spot_img
spot_img

MICROFINANCE HARASSMENT : ಸುಮ್ಮನೆ ರಾಜಕೀಯ ಸಂದೇಶ ರವಾನಿಸಲು ಸುಗ್ರೀವಾಜ್ಞೆ

spot_img
spot_img

Share post:

Bangalore News:

MICROFINANCE HARASSMENTದಿಂದ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಪ್ರೇರೇಪಣೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಬಹುದು. ಇದನ್ನೇಕೆ ಅಧಿಕಾರಿಗಳು ಮಾಡುತ್ತಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.

ಬೆಂಗಳೂರಲ್ಲಿ ಶನಿವಾರ ಮಾತನಾಡಿದ ಅವರು, “ನಮ್ಮಲ್ಲೇ ಕಠಿಣ ಕಾನೂನಿದೆ. ಐಪಿಸಿ, ಸಿಆರ್​ಪಿಸಿ, ಮನಿ ಲಾಂಡ್ರಿಂಗ್​ ಕಾಯ್ದೆ ಇದೆ. ಅದನ್ನೇ ಜಾರಿ ಮಾಡಿದರೆ ಸಾಕು. MICROFINANCE HARASSMENTದಿಂದ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಪ್ರೇರೇಪಣೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಬಹುದು. ಇದನ್ನು ಅಧಿಕಾರಿಗಳು ಏಕೆ ಪ್ರಯೋಗಿಸುತ್ತಿಲ್ಲ” ಎಂದು ಅಸಮಾಧಾನ ಹೊರಹಾಕಿದರು.

“ಇರುವ ಕಾನೂನಿನಡಿಯೇ MICROFINANCE HARASSMENT ನಿಯಂತ್ರಿಸಬಹುದು. ಆದರೆ ಅದನ್ನೇಕೆ ಜಾರಿಗೆ ತರುತ್ತಿಲ್ಲ ಅನ್ನೋದೇ ಯಕ್ಷ ಪ್ರಶ್ನೆ” ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

Ordinance for mere political messaging:

“ಮೊನ್ನೆ ತುಮಕೂರಿನ ಕುರಂಕೋಟೆಯಲ್ಲಿ ಒಂದು ಕೇಸ್​​ ಆಗಿತ್ತು. ಸುಮೊಟೋ ಕೇಸ್​ ಹಾಕಿದ್ದಾರೆ. ಈ ರೀತಿ ಯಾಕೆ ಬೇರೆಡೆ ಮಾಡುತ್ತಿಲ್ಲ?. ನಮಗಿರುವ ಕಾನೂನನ್ನು ಸರಿಯಾಗಿ ಜಾರಿ ಮಾಡಬೇಕು. ಇರುವ ಕಾನೂನು ಜಾರಿ ಮಾಡಿ, ಬಳಿಕ ಸುಗ್ರೀವಾಜ್ಞೆ ತರಬೇಕು. ನಾವು ಈಗ ಸುಮ್ಮನೆ ರಾಜಕೀಯವಾಗಿ ಸಾರ್ವಜನಿಕರಿಗೆ ಸಂದೇಶ ರವಾನಿಸಲು ಏನೋ ಒಂದು ಸುಗ್ರೀವಾಜ್ಞೆ ಮಾಡಿದ್ದೇವೆ. ನಾಳೆ ರಾಮರಾಜ್ಯ ಆಗಲಿದೆ ಎಂದು ಹೇಳಬೇಕಲ್ಲ?” ಎಂದು ಖಾರವಾಗಿ ನುಡಿದರು.

Congress Convention Issue:

“ಫೆಬ್ರವರಿ 10ರೊಳಗೆ ದೆಹಲಿಗೆ ಹೋಗುತ್ತೇವೆ. ವಿಧಾನ ಪರಿಷತ್​ಗೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾಗಿದೆ. ಪರಿಷತ್​ಗೆ ಬುದ್ಧಿವಂತರನ್ನು ಆಯ್ಕೆ ಮಾಡಬೇಕು. ಪ್ರತಿನಿಧಿಸಲ್ಪಡದ ಸಮುದಾಯದವರಿಗೆ ಅವಕಾಶ ನೀಡಬೇಕು. ಮೇಲ್ಮನೆಗೆ ಸಣ್ಣ ಸಣ್ಣ ಸಮುದಾಯಗಳಿಂದ ನೇಮಕ‌ ಮಾಡಿ. MICROFINANCE HARASSMENT ಸಮುದಾಯಗಳಿಗೆ ಅವಕಾಶ ಕೊಡಿ. ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಎಂದು ಹೈಕಮಾಂಡ್​ಗೆ ಮನವಿ ಮಾಡಲಿದ್ದೇನೆ” ಎಂದು ತಿಳಿಸಿದರು.

“ಕಾಂಗ್ರೆಸ್ ನೇತೃತ್ವದಲ್ಲೇ ಸಮಾವೇಶ ಮಾಡುತ್ತೇವೆ. ಸತೀಶ್ ಜಾರಕಿಹೊಳಿ ಸಮಾವೇಶ ಅಂತ ಅಲ್ಲ. ಎಸ್ಸಿ, ಎಸ್ಟಿಯವರೂ ಇರುತ್ತಾರೆ, ಮುಂದುವರಿದವರೂ ಇರುತ್ತಾರೆ. ಇನ್ನೂ ರೂಪುರೇಷೆ ಮಾಡಿಲ್ಲ. ಮುಂದೆ ಚುನಾವಣೆಗಳು ಬರುತ್ತದೆ. ಅದಕ್ಕೆ ನಾವು ಸಿದ್ಧರಾಗಬೇಕಲ್ಲ?. ಬಿಜೆಪಿಯಲ್ಲಿ ಎರಡು ಭಾಗ ಅಲ್ಲ, ನೂರಾರು ಭಾಗ ಆಗೋಗಿದೆ” ಎಂದು ಟೀಕಿಸಿದರು.

ಇದೇ ವೇಳೆ, “ಸಮಾವೇಶ ಅಂದಮೇಲೆ ಪಕ್ಷ, ಸರ್ಕಾರ ಇರುತ್ತದೆ. ಅಧ್ಯಕ್ಷರ ನೇತೃತ್ವದಲ್ಲೇ ಸಮಾವೇಶ ಆಗಲಿದೆ” ಎಂದರು.

ಇದನ್ನು ಓದಿರಿ : UNION BUDGET 2025 26 : ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಶೇ 10ರಷ್ಟು ಏರಿಕೆ

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...