spot_img
spot_img

MAHAKUMBH STAMPEDE : ಹಠ ಮಾಡಿ ಪ್ರಯಾಗ್ರಾಜ್ಗೆ ಹೋದ ಮಗಳು, ಸಾವಿಗೂ ಮುನ್ನ ಫೇಸ್ಬುಕ್ ಲೈವ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Belgaum News:

ಇದು ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಸಂದರ್ಭದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭಾರಿ MAHAKUMBH STAMPEDEದಲ್ಲಿ ಮೃತಪಟ್ಟ ಬೆಳಗಾವಿಯ ವಡಗಾವಿಯ ನಿವಾಸಿಗಳಾದ ಜ್ಯೋತಿ ದೀಪಕ್​ ಹತ್ತರವಾಟ ಮತ್ತು ಇವರ ಪುತ್ರಿ ಮೇಘಾ ಅವರ ಕರುಣಾಜನಕ ಕಥೆ.  ಆಕೆ ಬದುಕಿ ಬಾಳಬೇಕಿದ್ದ ಯುವತಿ.

ಹಲವು ಕನಸುಗಳನ್ನು ಕಟ್ಟಿಕೊಂಡಿದ್ದಾಕೆ. ಇನ್ನೇನು ಎರಡು ತಿಂಗಳಲ್ಲಿ ಹಸೆಮಣೆ ಕೂಡ ಏರಬೇಕಿತ್ತು. ಆದರೆ, ವಿಧಿಯಾಟ! ತಾಯಿ ಮತ್ತು ಮಗಳ ಬದುಕು ದುರಂತ ಅಂತ್ಯ ಕಂಡಿದೆ.‌ ಇನ್ನೊಂದೆಡೆ ಪತ್ನಿ, ಮಗಳನ್ನು ಕಳೆದುಕೊಂಡ ವ್ಯಕ್ತಿ ಒಬ್ಬಂಟಿಯಾಗಿ ಕಣ್ಣೀರು ಸುರಿಸುತ್ತಿದ್ದಾರೆ.

ಪ್ರಯಾಗ್​ರಾಜ್​ನಲ್ಲಿ ಸಂಭವಿಸಿದ ಭೀಕರ MAHAKUMBH STAMPEDEದಲ್ಲಿ ಬೆಳಗಾವಿಯ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇವರ ಪೈಕಿ ಓರ್ವ ಯುವತಿ, ತಂದೆಯ ಬಳಿ ಒತ್ತಾಯ ಮಾಡಿ ತಾಯಿಯನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದರಂತೆ.

“Can’t go to Prayagraj after marriage”:

ನೀರಾವರಿ ಇಲಾಖೆಯಲ್ಲಿ ಅಕೌಂಟ್‌ ಸೂಪರಿಂಟೆಂಡೆಂಟ್‌ ಆಗಿರುವ ದೀಪಕ್ ಮತ್ತು ಜ್ಯೋತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗಳನ್ನು ಹುಕ್ಕೇರಿಗೆ ಮದುವೆ ಮಾಡಿ ಕೊಡಲಾಗಿದೆ. ಮೇಘಾ ಪದವಿ ಮುಗಿಸಿ ಬೆಳಗಾವಿಯಲ್ಲಿಯೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

MAHAKUMBH STAMPEDE ಇನ್ನೇನು ಒಳ್ಳೆಯ ವರ ನೋಡಿ ಮಾರ್ಚ್ ತಿಂಗಳಲ್ಲಿ ಮದುವೆ ಮಾಡಬೇಕೆಂದು ದೀಪಕ್ ಮತ್ತು ಜ್ಯೋತಿ ನಿರ್ಧರಿಸಿದ್ದರು. ಅದಕ್ಕೆ ಆಕೆಯೂ ಒಪ್ಪಿದ್ದರು. ಮದುವೆಯ ಬಳಿಕ ಪ್ರಯಾಗ್‌ರಾಜ್‌ಗೆ ಹೋಗಲು ಆಗಲ್ಲ. ಅಲ್ಲದೇ ಇದು 144 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭಮೇಳ. ಹಾಗಾಗಿ, ನಾನು ಹೋಗುತ್ತೇನೆ ಎಂದು ತಾಯಿಯನ್ನು ಕರೆದುಕೊಂಡು ಹೋಗಿದ್ದರು.

Last Facebook Live before the stampede:

ಈ ವಿಡಿಯೋ ಮಾಡಿದ ಕೆಲವೇ ನಿಮಿಷಗಳ ನಂತರ ಕಾಲ್ತುಳಿತ ಸಂಭವಿಸಿದೆ. ಮೇಘಾ ಹತ್ತರವಾಟ (24) ತಾಯಿ ಜ್ಯೋತಿ ದೀಪಕ ಹತ್ತರವಾಟ(44), ಬೆಳಗಾವಿ ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ(61), ಬೆಳಗಾವಿ ಶಿವಾಜಿ ನಗರದ ಮಹಾದೇವಿ ಹನುಮಂತ ಬಾವನೂರ(48) ಕೊನೆಯುಸಿರೆಳೆದರು.

