spot_img
spot_img

MAHAKUMBH : 50 ಅಲ್ಲ 60 ಕೋಟಿ ಭಕ್ತರು.. ಪ್ರಯಾಗ್ರಾಜ್ನಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಎಲ್ಲಾ ಪ್ಲ್ಯಾನ್ಗಳು ಫೇಲ್!

spot_img
spot_img

Share post:

Prayag Raj News:

MAHAKUMBH ಮುಗಿಯುವ ಹೊತ್ತಿಗೆ ಭಕ್ತಾದಿಗಳ ಪುಣ್ಯಸ್ನಾನ ಮಾಡಿದ ಸಂಖ್ಯೆ 60 ಕೋಟಿಗೂ ದಾಟಬಹುದು ಎಂದು ಅಂದಾಜಿಸಲಾಗಿದೆ. ನಿನ್ನೆಯಷ್ಟೇ ಇದರ ಸಂಖ್ಯೆ 50 ಕೋಟಿ ಮೀರಬಹುದು ಎನ್ನಲಾಗಿತ್ತು. ಆದ್ರೆ ಈಗ ಹರಿದು ಬರುತ್ತಿರುವ ಭಕ್ತಸಾಗರ ನೋಡಿದರೆ ಇದು 60 ಕೋಟಿ ದಾಟಿದರು ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

MAHAKUMBH ಪ್ರಯುಕ್ತ ಪ್ರಯಾಗರಾಜ್​ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಭಕ್ತಾದಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಗಣನೀಯವಾಗಿ ಏರಿಕೆಯಾಗುತ್ತಿದೆ. ನಿನ್ನೆ ಸಂಜೆಯವರೆಗೂ ಸುಮಾರು 44 ಕೋಟಿ 74 ಲಕ್ಷ ಭಕ್ತಾದಿಗಳಿಂದ ಪವಿತ್ರ ಸ್ನಾನವಾದ ಅಂಕಿಸಂಖ್ಯೆಗಳು ದೊರೆಯುತ್ತಿವೆ.  ಉತ್ತರಪ್ರದೇಶದ ಸರ್ಕಾರ ಸುಮಾರು 45 ಕೋಟಿ ಜನರಿಂದ ಪುಣ್ಯಸ್ನಾನ ಆಗಬಹುದು ಎಂಬ ನಿರೀಕ್ಷೆಯಲ್ಲಿ ತನ್ನ ತಯಾರಿ ಮಾಡಿತ್ತು.

MAHAKUMBH ಪ್ರಯಾಗರಾಜ್​ಗೆ ಆಗಮಿಸುವವರು ಸಿಟಿ ಹೊರಗಿನ ಪಾರ್ಕಿಂಗ್ ಸ್ಥಳಗಳಲ್ಲಿಯೇ ವಾಹನ ಪಾರ್ಕಿಂಗ್ ಮಾಡಿ, ನಡೆದುಕೊಂಡು ಹೋಗಬೇಕು. ನಾಳೆ ಮಾಘಿ ಪೂರ್ಣಿಮೆ ಸ್ನಾನ ಮುಗಿಸಿಕೊಂಡು ಭಕ್ತಾದಿಗಳು ಹೋಗುವವರೆಗೂ ನಿರ್ಬಂಧ ಜಾರಿಯಲ್ಲಿದೆ. ಆ ನಿರೀಕ್ಷೆಯನ್ನು ಮೀರಿ ಭಕ್ತಾದಿಗಳು ಪುಣ್ಯಸ್ನಾನಕ್ಕೆ ಆಗಮಿಸುತ್ತಿದ್ದಾರೆ. ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿರುವುದರಿಂದ ಪ್ರಯಾಗರಾಜ್​ನಲ್ಲಿ ಮೂಲಸೌಕರ್ಯಗಳ ಕೊರತೆಯುಂಟಾಗಿದೆ.

