳೆ, ಮಕ್ಕಳು ಸೇರಿ ನಾಲ್ವರು ಇಸ್ರೇಲಿಗರ ಶವ ಹಸ್ತಾಂತರಿಸಿದ ಹಮಾಸ್ ಉಗ್ರರು

Jerusalem (Israel) News: ಕದನ ವಿರಾಮದ ಒಪ್ಪಂದದಂತೆ ಮೊದಲ ಹಂತದಲ್ಲಿ 33 ಜನರನ್ನು ಬಿಡುಗಡೆ ಮಾಡಲು ಹಮಾಸ್​ ಒಪ್ಪಿದೆ. ಈ ಪೈಕಿ ಮಹಿಳೆಯರು, ಪುರುಷರು ಸೇರಿ...

NAXALITES KILL TWO MEN:ಪೊಲೀಸ್ ಮಾಹಿತಿದಾರರೆಂದು ಇಬ್ಬರು ನಾಗರಿಕರ ಹತ್ಯೆಗೈದ ನಕ್ಸಲರು

Danthewada (Chhattisgarh) News: ಬಮನ್​ ಕಶ್ಯಪ್​ (29) ಮತ್ತು ಅನಿಸ್​ ರಾಮ್​ ಪೊಯಮ್​ (38) ಕೊಲೆಯಾದವರು. ಇವರು ಬರ್ಸೊರ್​ ಪೊಲೀಸ್​ ಠಾಣಾ ವ್ಯಾಪ್ತಿಯ ತೊಡ್ಮ ಗ್ರಾಮದವರು...

NAMMA METRO PRICE HIKE EFFECT:ದರ ಹೆಚ್ಚಳದ ಬಿಸಿ

Bangalore News: ಈ ಮೊದಲು ನಮ್ಮ METROದಲ್ಲಿ ದಿನಕ್ಕೆ 8.5 ಲಕ್ಷ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದರು. ಆದರೆ, ದರ ಏರಿಕೆ ಬಳಿಕ ಈ ಸಂಖ್ಯೆ ಅಂದಾಜು...