Bangalore News:
MICROFINANCE HARASSMENTದಿಂದ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಪ್ರೇರೇಪಣೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಬಹುದು. ಇದನ್ನೇಕೆ ಅಧಿಕಾರಿಗಳು ಮಾಡುತ್ತಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.
ಬೆಂಗಳೂರಲ್ಲಿ ಶನಿವಾರ ಮಾತನಾಡಿದ ಅವರು, “ನಮ್ಮಲ್ಲೇ ಕಠಿಣ ಕಾನೂನಿದೆ. ಐಪಿಸಿ, ಸಿಆರ್ಪಿಸಿ, ಮನಿ ಲಾಂಡ್ರಿಂಗ್ ಕಾಯ್ದೆ ಇದೆ. ಅದನ್ನೇ ಜಾರಿ ಮಾಡಿದರೆ ಸಾಕು. MICROFINANCE HARASSMENTದಿಂದ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಪ್ರೇರೇಪಣೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಬಹುದು. ಇದನ್ನು ಅಧಿಕಾರಿಗಳು ಏಕೆ ಪ್ರಯೋಗಿಸುತ್ತಿಲ್ಲ” ಎಂದು ಅಸಮಾಧಾನ ಹೊರಹಾಕಿದರು.
“ಇರುವ ಕಾನೂನಿನಡಿಯೇ MICROFINANCE HARASSMENT ನಿಯಂತ್ರಿಸಬಹುದು. ಆದರೆ ಅದನ್ನೇಕೆ ಜಾರಿಗೆ ತರುತ್ತಿಲ್ಲ ಅನ್ನೋದೇ ಯಕ್ಷ ಪ್ರಶ್ನೆ” ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
Ordinance for mere political messaging:
“ಮೊನ್ನೆ ತುಮಕೂರಿನ ಕುರಂಕೋಟೆಯಲ್ಲಿ ಒಂದು ಕೇಸ್ ಆಗಿತ್ತು. ಸುಮೊಟೋ ಕೇಸ್ ಹಾಕಿದ್ದಾರೆ. ಈ ರೀತಿ ಯಾಕೆ ಬೇರೆಡೆ ಮಾಡುತ್ತಿಲ್ಲ?. ನಮಗಿರುವ ಕಾನೂನನ್ನು ಸರಿಯಾಗಿ ಜಾರಿ ಮಾಡಬೇಕು. ಇರುವ ಕಾನೂನು ಜಾರಿ ಮಾಡಿ, ಬಳಿಕ ಸುಗ್ರೀವಾಜ್ಞೆ ತರಬೇಕು. ನಾವು ಈಗ ಸುಮ್ಮನೆ ರಾಜಕೀಯವಾಗಿ ಸಾರ್ವಜನಿಕರಿಗೆ ಸಂದೇಶ ರವಾನಿಸಲು ಏನೋ ಒಂದು ಸುಗ್ರೀವಾಜ್ಞೆ ಮಾಡಿದ್ದೇವೆ. ನಾಳೆ ರಾಮರಾಜ್ಯ ಆಗಲಿದೆ ಎಂದು ಹೇಳಬೇಕಲ್ಲ?” ಎಂದು ಖಾರವಾಗಿ ನುಡಿದರು.
Congress Convention Issue:
“ಫೆಬ್ರವರಿ 10ರೊಳಗೆ ದೆಹಲಿಗೆ ಹೋಗುತ್ತೇವೆ. ವಿಧಾನ ಪರಿಷತ್ಗೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾಗಿದೆ. ಪರಿಷತ್ಗೆ ಬುದ್ಧಿವಂತರನ್ನು ಆಯ್ಕೆ ಮಾಡಬೇಕು. ಪ್ರತಿನಿಧಿಸಲ್ಪಡದ ಸಮುದಾಯದವರಿಗೆ ಅವಕಾಶ ನೀಡಬೇಕು. ಮೇಲ್ಮನೆಗೆ ಸಣ್ಣ ಸಣ್ಣ ಸಮುದಾಯಗಳಿಂದ ನೇಮಕ ಮಾಡಿ. MICROFINANCE HARASSMENT ಸಮುದಾಯಗಳಿಗೆ ಅವಕಾಶ ಕೊಡಿ. ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಎಂದು ಹೈಕಮಾಂಡ್ಗೆ ಮನವಿ ಮಾಡಲಿದ್ದೇನೆ” ಎಂದು ತಿಳಿಸಿದರು.
“ಕಾಂಗ್ರೆಸ್ ನೇತೃತ್ವದಲ್ಲೇ ಸಮಾವೇಶ ಮಾಡುತ್ತೇವೆ. ಸತೀಶ್ ಜಾರಕಿಹೊಳಿ ಸಮಾವೇಶ ಅಂತ ಅಲ್ಲ. ಎಸ್ಸಿ, ಎಸ್ಟಿಯವರೂ ಇರುತ್ತಾರೆ, ಮುಂದುವರಿದವರೂ ಇರುತ್ತಾರೆ. ಇನ್ನೂ ರೂಪುರೇಷೆ ಮಾಡಿಲ್ಲ. ಮುಂದೆ ಚುನಾವಣೆಗಳು ಬರುತ್ತದೆ. ಅದಕ್ಕೆ ನಾವು ಸಿದ್ಧರಾಗಬೇಕಲ್ಲ?. ಬಿಜೆಪಿಯಲ್ಲಿ ಎರಡು ಭಾಗ ಅಲ್ಲ, ನೂರಾರು ಭಾಗ ಆಗೋಗಿದೆ” ಎಂದು ಟೀಕಿಸಿದರು.
ಇದೇ ವೇಳೆ, “ಸಮಾವೇಶ ಅಂದಮೇಲೆ ಪಕ್ಷ, ಸರ್ಕಾರ ಇರುತ್ತದೆ. ಅಧ್ಯಕ್ಷರ ನೇತೃತ್ವದಲ್ಲೇ ಸಮಾವೇಶ ಆಗಲಿದೆ” ಎಂದರು.
ಇದನ್ನು ಓದಿರಿ : UNION BUDGET 2025 26 : ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಶೇ 10ರಷ್ಟು ಏರಿಕೆ