ಜನದಟ್ಟಣೆ ನಿಯಂತ್ರಣಕ್ಕೆ ಮಾಡಿಕೊಂಡ ಎಲ್ಲಾ ಪ್ಲ್ಯಾನ್​​ಗಳು ವಿಫಲಗೊಳ್ಳುತ್ತಿವೆ. MAHAKUMBH ಇಂದು ಕೂಡ ಕೋಟ್ಯಾಂತರ ಸಂಖ್ಯೆಯಲ್ಲಿ ಪ್ರಯಾಗರಾಜ್​ಗೆ ಭಕ್ತರು ಹರಿದು ಬರುತ್ತಿದ್ದಾರೆ. ನಾಳೆ ಪವಿತ್ರ ಮಾಘಿ ಪೂರ್ಣಿಮೆಯಿರುವುದರಿಂದ ಕೋಟಿಗಟ್ಟಲೇ ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರಯಾಗರಾಜ್​​ನತ್ತ ಮುಖ ಮಾಡಿದ್ದಾರೆ.

ಜನದಟ್ಟಣೆ ನಿಯಂತ್ರಣಕ್ಕಾಗಿ ನೋ ವೆಹಿಕಲ್ ಝೋನ್ ಘೋಷಣೆ ಮಾಡಲಾಗಿದೆ. ಅಲ್ಲಿ ಖಾಸಗಿ ಹಾಗೂ ಸರ್ಕಾರಿ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಂದು ಮುಂಜಾನೆ 4 ಗಂಟೆಯಿಂದಲೇ ನೋ ವೆಹಿಹಲ್ ಝೋನ್ ನಿಯಮ ಜಾರಿಯಾಗಿದ್ದು.

ಪ್ರಯಾಗರಾಜ್ ಸಿಟಿಯೊಳಗೆ ವಾಹನಗಳಿಗೆ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. MAHAKUMBH ಇನ್ನು ಪ್ರಯಾಗರಾಜ್​ಗೆ ಹರಿದು ಬರುವ ಭಕ್ತರ ಸಂಖ್ಯೆಯ ವಿಹಂಗಮ ನೋಟ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇನ್ನು ಈಗಾಗಲೇ ಒಂದು ತಿಂಗಳಿನಿಂದ ಕಲ್ಪವಾಸದಲ್ಲಿರುವ ಭಕ್ತಾದಿಗಳಿಗೆ ನಾಳೆ ಪವಿತ್ರ ಸ್ನಾನದೊಂದಿಗೆ ಅವರ ಕಲ್ಪವಾಸ ಅಂತ್ಯಗೊಳ್ಳಲಿದ್ದು, ಪ್ರಯಾಗರಾಜ್​ನಲ್ಲಿ ಸುಮಾರು 10 ಲಕ್ಷ ಭಕ್ತಾದಿಗಳು ಕಲ್ಪವಾಸದಲ್ಲಿದ್ದಾರೆ. ನಿರಂತರ ಒಂದು ತಿಂಗಳು ದಿನಕ್ಕೆ ಒಂದು ಹೊತ್ತು ಊಟ ಮಾಡಿ ದಿನಕ್ಕೆ 3 ಬಾರಿ ಪುಣ್ಯಸ್ನಾನ ಮಾಡಿ ಕಲ್ಪವಾಸ ಆಚರಣೆ ಮಾಡುತ್ತಾರೆ.

ನಾಳೆ ಪೂರ್ಣಿಮಾ ತಿಥಿಯಲ್ಲಿ ಸ್ನಾನ ಮಾಡಿ ಕಲ್ಪವಾಸ ಮುಗಿಸಲಿದ್ದಾರೆ ಕಲ್ಪವಾಸಿಗಳು. ಕಲ್ಪವಾಸದ ಬಗ್ಗೆ ಮಹಾಭಾರತದಲ್ಲಿಯೂ ಉಲ್ಲೇಖವಿದೆ. ಆಧುನಿಕ ಜೀವನದ ಸೌಲಭ್ಯವಿಲ್ಲದೇ, ಟೆಂಟ್​ಗಳಲ್ಲಿ ವಾಸಿಸಿ ಭಕ್ತಾದಿಗಳು ಕಲ್ಪವಾಸ ಆಚರಿಸುತ್ತಾರೆ.

ಇದನ್ನು ಓದಿರಿ : India Meets 99.9% Of Peak Power Demand In 2024-25, Says Central Government

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...