spot_img
spot_img

MONEY FRAUD ALLEGATION : ಬೆಂಗಳೂರಲ್ಲಿ ಚೀಟಿ ವಂಚನೆ ಆರೋಪ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಚೀಟಿ ವ್ಯವಹಾರ ನಡೆಸುತ್ತಿದ್ದ ಮಹಿಳೆಯೊಬ್ಬರು ತಮಗೆ ವಂಚಿಸಿರುವುದಾಗಿ ALLEGATION ಆಕೆಯ ಮನೆ ಮುಂದೆ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಲಾಗಿದೆ.ಚೀಟಿ ಮುಗಿದು ಎರಡು ವರ್ಷ ಕಳೆದರೂ ಜನರಿಗೆ ಹಣ ನೀಡದೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಂಚನೆಗೊಳಗಾದವರು ಮಹಿಳೆಯ ಮನೆ ಮುಂದೆ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿಯಲ್ಲಿ ‘ಚೀಟಿಂ’ಗ್ ವಂಚನೆಗಳು ದಿನೇ ದಿನೆ ಹೆಚ್ಚಾಗುತ್ತಿವೆ.

ಕಷ್ಟಪಟ್ಟು ಉಳಿತಾಯ ಮಾಡಿ ಮಕ್ಕಳ ಶಿಕ್ಷಣ, ಮದುವೆ ಸೇರಿದಂತೆ ಕಷ್ಟಕಾಲದಲ್ಲಿ ನೆರವಿಗೆ ಬರಲಿದೆ ಎಂಬ ಜನರ ನಂಬಿಕೆಯನ್ನು ಚೀಟಿ ನಡೆಸುವವರು ಬುಡಮೇಲು ಮಾಡುತ್ತಿದ್ದಾರೆ. ವಂಚನೆ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದು ಆಳಲು ತೋಡಿಕೊಂಡಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ವಂಚನೆಗೊಳಗಾದವರು ಕೋರ್ಟ್ ಮೊರೆ ಹೋಗಿದ್ದಾರೆ.ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪನಗರ ಮುಖ್ಯರಸ್ತೆಯಲ್ಲಿರುವ ಆರೋಪಿ ಮಹಿಳೆ ವನಿತಾ ಎಂಬುವರ ಮನೆ ಮುಂದೆ ವಂಚನೆಗೊಳಗಾದವರು ಪ್ರತಿಭಟನೆ ನಡೆಸಿದ್ದಾರೆ.

What is a fraud case? ಚೀಟಿ ಹಣ ನೀಡುವಂತೆ ಮನೆ ಬಳಿ ಹೋದಾಗ ಬಲತ್ಕಾರಕ್ಕೆ ಯತ್ನಿಸಿರುವುದಾಗಿ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ವನಿತಾ ಬೆದರಿಸಿರುವುದಾಗಿ ದೂರುದಾರ ವಿನಯ್ ಕುಮಾರ್ ALLEGATIONದ್ದಾರೆ.ಅಯ್ಯಪ್ಪನಗರ ಮುಖ್ಯರಸ್ತೆಯಲ್ಲಿ ವಾಸ ಮಾಡುತ್ತಿದ್ದ ವನಿತಾ 2020ರಿಂದ ಚೀಟಿ ವ್ಯವಹಾರ ನಡೆಸುತ್ತಿದ್ದು, ಇದನ್ನು ನಂಬಿ ಇವರ ಬಳಿ ಸಾರ್ವಜನಿಕರು 1ರಿಂದ 10 ಲಕ್ಷ ರೂ.ವರೆಗೆ ಚೀಟಿ ಕಟ್ಟುತ್ತಿದ್ದರು. ಚೀಟಿ ಮುಗಿದ ಬಳಿಕ ಹಣ ನೀಡುವಂತೆ ಕೇಳಿದಾಗ ಇಂದು, ನಾಳೆ ಎಂದು ಸತಾಯಿಸಿಕೊಂಡು ಬಂದಿದ್ದಾರೆ.ವಿನಯ್ ಕುಮಾರ್ ಜೊತೆಗೆ ಒಟ್ಟು 17 ಮಂದಿ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವುದಾಗಿ ಆರೋಪಿಸಿ ಕೆ. ಆರ್. ಪುರ ಪೊಲೀಸರಿಗೆ ದೂರು ನೀಡಿದ್ದರು.