ಅರುಣ ಕೋಪರ್ಡೆ ಅವರ ಪತ್ನಿ ಕಾಂಚನ್‌ ಗಾಯಗೊಂಡರು. ರೀಲ್ಸ್‌ ಹಾಗೂ ಕಿರುಚಿತ್ರಗಳನ್ನು ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಮೇಘಾ, ಪ್ರಯಾಗ್‌ರಾಜ್​ಗೆ ತಾವು ಭೇಟಿ ನೀಡಿದ್ದ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಕೊನೆಯ ಫೇಸ್‌ಬುಕ್​ ಲೈವ್​ನಲ್ಲಿ “ನಾವು ಪ್ರಯಾಗ್‌ರಾಜ್‌ ಬಂದೇವಿ. ಇಲ್ಲಿ ಬಾಳ್‌ ಜನಾ ಸೇರಿದಾರ್ರಿ. ಬಾಳ್‌ ಅಂದರ ಬಾಳ್‌ ರಷ್‌ ಐತಿ.

ಎಲ್ಲರೂ ಜೋಪಾನವಾಗಿ ಬರ್ರಿ” ಅಂತಾ ಕೇಳಿಕೊಂಡಿದ್ದರು.MAHAKUMBH STAMPEDE ಪತ್ನಿ ಹಾಗು ಪುತ್ರಿಯನ್ನು ಕಳೆದುಕೊಂಡ ದೀಪಕ್ ಅವರಿಗೆ ಈ ಘಟನೆ ಬರಸಿಡಿಲು ಬಡಿದಂತಾಗಿದೆ. ದಿಗ್ಭ್ರಾಂತಗೊಂಡಿರುವ ಅವರು ಏನು ಮಾತಾಡಬೇಕೋ ತಿಳಿಯದಂತಾಗಿದ್ದರು.‌ ದುಃಖದಲ್ಲಿಯೇ ಪತ್ನಿ-ಮಗಳ ಸಾವಿನ ಸುದ್ದಿಯನ್ನು ಅವರು ತನ್ನ ಸಂಬಂಧಿಕರಿಗೆ ತಿಳಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.

ಮೇಘಾಳನ್ನು ಪ್ರೀತಿಯಿಂದ ಮ್ಯಾಗಿ ಅಂತಾ ಕರೆಯುತ್ತಿದ್ದೆವು. ಆಕೆ ಮೊದಲಿನಿಂದಲೂ ಧರ್ಮ, ಸಂಸ್ಕೃತಿ ಮೇಲೆ ಅಪಾರ ನಂಬಿಕೆ ಹೊಂದಿದ್ದಳು. ಮನೆಯಲ್ಲಿ ಹಠ ಮಾಡಿ ಮಹಾಕುಂಭ ಮೇಳಕ್ಕೆ ತಾಯಿ ಜೊತೆ ಹೋಗಿದ್ದಳು. ಹೋಗುವುದಕ್ಕೂ ಮುನ್ನ ಎಲ್ಲರೂ ಖುಷಿಯಿಂದ ಕಳಿಸಿ ಕೊಟ್ಟೆವು. ಈಗ ಆಕೆ ಇಲ್ಲ ಎನ್ನುವ ಸುದ್ದಿ ನಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ” ಎಂದು ಮೇಘಾ ಸ್ನೇಹಿತರು ದುಃಖಿತರಾದರು.

MAHAKUMBH STAMPEDE “ನಮ್ಮ ಸ್ನೇಹಿತೆ ಮತ್ತು ಬಿಜೆಪಿ ಕಾರ್ಯಕರ್ತೆಯೂ ಆಗಿರುವ ಕಾಂಚನ್ ಅವರ ಪತಿ ಅರುಣ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಕೂಡ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಪವಿತ್ರ ಭೂಮಿಯಲ್ಲಿ ಈ ನಾಲ್ವರನ್ನು ದೇವರು ತಮಗೆ ಬೇಕೆಂದು ಕರೆಸಿಕೊಂಡ. ಘಟನೆಯಿಂದ ಇಡೀ ಬೆಳಗಾವಿ ನೊಂದಿಗೆ ” ಎಂದು ಸಾರಿಕಾ ಪಾಟೀಲ ತಿಳಿಸಿದರು.

ನಗರಸೇವಕಿ ಸಾರಿಕಾ ಪಾಟೀಲ ಮಾತನಾಡಿ, “ಹತ್ತರವಾಟ ಅವರದ್ದು ಸಜ್ಜನ ಕುಟುಂಬ. ಎಲ್ಲರಿಗೂ ಬೇಕಾಗಿದ್ದರು. ಮೇಘಾ ಅವರ ತಾಯಿ ಜ್ಯೋತಿ ಧರ್ಮಸ್ಥಳದ 40 ಸಂಘಗಳನ್ನು‌ ನಿಭಾಯಿಸುತ್ತಿದ್ದರು. ಮೇಘಾ ಕೂಡ ತುಂಬಾ ಒಳ್ಳೆಯ ಹುಡುಗಿ.‌ ಇನ್ನೇನು ಮದುವೆ ಮಾಡಬೇಕು‌ ಅಂತಾ ಅವರ ತಂದೆ-ತಾಯಿ ಮಾತಾಡಿದ್ದರಂತೆ. ಇನ್ಮುಂದೆ ನಮಗೆ ಮಹಾಕುಂಭ ಮೇಳ ಸಿಗೋದಿಲ್ಲ ಅಂತ ಹೋಗಿದ್ದರು. ಆದರೆ, ಈಗ ಅವರಿಲ್ಲ ಎಂಬುದನ್ನು ನಂಬೋಕೆ ಆಗ್ತಿಲ್ಲ” ಎಂದು ಹೇಳಿದರು.

Video statement by 56 people from Prayagraj to Belgaum:

“ಟ್ರಾವೆಲ್ಸ್‌ನವರು​ ಊಟ, ಉಪಹಾರ ಸೇರಿ ಎಲ್ಲ ವ್ಯವಸ್ಥೆಯನ್ನು ಒಳ್ಳೆಯ ರೀತಿ ಮಾಡಿದ್ದಾರೆ‌. ನಮ್ಮ ವಾಹನ ಪ್ರಯಾಗ್​ರಾಜ್​ನಿಂದ 30-40 ಕಿ.ಮೀ. ದೂರದಲ್ಲಿತ್ತು. ಹಾಗಾಗಿ, ಗುಂಪುಗಳನ್ನಾಗಿ ವಿಂಗಡಿಸಿ 2 ಗಂಟೆಯೊಳಗೆ ನದಿಯಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ್ದರು‌‌.

ಅದೇ ರೀತಿ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನಕ್ಕೆಂದು 9 ಜನರ ಗುಂಪು ತೆರಳಿತ್ತು. ಆ ವೇಳೆ ಏಕಾಏಕಿ ಕಾಲ್ತುಳಿತ ಉಂಟಾಗಿ ನಾಲ್ಕು ಜನರು ಮೃತಪಟ್ಟಿದ್ದಾರೆ‌. ಇದರಿಂದ ಅವರ ಮನೆಯವರಿಗೆ ಬಹಳಷ್ಟು ದುಃಖವಾಗಿದ್ದು, ನಮಗೂ ದುಃಖವಾಗಿದೆ. ಘಟನೆಗೆ ಸಾಯಿರಥ ಟ್ರಾವೆಲ್ಸ್‌​ನವರದ್ದು ಯಾವುದೇ ಜವಾಬ್ದಾರಿ ಇಲ್ಲ. ಸುರಕ್ಷಿತವಾಗಿ ಹೋಗಿ ನೀವು ವಾಪಸ್​ ಬಸ್‌ಗೆ ಬಂದು ಹತ್ತುವಂತೆ ಅವರು ಮೊದಲೇ ನಮಗೆ ತಿಳಿಸಿದ್ದರು” ಎಂದು ಹೇಳಿದ್ದಾರೆ.

ಬೆಳಗಾವಿ ನಗರದ ನಾಲ್ವರು ಮೃತಪಟ್ಟಿದ್ದರಿಂದ ಅವರ ಜೊತೆಗೆ ತೆರಳಿದ್ದ ಇನ್ನುಳಿದ 56 ಜನರ ಕುಟುಂಬಸ್ಥರು ತೀವ್ರ ಆತಂಕಕ್ಕೀಡಾಗಿದ್ದರು. ಹಾಗಾಗಿ, ವಿಡಿಯೋ ಹೇಳಿಕೆ ಮೂಲಕ “ನಾವು ಸುರಕ್ಷಿತರಾಗಿದ್ದೇವೆ. ಯಾರೂ ಆತಂಕಪಡಬೇಕಿಲ್ಲ. ನಾವು ಬೆಳಗಾವಿಗೆ ಸಾಯಿರಥ ಟ್ರಾವೆಲ್ ಏಜೆನ್ಸಿ ಬಸ್​ನಲ್ಲಿ ಬರುತ್ತಿದ್ದೇವೆ” ಎಂದು ತಿಳಿಸಿದ್ದಾರೆ. ಪ್ರಯಾಗ್​ರಾಜ್‌ಗೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಎರಡು ಬಸ್​ಗಳಲ್ಲಿ ಬೆಳಗಾವಿಯ 60 ಜನರು, ಜ.26ರಂದು ತೆರಳಿದ್ದರು. ಇವರಲ್ಲಿ ನಾಲ್ವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದು, ಉಳಿದ 56 ಜನರು, “ನಾವು ಸುರಕ್ಷಿತವಾಗಿದ್ದೇವೆ” ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನು ಓದಿರಿ : SRI SUBUDHENDRA SWAMIJI : ‘ಕುಂಭಮೇಳ ಸಮಸ್ತ ಹಿಂದೂಗಳ ಶ್ರದ್ಧಾ ಉತ್ಸವ, ರಾಜಕೀಯ ನಾಯಕರು ಟೀಕಿಸುವ ವಿಚಾರವಲ್ಲ’

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...