2023ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹಣ ಕಳೆದುಕೊಂಡವರು ಆಳಲು ತೋಡಿಕೊಂಡಿದ್ದಾರೆ.”5 ಲಕ್ಷ ರೂ. ಚೀಟಿ ಹಾಕಿದ್ದೆ. ಆದರೆ ಚೀಟಿ ಮುಗಿದು ಮೂರು ವರ್ಷ ಕಳೆದರೂ ಇದುವರೆಗೂ ಹಣ ನೀಡಿಲ್ಲ. ಪೊಲೀಸರಿಗೆ ವಿಷಯ ತಿಳಿಸಿದಾಗ ಬ್ಯಾಂಕ್​ನಲ್ಲಿ ಲೋನ್ ಪಡೆದು ವಾಪಸ್ ನೀಡುವುದಾಗಿ ಸಮಯಾವಕಾಶ ಪಡೆದಿದ್ದರು. ಸಂಬಂಧಪಟ್ಟ ತನಿಖಾಧಿಕಾರಿಗಳು ವರ್ಗಾವಣೆಯಾದ ಬಳಿಕ ಹಣ ನೀಡದೆ ವಂಚಿಸಿದ್ದಾರೆ” ಎಂದು ಶಂಕರ್ ಆರೋಪಿಸಿದ್ದಾರೆ.

”ಮನೆ ಕಟ್ಟೋಣ ಎಂದು ಬ್ಯಾಂಕ್​ನಲ್ಲಿ ಲೋನ್ ಪಡೆದುಕೊಂಡಿದ್ದೆ. ಈ ವೇಳೆ ಪರಿಚಿತರಾಗಿದ್ದ ವನಿತಾ ಬಂದು ಮನೆ ಕಟ್ಟುತ್ತಿದ್ದು, ಸಾಲ ಕೇಳಿದ್ದರು. ಚೀಟಿ ವ್ಯವಹಾರ ನಡೆಸುತ್ತಿರುವುದನ್ನು ನಂಬಿ ನಾನು ಅವರಿಗೆ 8 ಲಕ್ಷ ರೂ. ಸಾಲ ನೀಡಿದ್ದೆ. ಆದರೆ ಈವರೆಗೂ ಹಣ ವಾಪಸ್ ನೀಡಿಲ್ಲ. ಕೇಳಲು ಹೋದಾಗ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಹೇಳಿರುವುದಾಗಿ ವೆಂಕಟರತ್ನಮ್ಮ ಎಂಬವರು ALLEGATIONದ್ದಾರೆ.ಸಾಲ ವಾಪಸ್ ನೀಡುವಂತೆ ಕೇಳಲು ಹೋದಾಗ ನಾನು ಕೊಟ್ಟಾಗ ತೆಗೆದುಕೊಳ್ಳುವಂತೆ ಹೇಳುತ್ತಿದ್ದಾಳೆ. ಸ್ವಂತ ಮನೆಯಿದ್ದು, ಪ್ರತ್ಯೇಕ ಗೋಲ್ಡ್ ಚೀಟಿ ನಡೆಸುತ್ತಿರುವುದಾಗಿ” ನೊಂದ ಮಹಿಳೆಯರು ಆಪಾದಿಸಿದ್ದಾರೆ.

‘ALLEGATION ಮಹಿಳೆಯು ಪರಿಚಯಸ್ಥರಾಗಿದ್ದು, ಕಷ್ಟದಲ್ಲಿದ್ದು ತುರ್ತು ಹಣ ನೀಡುವಂತೆ ಕೇಳಿದ್ದರು. ಅದನ್ನು ನಂಬಿ ಮಾಂಗಲ್ಯ ಸರ, ಎರಡು ಚಿನ್ನದ ಉಂಗುರ ಅಡವಿಟ್ಟು ಅದರಿಂದ ಬಂದ ಹಣ ನೀಡಿದ್ದೆ. ಸದ್ಯ ನ್ಯಾಯಾಲಯವು ಆರೋಪಿತ ಮಹಿಳೆಗೆ ನಿರೀಕ್ಷಣಾ ಜಾಮೀನು ನೀಡಿರುವುದಾಗಿ” ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆರೋಪಿ ವನಿತಾ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

”ವಂಚನೆ ಪ್ರಕರಣ ಸಂಬಂಧ ಹಣ ಕಳೆದುಕೊಂಡವರಿಗೆ ವಿಚಾರಣೆಗೆ ಹಾಜರಾಗಿ ಹಣ ವರ್ಗಾವಣೆ ಸೇರಿದಂತೆ ಪೂರಕ ದಾಖಲಾತಿ ನೀಡುವಂತೆ ಮೂರು ಬಾರಿ ನೋಟಿಸ್ ಜಾರಿ ಮಾಡಿದರೂ ನೊಂದವರು ದಾಖಲೆ ನೀಡಿಲ್ಲ. ಸೂಕ್ತ ದಾಖಲಾತಿ ಒದಗಿಸಿದರೆ ತನಿಖೆ ನಡೆಸಿ ALLEGATIONತೆ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು.

ಇದನ್ನು ಓದಿರಿ : ATM MONEY FRAUD CASE : ATMನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ವಂಚಿಸುತ್ತಿದ್ದವ ಅರೆಸ್ಟ್

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...